AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಬಳ ಅಥವಾ ಆದಾಯ ಹೆಚ್ಚಾದರೆ, ಸಾಲ ತೀರಿಸಬೇಕಾ, ಹೂಡಿಕೆ ಹೆಚ್ಚಿಸಬೇಕಾ? ಯಾವುದು ಉತ್ತಮ ಆಯ್ಕೆ?

Loan vs SIP: ನಿಮಗೆ ಅಕಸ್ಮಾತ್ ಆಗಿ ದೊಡ್ಡ ಪ್ರಮಾಣದಲ್ಲಿ ಆದಾಯ ಹೆಚ್ಚಳ ಆಗಿದೆ ಎಂದಿಟ್ಟುಕೊಳ್ಳಿ. ಅದೇ ಸಂದರ್ಭದಲ್ಲಿ ನೀವು ಸಾಲ ಹಾಗೂ ಹೂಡಿಕೆ ಎರಡನ್ನೂ ಹೊಂದಿರುತ್ತೀರಿ. ನಿಮ್ಮ ಹೆಚ್ಚುವರಿ ಆದಾಯವನ್ನು ಯಾವುದಕ್ಕೆ ವಿನಿಯೋಗಿಸುತ್ತೀರಿ? ಇಂಥ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ. ಈ ಬಗ್ಗೆ ಕೆಲ ಸಲಹೆ ಇಲ್ಲಿದೆ...

ಸಂಬಳ ಅಥವಾ ಆದಾಯ ಹೆಚ್ಚಾದರೆ, ಸಾಲ ತೀರಿಸಬೇಕಾ, ಹೂಡಿಕೆ ಹೆಚ್ಚಿಸಬೇಕಾ? ಯಾವುದು ಉತ್ತಮ ಆಯ್ಕೆ?
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 30, 2023 | 6:16 PM

Share

ಹಣದ ನಿರ್ವಹಣೆ (Money Management) ನಿಜಕ್ಕೂ ಒಂದು ಕಲೆ. ಅದಕ್ಕೆ ಹಣಕಾಸು ಶಿಸ್ತು, ಜ್ಞಾನ, ಸಮಯಪ್ರಜ್ಞೆ ಕೂಡ ಬಹಳ ಮುಖ್ಯ. ಯಾವ ಸಮಯದಲ್ಲಿ ಯಾವ ಹಣಕಾಸು ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಚಾಕಚಕ್ಯತೆ ಇರಬೇಕು. ಕೆಲ ಸಂದರ್ಭಗಳು ನಮ್ಮನ್ನು ಇಕ್ಕಟ್ಟಿಗೆ ಅಥವಾ ಗೊಂದಲಕ್ಕೆ ಕೆಡವಬಹುದು. ಉದಾಹರಣೆಗೆ ನೀವು ಕಂಪನಿಯನ್ನು ಬದಲಿಸಿದಾಗಲೋ ಅಥವಾ ಒಳ್ಳೆಯ ಅಪ್ರೈಸಲ್ ಸಿಕ್ಕು ನಿಮಗೆ ದಿಢೀರ್ ಶೇ. 30ರಷ್ಟು ಸಂಬಳ ಹೆಚ್ಚಳವಾದರೆ ಮುಂದೇನು ಮಾಡಬೇಕು ಎಂಬ ಆಲೋಚನೆ ನಿಮ್ಮನ್ನು ಕಾಡಬಹುದು. ನಿಮಗೆ ಯಾವುದೇ ಬಾಧ್ಯತೆಗಳು ಇಲ್ಲದೇ ಇದ್ದರೆ ಆ ಹಣವನ್ನು ಯಾವುದರಲ್ಲಾದರೂ ಹೂಡಿಕೆ ಮಾಡುತ್ತೀರಿ. ಅದು ಸುಲಭ ನಿರ್ಧಾರ.

ಆದರೆ, ನೀವು ಸಾಲ ಮತ್ತು ಹೂಡಿಕೆ ಎರಡನ್ನೂ ಹೊಂದಿದ್ದಾಗ ನಿಮ್ಮ ಹೆಚ್ಚುವರಿ ಆದಾಯವನ್ನು ಯಾವುದಕ್ಕೆ ವಿನಿಯೋಗಿಸುತ್ತೀರಿ? ಇದು ನಿಮ್ಮನ್ನು ಗೊಂದಲಕ್ಕೆ ಕೆಡವಬಹುದು.

