Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm Loan To Merchants: ಪೇಟಿಎಂನಿಂದ ವ್ಯಾಪಾರಿಗಳಿಗೆ 5 ಲಕ್ಷ ರೂಪಾಯಿ ತನಕ ಸಾಲ; ಅಪ್ಲೈ ಮಾಡುವುದು ಹೇಗೆ

ಪೇಟಿಎಂನಿಂದ ವ್ಯಾಪಾರಿಗಳಿಗೆ 5 ಲಕ್ಷ ರೂಪಾಯಿ ತನಕ ವ್ಯಾಪಾರ ಸಾಲ ನೀಡಲಾಗುತ್ತದೆ. ಅದಕ್ಕೆ ಅಪ್ಲೈ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

Paytm Loan To Merchants: ಪೇಟಿಎಂನಿಂದ ವ್ಯಾಪಾರಿಗಳಿಗೆ 5 ಲಕ್ಷ ರೂಪಾಯಿ ತನಕ ಸಾಲ; ಅಪ್ಲೈ ಮಾಡುವುದು ಹೇಗೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Feb 16, 2022 | 9:24 PM

ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳೊಂದಿಗೆ ಪೇಟಿಎಂ (Paytm) ಸಹಭಾಗಿತ್ವ ಹೊಂದಿದ್ದು, 5,00,000 ರೂಪಾಯಿ ತನಕ ಆಧಾರಮುಕ್ತ ತ್ವರಿತ ಸಾಲಗಳನ್ನು ಕಡಿಮೆ ಬಡ್ಡಿ ದರದಲ್ಲಿ ನೀಡುತ್ತದೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಕಸ್ಟಮೈಸ್ ಆದ ವಿಶಿಷ್ಟ ದೈನಂದಿನ ಇಎಂಐ ಪ್ರಾಡಕ್ಟ್ ಸಹ ನೀಡುತ್ತದೆ. ವ್ಯಾಪಾರಕ್ಕಾಗಿ ಪೇಟಿಎಂ ಅಪ್ಲಿಕೇಷನ್‌ನಲ್ಲಿ ಇರುವ ‘ಮರ್ಚೆಂಟ್ ಲೆಂಡಿಂಗ್ ಪ್ರೋಗ್ರಾಂ’ನಿಂದ ಸಾಲಗಳನ್ನು ಪಡೆಯಬಹುದು. ದೈನಂದಿನ ವಹಿವಾಟುಗಳ ಆಧಾರದ ಮೇಲೆ ವ್ಯಾಪಾರಿಯ ಕ್ರೆಡಿಟ್ ಅರ್ಹತೆಯನ್ನು ಅಲ್ಗಾರಿದಮ್ ನಿರ್ಧರಿಸುತ್ತದೆ ಮತ್ತು ಪ್ರೀ-ಕ್ವಾಲಿಫೈಡ್ ಸಾಲದ ಆಫರ್​ ನಿರ್ಧರಿಸುತ್ತದೆ. ಸಂಪೂರ್ಣ ಡಿಜಿಟಲ್ ಲೋನ್ ಅಪ್ಲಿಕೇಷನ್ ಪ್ರಕ್ರಿಯೆಯೊಂದಿಗೆ ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿಲ್ಲ. ಸಾಲ ಮರುಪಾವತಿಯನ್ನು ಪ್ರಾಥಮಿಕವಾಗಿ ಪೇಟಿಎಂನೊಂದಿಗೆ ವ್ಯಾಪಾರಿಗಳ ದೈನಂದಿನ ವಿಲೇವಾರಿಗಳಿಂದ ಸಂಗ್ರಹಿಸಲಾಗುತ್ತದೆ ಮತ್ತು ಈ ಸಾಲಗಳ ಮೇಲೆ ಯಾವುದೇ ಪೂರ್ವ-ಪಾವತಿ ಶುಲ್ಕಗಳಿಲ್ಲ.

ಪೇಟಿಎಂ ಮೂಲಕ 5 ಸರಳ ಹಂತಗಳಲ್ಲಿ ಸಾಲ ಪಡೆಯುವುದು ಹೇಗೆ ಎಂಬುದು ಇಲ್ಲಿದೆ:

1. ವ್ಯಾಪಾರಕ್ಕಾಗಿ ಇರುವ ಪೇಟಿಎಂ ಆ್ಯಪ್ ಹೋಮ್​ ಪೇಜ್​ನಲ್ಲಿ “ಬಿಜಿನೆಸ್ ಲೋನ್” ಐಕಾನ್ ಮೇಲೆ ಒತ್ತಿ ಮತ್ತು ನಿಮಗಾಗಿ ಲಭ್ಯ ಇರುವ ಆಫರ್ ಪರಿಶೀಲಿಸಿ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಸಾಲದ ಮೊತ್ತವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.

