AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mobile SIM Card : ಕೇಂದ್ರದ ಹೊಸ ಆದೇಶದಿಂದ ಮನೆ ಬಾಗಿಲಿಗೆ ತಲುಪಲಿದೆ ಮೊಬೈಲ್ ಸಿಮ್ ಕಾರ್ಡ್

ಹೊಸ ಮೊಬೈಲ್ ಸಿಮ್ ಸಂಪರ್ಕಕ್ಕಾಗಿ ನೋಂದಾಯಿಸಲು ಇಚ್ಛಿಸುವ ಗ್ರಾಹಕರಿಗೆ ದೂರಸಂಪರ್ಕ ಇಲಾಖೆ (ಡಿಒಟಿ) ಮಂಗಳವಾರ ಆದೇಶ ಹೊರಡಿಸಿದ್ದು, ಗ್ರಾಹಕರು ಆನ್‌ಲೈನ್‌ನಲ್ಲಿ ಹೊಸ ಸಿಮ್‌ಗಾಗಿ ಅರ್ಜಿ ಸಲ್ಲಿಸಲು ಮತ್ತು ದೃಢೀಕರಿಸಿದ ನಂತರ ಅವರ ಮನೆ ಬಾಗಿಲಿಗೆ ಸಿಮ್​ ಕಾರ್ಡ್ ತಲುಪಿಸಲು ಅನುವು ಮಾಡಿಕೊಡುತ್ತದೆ. ಆದರೆ ಅದಕ್ಕಾಗಿ ಆಧಾರ್ ಅಥವಾ ಡಿಜಿಲಾಕರ್‌ನಲ್ಲಿ ಸಂಗ್ರಹವಾಗಿರುವ ಯಾವುದೇ ಅರ್ಹ ದಾಖಲೆಯನ್ನು ಬಳಸಿಕೊಳ್ಳಬಹುದು. ದೂರಸಂಪರ್ಕ ಇಲಾಖೆಯ ಈ ಕ್ರಮವು ಸೆಪ್ಟೆಂಬರ್ 15ರಂದು ಕೇಂದ್ರ ಸಂಪುಟವು ಅನುಮೋದಿಸಿದ ಇತರ ಪ್ರಮುಖ ಟೆಲಿಕಾಂ ಸುಧಾರಣೆಗಳೊಂದಿಗೆ ಈ ದೂರಸಂಪರ್ಕ […]

Mobile SIM Card : ಕೇಂದ್ರದ ಹೊಸ ಆದೇಶದಿಂದ ಮನೆ ಬಾಗಿಲಿಗೆ ತಲುಪಲಿದೆ ಮೊಬೈಲ್ ಸಿಮ್ ಕಾರ್ಡ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Sep 21, 2021 | 11:22 PM

Share

ಹೊಸ ಮೊಬೈಲ್ ಸಿಮ್ ಸಂಪರ್ಕಕ್ಕಾಗಿ ನೋಂದಾಯಿಸಲು ಇಚ್ಛಿಸುವ ಗ್ರಾಹಕರಿಗೆ ದೂರಸಂಪರ್ಕ ಇಲಾಖೆ (ಡಿಒಟಿ) ಮಂಗಳವಾರ ಆದೇಶ ಹೊರಡಿಸಿದ್ದು, ಗ್ರಾಹಕರು ಆನ್‌ಲೈನ್‌ನಲ್ಲಿ ಹೊಸ ಸಿಮ್‌ಗಾಗಿ ಅರ್ಜಿ ಸಲ್ಲಿಸಲು ಮತ್ತು ದೃಢೀಕರಿಸಿದ ನಂತರ ಅವರ ಮನೆ ಬಾಗಿಲಿಗೆ ಸಿಮ್​ ಕಾರ್ಡ್ ತಲುಪಿಸಲು ಅನುವು ಮಾಡಿಕೊಡುತ್ತದೆ. ಆದರೆ ಅದಕ್ಕಾಗಿ ಆಧಾರ್ ಅಥವಾ ಡಿಜಿಲಾಕರ್‌ನಲ್ಲಿ ಸಂಗ್ರಹವಾಗಿರುವ ಯಾವುದೇ ಅರ್ಹ ದಾಖಲೆಯನ್ನು ಬಳಸಿಕೊಳ್ಳಬಹುದು. ದೂರಸಂಪರ್ಕ ಇಲಾಖೆಯ ಈ ಕ್ರಮವು ಸೆಪ್ಟೆಂಬರ್ 15ರಂದು ಕೇಂದ್ರ ಸಂಪುಟವು ಅನುಮೋದಿಸಿದ ಇತರ ಪ್ರಮುಖ ಟೆಲಿಕಾಂ ಸುಧಾರಣೆಗಳೊಂದಿಗೆ ಈ ದೂರಸಂಪರ್ಕ ಸುಧಾರಣೆಯೂ ಭಾಗವಾಗಿದೆ. ಹೊಸ ನಿಯಮಗಳ ಪ್ರಕಾರ, ಹೊಸ ಮೊಬೈಲ್ ಸಂಪರ್ಕಗಳನ್ನು ಪಡೆಯಲು UIDAIನ ಆಧಾರ್ ಆಧಾರಿತ ಇ-ಕೆವೈಸಿ ಸೇವೆಗಳ ಮೂಲಕ ದೃಢೀಕರಣ ಪ್ರಕ್ರಿಯೆಗೆ ಗ್ರಾಹಕರು 1 ರೂಪಾಯಿ ಪಾವತಿಸಬೇಕಾಗುತ್ತದೆ.

