AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

EPFO: ಇಪಿಎಫ್​ ಖಾತೆಗೆ ಆನ್​ಲೈನ್ ಮೂಲಕ ಬ್ಯಾಂಕ್ ವಿವರಗಳನ್ನು ಅಪ್​ಡೇಟ್ ಮಾಡಲು ಈ ವಿಧಾನ ಅನುಸರಿಸಿ

ಇಪಿಎಫ್​ ಖಾತೆಗೆ ಬ್ಯಾಂಕ್ ವಿವರಗಳನ್ನು ಆನ್​​ಲೈನ್ ಮೂಲಕ ಅಪ್​ಡೇಟ್ ಮಾಡುವ ವಿಧಾನದ ವಿವರ ಇಲ್ಲಿದೆ.

EPFO: ಇಪಿಎಫ್​ ಖಾತೆಗೆ ಆನ್​ಲೈನ್ ಮೂಲಕ ಬ್ಯಾಂಕ್ ವಿವರಗಳನ್ನು ಅಪ್​ಡೇಟ್ ಮಾಡಲು ಈ ವಿಧಾನ ಅನುಸರಿಸಿ
ಸಾಂದರ್ಭಿಕ ಚಿತ್ರ Image Credit source: google image
Ganapathi Sharma
|

Updated on: Feb 06, 2023 | 6:30 PM

Share

ಉದ್ಯೋಗಿಗಳ ಭವಿಷ್ಯ ನಿಧಿ (EPF) ಸದಸ್ಯರು ತಮ್ಮ ಬ್ಯಾಂಕ್​ ಖಾತೆ ವಿವರ ಸರಿಯಾಗಿ ಇರುವಂತೆ ಮತ್ತು ಇಪಿಎಫ್ ಖಾತೆ ಸಕ್ರಿಯವಾಗಿರುವಂತೆ ನೋಡಿಕೊಳ್ಳಬೇಕು. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ಚಂದಾದಾರರು ಈಗ ಆನ್​ಲೈನ್​ ಮೂಲಕವೇ ಬ್ಯಾಂಕ್​ ವಿವರಗಳನ್ನು ಅಪ್​ಡೇಟ್ ಮಾಡಬಹುದಾಗಿದೆ. ಈ ಸೇವೆಯನ್ನು ಬಳಸಿಕೊಳ್ಳಬೇಕಿದ್ದರೆ ಯೂನಿವರ್ಸಲ್ ಅಕೌಂಟ್ ನಂಬರ್ ಅಥವಾ ಯುಎಎನ್ (UAN) ಹೊಂದಿರಬೇಕಾಗುತ್ತದೆ. ಇಪಿಎಫ್​ ಎಂಬುದು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಒದಗಿಸುವ ನಿವೃತ್ತಿ ಯೋಜನೆಯಾಗಿದೆ. ಉದ್ಯೋಗಿಗಳು ತಮ್ಮ ವೇತನದ ಶೇ 12ರಷ್ಟು ಮೊತ್ತವನ್ನು ಪ್ರತಿ ತಿಂಗಳು ಇಪಿಎಫ್​​ನಲ್ಲಿ ಹೂಡಿಕೆ ಮಾಡಬೇಕಿದೆ. ಇಷ್ಟೇ ಪ್ರಮಾಣದ ಮೊತ್ತವನ್ನು ಉದ್ಯೋಗದಾತರೂ ಇಪಿಎಫ್​ ಖಾತೆಗೆ ಜಮೆ ಮಾಡಬೇಕಾಗುತ್ತದೆ. ಯುಎಎನ್​ ಸಂಖ್ಯೆಯನ್ನು ಇಪಿಎಫ್​ಒ ಒದಗಿಸುತ್ತದೆ. ವ್ಯಕ್ತಿಯು ಉದ್ಯೋಗದ ಸಂಸ್ಥೆಯನ್ನು ಬದಲಿಸಿದಾಗ ಸಮಸ್ಯೆ ಆಗದಿರಲು ಯುಎಎನ್​ ಸಹಕಾರಿಯಾಗಿದೆ.

ಇಪಿಎಫ್​ ಖಾತೆಗೆ ಆನ್​ಲೈನ್ ಮೂಲಕ ಬ್ಯಾಂಕ್ ವಿವರ ಅಪ್​ಡೇಟ್ ಮಾಡುವುದು ಹೇಗೆ?

  • ನಿಮ್ಮ ಯೂಸರ್​ನೇಮ್ ಮತ್ತು ಪಾಸ್​​ವರ್ಡ್ ಬಳಸಿಕೊಂಡು ಇಪಿಎಫ್​ಒ ಮೆಂಬರ್ ಪೋರ್ಟಲ್​ಗೆ ಲಾಗಿನ್ ಆಗಿ.
  • ಟಾಪ್ ಮೆನುವಿನಲ್ಲಿರುವ ‘ಮ್ಯಾನೇಜ್’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ನಂತರ ಡ್ರಾಪ್​ಡೌನ್ ಮಾಡಿ ‘ಕೆವೈಸಿ’ ಆಯ್ಕೆಯನ್ನು ಆಯ್ದುಕೊಳ್ಳಿ.
  • ದಾಖಲೆ ಅಪ್​ಡೇಟ್ ಮಾಡಬೇಕಿರುವ ‘ಬ್ಯಾಂಕ್​’ ಆಯ್ಕೆ ಮಾಡಿ.
  • ಈಗ ನೀವು ಬ್ಯಾಂಕ್​ ಖಾತೆ ಸಂಖ್ಯೆ, ಐಎಫ್​ಎಸ್​ಸಿ ಕೋಡ್ ಇತ್ಯಾದಿ ವಿವರಗಳನ್ನು ಅಪ್​ಡೇಟ್ ಮಾಡಬಹುದು. ನಂತರ ‘ಸೇವ್’ ಅನ್ನು ಕ್ಲಿಕ್ ಮಾಡಿ.
  • ಒಮ್ಮೆ ನೀವು ಕೆವೈಸಿ ಅಪ್​ಡೇಟ್ ಮಾಡಿ ಸೇವ್ ಮಾಡಿದರೆ, ‘ಕೆವೈಸಿ ಪೆಂಡಿಂಗ್ ಫಾರ್ ಅಪ್ರೂವಲ್’ ಎಂದು ಕಾಣಿಸುತ್ತದೆ.
  • ನಂತರ ನಿಮ್ಮ ಉದ್ಯೋಗದಾತರಿಗೆ ದಾಖಲೆಗಳನ್ನು ಒದಗಿಸಿ.
  • ಉದ್ಯೋಗದಾತರು ದಾಖಲೆಗಳನ್ನು ದೃಢೀಕರಿಸಿದ ಬಳಿಕ ‘ಡಿಜಿಟಲ್ ಅಪ್ರೂವ್ಡ್ ಕೆವೈಸಿ’ ಎಂಬ ಸಂದೇಶ ಪೋರ್ಟಲ್​​ನಲ್ಲಿ ಕಾಣಿಸುತ್ತದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್​ಎಂಎಸ್​ ಕೂಡ ಬರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್