AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಪಿ ಮಾರ್ಗನ್ ಬಾಂಡ್ ಮಾರುಕಟ್ಟೆಗೆ ಭಾರತದ ಸೇರ್ಪಡೆಯಿಂದ 23 ಬಿಲಿಯನ್ ಡಾಲರ್ ಬಂಡವಾಳ: ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ

JP Morgan Bond Index: ಜೆಪಿ ಮಾರ್ಗನ್​ನ ಎಮರ್ಜಿಂಗ್ ಮಾರ್ಕೆಟ್ ಡೆಟ್ ಇಂಡೆಕ್ಸ್​ನಲ್ಲಿ ಭಾರತದ ಬಾಂಡ್​ಗಳನ್ನು ಒಳಗೊಳ್ಳಲಾಗುತ್ತಿದೆ. ಈ ಬಗ್ಗೆ ಜೆಪಿ ಮಾರ್ಗನ್ ಚೇಸ್ ಅಂಡ್ ಕೋ ಇತ್ತೀಚೆಗೆ ಸ್ಪ್ಟಪಡಿಸಿತ್ತು. ಭಾರತದ ಆರ್ಥಿಕ ಪ್ರಗತಿಗೆ ಈ ಬೆಳವಣಿಗೆ ಇನ್ನಷ್ಟು ಪುಷ್ಟಿ ನೀಡಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜೆಪಿ ಮಾರ್ಗನ್ ಬಾಂಡ್ ಇಂಡೆಕ್ಸ್​ನಲ್ಲಿ ಭಾರತವನ್ನು ಒಳಗೊಳ್ಳುವುದರಿಂದ ದೇಶಕ್ಕೆ 23 ಬಿಲಿಯನ್ ಡಾಲರ್ ಹಣದ ಹರಿವು ಬರುತ್ತದೆ ಎಂದಿದ್ದಾರೆ.

ಜೆಪಿ ಮಾರ್ಗನ್ ಬಾಂಡ್ ಮಾರುಕಟ್ಟೆಗೆ ಭಾರತದ ಸೇರ್ಪಡೆಯಿಂದ 23 ಬಿಲಿಯನ್ ಡಾಲರ್ ಬಂಡವಾಳ: ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ
ನಿರ್ಮಲಾ ಸೀತಾರಾಮನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 05, 2023 | 3:33 PM

Share

ನವದೆಹಲಿ, ಅಕ್ಟೋಬರ್ 5: ಮುಂದಿನ ವರ್ಷದಿಂದ ಜಾಗತಿಕ ಸರ್ಕಾರಿ ಬಾಂಡ್ ಮಾರುಕಟ್ಟೆಗೆ (government bond market) ಭಾರತ ಲಗ್ಗೆ ಇಡಲಿದೆ. ಜೆಪಿ ಮಾರ್ಗನ್​ನ ಎಮರ್ಜಿಂಗ್ ಮಾರ್ಕೆಟ್ ಡೆಟ್ ಇಂಡೆಕ್ಸ್​ನಲ್ಲಿ (JP Morgan GBI- Emerging Markets) ಭಾರತದ ಬಾಂಡ್​ಗಳನ್ನು ಒಳಗೊಳ್ಳಲಾಗುತ್ತಿದೆ. ಈ ಬಗ್ಗೆ ಜೆಪಿ ಮಾರ್ಗನ್ ಚೇಸ್ ಅಂಡ್ ಕೋ ಇತ್ತೀಚೆಗೆ ಸ್ಪ್ಟಪಡಿಸಿತ್ತು. ಭಾರತದ ಆರ್ಥಿಕ ಪ್ರಗತಿಗೆ ಈ ಬೆಳವಣಿಗೆ ಇನ್ನಷ್ಟು ಪುಷ್ಟಿ ನೀಡಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜೆಪಿ ಮಾರ್ಗನ್ ಬಾಂಡ್ ಇಂಡೆಕ್ಸ್​ನಲ್ಲಿ ಭಾರತವನ್ನು ಒಳಗೊಳ್ಳುವುದರಿಂದ ದೇಶಕ್ಕೆ 23 ಬಿಲಿಯನ್ ಡಾಲರ್ ಹಣದ ಹರಿವು ಬರುತ್ತದೆ ಎಂದಿದ್ದಾರೆ.

‘ಭಾರತಕ್ಕೆ 23 ಬಿಲಿಯನ್ ಡಾಲರ್ (ಸುಮಾರು 1.9 ಲಕ್ಷ ಕೋಟಿ ರೂ) ಹಣದ ಹರಿವು ಬರುವ ಸಾಧ್ಯತೆ ಇದೆ. ಜೆಪಿ ಮಾರ್ಗನ್ ಬಾಂಡ್ ಇಂಡೆಕ್ಸ್​ನಲ್ಲಿ ಒಳಗೊಳ್ಳಲಾಗುವ ಪರಿಣಾಮ ಇದು’ ಎಂದು ಸಚಿವೆ ಹೇಳಿದ್ದಾರೆ.

ಇದನ್ನೂ ಓದಿ: ಎಲ್​ಐಸಿ ಸಂಸ್ಥೆಗೆ 84 ಕೋಟಿ ರೂ ದಂಡ ವಿಧಿಸಿ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್; ಮೇಲ್ಮನವಿ ಸಲ್ಲಿಸಲು ವಿಮಾ ನಿಗಮ ನಿರ್ಧಾರ

ಇಂಡೆಕ್ಸ್​ನಲ್ಲಿ ಸೇರ್ಪಡೆಯಾದರೆ ಬಂಡವಾಳ ಹೇಗೆ ಬರುತ್ತದೆ?

