AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಟುಂಬ ಸದಸ್ಯರೆಲ್ಲರ ಬ್ಯಾಂಕ್ ಖಾತೆ ಒಂದೇ ಗುಂಪಿನಲ್ಲಿ; ಬಾಬ್ ಪರಿವಾರ್ ಅಕೌಂಟ್​ನ ಅನುಕೂಲಗಳೇನು?

BoB Parivar Account for family members: ಬ್ಯಾಂಕ್ ಆಫ್ ಬರೋಡದ ಪರಿವಾರ್ ಅಕೌಂಟ್ ಸ್ಕೀಮ್​ನಲ್ಲಿ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳನ್ನು ಒಂದೇ ಗುಂಪಿನಲ್ಲಿ ಇರಿಸಿ ನಿರ್ವಹಿಸಬಹುದು. ಗಂಡ, ಹೆಂಡತಿ, ಮಕ್ಕಳು, ಅಪ್ಪ, ಅಮ್ಮ, ಅತ್ತೆ, ಮಾವ, ಅಳಿಯ, ಸೊಸೆ ಇವರು ಪರಿವಾರ್ ಅಕೌಂಟ್​ನ ಸದಸ್ಯರಾಗಲು ಅರ್ಹರಿರುತ್ತಾರೆ. ಕಡಿಮೆ ಬಡ್ಡಿಯಲ್ಲಿ ಸಾಲ, ಲಾಕರ್ ಶುಲ್ಕ ರಿಯಾಯಿತಿ ಇತ್ಯಾದಿ ಸಾಕಷ್ಟು ಲಾಭಗಳು ಪರಿವಾರ್ ಅಕೌಂಟ್​ನಿಂದ ಸಿಗುತ್ತದೆ.

ಕುಟುಂಬ ಸದಸ್ಯರೆಲ್ಲರ ಬ್ಯಾಂಕ್ ಖಾತೆ ಒಂದೇ ಗುಂಪಿನಲ್ಲಿ; ಬಾಬ್ ಪರಿವಾರ್ ಅಕೌಂಟ್​ನ ಅನುಕೂಲಗಳೇನು?
ಬ್ಯಾಂಕ್ ಆಫ್ ಬರೋಡಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 04, 2023 | 11:48 AM

Share

ಮುಖ್ಯಾಂಶಗಳು

  • ಬ್ಯಾಂಕ್ ಆಫ್ ಬರೋಡದ ಪರಿವಾರ್ ಅಕೌಂಟ್ ಸ್ಕೀಮ್​ನಲ್ಲಿ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳನ್ನು ಒಂದೇ ಗುಂಪಿನಲ್ಲಿ ಇರಿಸಿ ನಿರ್ವಹಿಸಬಹುದು.
  • ಗಂಡ, ಹೆಂಡತಿ, ಮಕ್ಕಳು, ಅಪ್ಪ, ಅಮ್ಮ, ಅತ್ತೆ, ಮಾವ, ಅಳಿಯ, ಸೊಸೆ ಇವರು ಪರಿವಾರ್ ಅಕೌಂಟ್​ನ ಸದಸ್ಯರಾಗಲು ಅರ್ಹರಿರುತ್ತಾರೆ.
  • ಕಡಿಮೆ ಬಡ್ಡಿಯಲ್ಲಿ ಸಾಲ, ಲಾಕರ್ ಶುಲ್ಕ ರಿಯಾಯಿತಿ ಇತ್ಯಾದಿ ಸಾಕಷ್ಟು ಲಾಭಗಳು ಪರಿವಾರ್ ಅಕೌಂಟ್​ನಿಂದ ಸಿಗುತ್ತದೆ.

ನವದೆಹಲಿ, ಡಿಸೆಂಬರ್ 4: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಅಫ್ ಬರೋಡಾ ಪರಿವಾರ್ ಅಕೌಂಟ್ (Bank of Baroda Parivar Account) ಸ್ಕೀಮ್ ಅನ್ನು ಆರಂಭಿಸಿದೆ. ಬ್ಯಾಂಕ್​ನ ಫೆಸ್ಟಿವ್ ಸೀಸನ್ ಅಭಿಯಾನದ ಭಾಗವಾಗಿ ‘ಮೈ ಫ್ಯಾಮಿಲಿ, ಮೈ ಬ್ಯಾಂಕ್’ ಹೆಸರಿನಲ್ಲಿ ಪರಿವಾರ್ ಅಕೌಂಟ್ ಶುರು ಮಾಡಲಾಗಿದೆ. ಒಂದು ಕುಟುಂಬದ ಎಲ್ಲ ಸದಸ್ಯರ ಬ್ಯಾಂಕ್ ಖಾತೆಗಳನ್ನು ಒಂದೇ ಗುಂಪಿನಲ್ಲಿ ಇರಿಸಲಾಗುತ್ತದೆ. ಈ ರೀತಿ ಬ್ಯಾಂಕ್ ಖಾತೆಗಳನ್ನು ಕುಟುಂಬ ಸದಸ್ಯರ ಮಧ್ಯೆ ಮಾತ್ರವಲ್ಲ, ಒಬ್ಬರಿಗೆ ಸೇರಿದ ವಿವಿಧ ಬಿಸಿನೆಸ್ ಅಕೌಂಟ್​ಗಳನ್ನೂ ಒಂದೇ ಗುಂಪಿಗೆ ಸೇರಿಸಬಹುದು. ಈ ರೀತಿ ಗ್ರೂಪ್ ಅಕೌಂಟ್​ಗಳಿಂದ ಸಾಕಷ್ಟು ಲಾಭಗಳನ್ನು, ಅನುಕೂಲತೆಗಳನ್ನು ಬಾಬ್ ಆಫರ್ ಮಾಡಿದೆ.

