AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bond Investments: ಗವರ್ನ್ಮೆಂಟ್ ಬಾಂಡ್​ಗಳಲ್ಲಿ ಹಣ ಹೂಡಿಕೆ ಮಾಡುವುದು ಸರಿಯಾದ ಮಾರ್ಗವಾ? ಈ ವಿಷಯ ತಿಳಿದಿರಲಿ

Debt Instruments: ಷೇರು ಮಾರುಕಟ್ಟೆ ಮತ್ತು ಡೆಟ್ ಮಾರುಕಟ್ಟೆಗಳಲ್ಲಿ ನಿಮ್ಮ ಹೂಡಿಕೆ ಕ್ರಮವಾಗಿ ಶೇ. 60 ಮತ್ತು ಶೇ. 40 ಇದ್ದರೆ ಉತ್ತಮ. ಡೆಟ್ ಇನ್ಸ್​ಟ್ರುಮೆಂಟ್​ಗಳಲ್ಲಿ ಬಾಂಡ್​ಗಳು, ಎಫ್​ಡಿ, ಆರ್​ಡಿ ಇತ್ಯಾದಿ ಇವೆ. ಗವರ್ನ್ಮೆಂಟ್ ಬಾಂಡ್​​ಗಳು ನಿಶ್ಚಿತ ಆದಾಯ ತರಬಲ್ಲ, ಮತ್ತು ಹಣಕ್ಕೆ ಸರ್ಕಾರದ ಗ್ಯಾರಂಟಿಯೂ ಇರುವುದರಿಂದ ಹೂಡಿಕೆಗೆ ಉತ್ತಮ ಆಯ್ಕೆ ಎನಿಸುತ್ತವೆ.

Bond Investments: ಗವರ್ನ್ಮೆಂಟ್ ಬಾಂಡ್​ಗಳಲ್ಲಿ ಹಣ ಹೂಡಿಕೆ ಮಾಡುವುದು ಸರಿಯಾದ ಮಾರ್ಗವಾ? ಈ ವಿಷಯ ತಿಳಿದಿರಲಿ
ಗವರ್ನ್ಮೆಂಟ್ ಬಾಂಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 11, 2024 | 1:06 PM

Share

ಇವತ್ತಿನ ಕಾಲಘಟ್ಟದಲ್ಲಿ ಹಣ ಹೂಡಿಕೆಗೆ ಹಲವು ಮಾರ್ಗಗಳಿವೆ. ಸಾಂಪ್ರದಾಯಿಕ ಬ್ಯಾಂಕ್ ಠೇವಣಿಗಳಿಂದ (Bank Fixed Deposits) ಹಿಡಿದು ಷೇರುಗಳವರೆಗೆ ಹೂಡಿಕೆದಾರರಿಗೆ ನಾನಾ ಆಯ್ಕೆಗಳಿವೆ. ಷೇರು ಮಾರುಕಟ್ಟೆಗೆ ಜೋಡಿತವಾದ ಹೂಡಿಕೆಗಳು ಹೆಚ್ಚು ಲಾಭ ತರಬಲ್ಲ ಸಾಧ್ಯತೆ ಹೊಂದಿದವಾದರೂ ಅಪಾಯದ ಪ್ರಮಾಣವೂ ಹೆಚ್ಚು. ಈ ಸಂದರ್ಭದಲ್ಲಿ ಡೆಟ್ ಹೂಡಿಕೆ ಆಯ್ಕೆಗಳು ನೆರವಿಗೆ ಬರುತ್ತವೆ. ಡೆಟ್ ಇನ್ಸ್​ಟ್ರುಮೆಂಟ್​ಗಳಲ್ಲಿ ಗವರ್ನ್ಮೆಂಟ್ ಬಾಂಡ್ ಪ್ರಮುಖವಾದುದು.

ತಜ್ಞರ ಪ್ರಕಾರ ನಿಮ್ಮ ನೂರು ರುಪಾಯಿ ಹೂಡಿಕೆಯಲ್ಲಿ ಷೇರು ಸಂಬಂಧಿತ ಹೂಡಿಕೆಗಳಿಗೆ 60 ರೂ, ಡೆಟ್ ಹೂಡಿಕೆಗಳಿಗೆ 40 ರೂ ವಿನಿಯೋಗಿಸಬೇಕು. ಈ ಸೂತ್ರ ಡಬಲ್ ಎಂಜಿನ್​ನಂತೆ ಕೆಲಸ ಮಾಡಬಹುದು. ಷೇರು ಇನ್ಸ್​ಟ್ರುಮೆಂಟ್​ಗಳಲ್ಲಿ ಮ್ಯುಚುವಲ್ ಫಂಡ್, ಇಟಿಎಫ್ ಮತ್ತು ನೇರ ಷೇರಿನ ಮೇಲಿನ ಹೂಡಿಕೆ ಒಳಗೊಂಡಿರುತ್ತದೆ. ಡೆಟ್ ಇನ್ವೆಸ್ಟ್​ಮೆಂಟ್​ನಲ್ಲಿ ಗವರ್ನ್ಮೆಂಟ್ ಬಾಂಡ್ ಜೊತೆಗೆ ಎಫ್​ಡಿ, ಸ್ಮಾಲ್ ಸೇವಿಂಗ್ ಸ್ಕೀಮ್ಸ್​ಗಳನ್ನೂ ಒಳಗೊಳ್ಳಬಹುದು.