ಸಂಪರ್ಕರಹಿತವಾಗಿ ಗ್ರಾಹಕ ಕೇಂದ್ರಿತ ಮತ್ತು ಸುರಕ್ಷಿತ ಕೆವೈಸಿ ಪ್ರಕ್ರಿಯೆಗಳನ್ನು ಅನುಷ್ಠಾನಗೊಳಿಸಲು ದೂರಸಂಪರ್ಕ ಇಲಾಖೆ ಹೊರಡಿಸಿದ ಎಲ್ಲ ಆದೇಶಗಳು ಇಲ್ಲಿವೆ:

ಆಧಾರ್ ಆಧಾರಿತ ಇ-ಕೆವೈಸಿ ಹೊಸ ಮೊಬೈಲ್ ಸಂಪರ್ಕಗಳನ್ನು ನೀಡಲು ಆಧಾರ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆಯನ್ನು ಮರು ಪರಿಚಯಿಸಲಾಗಿದೆ. UIDAIನಿಂದ ಪ್ರತಿ ಗ್ರಾಹಕ ದೃಢೀಕರಣಕ್ಕೆ ಟೆಲಿಕಾಂ ಸೇವಾ ಪೂರೈಕೆದಾರರಿಗೆ ರೂ. 1 ವಿಧಿಸಲಾಗುತ್ತದೆ. ಇದು ಸಂಪೂರ್ಣ ಕಾಗದರಹಿತ ಮತ್ತು ಡಿಜಿಟಲ್ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಗ್ರಾಹಕರ ಚಿತ್ರದೊಂದಿಗೆ ಜನಸಂಖ್ಯಾ ವಿವರಗಳನ್ನು ಆನ್‌ಲೈನ್‌ನಲ್ಲಿ UIDAIನಿಂದ ಟೆಲಿಕಾಂ ಸೇವಾ ಪೂರೈಕೆದಾರರು (TSPs) ಸ್ವೀಕರಿಸುತ್ತಾರೆ.

ಸ್ವಯಂ ಕೆವೈಸಿ ಈ ಪ್ರಕ್ರಿಯೆಯಲ್ಲಿ ಗ್ರಾಹಕರಿಗೆ ಮೊಬೈಲ್ ಸಂಪರ್ಕವನ್ನು ಆ್ಯಪ್/ಪೋರ್ಟಲ್ ಆಧಾರಿತ ಆನ್‌ಲೈನ್ ಪ್ರಕ್ರಿಯೆಯ ಮೂಲಕ ಮಾಡಲಾಗುತ್ತದೆ. ಇದರಲ್ಲಿ ಗ್ರಾಹಕರು ಮನೆಯಲ್ಲಿ/ಕಚೇರಿಯಲ್ಲಿ ಕುಳಿತು ಮೊಬೈಲ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದು ಮತ್ತು ಯುಐಡಿಎಐ ಮೂಲಕ ಎಲೆಕ್ಟ್ರಾನಿಕ್ ಆಗಿ ಅಥವಾ ಡಿಜಿಲಾಕರ್ ಮೂಲಕ ದೃಢೀಕರಿಸಿದ ದಾಖಲೆಗಳನ್ನು ಬಳಸಿ, ಸಿಮ್ ಅನ್ನು ಅವರ ಮನೆ ಬಾಗಿಲಿಗೆ ತಲುಪಿಸಬಹುದು.

