AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿಗೆ ಬಿಗಿಯಾಗಿ ಹಸ್ತಲಾಘವ ನೀಡುವ ಮೂಲಕ ಪುಟಿನ್ ಜಗತ್ತಿಗೆ ನೀಡಿದ ಸಂದೇಶವೇನು?

ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅವರನ್ನು ನಿನ್ನೆ ರಾತ್ರಿ ಪ್ರಧಾನಿ ಮೋದಿಯವರೇ ಸ್ವಾಗತಿಸಿದ್ದರು. ಈ ವೇಳೆ ಬಿಗಿಯಾದ ಅಪ್ಪುಗೆ ಹಾಗೂ ಹಸ್ತಲಾಘವ ನೀಡಿದ್ದರು. ಸಾಮಾನ್ಯವಾಗಿ ಜಾಗತಿಕ ನಾಯಕರಿಗೆ ನೀಡುವ ಹಸ್ತಲಾಘವಕ್ಕಿಂತ ವಿಭಿನ್ನವಾಗಿ ಪುಟಿನ್ ಅವರು ಮೋದಿಗೆ ಹ್ಯಾಂಡ್​​ಶೇಕ್ ಮಾಡಿದ್ದರು. ಬಿಗಿಯಾಗಿ ಹಸ್ತಲಾಘವ ಮಾಡುವ ಮೂಲಕ ಪುಟಿನ್ ತಮ್ಮ ಹಾಗೂ ಪ್ರಧಾನಿ ಮೋದಿಯ ಗೆಳೆತನವನ್ನು ಜಗತ್ತಿಗೆ ಸಾರಿದ್ದಾರೆ

ಪ್ರಧಾನಿ ಮೋದಿಗೆ ಬಿಗಿಯಾಗಿ ಹಸ್ತಲಾಘವ ನೀಡುವ ಮೂಲಕ ಪುಟಿನ್ ಜಗತ್ತಿಗೆ ನೀಡಿದ ಸಂದೇಶವೇನು?
Putin Handshake With Modi
ಸುಷ್ಮಾ ಚಕ್ರೆ
|

Updated on: Dec 05, 2025 | 5:38 PM

Share

ನವದೆಹಲಿ, ಡಿಸೆಂಬರ್ 5: ಪ್ರಧಾನಿ ನರೇಂದ್ರ ಮೋದಿ ಶಿಷ್ಟಾಚಾರವನ್ನು ಮುರಿದು ತಾವೇ ಖುದ್ದಾಗಿ ಹೋಗಿ ವಿಮಾನ ನಿಲ್ದಾಣದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸ್ವಾಗತಿಸಿದ್ದರು. ಮೋದಿ (PM Modi) ಅವರನ್ನು ಭೇಟಿಯಾದಾಗ ಪುಟಿನ್ ತಮ್ಮ ಹ್ಯಾಂಡ್‌ಶೇಕ್ ಶೈಲಿಯನ್ನು ಸಹ ಬದಲಾಯಿಸಿದ್ದಾರೆ. ಪುಟಿನ್ ಸಾಮಾನ್ಯವಾಗಿ ಕಡಿಮೆ ಹಿಡಿತದ ಹ್ಯಾಂಡ್‌ಶೇಕ್ ಅನ್ನು ನೀಡುತ್ತಾರೆ. ಆದರೆ ಅವರು ಮೋದಿಯನ್ನು ಭೇಟಿಯಾದಾಗ ಬಿಗಿಯಾಗಿ ಹಸ್ತಲಾಘವ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ಸಮಯದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಹಸ್ತಲಾಘವವನ್ನು ಬದಲಾಯಿಸಿಕೊಂಡಿದ್ದಾರೆ. ಅವರು ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಇಳಿದು ಪ್ರಧಾನಿ ಮೋದಿ ಅವರನ್ನು ಭೇಟಿಯಾದಾಗ, ಅವರ ಹಸ್ತಲಾಘವದ ಶೈಲಿ ವಿಭಿನ್ನವಾಗಿತ್ತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಕಡಿಮೆ ಹಿಡಿತದ ಮೂಲಕ ಹಸ್ತಲಾಘವ ಮಾಡುತ್ತಿದ್ದ ಪುಟಿನ್, ಮೋದಿ ಅವರೊಂದಿಗೆ ಸಾಮಾನ್ಯವಾಗಿಯೇ ಹಸ್ತಲಾಘವ ಮಾಡಿದ್ದಾರೆ. ಈ ಹಸ್ತಲಾಘವದ ಅರ್ಥವನ್ನು ಈಗ ಅರ್ಥೈಸಲಾಗುತ್ತಿದೆ.

