AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crorepati: ವರ್ಷಕ್ಕೆ ಶೇ. 15 ವೃದ್ಧಿ; 15 ವರ್ಷದಲ್ಲಿ 1.38 ಕೋಟಿ ಹಣ ನಿಮ್ಮದಾಗಿಸಿಕೊಳ್ಳಿ; ಇದು ಹೇಗೆ ಸಾಧ್ಯ?

Happy Investment Tips: 15 ವರ್ಷದಲ್ಲಿ 1 ಕೋಟಿಗೂ ಹೆಚ್ಚು ಹಣ ನಿಮ್ಮ ಕೈ ಸೇರಲು ತಿಂಗಳಿಗೆ 15 ಸಾವಿರ ರೂ ಹೂಡಿಕೆ ಮಾಡಿದರೂ ಸಾಕು. ಇದು ಹೇಗೆ ಸಾಧ್ಯ? ಹಣಕಾಸು ತಜ್ಞರು ಮುಂದಿಡುವ 15-15-15 ಸೂತ್ರ ವರ್ಕೌಟ್ ಆಗುತ್ತದೆ.

Crorepati: ವರ್ಷಕ್ಕೆ ಶೇ. 15 ವೃದ್ಧಿ; 15 ವರ್ಷದಲ್ಲಿ 1.38 ಕೋಟಿ ಹಣ ನಿಮ್ಮದಾಗಿಸಿಕೊಳ್ಳಿ; ಇದು ಹೇಗೆ ಸಾಧ್ಯ?
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 15, 2023 | 1:41 PM

Share

ನಿಮ್ಮ ಬಳಿ ಲಕ್ಷ್ಮೀ ಒಲಿದು ಬರಬೇಕೆಂದರೆ ಮೂರು ಅಂಶಗಳು ಬಹಳ ಮುಖ್ಯ. ಮೊದಲನೆಯದು ಹಣ ಸಂಪಾದನೆ. ವ್ಯವಹಾರವೋ, ಕೆಲಸವೋ ಹೇಗಾದರೂ ಸರಿ ಹಣ ಸಂಪಾದನೆ ಮಾಡಬೇಕು. ಎರಡನೆಯದು, ಹಣ ಉಳಿತಾಯ. ನೀವು ಉಳಿಸಿದ ಪ್ರತೀ ಹಣವೂ ಗಳಿಕೆಗೆ ಸಮ (Every Money Earned Is Every Money Saved) ಎನ್ನುತ್ತಾರೆ ಅನುಭವಿಗಳು. ನಿಮ್ಮ ಆದಾಯದಲ್ಲಿ ಅರ್ಧದಷ್ಟನ್ನಾದರೂ ಹಣವನ್ನು ನೀವು ಉಳಿಸಬೇಕು. ಮೂರನೆಯದು, ನಿಮ್ಮ ಉಳಿತಾಯ ಹಣವನ್ನು ಬೆಳೆಸುವುದು. ಇದು ಹಣವನ್ನು ಲಾಭದಾಯಕ ಯೋಜನೆಗಳಲ್ಲಿ (Investment Schemes) ಹೂಡಿಕೆ ಮಾಡುವ ಮೂಲಕ ಆಗಬಹುದು. ಹಣ ಬೆಳೆಸುವ ವಿಷಯದಲ್ಲಿ ತಜ್ಞರು 15-15-15 ಎಂಬ ಹಣಕಾಸು ಸೂತ್ರ ಮುಂದಿಟ್ಟಿದ್ದಾರೆ. ಇದರ ಪ್ರಕಾರ ನೀವು ಹೆಜ್ಜೆ ಇಟ್ಟರೆ ಬಹಳ ವೇಗವಾಗಿ ಹಣವೃದ್ಧಿಸಿ ನಿಮ್ಮ ಜೀವನದಲ್ಲಿ ಸಮೃದ್ಧಿ ನೆಲಸುವಂತೆ ಮಾಡಬಹುದು.

ಏನಿದು 15-15-15 ಸೂತ್ರ?

ಈ ಸೂತ್ರ ಸಾಂಕೇತಿಕ ಮಾತ್ರ. ಇದನ್ನು ನಿಮ್ಮ ನಿಮ್ಮ ಸಾಮರ್ಥ್ಯ, ಅಗತ್ಯಕ್ಕೆ ತಕ್ಕಂತೆ ವಿವಿಧ ಸ್ತರಗಳಲ್ಲಿ ಅನ್ವಯ ಮಾಡಿಕೊಳ್ಳಬಹುದು. ಈ ಸೂತ್ರದ ಪ್ರಕಾರ ವಾರ್ಷಿಕವಾಗಿ ಶೇ. 15ರಷ್ಟು ಆದಾಯ ಕೊಡಬಲ್ಲ ಹೂಡಿಕೆ ಯೋಜನೆಗಳಲ್ಲಿ ತಿಂಗಳಿಗೆ 15 ಸಾವಿರ ರುಪಾಯಿ ಹೂಡಿಕೆ ಮಾಡುತ್ತಾ ಹೋಗಬೇಕು. 15 ವರ್ಷದ ಬಳಿಕ ನಿಮ್ಮ ಹಣ 1 ಕೋಟಿ ರುಪಾಯಿಗೂ ಹೆಚ್ಚು ಆಗುತ್ತದೆ. ನಿರ್ದಿಷ್ಟ ಮೊತ್ತ ಹೇಳಬೇಕೆಂದರೆ 1.38 ಕೋಟಿ ರುಪಾಯಿ ನಿಮ್ಮ ಬಳಿ ಉಳಿದಿರುತ್ತದೆ.

