AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wrong UPI Transfer: ತಪ್ಪಾದ ಯುಪಿಐ ಐಡಿಗೆ ಹಣ ಕಳುಹಿಸಿದ್ದರೆ ರಿಫಂಡ್ ಮಾಡಿಸುವುದು ಹೇಗೆ? ಇಲ್ಲಿದೆ ಮಾಹಿತಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ನಿಯಮಗಳ ಪ್ರಕಾರ, ತಪ್ಪಾಗಿ ಕಳುಹಿಸಲ್ಪಟ್ಟ ಹಣವನ್ನು ನೀವು ಮರಳಿ ಪಡೆಯಬಹುದು. ಇದಕ್ಕಾಗಿ ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

Wrong UPI Transfer: ತಪ್ಪಾದ ಯುಪಿಐ ಐಡಿಗೆ ಹಣ ಕಳುಹಿಸಿದ್ದರೆ ರಿಫಂಡ್ ಮಾಡಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on:Dec 06, 2022 | 12:07 PM

ಯುಪಿಐ (UPI) ಪಾವತಿ ವಿಧಾನವನ್ನು ಬಹಳ ಸುರಕ್ಷಿತವಾಗಿ ನಡೆಯುವಂತೆ ಮಾಡುವುದಕ್ಕಾಗಿಯೇ ಕ್ಯುಆರ್ ಕೋಡ್ (QR Code) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ವಿಧಾನದಲ್ಲಿ ಮೊಬೈಲ್ ಸಂಖ್ಯೆ, ಯುಪಿಐ ಐಡಿ ಅಥವಾ ಬ್ಯಾಂಕ್​ ವಿವರಗಳನ್ನು ನಮೂದಿಸಬೇಕಾದ ಅಗತ್ಯ ಇಲ್ಲದಿರುವುದರಿಂದ ಯಾರ ಖಾತೆಗೆ ಹಣ ವರ್ಗ ಮಾಡಬೇಕೋ ಅವರ ಖಾತೆಗೇ ಕಳುಹಿಸುವುದು ಸುಲಭ. ಆದರೆ, ಯುಪಿಐ ಐಡಿ ನಮೂದಿಸುವಾಗ ಒಂದಕ್ಷರ ಅಥವಾ ಒಂದು ಸಂಖ್ಯೆ ತಪ್ಪಿದರೂ ನಾವು ಉದ್ದೇಶಿಸಿರದ ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆಯಾಗಬಹುದು. ಹೀಗಾದರೆ ತಕ್ಷಣಕ್ಕೆ ಆತಂಕವಾಗುವುದು ಸಹಜ. ಆದರೆ ತಪ್ಪಾಗಿ ಕಳುಹಿಸಲ್ಪಟ್ಟ ಹಣವನ್ನು ಮರಳಿ ಪಡೆಯಲು ಸಾಧ್ಯವಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ನಿಯಮಗಳ ಪ್ರಕಾರ, ತಪ್ಪಾಗಿ ಕಳುಹಿಸಲ್ಪಟ್ಟ ಹಣವನ್ನು ನೀವು ಮರಳಿ ಪಡೆಯಬಹುದು. ಇದಕ್ಕಾಗಿ, ತಪ್ಪಾದ ಯುಪಿಐ ಐಡಿಗೆ ಹಣ ಕಳುಹಿಸಿದ ತಕ್ಷಣವೇ ಯಾವ ಪಾವತಿ ವ್ಯವಸ್ಥೆ ಮೂಲಕ ನೀವು ಹಣ ವರ್ಗಾಯಿಸಿದ್ದೀರೋ ಆ ವ್ಯವಸ್ಥೆಯನ್ನು ನಿರ್ವಹಿಸುವ ಸಂಸ್ಥೆಗೆ ದೂರು ನೀಡಬೇಕು. ​ಆ ಸಂಸ್ಥೆಯ ಗ್ರಾಹಕ ಸೇವೆಯನ್ನು ನೀವು ಪಡೆಯಬಹುದು. ಉದಾಹರಣೆಗೆ; ನೀವು ಪೇಟಿಎಂ, ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಹಣ ವರ್ಗಾಯಿಸಿದರೆ ಆಯಾ ಸಂಸ್ಥೆಗೆ ದೂರು ನೀಡಿ, ಅವರ ಸಹಾಯ ಪಡೆಯಬೇಕು. ರಿಫಂಡ್ ಮಾಡುವಂತೆ ಮನವಿ ಸಲ್ಲಿಸಬೇಕು.

ಇದನ್ನೂ ಓದಿ: Gold ATM: ಹೈದರಾಬಾದ್​ನ ಎಟಿಎಂನಲ್ಲಿ ಸಿಗುತ್ತೆ ಚಿನ್ನ! ಹೀಗೆ ವಿತ್​​ಡ್ರಾ ಮಾಡಬಹುದು ನೋಡಿ

ರಿಫಂಡ್ ಆಗದಿದ್ದರೆ ಆರ್​ಬಿಐ ಮೊರೆ ಹೋಗಬಹುದು

ಪಾವತಿ ವ್ಯವಸ್ಥೆಯ ಗ್ರಾಹಕ ಸೇವೆ ಪಡೆದ ಬಳಿಕವೂ ತಪ್ಪಾದ ಯುಪಿಐ ಐಡಿಗೆ ಕಳುಹಿಸಿದ ಹಣ ವಾಪಸ್ ಆಗದಿದ್ದರೆ ಆರ್​ಬಿಐ ಒಂಬುಡ್ಸ್​ಮೆನ್ ಮೊರೆ ಹೋಗಬಹುದು. ಡಿಜಿಟಲ್ ಪಾವತಿ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆಂದೇ ಆರ್​ಬಿಐ ಒಂಬುಡ್ಸ್​ಮೆನ್ ನೇಮಕ ಮಾಡಿದೆ. ಪಾವತಿ ವ್ಯವಸ್ಥೆಯು ಆರ್​ಬಿಐ ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳದಿದ್ದರೆ, ನಿಗದಿತ ಸಮಯದ ಮಿತಿಯೊಳಗೆ ರಿಫಂಡ್ ಮಾಡದಿದ್ದರೆ ಒಂಬುಡ್ಸ್​ಮೆನ್​ಗೆ ದೂರು ನೀಡಲು ಗ್ರಾಹಕರಿಗೆ ಅವಕಾಶ ಇದೆ. ತಪ್ಪಾದ ಮೊತ್ತವನ್ನು ಫಲಾನುಭವಿಯ ಖಾತೆಗೆ ವರ್ಗಾವಣೆ ಮಾಡಿದ್ದರೂ ಒಂಬುಡ್ಸ್​ಮೆನ್​ಗೆ ದೂರು ನೀಡಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:34 am, Tue, 6 December 22

ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?