AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಕಮ್ ಟ್ಯಾಕ್ಸ್ ಅಲರ್ಟ್: ಐಟಿ ರಿಟರ್ನ್ಸ್ ಸಲ್ಲಿಸಿದ ಬಳಿಕ ನಿಮಗೆ ರೀಫಂಡ್ ಬರದೇ ಹೋದರೆ ಹೀಗೆ ಮಾಡಿ

Steps to be taken of tax refund not issued: ನಾವು ಹೆಚ್ಚು ಆದಾಯ ತೆರಿಗೆ ಕಟ್ಟಿದ್ದರೆ ಹೆಚ್ಚುವರಿ ತೆರಿಗೆಯನ್ನು ಐಟಿಆರ್ ಮೂಲಕ ರೀಫಂಡ್ ಪಡೆಯಲು ಸಾಧ್ಯ. ಹೀಗೆ ರೀಫಂಡ್​​ಗೆ ಮನವಿ ಮಾಡಿಯೂ ರೀಫಂಡ್ ಬರದೇ ಹೋದರೆ ಏನು ಮಾಡಬೇಕು? ಆದಾಯ ತೆರಿಗೆ ಇಲಾಖೆ ಎರಡು ಕಾರಣಗಳನ್ನು ನೀಡಿದ್ದು, ಅದಕ್ಕೆ ಮಾರ್ಗೋಪಾಯಗಳನ್ನೂ ನೀಡಿದೆ.

ಇನ್ಕಮ್ ಟ್ಯಾಕ್ಸ್ ಅಲರ್ಟ್: ಐಟಿ ರಿಟರ್ನ್ಸ್ ಸಲ್ಲಿಸಿದ ಬಳಿಕ ನಿಮಗೆ ರೀಫಂಡ್ ಬರದೇ ಹೋದರೆ ಹೀಗೆ ಮಾಡಿ
ಆದಾಯ ತೆರಿಗೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 20, 2025 | 3:18 PM

Share

ನವದೆಹಲಿ, ಜೂನ್ 20: ನಾವು ಒಂದು ವರ್ಷದಲ್ಲಿ ಅಗತ್ಯಕ್ಕಿಂತ ಹೆಚ್ಚು ಆದಾಯ ತೆರಿಗೆಯನ್ನು ಪಾವತಿಸಿರಬಹುದು. ಅಂಥ ಸಂದರ್ಭದಲ್ಲಿ ಐಟಿ ರಿಟರ್ನ್ಸ್ ಸಲ್ಲಿಸುವಾಗ, ತೆರಿಗೆ ಬಾಧ್ಯತೆ (tax liability) ಎಷ್ಟೆಷ್ಟಿದೆ, ತೆರಿಗೆ ಕಟ್ಟಿರುವುದು ಎಷ್ಟು, ಆದಾಯ ಎಷ್ಟು ಇತ್ಯಾದಿ ಎಲ್ಲಾ ವಿವರವನ್ನೂ ಭರ್ತಿ ಮಾಡಿರುತ್ತೇವೆ. ಅಗತ್ಯಕ್ಕಿಂತ ಹೆಚ್ಚು ತೆರಿಗೆ (excessive tax) ಕಟ್ಟಿದ್ದರೆ ಅದರ ರೀಫಂಡ್​​ಗೆ (tax refund) ಮನವಿ ಮಾಡಬೇಕಾಗುತ್ತದೆ. ಹಾಗೆ ಮಾಡಿಯೂ ಬೇರೆ ಬೇರೆ ಕಾರಣಕ್ಕೆ ರೀಫಂಡ್ ಬರದೇ ಹೋಗಬಹುದು. ಇಂಥ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆ ಸೋಷಿಯಲ್ ಮೀಡಿಯಾದಲ್ಲಿ ಕೆಲ ಮಾರ್ಗೋಪಾಯಗಳನ್ನು ಸೂಚಿಸಿದೆ.

ಬ್ಯಾಂಕ್ ಖಾತೆ ವ್ಯಾಲಿಡೇಟ್ ಆಗಿರದೇ ಇದ್ದರೆ ಮತ್ತು ರೀಫಂಡ್ ರೀ ಇಷ್ಯೂ ರಿಕ್ವೆಸ್ಟ್ ಸಲ್ಲಿಸದೇ ಇದ್ದಾಗ ರೀಫಂಡ್ ಬರದೇ ತಡೆದಿರುವ ಸಾಧ್ಯತೆ ಇದೆ ಎಂದು ಹೇಳಿರುವ ಆದಾಯ ತೆರಿಗೆ ಇಲಾಖೆ, ಈ ಎರಡು ಕ್ರಮ ಅನುಸರಿಸಲು ಸೂಚಿಸಿದೆ:

ಇದನ್ನೂ ಓದಿ
Image
ವರ್ಷದಲ್ಲಿ ಶೇ. 30ರಷ್ಟು ಇಳಿಯುತ್ತಾ ಚಿನ್ನದ ಬೆಲೆ?
Image
ಐಟಿಆರ್ ಸಲ್ಲಿಕೆ: ಸೆ. 15ಕ್ಕೆ ಡೆಡ್​​ಲೈನ್ ವಿಸ್ತರಣೆ
Image
ಶ್ರೀಮಂತರು ಬ್ರಿಟನ್ ಬಿಟ್ಟು ಹೋಗುತ್ತಿರುವುದ್ಯಾಕೆ?
Image
ಯಾರು ಯಾವ ಐಟಿಆರ್ ಫಾರ್ಮ್ ಭರ್ತಿ ಮಾಡಬೇಕು?
  1. ಬ್ಯಾಂಕ್ ಖಾತೆಯನ್ನು ವ್ಯಾಲಿಡೇಟ್ ಮಾಡಿ ಅಥವಾ ರೀವ್ಯಾಲಿಡೇಟ್ ಮಾಡಿ.
  2. ಬ್ಯಾಂಕ್ ಅಕೌಂಟ್ ವ್ಯಾಲಿಡೇಟ್ ಆದ ಬಳಿಕ ‘ರೀಫಂಡ್ ರೀಇಷ್ಯೂ ರಿಕ್ವೆಸ್ಟ್’ ಅನ್ನು ಸಲ್ಲಿಸಿ.