ಇದನ್ನೂ ಓದಿInternational Consumer Day: ಇನ್ಷೂರೆನ್ಸ್ ಕ್ಲೈಮ್​ಗೆ ಆಸ್ಪತ್ರೆಗೆ ದಾಖಲಾಗಲೇಬೇಕಾ? ಗ್ರಾಹಕರ ವೇದಿಕೆ ಕೊಟ್ಟ ತೀರ್ಪಿದು

ಆದರೆ, ಇಲ್ಲಿ ಪ್ರಮುಖವಾಗಿ ಗಮನದಲ್ಲಿರಿಸಬೇಕಾದದ್ದು ನೀವು ಯಾವ ಹೂಡಿಕೆ ಯೋಜನೆಗಳಲ್ಲಿ ಹಣ ತೊಡಗಿಸಿಕೊಳ್ಳುತ್ತೀರಿ, ಅದು ಎಷ್ಟು ಫಲ ಕೊಡುತ್ತದೆ ಎಂಬುದು. ಹಣದುಬ್ಬರ (Inflation) ಇತ್ಯಾದಿ ಬೆಲೆ ಏರಿಕೆಯ ಅಂಶಗಳನ್ನು ಗಣಿಸಿದಾಗ ವರ್ಷಕ್ಕೆ ಶೇ. 15ರಷ್ಟಾದರೂ ಹಣ ವೃದ್ಧಿ ಮಾಡುವಂತಹ ಹೂಡಿಕೆ ಯೋಜನೆಗಳು ಬಹಳ ಮುಖ್ಯ. ಸದ್ಯ ಇರುವ ಇಂತಹ ಓಡುವ ಕುದುರೆಗಳೆಂದರೆ ರಿಯಲ್ ಎಸ್ಟೇಟ್, ಚಿನ್ನ, ಷೇರುಗಳು.

ನೀವು ಷೇರುಗಳ ಮೇಲೆ ನೇರವಾಗಿ ಹೂಡಿಕೆ ಮಾಡಬಹುದು. ಅಥವಾ ಮ್ಯೂಚುವಲ್ ಫಂಡ್ ಮೂಲಕವಾದರೂ ಹೂಡಿಕೆ ಮಾಡಬಹುದು. ಅದಕ್ಕಾಗಿ ಹಲವು ಎಸ್​ಐಪಿ (SIP- ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್) ಇವೆ. ಯಾವ ಎಸ್​ಐಪಿ ಎಷ್ಟು ಲಾಭದಾಯಕ ಎಂಬುದನ್ನು ಗಮನಿಸಿ ಅಂಥವುಗಳ ಮೇಲೆ ಹೂಡಿಕೆ ಮಾಡುತ್ತಾ ಹೋಗಬೇಕು.

ಇದನ್ನೂ ಓದಿSamosa Shop: 30 ಲಕ್ಷ ಸಂಬಳದ ಕೆಲಸ ಬಿಟ್ಟು, ಮನೆ ಮಾರಿ ಸಮೋಸಾ ಮಾರುತ್ತಿರುವ ಬೆಂಗಳೂರಿನ ದಂಪತಿ; ಇವರ ಸಂಪಾದನೆ ಕೇಳಿದರೆ ಶಾಕ್ ಆಗುತ್ತೀರಿ…

ಹೂಡಿಕೆಗೆಂದು ತಿಂಗಳಿಗೆ ಕೇವಲ 15 ಸಾವಿರ ರೂ ಮಾತ್ರ ಬಳಸುತ್ತೀರಿ ಎಂದಾದರೆ 15 ವರ್ಷದಲ್ಲಿ ಕೋಟ್ಯಾಧಿಪತಿ ಆಗಬೇಕೆಂದರೆ ನಿಮ್ಮ ಹೂಡಿಕೆ ಹಣ ಶೇ. 15ರ ದರದಲ್ಲಿ ಬೆಳೆಯುವುದು ಅವಶ್ಯಕ. ಪ್ರತೀ ವರ್ಷ ನಿಮ್ಮ ಹೂಡಿಕೆ ಮೊತ್ತ ಹೆಚ್ಚಿಸಿಕೊಂಡರೆ ಇನ್ನೂ ಹೆಚ್ಚು ಸಂಪತ್ತಿನ ಒಡೆಯರಾಗಬಹುದು. ಮಕ್ಕಳ ಶಿಕ್ಷಣ, ಮನೆ ಖರೀದಿ ಇತ್ಯಾದಿಗೆ ಪ್ರತ್ಯೇಕವಾಗಿ ನೀವು ಹೂಡಿಕೆ ಮಾಡಬಲ್ಲಿರೆಂದರೆ ನಿಮ್ಮ ನಿವೃತ್ತಿ ಜೀವನ ಇನ್ನೂ ಆರಾಮದಾಯಕವಾಗಿರುತ್ತದೆ.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಬಿಜೆಪಿ ಸೇರ್ಪಡೆ ಬಗ್ಗೆ ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿದ್ದಿಷ್ಟು
ಬಿಜೆಪಿ ಸೇರ್ಪಡೆ ಬಗ್ಗೆ ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿದ್ದಿಷ್ಟು