AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FIRE Model: ನಿಮ್ಮ ಜೀವನಕ್ಕೆ ಬೆಂಕಿ ಕಿಚ್ಚು; ಫೈರ್ ತಂತ್ರ ಅನುಸರಿಸಿ ಬೇಗ ನಿವೃತ್ತಿ ಪಡೆದು ಆರಾಮವಾಗಿರಿ

How To Achieve Early Retirement: ಇಂದಿನ ದಿನಮಾನದಲ್ಲಿ ಬಹಳ ಜನರು ಹೆಚ್ಚು ದಿನ ಕೆಲಸ ಮಾಡಲು ಬಯಸುವುದಿಲ್ಲ. ಆದರೆ ಕೆಲಸವಿಲ್ಲದಿದ್ದರೆ ಹಣ ಎಲ್ಲಿಂದ ಬರುತ್ತದೆ ಎಂದು ಯೋಚಿಸಬಹುದು. ನೀವು ಬೇಗನೇ ನಿವೃತ್ತರಾಗಿ ಆರಾಮವಾಗಿ ಇರಬೇಕೆಂದು ಭಾವಿಸುವುದಾದರೆ ಆ ಕನಸು ಸಾಕಾರಗೊಳಿಸಲು ಮಾರ್ಗಗಳಿವೆ. ಅದರಲ್ಲಿ ಫೈರ್ ಮಾಡಲ್ ಒಂದು. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

FIRE Model: ನಿಮ್ಮ ಜೀವನಕ್ಕೆ ಬೆಂಕಿ ಕಿಚ್ಚು; ಫೈರ್ ತಂತ್ರ ಅನುಸರಿಸಿ ಬೇಗ ನಿವೃತ್ತಿ ಪಡೆದು ಆರಾಮವಾಗಿರಿ
ಹಣಕಾಸು ಸ್ವಾತಂತ್ರ್ಯ
TV9 Web
| Edited By: |

Updated on: Oct 30, 2023 | 6:04 PM

Share

ಆರವತ್ತು ವರ್ಷ ವಯಸ್ಸಿನವರೆಗೆ ಗಾಣದ ಎತ್ತುಗಳಂತೆ ದುಡಿದು, ನಂತರ ದೈಹಿಕ ಶಕ್ತಿ ದುರ್ಬಲಗೊಂಡ ಬಳಿಕ ನಿವೃತ್ತರಾಗಿ ಅದ್ಯಾವ ಜೀವನ ಸಂತೋಷ ಅನುಭವಿಸುತ್ತೀರಿ. ಅದರ ಬದಲು ಬೇಗನೇ ರಿಟೈರ್ ಆಗಿ ನಿಮ್ಮಿಷ್ಟದ ಜೀವನ ಅನುಭವಿಸಿ ಎಂದು ವಾದಿಸುವವರನ್ನು ನೀವು ನೋಡಿರಬಹುದು. ಇವರ ಮಾತುಗಳು ಈಗೀಗ ಟ್ರೆಂಡ್ ಆಗುತ್ತಿವೆ. ಮನಸಿಗೆ ಖುಷಿಕೊಡುವ ಸಂಗತಿಗಳನ್ನು ಬದಿಗೊತ್ತಿ ಇಡೀ ಜೀವನ ಕೆಲಸ ಮಾಡಬೇಕಿಲ್ಲ. ಬೇಗನೇ ಹೊಟ್ಟೆಪಾಡಿನ ದುಡಿಮೆ ನಿಲ್ಲಿಸಿ ನಮ್ಮ ಆತ್ಮಸಂತೋಷಕ್ಕೆ ಕೆಲಸ ಮಾಡಬೇಕು. 50 ವರ್ಷದೊಳಗೆ ಅಥವಾ 40 ವರ್ಷದೊಳಗೆ ನಿವೃತ್ತಿ ಹೊಂದಬೇಕು ಎಂದು ಆಲೋಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಚಿಂತನೆಯಲ್ಲಿರುವವರಿಗೆಂದು ‘FIRE ಮಾಡೆಲ್’ ಇದೆ. FIRE ಎಂದರೆ ಫೈನಾನ್ಷಿಯಲ್ ಇಂಡಿಪೆಂಡೆನ್ಸ್, ರಿಟೈರ್ ಅರ್ಲಿ (FIRE- Financial Independence Retire Early) ಎಂದು. ಅಂದರೆ, ಹಣಕಾಸು ಸ್ವಾವಲಂಬನೆ ಮತ್ತು ಶೀಘ್ರ ನಿವೃತ್ತಿ ಎಂದಾಗುತ್ತದೆ. ಈ ಫಯರ್ ಸೂತ್ರವನ್ನು ಅಳವಡಿಸಿಕೊಂಡರೆ ನೀವು ನಿವೃತ್ತಿಗಾಗಿ ಕಾಯಬೇಕಾಗಿಲ್ಲ. ನೀವು ಇನ್ನೂ ಕೆಲಸದಲ್ಲಿರುವಾಗಲೇ ಈ ಸೂತ್ರದೊಂದಿಗೆ ನಿಮ್ಮ ನಿವೃತ್ತಿಯನ್ನು ಸರಿಯಾಗಿ ಯೋಜಿಸಬಹುದು. ಆದ್ದರಿಂದ ನೀವು ವೃದ್ಧಾಪ್ಯದವರೆಗೂ ಕೆಲಸ ಮಾಡಬೇಕಾಗಿಲ್ಲ. ಈ ಮಾದರಿಯು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ಅಳವಡಿಸಿಕೊಳ್ಳುವ ಮೂಲಕ ನೀವು ವೃದ್ಧಾಪ್ಯದ ಅಸಹಾಯಕತೆಯನ್ನು ಹೇಗೆ ಹೋಗಲಾಡಿಸಬಹುದು ಎಂಬುದನ್ನು ಇಲ್ಲಿ ನೋಡಬಹುದು.

ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, FIRE ಮಾದರಿಯು 1992 ರಲ್ಲಿ ವಿಕ್ಕಿ ರಾಬಿನ್ ಮತ್ತು ಜೋ ಡೊಮಿಂಗ್ಯೂಜ್ ಅವರ ‘ಯುವರ್ ಮನಿ ಆರ್ ಯುವರ್ ಲೈಫ್’ ಪುಸ್ತಕದೊಂದಿಗೆ ಪ್ರಾರಂಭವಾಯಿತು. ಈ ಸೂತ್ರ ಅಳವಡಿಸಿಕೊಳ್ಳುವ ಮೂಲಕ, ನಿಮ್ಮ ನಿವೃತ್ತಿ ವಯಸ್ಸನ್ನು ನೀವೇ ನಿರ್ಧರಿಸಬಹುದು.

ಫೈರ್ ಸಂಖ್ಯೆಯನ್ನು ಈ ರೀತಿ ಲೆಕ್ಕ ಹಾಕಿ

ಮೊದಲು ನೀವು ನಿಮ್ಮ FIRE ಸಂಖ್ಯೆಯನ್ನು ನಿರ್ಧರಿಸಬೇಕು. ಅಂದರೆ, ಯಾವ ವಯಸ್ಸಿನಲ್ಲಿ ನಿಮ್ಮ ಕೆಲಸದಿಂದ ನೀವು ವಿಮುಕ್ತರಾಗಲು ಬಯಸುತ್ತೀರಿ? ನಿಮ್ಮ ಪ್ರಸ್ತುತ ವೆಚ್ಚಗಳು, ಆದಾಯ ಮತ್ತು ಉಳಿತಾಯದ ಆಧಾರದ ಮೇಲೆ ನೀವು 60 ನೇ ವಯಸ್ಸಿನಲ್ಲಿ ನಿವೃತ್ತರಾಗಲು ಬಯಸುತ್ತೀರಾ ಅಥವಾ ಅದಕ್ಕೂ ಮೊದಲೇ ನೀವು ಕೆಲಸ ಬಿಡಲು ಬಯಸುತ್ತೀರಾ ಎಂಬುದನ್ನು ನೀವು ಲೆಕ್ಕ ಹಾಕಬಹುದು.

ಇದನ್ನೂ ಓದಿ: World Savings Day: ವಿಶ್ವ ಉಳಿತಾಯ ದಿನ ಇಂದು; ನಾಳಿನ ಜೀವನೋಪಾಯಕ್ಕೆ ಇಂದೇ ಆಗಬೇಕು ಹಣ ಉಳಿತಾಯ