ಇದನ್ನೂ ಓದಿ: ಗೃಹಸಾಲಕ್ಕೆ ಡೌನ್​ಪೇಮೆಂಟ್ ಎಷ್ಟು? ಇಎಂಐ ಹೊರೆ ಕಡಿಮೆ ಮಾಡುವ ಉಪಾಯ ಏನು?

ಇಲ್ಲಿ ನಿಮ್ಮ ಹೂಡಿಕೆ ಯಾವುದು ಎಂಬುದು ಮುಖ್ಯ. ನಿಮ್ಮ ಸಾಲದ ಬಡ್ಡಿ ದರ ಎಷ್ಟು, ಹಾಗೂ ನಿಮ್ಮ ಹೂಡಿಕೆಯಿಂದ ನಿರೀಕ್ಷಿಸುವ ಸರಾಸರಿ ರಿಟರ್ನ್ ಎಷ್ಟು ಎಂಬುದನ್ನು ಹೋಲಿಸಿ ನೋಡಿ. ಯಾವುದು ಹೆಚ್ಚು ದರ ಇದೆಯೋ ಅದರ ಮೇಲೆ ನಿಮ್ಮ ಹೆಚ್ಚುವರಿ ಹಣ ವಿನಿಯೋಗಿಸುವುದು ಉತ್ತಮ ಎನ್ನುತ್ತಾರೆ ಫೈನಾನ್ಷಿಯಲ್ ಪ್ಲಾನರ್​ಗಳು.

ನೀವು ಈಕ್ವಿಟ್ ಫಂಡ್​ಗಳ ಎಸ್​ಐಪಿ ಯೋಜನೆಯ ಡೈರೆಕ್ಟ್ ಪ್ಲಾನ್ ಹೊಂದಿದ್ದರೆ ಅದರಿಂದ ಶೇ. 12ರಿಂದ 15ರಷ್ಟಾದರೂ ವಾರ್ಷಿಕ ದರದಲ್ಲಿ ಬೆಳವಣಿಗೆ ನಿರೀಕ್ಷಿಸಬಹುದು. ಆದರೆ, ನೀವು ವೈಯಕ್ತಿಕ ಸಾಲ ಪಡೆದಿದ್ದರೆ ಅದರ ಬಡ್ಡಿದರ ಶೇ. 15ರಿಂದ ಶೇ. 18ರವರೆಗೂ ಇರುತ್ತದೆ. ಆಗ ನೀವು ಪರ್ಸನಲ್ ಲೋನ್ ತೀರಿಸಲು ಆದ್ಯತೆ ಕೊಡಬೇಕಾಗುತ್ತದೆ.

ಇದನ್ನೂ ಓದಿ: ಭವಿಷ್ಯದ ಭದ್ರತೆಗೆ ನಿಮಗೆ ಎಷ್ಟು ಹಣ ಬೇಕು? ನಿವೃತ್ತಿ ನಂತರದ ಬದುಕಿಗೆ ಈಗಲೇ ಲೆಕ್ಕ ಹಾಕುವುದು ಹೇಗೆ?

ಆದರೆ, ಗೃಹಸಾಲ ಹೊಂದಿದ್ದರೆ ಅದರ ಬಡ್ಡಿದರ ಶೇ. 9ರಿಂದ 10 ಇರಬಹುದು. ಈ ಸಂದರ್ಭದಲ್ಲಿ ನೀವು ಇದಕ್ಕಿಂತ ಹೆಚ್ಚು ರಿಟರ್ನ್ ಕೊಡುವ ಎಸ್​ಐಪಿ ಮೇಲೆ ಹಣ ವಿನಿಯೋಗಿಸುವುದು ಉತ್ತಮ. ಆದರೆ, ಈಕ್ವಿಟಿ ಬಿಟ್ಟರೆ ಬೇರೆ ಸೇವಿಂಗ್ ಸ್ಕೀಮ್​ಗಳಲ್ಲಿ ನೀವು ಹಣ ಹಾಕಿದರೆ ವಾರ್ಷಿಕವಾಗಿ ಶೇ. 9ಕ್ಕಿಂತ ಹೆಚ್ಚು ಬಡ್ಡಿ ಸಿಗುವುದಿಲ್ಲ. ಆಗ ನೀವು ಸಾಲ ತೀರಿಸುವುದಕ್ಕೆ (Loan Pre Payment) ಆದ್ಯತೆ ನೀಡುವುದು ಅತ್ಯುತ್ತಮ ನಿರ್ಧಾರ ಎನಿಸುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!