ಜೆಪಿ ಮಾರ್ಗನ್ ವಿವಿಧ ಸೂಚ್ಯಂಕಗಳನ್ನು ಹೊಂದಿದೆ. ಅದರಲ್ಲಿ ಉದಯೋನ್ಮುಖ ಮಾರುಕಟ್ಟೆಗಳ ಸರ್ಕಾರಿ ಬಾಂಡ್ ಇಂಡೆಕ್ಸ್ (GBI- EM) ಒಂದು. ಚೀನಾ, ಇಂಡೋನೇಷ್ಯಾ, ಬ್ರೆಜಿಲ್ ಮೊದಲಾದ ಕೆಲ ಆಯ್ದ ದೇಶಗಳ ಬಾಂಡ್​ಗಳು ಇಲ್ಲಿ ಲಭ್ಯ ಇವೆ. ರಷ್ಯಾವನ್ನು ಈ ಪಟ್ಟಿಯಿಂದ ತೆಗೆದು ಭಾರತವನ್ನು ಸೇರಿಸಲಾಗಿದೆ. ಈ ಇಂಡೆಕ್ಸ್​ನಲ್ಲಿ ಒಟ್ಟು ಹೂಡಿಕೆ 240 ಬಿಲಿಯನ್ ಡಾಲರ್. ಅಂದರೆ ಸುಮಾರು 20 ಲಕ್ಷ ಕೋಟಿ ರೂನಷ್ಟು ಹೂಡಿಕೆದಾರರ ಬಂಡವಾಳ ಇದರಲ್ಲಿದೆ.

ಈ ಇಂಡೆಕ್ಸ್​ನಲ್ಲಿ ಭಾರತಕ್ಕೆ 10 ಪ್ರತಿಶತದಷ್ಟು ವೈಟೇಜ್ ಕೊಡಲಾಗಿದೆ. ಅಂದರೆ, ಶೇ. 10ರಷ್ಟು ಹೂಡಿಕೆಗಳು ಭಾರತದ ಸರ್ಕಾರಿ ಬಾಂಡ್​ಗಳ ಮೇಲೆ ವಿನಿಯೋಗ ಆಗುತ್ತವೆ. ಅಂದರೆ, 230ರಿಂದ 240 ಬಿಲಿಯನ್ ಡಾಲರ್ ಬಾಂಡ್ ಇಂಡೆಕ್ಸ್​ನಲ್ಲಿ 10 ಪ್ರತಿಶತದಷ್ಟು ಅಂದರೆ ಸುಮಾರು 23 ಬಿಲಿಯನ್ ಡಾಲರ್​ನಷ್ಟು ಮೊತ್ತವು ಭಾರತದ ಬಾಂಡ್​ಗಳ ಮೇಲೆ ಹೂಡಿಕೆ ಆಗುತ್ತದೆ.

ಇದನ್ನೂ ಓದಿ: ಸ್ವಿಗ್ಗಿ ಸಾಲದ ನೆರವು; 8,000 ಹೋಟೆಲ್​ಗಳಿಗೆ 450 ಕೋಟಿ ರೂ ಸಾಲ ವಿತರಣೆ

ಬಾಂಡ್ ಇಂಡೆಕ್ಸ್​ನಲ್ಲಿ ಭಾರತದ ಸೇರ್ಪಡೆಯಿಂದ ಏನೇನು ಲಾಭಗಳು?

  • ಜೆಪಿ ಮಾರ್ಗನ್ ಬಾಂಡ್ ಇಂಡೆಕ್ಸ್​ಗೆ ಭಾರತದ ಸೇರ್ಪಡೆಯಿಂದ ದೇಶಕ್ಕೆ ಕನಿಷ್ಠ 23 ಬಿಲಿಯನ್ ಡಾಲರ್ ಬಂಡವಾಳ ಹರಿದುಬರುತ್ತದೆ.
  • ಭಾರತದ ಬಾಂಡ್​ಗಳಿಗೆ ಬೇಡಿಕೆ ಹೆಚ್ಚಿದಂತೆ ಬಡ್ಡಿದರ ಕಡಿಮೆ ಆಗುತ್ತದೆ. ಇದರಿಂದ ಸರ್ಕಾರಕ್ಕೆ ಹೊರೆ ಕಡಿಮೆ ಆಗುತ್ತದೆ.
  • ಖಾಸಗಿ ಬ್ಯಾಂಕುಗಳಿಗೆ ಈ ಸರ್ಕಾರಿ ಬಾಂಡ್​ಗಳನ್ನು ಖರೀದಿಸಬೇಕಾದ ಒತ್ತಡ ಕಡಿಮೆ ಆಗುತ್ತದೆ.
  • ಜೆಪಿ ಮಾರ್ಗನ್​ನ ಬಾಂಡ್ ಇಂಡೆಕ್ಸ್​ಗೆ ಭಾರತ ಸೇರ್ಪಡೆಯಾಗುವುದರಿಂದ ಬ್ಲೂಂಬರ್ಗ್ ಮತ್ತು ಎಫ್​ಟಿಎಸ್​ಇಗಳೂ ಕೂಡ ತಮ್ಮ ಬಾಂಡ್ ಇಂಡೆಕ್ಸ್​ಗೆ ಭಾರತವನ್ನು ಸೇರಿಸಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