ಇದನ್ನೂ ಓದಿ: ರಷ್ಯಾದ ಪ್ರವಾಸಿಗರಿಗೆ 30 ದಿನಗಳಲ್ಲಿ ಉಚಿತ ಇ-ವೀಸಾ; ಪುಟಿನ್ ಸಮ್ಮುಖದಲ್ಲಿ ಪ್ರಧಾನಿ ಮೋದಿ ಘೋಷಣೆ

ಯಾವುದೇ ರಾಷ್ಟ್ರದ ಮುಖ್ಯಸ್ಥರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಜವಾಬ್ದಾರಿ ವಿದೇಶಾಂಗ ಸಚಿವಾಲಯದ ಮೇಲಿರುತ್ತದೆ. ಇದಕ್ಕಾಗಿ ಶಿಷ್ಟಾಚಾರ ಜಾರಿಯಲ್ಲಿರುತ್ತದೆ. ಆದರೆ ಪ್ರಧಾನಿ ಮೋದಿ ಅವರು ವಿಮಾನ ನಿಲ್ದಾಣದಲ್ಲಿ ಪುಟಿನ್ ಅವರನ್ನು ಸ್ವಾಗತಿಸಲು ಖುದ್ದಾಗಿ ಆಗಮಿಸಿದ್ದರು. ಈ ಮೂಲಕ ಶಿಷ್ಟಾಚಾರವನ್ನು ಮುರಿದು, ಮೋದಿ ಅವರು ರಷ್ಯಾದ ಅಧ್ಯಕ್ಷರನ್ನು ಸ್ವಾಗತಿಸಿದರು. ಇದು ಅವರಿಬ್ಬರ ನಡುವಿನ ಬಾಂಧವ್ಯವನ್ನು ಸೂಚಿಸುತ್ತದೆ.

ವ್ಲಾಡಿಮಿರ್ ಪುಟಿನ್ ಯಾವುದೇ ನಾಯಕರನ್ನು ಭೇಟಿಯಾದಾಗ “ಹ್ಯಾಂಡ್ ಓವರ್ ಹ್ಯಾಂಡ್” ನೀತಿಯನ್ನು ಬಳಸುತ್ತಾರೆ. ಈ ಸಮಯದಲ್ಲಿ ಪುಟಿನ್ ಜಾಗತಿಕ ನಾಯಕನೊಂದಿಗೆ ನಿಧಾನವಾಗಿ ಕೈಕುಲುಕುತ್ತಾರೆ. ಅವರ ಕೈ ಇತರ ನಾಯಕನ ಕೈಗಿಂತ ಮೇಲಿರುತ್ತದೆ. ಇತ್ತೀಚೆಗೆ, ಬೀಜಿಂಗ್‌ನಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾದಾಗಲೂ ಪುಟಿನ್ ಈ ಶೈಲಿಯನ್ನು ಬಳಸಿದ್ದರು.

ಇದನ್ನೂ ಓದಿ: ಭಾರತಕ್ಕೆ ತೈಲ ಪೂರೈಕೆ ಮುಂದುವರೆಸುತ್ತೇವೆ; ದೆಹಲಿಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿಕೆ

ತಜ್ಞರ ಪ್ರಕಾರ, ಪುಟಿನ್ ಈ ಹ್ಯಾಂಡ್‌ಶೇಕ್ ಮೂಲಕ ಎರಡು ಸಂದೇಶಗಳನ್ನು ನೀಡಲು ಪ್ರಯತ್ನಿಸುತ್ತಾರೆ. ಮೊದಲನೆಯದಾಗಿ, “ನಾನು ನಿಮಗಿಂತ ಮೇಲಿದ್ದೇನೆ” ಮತ್ತು ಎರಡನೆಯದಾಗಿ, “ನಾನು ಸಂಪೂರ್ಣ ನಿಯಂತ್ರಣ ತೆಗೆದುಕೊಂಡಿದ್ದೇನೆ”. ಹಲವಾರು ಸಂದರ್ಭಗಳಲ್ಲಿ, ಕೈಕುಲುಕಿದ ನಂತರ ಪುಟಿನ್ ಇತರ ನಾಯಕನ ಭುಜದ ಮೇಲೆ ನಿಧಾನವಾಗಿ ತನ್ನ ಕೈಯನ್ನು ಇಡುತ್ತಾರೆ.

ಆದರೆ, ಪಾಲಂ ವಿಮಾನ ನಿಲ್ದಾಣ ಮತ್ತು ಪ್ರಧಾನ ಮಂತ್ರಿಯವರ ನಿವಾಸದಲ್ಲಿ ಮಾಡಿದ ಪುಟಿನ್ ಅವರ ಹಸ್ತಲಾಘವದ ಫೋಟೋಗಳು ಇಬ್ಬರು ನಾಯಕರು ಪ್ರೀತಿಯಿಂದ ಮತ್ತು ಸಾಮಾನ್ಯವಾಗಿ ಹಸ್ತಲಾಘವ ಮಾಡುವುದನ್ನು ತೋರಿಸುತ್ತವೆ. ಈ ಸಾಮಾನ್ಯ ಹಸ್ತಲಾಘವವು ಇಬ್ಬರೂ ಸಮಾನರು ಮತ್ತು ಯಾರೂ ಇನ್ನೊಬ್ಬರ ಮೇಲೆ ಪ್ರಾಬಲ್ಯ ಸಾಧಿಸುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