OTP ಆಧಾರಿತವಾಗಿ ಮೊಬೈಲ್ ಸಂಪರ್ಕವನ್ನು ಪ್ರಿಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಮತ್ತು ಪೋಸ್ಟ್​ಪೇಯ್ಡ್​ನಿಂದ ಪ್ರೀಪೇಯ್ಡ್​ಗೆ ಬದಲಿಸಬಹುದು ಒಟಿಪಿ ಆಧಾರಿತ ಪರಿವರ್ತನೆ ಪ್ರಕ್ರಿಯೆಯ ಅನುಷ್ಠಾನವು ಚಂದಾದಾರರಿಗೆ ತನ್ನ ಮೊಬೈಲ್ ಸಂಪರ್ಕವನ್ನು ಪ್ರಿಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ ಮತ್ತು ಪ್ರತಿಯಾಗಿ ಮನೆ/ಕಚೇರಿಯಲ್ಲಿ ಕುಳಿತು OTP ಆಧಾರಿತ ದೃಢೀಕರಣ ಮೂಲಕ ಇದು ಸಾಧ್ಯವಾಗುತ್ತದೆ.

ಹೊಸ ಮೊಬೈಲ್ ಸಂಪರ್ಕಗಳನ್ನು ನೀಡಲು ಆಧಾರ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆಯ ಮರು ಪರಿಚಯಕ್ಕಾಗಿ ಸರ್ಕಾರವು ಇಂಡಿಯನ್ ಟೆಲಿಗ್ರಾಫ್ ಕಾಯ್ದೆ 1885 ಅನ್ನು ಜುಲೈ 2019ರಲ್ಲಿ ತಿದ್ದುಪಡಿ ಮಾಡಿದೆ.

ಸದ್ಯಕ್ಕೆ ಹೊಸ ಮೊಬೈಲ್ ಸಂಪರ್ಕ ಪಡೆಯಲು ಅಥವಾ ಮೊಬೈಲ್ ಸಂಪರ್ಕವನ್ನು ಪ್ರಿಪೇಯ್ಡ್​ನಿಂದ ಪೋಸ್ಟ್ ಪೇಯ್ಡ್ ಅಥವಾ ತದ್ವಿರುದ್ಧವಾಗಿ ಪರಿವರ್ತಿಸಲು, ಚಂದಾದಾರರು ಕೆವೈಸಿ ಪ್ರಕ್ರಿಯೆ ಪೂರೈಸಬೇಕಾಗುತ್ತದೆ. ಗುರುತಿನ ಮೂಲ ದಾಖಲೆಗಳು ಮತ್ತು ವಿಳಾಸದ ಪುರಾವೆಗಳೊಂದಿಗೆ ಚಿಲ್ಲರೆ ಅಂಗಡಿಗೆ ಭೇಟಿ ನೀಡಬೇಕಾಗುತ್ತದೆ. ಆಧಾರ್ ಅನ್ನು ಬಳಸುತ್ತಿರುವ ಸಂದರ್ಭದಲ್ಲಿ ಮತ್ತು UIDAIಯಿಂದ ಜನಸಂಖ್ಯಾ ವಿವರಗಳನ್ನು ಎಲೆಕ್ಟ್ರಾನಿಕ್ ಆಗಿ ಪಡೆಯುತ್ತಿರುವ ಸಂದರ್ಭದಲ್ಲಿ ಗ್ರಾಹಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅದು ಸೇರಿಸಿದೆ.

ಇದನ್ನೂ ಓದಿ: ಹೊಸ ಸಿಮ್ ಖರೀದಿ ಸಂಪೂರ್ಣ ಡಿಜಿಟಲೈಸ್, ಫಾರಂ ಭರ್ತಿ ಬೇಕಿಲ್ಲ: ಟೆಲಿಕಾಂ ಸಚಿವ ಅಶ್ವಿನ್ ವೈಷ್ಣವ್ ಘೋಷಣೆ

(Now Mobile SIM Card Will Reach At Your Door Step Just Follow These Steps)

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು