AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

EPFO: ಇಪಿಎಫ್​ಒ ಬಡ್ಡಿದರ ಶೇ. 8.25ಕ್ಕೆ ಏರಿಕೆ; ಎಲ್ಲಾ ಸ್ಮಾಲ್ ಫೈನಾನ್ಸ್ ಸ್ಕೀಮ್​ಗಳಿಗಿಂತಲೂ ಪಿಎಫ್ ಠೇವಣಿಗೆ ಹೆಚ್ಚು ಬಡ್ಡಿ

Employee Provident Fund Interest Rate Updated: ಇಪಿಎಫ್ ಖಾತೆಗಳಲ್ಲಿರುವ ಠೇವಣಿಗೆ 2023-24ರ ಸಾಲಿನ ವರ್ಷದಲ್ಲಿ ಬಡ್ಡಿದರವನ್ನು ಶೇ. 8.25ಕ್ಕೆ ಏರಿಸಲಾಗಿದೆ. 2022-23ರ ಹಣಕಾಸು ವರ್ಷದಲ್ಲಿ ಪಿಎಫ್ ಬಡ್ಡಿ ದರ ಶೇ. 8.15ರಷ್ಟು ಇತ್ತು. 2011-12ರ ವರ್ಷದಲ್ಲಿ ಬಡ್ಡಿದರ ಶೇ. 8.25ರಷ್ಟು ಇತ್ತು. 2023-24ರ ವರ್ಷದಲ್ಲೂ ಅಷ್ಟೇ ಬಡ್ಡಿ ದರ ನಿಗದಿ ಮಾಡಲಾಗಿದೆ. ಆರು ಕೋಟಿ ಇಪಿಎಫ್ ಸದಸ್ಯರ ಖಾತೆಗಳಲ್ಲಿ 13 ಲಕ್ಷ ಕೋಟಿ ರೂನಷ್ಟಿದೆ. ಸರ್ಕಾರ ಈಗ ಒಂದು ಲಕ್ಷ ಕೋಟಿ ರೂನಷ್ಟು ಬಡ್ಡಿಹಣ ವರ್ಗಾಯಿಸಲಿದೆ.

EPFO: ಇಪಿಎಫ್​ಒ ಬಡ್ಡಿದರ ಶೇ. 8.25ಕ್ಕೆ ಏರಿಕೆ; ಎಲ್ಲಾ ಸ್ಮಾಲ್ ಫೈನಾನ್ಸ್ ಸ್ಕೀಮ್​ಗಳಿಗಿಂತಲೂ ಪಿಎಫ್ ಠೇವಣಿಗೆ ಹೆಚ್ಚು ಬಡ್ಡಿ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 11, 2024 | 10:52 AM

Share

ನವದೆಹಲಿ, ಫೆಬ್ರುವರಿ 11: ಉದ್ಯೋಗಿ ಭವಿಷ್ಯ ನಿಧಿ ಅಥವಾ ಪಿಎಫ್ ಸೌಲಭ್ಯ (EPF) ಇರುವ ಉದ್ಯೋಗಿಗಳಿಗೆ ಖುಷಿ ಸುದ್ದಿ ಇದು. ಇಪಿಎಫ್​ಒಗೆ ಬಡ್ಡಿದರ ಇನ್ನಷ್ಟು ಹೆಚ್ಚಿಸಲಾಗಿದೆ. 2023-24ರ ಸಾಲಿನ ವರ್ಷದಲ್ಲಿ ಇಪಿಎಫ್ ಠೇವಣಿಗಳಿಗೆ (deposits) ಬಡ್ಡಿದರವನ್ನು ಶೇ. 8.25ಕ್ಕೆ ನಿಗದಿ ಮಾಡಲಾಗಿದೆ. ಹಿಂದಿನ ವರ್ಷದಲ್ಲಿ, ಅಂದರೆ 2022-23ರ ಸಾಲಿನ ವರ್ಷಕ್ಕೆ ಇಪಿಎಫ್ ಬಡ್ಡಿದರ ಶೇ. 8.15ಕ್ಕೆ ನಿಗದಿ ಮಾಡಲಾಗಿದೆ. 2023-24ಕ್ಕೆ ನಿಗದಿ ಮಾಡಲಾಗಿರುವ ಶೇ. 8.25 ಬಡ್ಡಿದರ ಕಳೆದ ಮೂರು ವರ್ಷದಲ್ಲೇ ಗರಿಷ್ಠ ದರವಾಗಿದೆ.

ನಿನ್ನೆ ಶನಿವಾರ ಫೆ. 10ರಂದು ನಡೆದ ಇಪಿಎಫ್​ಒನ ಕೇಂದ್ರೀಯ ಟ್ರಸ್ಟೀ ಮಂಡಳಿಯ (ಸಿಬಿಟಿ) 235ನೇ ಸಭೆಯಲ್ಲಿ ಬಡ್ಡಿದರ ಪರಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಹೇಳಿಕೆ ನೀಡಿದೆ. ಕೇಂದ್ರ ಕಾನೂನು ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸದ್ಯ ಇಪಿಎಫ್​ಒ ನಿಗದಿ ಮಾಡಲಾಗಿರುವ ಈ ದರಕ್ಕೆ ಕೇಂದ್ರ ಹಣಕಾಸು ಸಚಿವಾಲಯದಿಂದ ಅನುಮೋದನೆ ದೊರೆತ ಬಳಿಕ ಸರ್ಕಾರೀ ಗೆಜೆಟ್​ನಲ್ಲಿ ಅಧಿಕೃತವಾಗಿ ನೋಟಿಫೈ ಮಾಡಲಾಗುತ್ತದೆ. ಅದಾದ ಬಳಿಕ ಇಪಿಎಫ್ ಸದಸ್ಯರ ಖಾತೆಗಳಿಗೆ ಬಡ್ಡಿಹಣ ಜಮೆಯಾಗುತ್ತದೆ. ಯಾವಾಗ ಬೇಕಾದರೂ ಹಣ ಜಮೆ ಆಗಬಹುದು. ಸದ್ಯ ಆರು ಕೋಟಿಗೂ ಹೆಚ್ಚು ಇಪಿಎಫ್ ಖಾತೆಗಳಿವೆ.

ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ 5 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ

ಲಕ್ಷ ಕೋಟಿ ರೂ ವರ್ಗಾವಣೆ

ಕಾರ್ಮಿಕ ಸಚಿವಾಲಯ ನೀಡಿರುವ ಹೇಳಿಕೆ ಪ್ರಕಾರ 2023-24ರ ವರ್ಷ ಸಾಲಿನಲ್ಲಿ ಇಪಿಎಫ್​ನ ಠೇವಣಿಗಳ ಮೊತ್ತ 13 ಲಕ್ಷ ಕೋಟಿ ರೂ ಇದೆ. ಸದಸ್ಯರ ಈ ಠೇವಣಿಗಳಿಗೆ ಒಟ್ಟು 1,07,000 ರೂ ಹಣವನ್ನು ಇಪಿಎಫ್​ಒ ಸಂದಾಯ ಮಾಡಲು ನಿರ್ಧರಿಸಲಾಗಿದೆ. 2022-23ರ ಹಣಕಾಸು ವರ್ಷದಲ್ಲಿ ಇಪಿಎಫ್ ಠೇವಣಿಗಳ ಮೊತ್ತ 11.03 ಲಕ್ಷ ಕೋಟಿ ರೂ ಇತ್ತು. ಅದಕ್ಕೆ 91,151.66 ಕೋಟಿ ರೂ ಬಡ್ಡಿಹಣ ಹಾಕಲಾಗಿತ್ತು. 2023-24ರ ಸಾಲಿನಲ್ಲಿ ಹಾಕಲಾಗಿರುವ ಬಡ್ಡಿ ಹಣ ಇದುವರೆಗಿನ ಗರಿಷ್ಠ ಮೊತ್ತ ಎನಿಸಿದೆ.

ಇಪಿಎಫ್​ಒದಲ್ಲಿರುವ ಬಡ್ಡಿಹಣ ಸಾಮಾನ್ಯವಾಗಿ ಬೇರೆ ಉಳಿತಾಯ ಸ್ಕೀಮ್​ಗಳಿಗಿಂತ ಹೆಚ್ಚು ಇರುತ್ತದೆ. ಇದಕ್ಕೆ ಕಾರಣ, ಇಪಿಎಫ್​ಒ ತನ್ನಲ್ಲಿರುವ ಠೇವಣಿ ಹಣವನ್ನು ಇಟಿಎಫ್ ಫಂಡ್ ಇತ್ಯಾದಿ ಸೂಕ್ತ ಹೂಡಿಕೆಗಳಿಗೆ ವಿನಿಯೋಗಿಸುತ್ತದೆ. ಇದರಿಂದ ಸಿಗುವ ಆದಾಯಕ್ಕೆ ಅನುಗುಣವಾಗಿ ಆ ವರ್ಷದ ಬಡ್ಡಿಹಣ ನಿಗದಿ ಮಾಡಲಾಗುತ್ತದೆ.

ಇದನ್ನೂ ಓದಿ: ಬಿಟ್ಸಿಲಾವನ್ನು ಖರೀದಿಸಿದ ಪೇಟಿಎಂ ಇ-ಕಾಮರ್ಸ್; ಹೆಸರೂ ಕೂಡ ಪೈ ಪ್ಲಾಟ್​ಫಾರ್ಮ್ಸ್ ಎಂದು ಬದಲು

ಹಿಂದಿನ ವರ್ಷಗಳಲ್ಲಿ ಇಪಿಎಫ್​ಗೆ ವಿಧಿಸಲಾಗಿದ್ದ ಬಡ್ಡಿದರ ಇದು…

  • 2011-12ರಲ್ಲಿ: ಶೇ. 8.25
  • 2012-13ರಲ್ಲಿ: ಶೇ. 8.5
  • 2013-14ರಲ್ಲಿ: ಶೇ. 8.75
  • 2014-15ರಲ್ಲಿ: ಶೇ. 8.75
  • 2015-16ರಲ್ಲಿ: ಶೇ. 8.80
  • 2016-17ರಲ್ಲಿ: ಶೇ. 8.65
  • 2017-18ರಲ್ಲಿ: ಶೇ. 8.55
  • 2018-19ರಲ್ಲಿ: ಶೇ. 8.65
  • 2019-20ರಲ್ಲಿ: ಶೇ. 8.50
  • 2020-21ರಲ್ಲಿ: ಶೇ. 8.50
  • 2021-22ರಲ್ಲಿ: ಶೇ. 8.10
  • 2022-23ರಲ್ಲಿ: ಶೇ. 8.15
  • 2023-24ರಲ್ಲಿ: ಶೇ. 8.25

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