ಎನ್​ಆರ್​ಐಗಳು ತಮ್ಮ ದೇಶದ ಮೊಬೈಲ್ ನಂಬರ್​​ನಿಂದಲೇ ಯುಪಿಐ ಬಳಕೆ ಸಾಧ್ಯ; ಐಡಿಎಫ್​​ಸಿ ಫಸ್ಟ್ ಬ್ಯಾಂಕ್​​ನಿಂದ ಸೌಲಭ್ಯ

IDFC First Bank offers UPI transaction facility for its NRE accounts: ಅನಿವಾಸಿ ಭಾರತೀಯರು ಭಾರತದಲ್ಲಿ ಹಣ ರವಾನೆ ಮಾಡುವುದು ಬಹಳ ಸುಲಭ. ತಮ್ಮ ದೇಶದ ಅಂತಾರಾಷ್ಟ್ರೀಯ ಮೊಬೈಲ್ ನಂಬರ್ ಇಟ್ಟುಕೊಂಡೇ ಯುಪಿಐ ಮೂಲಕ ಭಾರತಕ್ಕೆ ಹಣ ಕಳುಹಿಸಬಹುದು. ಐಡಿಎಫ್​​​ಸಿ ಫಸ್ಟ್ ಬ್ಯಾಂಕು ತನ್ನ ಎನ್​​ಆರ್​​ಇ ಮತ್ತು ಎನ್​​ಆರ್​​ಒ ಖಾತೆದಾರರಿಗೆ ಈ ಸೌಲಭ್ಯ ನೀಡಿದೆ.

ಎನ್​ಆರ್​ಐಗಳು ತಮ್ಮ ದೇಶದ ಮೊಬೈಲ್ ನಂಬರ್​​ನಿಂದಲೇ ಯುಪಿಐ ಬಳಕೆ ಸಾಧ್ಯ; ಐಡಿಎಫ್​​ಸಿ ಫಸ್ಟ್ ಬ್ಯಾಂಕ್​​ನಿಂದ ಸೌಲಭ್ಯ
ಯುಪಿಐ

Updated on: Jul 04, 2025 | 7:01 PM

ನವದೆಹಲಿ, ಜುಲೈ 4: ಐಡಿಎಫ್​​​ಸಿ ಫಸ್ಟ್ ಬ್ಯಾಂಕು (IDFC First Bank) ತನ್ನ ಎನ್​ಆರ್​ಐ ಗ್ರಾಹಕರಿಗೆ ಹೊಸ ಸರ್ವಿಸ್ ಆಫರ್ ಮಾಡಿದೆ. ಅನಿವಾಸಿ ಭಾರತೀಯರ ಯುಪಿಐ ಮೂಲಕ ಭಾರತದಲ್ಲಿ ಹಣ ವರ್ಗಾವಣೆ ಮಾಡಲು ಈ ಬ್ಯಾಂಕ್ ಅನುವು ಮಾಡಿಕೊಟ್ಟಿದೆ. ಅದೂ ಭಾರತೀಯ ಮೊಬೈಲ್ ನಂಬರ್ ಬಳಸದೇ ಯುಪಿಐ ಮೂಲಕ ಟ್ರಾನ್ಸಾಕ್ಷನ್ ನಡೆಸಲು ಅವಕಾಶ ಕೊಟ್ಟಿದೆ.

ಐಡಿಎಫ್​​ಸಿ ಫಸ್ಟ್ ಬ್ಯಾಂಕ್​​ನ ಎನ್​ಆರ್​ಇ ಮತ್ತು ಎನ್​ಆರ್​​ಒ ಬ್ಯಾಂಕ್ ಅಕೌಂಟ್ ಹೊಂದಿರಬೇಕು. ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಹಾಂಕಾಂಗ್, ಮಲೇಷ್ಯಾ, ಓಮನ್, ಕತಾರ್, ಸೌದಿ ಅರೇಬಿಯಾ, ಸಿಂಗಾಪುರ್, ಯುಎಇ, ಯುಕೆ, ಅಮೆರಿಕ ಇತ್ಯಾದಿ 12 ದೇಶಗಳಲ್ಲಿರುವ ಎನ್​ಆರ್​​ಐಗಳಿಗೆ ಇಂಥದ್ದೊಂದು ಆಫರ್ ಇದೆ. ಇವರು ಉಚಿತವಾಗಿ ಈ ಯುಪಿಐ ಸರ್ವಿಸ್ ಬಳಸಬಹುದು.