ಇದನ್ನೂ ಓದಿ: KYC Frauds: ಕೆವೈಸಿ ಅಪ್​ಡೇಟ್ ಮಾಡಿ ಎಂದು ಕರೆ ಬಂದರೆ ಏನು ಮಾಡಬೇಕು? ಆರ್​ಬಿಐ ಸಲಹೆ, ಸೂಚನೆಗಳಿವು

ಗವರ್ನ್ಮೆಂಟ್ ಬಾಂಡ್ ಯಾಕೆ ಬೇಕು?

ಸರ್ಕಾರಿ ಬಾಂಡ್​ಗಳು ನಿಶ್ಚಿತ ವರಮಾನ ತಂದುಕೊಡಬಲ್ಲುವು. ಷೇರು ಮಾರುಕಟ್ಟೆ ಕುಸಿತ ಕಾಣುವ ಸಾಧ್ಯತೆ ಇರುತ್ತದೆ. ಬಾಂಡ್ ಅಥವಾ ಸಾಲಪತ್ರಗಳು ನಿರ್ದಿಷ್ಟ ಬಡ್ಡಿ ಕೊಡುತ್ತವೆ. ಒಂದು ರೀತಿಯಲ್ಲಿ ಸ್ಥಿರ ಆದಾಯ ನಿಮಗೆ ಸಿಗುತ್ತದೆ. ಸರ್ಕಾರದ ಗ್ಯಾರಂಟಿ ಇರುವುದರಿಂದ ಹಣ ನಶಿಸುವ ಯೋಚನೆ ಬಾರದು. ಕೋವಿಡ್ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಡೆಟ್ ಮಾರುಕಟ್ಟೆಗಳಿಗೆ ಜೋಡಿತಗೊಂಡ ಫಂಡ್​ಗಳು ಇದ್ದುದ್ದರಲ್ಲಿ ಹೆಚ್ಚು ರಿಟರ್ನ್ ತಂದಿದ್ದವು.

ಗವರ್ನ್ಮೆಂಟ್ ಬಾಂಡ್​ಗಳಲ್ಲಿ ಹಣದುಬ್ಬರ ಜೋಡಿತ ಬಾಂಡ್​ಗಳೆನಿಸಿದ ಐಐಬಿ ಅಥವಾ ಇನ್​ಫ್ಲೇಶನ್ ಇಂಡೆಕ್ಸ್ಡ್ ಬಾಂಡ್​ಗಳನ್ನು ಪಡೆಯಬಹುದು. ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿದ್ದಾಗ ಇಂಥ ಬಾಂಡ್​ಗಳು ಬಹಳ ಉಪಯುಕ್ತ ಎನಿಸುತ್ತವೆ.

ಇದನ್ನೂ ಓದಿ: ಇಪಿಎಫ್​ಒ ಬಡ್ಡಿದರ ಶೇ. 8.25ಕ್ಕೆ ಏರಿಕೆ; ಎಲ್ಲಾ ಸ್ಮಾಲ್ ಫೈನಾನ್ಸ್ ಸ್ಕೀಮ್​ಗಳಿಗಿಂತಲೂ ಪಿಎಫ್ ಠೇವಣಿಗೆ ಹೆಚ್ಚು ಬಡ್ಡಿ

ಡೆಟ್ ಆಯ್ಕೆಗಳಲ್ಲಿ ಗವರ್ನ್ಮೆಂಟ್ ಬಾಂಡ್ ಮಾತ್ರವಲ್ಲ ಬ್ಯಾಂಕ್ ಡೆಪಾಸಿಟ್​ಗಳೂ ಇವೆ. ಉತ್ತಮ ವಾರ್ಷಿಕ ಬಡ್ಡಿ ಕೊಡುವ ಎಫ್​​ಡಿ ಪ್ಲಾನ್​ಗಳಿವೆ. ಆರ್​ಡಿಗಳಲ್ಲೂ ಹಣ ತೊಡಗಿಸಿಕೊಳ್ಳಬಹುದು. ನಿಮ್ಮ ಮಾಸಿಕ ಉಳಿತಾಯ ಹಣವನ್ನು ಹೂಡಿಕೆ ಮಾಡಲು ಮ್ಯೂಚುವಲ್ ಫಂಡ್ ಎಸ್​ಐಪಿಯಂತೆ ಆರ್​ಡಿ ಉತ್ತಮ ಆಯ್ಕೆ.

ಒಟ್ಟಾರೆ, ನಿಮ್ಮ ಬಳಿ ಇರುವ ಉಳಿತಾಯ ಹಣ ಎಷ್ಟು ಎಂಬುದರ ಮೇಲೆ ನಿಮ್ಮ ಹೂಡಿಕೆ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ. ಷೇರು ಮಾರುಕಟ್ಟೆ ಮತ್ತು ಡೆಟ್ ಮಾರುಕಟ್ಟೆಗಳಲ್ಲಿ ನಿಮ್ಮ ಹೂಡಿಕೆಗಳು ವ್ಯಾಪಿಸಿರಲಿ ಎಂಬುದು ತಜ್ಞರ ಸಲಹೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!