AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dividend Payout: ಎನ್​ಎಚ್​​ಪಿಸಿಯಿಂದ ಸರ್ಕಾರಕ್ಕೆ ಮಧ್ಯಂತರ ಲಾಭಾಂಶವಾಗಿ 933.61 ಕೋಟಿ ವಿತರಣೆ

ಎನ್​ಎಚ್​ಪಿಸಿಯಿಂದ ಕೇಂದ್ರ ಸರ್ಕಾರಕ್ಕೆ 933.61 ಕೋಟಿ ರೂಪಾಯಿ ಮಧ್ಯಂತರ ಲಾಭಾಂಶವನ್ನು ಹಸ್ತಾಂತರ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Dividend Payout: ಎನ್​ಎಚ್​​ಪಿಸಿಯಿಂದ ಸರ್ಕಾರಕ್ಕೆ ಮಧ್ಯಂತರ ಲಾಭಾಂಶವಾಗಿ 933.61 ಕೋಟಿ ವಿತರಣೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 11, 2022 | 1:31 PM

Share

ಸರ್ಕಾರಿ ಸ್ವಾಮ್ಯದ ಜಲವಿದ್ಯುತ್ ಕಂಪೆನಿ ಎನ್​ಎಚ್​ಪಿಸಿ ಲಿಮಿಟೆಡ್​ನಿಂದ 2021-22ರ ಹಣಕಾಸು ವರ್ಷಕ್ಕೆ ಮಧ್ಯಂತರ ಲಾಭಾಂಶವಾಗಿ (Dividend) 933.61 ಕೋಟಿ ರೂಪಾಯಿಯನ್ನು ಪಾವತಿಸಲಾಗಿದೆ. ಕಂಪೆನಿಯ ಹೇಳಿಕೆಯಂತೆ, ಎನ್​ಎಚ್​ಪಿಸಿಯ ಸಿಎಂಡಿ ಆದ ಎ.ಕೆ.ಸಿಂಗ್ ಅವರು ಕೇಂದ್ರ ಸಚಿವರಾದ ಆರ್​.ಕೆ.ಸಿಂಗ್​ಗೆ ಡಿವಿಡೆಂಡ್​ ಪೇಔಟ್ ಅಡ್ವೈಸ್ ಅನ್ನು ಗುರುವಾರದಂದು ಹಸ್ತಾಂತರಿಸಿದರು. 2020-21ರ ಸಾಲಿನ ಹಣಕಾಸಿನ ವರ್ಷಕ್ಕೆ ಅಂತಿಮ ಡಿವಿಡೆಂಡ್​ ಆಗಿ 249.44 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರಕ್ಕೆ ಎನ್​ಎಚ್​ಪಿಸಿಯಿಂದ ಪಾವತಿ ಮಾಡಲಾಗಿತ್ತು. ಫೆಬ್ರವರಿ 11ನೇ ತಾರೀಕಿನಂದು ನಡೆದ ಸಭೆಯಲ್ಲಿ ಎನ್​ಎಚ್​ಪಿಸಿಯ ಮಂಡಳಿ ನಿರ್ದೇಶಕರು ಪ್ರತಿ ಈಕ್ವಿಟಿ ಷೇರಿಗೆ ಮಧ್ಯಂತರ ಡಿವಿಡೆಂಡ್ 1.31 ರೂಪಾಯಿ ಘೋಷಣೆ ಮಾಡಿದ್ದರು. ಅಂದರೆ, ಮುಖಬೆಲೆಯ 13.10ರಷ್ಟು ಆಗುತ್ತದೆ.

ಸದ್ಯಕ್ಕೆ ಎನ್​ಎಚ್​ಪಿಸಿಗೆ 8 ಲಕ್ಷಕ್ಕೂ ಹೆಚ್ಚು ಷೇರುದಾರರಿದ್ದಾರೆ. ಒಟ್ಟಾರೆಯಾಗಿ 2021-22ನೇ ಸಾಲಿಗೆ ಮಧ್ಯಂತರ ಲಾಭಾಂಶದ ಪಾವತಿ 1,315.90 ಕೋಟಿ ರೂಪಾಯಿ ಆಗುತ್ತದೆ. CPSEಗಳ ಬಂಡವಾಳ ಪುನರ್​ರಚನೆಯ ಕುರಿತು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (DIPAM) ಮಾರ್ಗಸೂಚಿಗಳ ಪ್ರಕಾರ, ಪ್ರತಿ CPSU ತೆರಿಗೆ ನಂತರದ ಲಾಭದ ಶೇ 30 ಅಥವಾ ನಿವ್ವಳ ಮೌಲ್ಯದ ಶೇ 5ರಷ್ಟು ಕನಿಷ್ಠ ವಾರ್ಷಿಕ ಲಾಭಾಂಶವನ್ನು ಪಾವತಿಸಬೇಕಾಗುತ್ತದೆ.

ಅಕ್ಟೋಬರ್​ನಿಂದ ಆರಂಭವಾಗಿ ಡಿಸೆಂಬರ್​ಗೆ ಕೊನೆಯಾಗುವ ತ್ರೈಮಾಸಿಕದಲ್ಲಿ ಎನ್‌ಎಚ್‌ಪಿಸಿ ತನ್ನ ಏಕೀಕೃತ ನಿವ್ವಳ ಲಾಭದಲ್ಲಿ ಸುಮಾರು ಶೇ 7.5ರಷ್ಟು ಕುಸಿತವನ್ನು, ಅಂದರೆ 889 ಕೋಟಿ ರೂಪಾಯಿ ವರದಿ ಮಾಡಿದೆ. 2021ರ ಅಕ್ಟೋಬರ್​ನಿಂದ ಡಿಸೆಂಬರ್​ನಲ್ಲಿ ಒಟ್ಟು ಆದಾಯ ರೂ. 2,373.72 ಕೋಟಿ ದಾಖಲಿಸಿದೆ.

ಇದನ್ನೂ ಓದಿ: ಕೋಲ್ ಇಂಡಿಯಾ ಮತ್ತು ಇತರ ಪಿಎಸ್​ಯುಗಳಿಂದ ಕೇಂದ್ರ ಸರ್ಕಾರಕ್ಕೆ ಬಂಪರ್ ಡಿವಿಡೆಂಡ್

Follow Us
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!