ಇದನ್ನೂ ಓದಿ: ಸಾಲಗಳಿಗೆ ಇರಲ್ಲ ಪ್ರೀಪೇಮೆಂಟ್ ಚಾರ್ಜ್; ಜನವರಿ 1ರಿಂದ ಆರ್​ಬಿಐ ಹೊಸ ನಿಯಮ

ಫಾರೆಕ್ಸ್ ಸರ್ವಿಸ್ ಚಾರ್ಜ್ ಇರೋದಿಲ್ಲ…

ಐಡಿಎಫ್​​ಸಿ ಫಸ್ಟ್ ಬ್ಯಾಂಕ್​​ನ ಈ ಆಫರ್​​ನ ವಿಶೇಷತೆ ಎಂದರೆ ಇದರಲ್ಲಿ ಫಾರೀನ್ ಎಕ್ಸ್​​ಚೇಂಜ್ ಚಾರ್ಜಸ್ ಇರೋದಿಲ್ಲ. ಭಾರತಕ್ಕೆ ಬಂದಾಗ ಯುಪಿಐ ಬಳಸಬಹುದು. ತಮ್ಮ ದೇಶದಲ್ಲಿ ಇದ್ದುಕೊಂಡೇ ಭಾರತದಲ್ಲಿರುವವರಿಗೆ ಶುಲ್ಕರಹಿತವಾಗಿ ಹಣ ರವಾನೆ ಮಾಡಬಹುದು.

ಅನಿವಾಸಿ ಭಾರತೀಯರು ಐಡಿಎಫ್​​ಸಿ ಫಸ್ಟ್ ಬ್ಯಾಂಕ್​ನಲ್ಲಿ ಎನ್​ಆರ್​​ಇ ಅಥವಾ ಎನ್​​ಆರ್​​ಒ ಅಕೌಂಟ್ ತೆರೆದಿರಬೇಕು. ಫೋನ್​ಪೇ, ಗೂಗಲ್ ಪೇ, ಪೇಟಿಎಂ ಇತ್ಯಾದಿ ಯುಪಿಐ ಪ್ಲಾಟ್​​ಫಾರ್ಮ್​​ಗಳಲ್ಲಿ ಈ ಅಕೌಂಟ್ ಅನ್ನು ಜೋಡಿಸಬೇಕು. ತಮ್ಮ ಅಂತಾರಾಷ್ಟ್ರೀಯ ಮೊಬೈಲ್ ನಂಬರ್ ಇದ್ದರೆ ಸಾಕು. ಭಾರತೀಯ ಸಿಮ್ ಬಳಸಬೇಕು ಎಂದೇನಿಲ್ಲ. ಭಾರತೀಯರು ಬಳಸುವ ರೀತಿಯಲ್ಲೇ ಎನ್​​ಆರ್​​ಐಗಳು ಯುಪಿಐ ವಹಿವಾಟುಗಳನ್ನು ಮಾಡಬಹುದು. ವಿದೇಶೀ ವಿನಿಮಯ ಶುಲ್ಕ ಪಾವತಿಸಬೇಕಾಗುವುದಿಲ್ಲ.

ಇದನ್ನೂ ಓದಿ: ಷೇರು ಮಾರುಕಟ್ಟೆಗೆ ಚಳ್ಳೆಹಣ್ಣು ತಿನ್ನಿಸಿ 36,500 ಕೋಟಿ ರೂ ಪಂಗನಾಮ ಹಾಕಿತಾ ಜೇನ್ ಸ್ಟ್ರೀಟ್; ಅದರ ಕುತಂತ್ರದ ಕಥೆ ಕೇಳಿ…

ಉದಾಹರಣೆಗೆ, ದುಬೈನಲ್ಲಿರುವ ಭಾರತೀಯರೊಬ್ಬರು, ಅಲ್ಲಿಯ ಎಟಿಸಲ್ಯಾಟ್ ಅಥವಾ ಡು ಮೊಬೈಲ್ ಸಿಮ್​ನ ನಂಬರ್ ಅನ್ನು ಬಳಸುತ್ತಿದ್ದರೂ ಕೂಡ ಐಡಿಎಫ್​​ಸಿ ಫಸ್ಟ್ ಬ್ಯಾಂಕ್​​ನಲ್ಲಿ ಎನ್​​ಆರ್​​ಇ ಅಥವಾ ಎನ್​​ಆರ್​​ಒ ಅಕೌಂಟ್ ಹೊಂದಿದ್ದರೆ ಯುಪಿಐ ಪೇಮೆಂಟ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us