ಫೈರ್ ಸೂತ್ರ 1: ವೆಚ್ಚ ಕಡಿಮೆ

ಫೈರ್ ಮಾಡಲ್ ಪ್ರಕಾರ ನಿಮ್ಮ ಪ್ರಸ್ತುತ ವೆಚ್ಚಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕಾಗುತ್ತದೆ. ದೊಡ್ಡ ಮನೆಯ ಬದಲು ಸಣ್ಣ ಮನೆ ಖರೀದಿಸುವುದು, ದುಬಾರಿ ಸಾರಿಗೆ ಬದಲು ಅಗ್ಗದ ಸಾರಿಗೆ, ಹೀಗೆ ನಾನಾ ರೀತಿಯಲ್ಲಿ ಅನಗತ್ಯ ವೆಚ್ಚಗಳನ್ನು ಮುಲಾಜಿಲ್ಲದೇ ಕತ್ತರಿಸಬೇಕು. ಆಗ ಮಾತ್ರ ಹಣ ಉಳಿತಾಯ ಸಾಧ್ಯ. ಸಾಧ್ಯವಾದಷ್ಟೂ ನಿಮ್ಮ ಜೀವನದಲ್ಲಿ ಸರಳತೆ ಇರಲಿ. ಇದರಿಂದ ಮಿತವ್ಯಯದ ಗುರಿ ಈಡೇರಿಸುವುದು ಸಾಧ್ಯ.

ಫೈರ್ ಸೂತ್ರ 2: ಆದಾಯ ಹೆಚ್ಚಿಸಿ

ನಿಮ್ಮ ಆದಾಯವನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು. ಇದಕ್ಕಾಗಿ ನೀವು ಹೆಚ್ಚಿನ ಸಂಬಳದ ಕೆಲಸದತ್ತ ಗಮನ ಹರಿಸಬೇಕು. ಉದ್ಯೋಗದ ಹೊರತಾಗಿ, ಇತರ ಆದಾಯದ ಕಡೆಗೆ ಗಮನ ಹರಿಸಬೇಕು. ಇದಕ್ಕಾಗಿ ನೀವು ಲಾಭಾಂಶವನ್ನು (ಡಿವಿಡೆಂಡ್) ನೀಡುವ ಷೇರುಗಳ ಮೇಲೆ ಹಣ ಕೇಂದ್ರೀಕರಿಸಬೇಕು. ವಾಸ್ತವವಾಗಿ, ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಾಂಶವನ್ನು ನೀಡುವ ಅನೇಕ ಕಂಪನಿಗಳಿವೆ. ನೀವು ಹೆಚ್ಚಿನ ಲಾಭಾಂಶ ನೀಡುವ ಷೇರುಗಳನ್ನು ಹೊಂದಿದರೆ ಕಾಲಕಾಲಕ್ಕೆ ಸ್ಥಿರ ಮೊತ್ತವನ್ನು ಪಡೆಯುತ್ತೀರಿ ಮತ್ತು ನಿಮ್ಮ ಸಂಪತ್ತೂ ಹೆಚ್ಚುತ್ತಲೇ ಇರುತ್ತದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ; ತಿಂಗಳಿಗೆ 5,000 ರೂ ಪಿಂಚಣಿ ಸಿಗಲು ಎಷ್ಟು ಹೂಡಿಕೆ ಬೇಕು?

ಫೈರ್ ಸೂತ್ರ 3: ಗರಿಷ್ಠ ಉಳಿತಾಯ

ನೀವು ಬೇಗನೆ ಕೆಲಸದ ಬಂದದಿಂದ ಮುಕ್ತಿ ಹೊಂದಲು ಬಯಸಿದರೆ, ನಿಮ್ಮ ಉಳಿತಾಯವನ್ನು ಹೆಚ್ಚಿಸಿಕೊಳ್ಳಬೇಕು. FIRE ಮಾದರಿಯ ಲೆಕ್ಕಾಚಾರದ ಪ್ರಕಾರ, ನಿಮ್ಮ ಆದಾಯದ 50 ಪ್ರತಿಶತವನ್ನು ನೀವು ಉಳಿಸಬೇಕು. ಆಗ ಮಾತ್ರ ನೀವು ಈ ಗುರಿಯನ್ನು ತ್ವರಿತವಾಗಿ ಸಾಧಿಸಲು ಸಾಧ್ಯವಾಗುತ್ತದೆ. ನೀವು ಈಗ 30 ವರ್ಷ ವಯಸ್ಸಿನವರಾಗಿದ್ದೀರಿ ಮತ್ತು ನೀವು 50 ರ ಹೊತ್ತಿಗೆ ಈ ಗುರಿಯನ್ನು ಸಾಧಿಸಲು ಬಯಸುತ್ತೀರಿ ಎಂದು ಭಾವಿಸೋಣ. ನಂತರ ನೀವು ನಿಮ್ಮ ಆದಾಯದ ಅರ್ಧದಷ್ಟು ಉಳಿಸಬೇಕಾಗುತ್ತದೆ. ಮತ್ತು ಈ ಮೊತ್ತವನ್ನು ಹಣ ವೇಗವಾಗಿ ಬೆಳೆಯುವಂತಹ ಯಂತ್ರಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!