ಇದನ್ನೂ ಓದಿ: ಗಮನಿಸಿ, ಐಸಿಐಸಿಐ ಬ್ಯಾಂಕ್​​ನ ಎಟಿಎಂ ಟ್ರಾನ್ಸಾಕ್ಷನ್, ಕ್ಯಾಷ್ ಡೆಪಾಸಿಟ್ ಇತ್ಯಾದಿ ಶುಲ್ಕಗಳಲ್ಲಿ ಬದಲಾವಣೆ

ರೀಫಂಡ್​ ಹಣ ಬರಬೇಕೆಂದರೆ ಬ್ಯಾಂಕ್ ಖಾತೆ ಸಕ್ರಿಯವಾಗಿರಬೇಕು. ಇಫೈಲಿಂಗ್ ಪೋರ್ಟಲ್​​​ಗೆ ಹೋಗಿ ಲಾಗಿನ್ ಆಗಿ ಅಲ್ಲಿ ಬ್ಯಾಂಕ್ ಖಾತೆಯ ಮಾಹಿತಿ ಸರಿಯಾಗಿದೆಯಾ ಪರಿಶೀಲಿಸಿ. ಸರಿ ಇಲ್ಲದಿದ್ದರೆ ಅಪ್​ಡೇಟ್ ಮಾಡಿ ಬ್ಯಾಂಕ್ ಖಾತೆಯನ್ನು ವ್ಯಾಲಿಡೇಟ್ ಮಾಡಿ.

ರೀಫಂಡ್ ರೀಇಷ್ಯೂ ರಿಕ್ವೆಸ್ಟ್ ಸಲ್ಲಿಸಿ…

ಬ್ಯಾಂಕ್ ಖಾತೆಯನ್ನು ವ್ಯಾಲಿಡೇಟ್ ಮಾಡಿದ ಬಳಿಕ ನೀವು ‘ರೀಫಂಡ್ ರೀಇಷ್ಯೂ ರಿಕ್ವೆಸ್ಟ್’ ಅನ್ನು ಸಲ್ಲಿಸದೇ ಹೋದಾಗಲೂ ರೀಫಂಡ್ ಬಂದಿರುವುದಿಲ್ಲ. ಹಾಗೆ ನೀವು ಮರೆತಿದ್ದರೆ ಮೊದಲು ಆ ಕೆಲಸ ಮಾಡಿ. ಅದರ ಕ್ರಮ ಈ ಕೆಳಕಂಡಂತೆ ಇದೆ:

  • ಇಫೈಲಿಂಗ್ ಪೋರ್ಟಲ್​​ಗೆ ಲಾಗಿನ್ ಆಗಿ
  • ಸರ್ವಿಸಸ್​ಗೆ, ಹಾಗು ‘ರೀಫಂಡ್ ರೀಇಷ್ಯೂ’ಗೆ ಹೋಗಿ.
  • ‘ರೀಫಂಡ್ ರೀಇಷ್ಯೂ ರಿಕ್ವೆಸ್ಟ್​’ಗೆ ದಾಖಲೆಯನ್ನು ಆಯ್ಕೆ ಮಾಡಿ.
  • ವ್ಯಾಲಿಡೇಟ್ ಮಾಡಲಾದ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿಕೊಳ್ಳಿ.
  • ‘ಪ್ರೊಸೀಡ್ ಟು ವೆರಿಫಿಕೇಶನ್’ ಕ್ಲಿಕ್ ಮಾಡಿ.
  • ಇವೆರಿಫಿಕೇಶನ್ ವಿಧಾನ- ಆಧಾರ್ ಓಟಿಪಿ/ಇವಿಸಿ/ಡಿಎಸ್​​ಸಿ ಆಯ್ಕೆ ಮಾಡಿ.
  • ಈ ಮೂರರಲ್ಲಿ ಒಂದು ವಿಧಾನದ ಮೂಲಕ ವೆರಿಫಿಕೇಶನ್ ಸಲ್ಲಿಸಬಹುದು.

ಇದನ್ನೂ ಓದಿ: ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿ, ಐಟಿಆರ್ ಫೈಲಿಂಗ್​​ಗೆ ಡೆಡ್​​ಲೈನ್ ಜುಲೈ 31 ಅಲ್ಲ, ಸೆಪ್ಟೆಂಬರ್ 15ರವರೆಗೆ ವಿಸ್ತರಣೆ

ಇದಿಷ್ಟು ಯಶಸ್ವಿಯಾಗಿ ಮಾಡಿ ಸಲ್ಲಿಸಿದ ಬಳಿಕ ಒಂದೆರಡು ತಿಂಗಳೊಳಗೆ ರೀಫಂಡ್ ಬರುವ ಸಾಧ್ಯತೆ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Fri, 20 June 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!