2. ಒಮ್ಮೆ ನೀವು ಮೊತ್ತವನ್ನು ಆಯ್ಕೆ ಮಾಡಿದರೆ ಸಾಲದ ಮೊತ್ತ, ವಿತರಿಸಬೇಕಾದ ಮೊತ್ತ, ಒಟ್ಟು ಪಾವತಿಸಬೇಕಾದ, ದೈನಂದಿನ ಕಂತು, ಅವಧಿ ಮತ್ತು ಹೆಚ್ಚಿನ ವಿವರಗಳನ್ನು ನೋಡಲು ಸಾಧ್ಯವಾಗುತ್ತದೆ

3. ನಿಮ್ಮ ವಿವರಗಳನ್ನು ದೃಢೀಕರಿಸಿ, ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಮುಂದುವರೆಯಲು “Get Started” ಮೇಲೆ ಒತ್ತಿ. ನಿಮ್ಮ ಲೋನ್ ಅರ್ಜಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು CKYCಯಿಂದ ನಿಮ್ಮ KYC ವಿವರಗಳನ್ನು ಪಡೆಯಲು ನಿಮ್ಮ ಒಪ್ಪಿಗೆಯನ್ನು ಸಹ ನೀಡಬಹುದು.

4. ಮುಂದಿನ ಸ್ಕ್ರೀನ್​ನಲ್ಲಿ ನಿಮ್ಮ PAN ಕಾರ್ಡ್ ಡೇಟಾ, ಹುಟ್ಟಿದ ದಿನಾಂಕ ಮತ್ತು ಇಮೇಲ್ ವಿಳಾಸದಂತಹ ವಿವರಗಳನ್ನು ಖಚಿತಪಡಿಸಬಹುದು ಅಥವಾ ಭರ್ತಿ ಮಾಡಬಹುದು. ಒಮ್ಮೆ ಮಾಡಿದ ನಂತರ, ನೀವು ಆಫರ್ ದೃಢೀಕರಣದೊಂದಿಗೆ ಮುಂದುವರಿಯಬಹುದು. ಪ್ಯಾನ್ ವಿವರಗಳನ್ನು ಪರಿಶೀಲಿಸಿದ ನಂತರ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಕೆವೈಸಿ ವಿವರಗಳನ್ನು ಪರಿಶೀಲಿಸಲಾಗುತ್ತದೆ.

5. ನಿಮ್ಮ ಸಾಲದ ಅರ್ಜಿಯನ್ನು ಸಲ್ಲಿಸಿದ ನಂತರ ಬ್ಯಾಂಕ್ ಖಾತೆಯಲ್ಲಿ ಸಾಲದ ಮೊತ್ತವನ್ನು ವಿತರಿಸಲಾಗುತ್ತದೆ. ಅಂತಿಮ ಸಲ್ಲಿಕೆಗೆ ಮೊದಲು ಎಲ್ಲ ವಿವರಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.

ಕಂಪೆನಿಯು ತನ್ನ FY22ರ ಮೂರನೇ ತ್ರೈಮಾಸಿಕದ ವರದಿಯಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ವಿತರಿಸಲಾದ ವ್ಯಾಪಾರಿ ಸಾಲಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಶೇ 38ರಷ್ಟು ಹೆಚ್ಚಿಸಿದೆ ಎಂದು ಹಂಚಿಕೊಂಡಿದ್ದು, ಆದರೆ ವ್ಯಾಪಾರಿ ಸಾಲಗಳ ಮೌಲ್ಯವು ವರ್ಷದಿಂದ ವರ್ಷಕ್ಕೆ ಶೇ 128ರಷ್ಟು ಬೆಳವಣಿಗೆಯಾಗಿದೆ. ಶೇ 25ಕ್ಕಿಂತ ಹೆಚ್ಚು ಸಾಲಗಳನ್ನು ಹೊಸ ಸಾಲಗಾರರಿಗೆ ವಿತರಿಸಲಾಗಿದೆ. ಈಗ ರೂ. 120,000ದಿಂದ ರೂ. 140,000 ಮತ್ತು ಸರಾಸರಿ 12ರಿಂದ 14 ತಿಂಗಳ ಅವಧಿಯೊಂದಿಗೆ ಸರಾಸರಿ ಟಿಕೆಟ್ ಗಾತ್ರವು ಅಳತೆಯೊಂದಿಗೆ ಹೆಚ್ಚುತ್ತಲೇ ಇದೆ. ಶೇ 25ರಷ್ಟು ವ್ಯಾಪಾರಿಗಳು ಒಂದಕ್ಕಿಂತ ಹೆಚ್ಚು ಬಾರಿ ಸಾಲವನ್ನು ತೆಗೆದುಕೊಂಡಿರುವ ಮೂಲಕ ಪುನರಾವರ್ತಿತ ಸಾಲಗಳು ಆರೋಗ್ಯಕರವಾಗಿ ಹೆಚ್ಚಳವನ್ನು ಕಂಡಿವೆ.

ಇದನ್ನೂ ಓದಿ: ಇಂಟರ್​ನೆಟ್ ಇಲ್ಲದೆ ಗೂಗಲ್ ಪೇ, ಫೋನ್​ಪೇ, ಪೇಟಿಎಂ, ಯುಪಿಐ ಮನಿ ಬಳಸಿ ವಹಿವಾಟು ಹೇಗೆ?

Published On - 9:23 pm, Wed, 16 February 22

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್