ಪರಿವಾರ್ ಅಕೌಂಟ್​ನಲ್ಲಿರುವ ಪ್ರತಿಯೊಂದು ಖಾತೆಯನ್ನೂ ಮುಖ್ಯ ಖಾತೆದಾರನೇ ನಿರ್ವಹಣೆ ಮಾಡಬಹುದು. ಆದರೆ, ಎಲ್ಲಾ ಖಾತೆಗಳಿಗೆ ಪ್ರತ್ಯೇಕವಾಗಿ ಮಿನಿಮಮ್ ಬ್ಯಾಲನ್ಸ್ ಇರಿಸುವ ಅವಶ್ಯಕತೆ ಇರುವುದಿಲ್ಲ. ಅಷ್ಟೂ ಖಾತೆಗಳನ್ನು ಸೇರಿಸಿ ಸರಾಸರಿ ತ್ರೈಮಾಸಿಕ ಬ್ಯಾಲನ್ಸ್ ಇಟ್ಟುಕೊಂಡರೆ ಸಾಕು.

ಬ್ಯಾಂಕ್ ಆಫ್ ಬರೋಡಾದ ಪರಿವಾರ್ ಅಕೌಂಟ್ ಸ್ಕೀಮ್ ಹೊಂದಬೇಕಾದರೆ ಕನಿಷ್ಠ ಇಬ್ಬರು ಸದಸ್ಯರ ಬ್ಯಾಂಕ್ ಖಾತೆಗಳಿರಬೇಕು. ಗರಿಷ್ಠ ಆರು ಸದಸ್ಯರನ್ನು ಒಳಗೊಳ್ಳಬಹುದು. ಮುಖ್ಯ ಖಾತೆದಾರನ ಖಾತೆ ಜೊತೆಗೆ ಅವ್ ಸಂಗಾತಿ, ತಂದೆ ತಾಯಿ, ಮಕ್ಕಳು, ಅತ್ತೆ ಮಾವ, ಅಳಿಯ, ಸೊಸೆ ಇವರು ಪರಿವಾರ್ ಅಕೌಂಟ್​ಗೆ ಅರ್ಹರಾಗಿರುತ್ತಾರೆ.

ಇದನ್ನೂ ಓದಿ: ನಿಮ್ಮ ಖಾತೆಯಲ್ಲಿರುವ ಹಣಕ್ಕೆ ಯಾವ್ಯಾವ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಬಡ್ಡಿ ಸಿಗುತ್ತದೆ, ಇಲ್ಲಿದೆ ಡೀಟೇಲ್ಸ್

ಬಾಬ್ ಪರಿವಾರ್ ಅಕೌಂಟ್​ನಲ್ಲಿ ಎಷ್ಟು ಬ್ಯಾಲನ್ಸ್ ಇರಬೇಕು?

ಬ್ಯಾಂಕ್ ಆಫ್ ಬರೋಡಾದ ಪರಿವಾರ್ ಅಕೌಂಟ್ ಮೂರು ರೀತಿ ಇರುತ್ತದೆ: ಡೈಮಂಡ್, ಗೋಲ್ಡ್ ಮತ್ತು ಸಿಲ್ವರ್. ಎಲ್ಲಾ ಸದಸ್ಯರ ಖಾತೆ ಸೇರಿ ತ್ರೈಮಾಸಿಕ ಸರಾಸರಿ ಬ್ಯಾಲನ್ಸ್ ಹಣ ಕ್ರಮವಾಗಿ 5 ಲಕ್ಷ ರೂ, 2 ಲಕ್ಷ ರೂ ಮತ್ತು 50,000 ರೂ ಎಂದಿದೆ.

ಬಾಬ್ ಪರಿವಾರ್ ಅಕೌಂಟ್​ನ ಅನುಕೂಲತೆಗಳೇನು?

  • ರೀಟೇಲ್ ಸಾಲಗಳಿಗೆ ಬಡ್ಡಿದರದಲ್ಲಿ ರಿಯಾಯಿತಿ
  • ಸಾಲದ ಪ್ರೋಸಸಿಂಗ್ ಶುಲ್ಕ ಇರುವುದಿಲ್ಲ
  • ಲಾಕರ್​ನ ಬಾಡಿಗೆ ಶುಲ್ಕದಲ್ಲಿ ರಿಯಾಯಿತಿ
  • ಡಿಮ್ಯಾಟ್ ಎಎಂಸಿಯಲ್ಲಿ ರಿಯಾಯಿತಿ
  • ನೆಫ್ಟ್ ಆರ್​ಟಿಜಿಎಸ್ ಶುಲ್ಕದಲ್ಲಿ ರಿಯಾಯಿತಿ
  • ನೆಟ್​ಬ್ಯಾಂಕಿಂಗ್​ನಲ್ಲಿ ನೆಫ್ಟ್ ಮತ್ತು ಆರ್​ಟಿಜಿಎಸ್ ಶುಲ್ಕ ಇರುವುದಿಲ್ಲ
  • ಡಿಡಿ ಮತ್ತು ಪಿಒ ಶುಲ್ಕ ಇರುವುದಿಲ್ಲ
  • ಚೆಕ್ ಬುಕ್ ಶುಲ್ಕದಲ್ಲಿ ರಿಯಾಯಿತಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:46 am, Mon, 4 December 23

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು