Sign In

By signing in or creating an account, you agree with Associated Broadcasting Company's Terms & Conditions and Privacy Policy.

SBIಯ ಹೊಸ ನಿಶ್ಚಿತ ಠೇವಣಿ ಯೋಜನೆ: ಅಮೃತ್ ವೃಷ್ಟಿ ಪ್ಲಾನ್​ನ ವಿವರ ಮತ್ತು ಬಡ್ಡಿ ದರ

SBI Amrit Vrishti FD plan: SBI ಹೊಸ 444 ದಿನಗಳ ಅವಧಿಯ "ಅಮೃತ್ ವೃಷ್ಟಿ" ಠೇವಣಿ ಯೋಜನೆಯನ್ನು ಆರಂಭಿಸಿದೆ. ಇದು 7.25% (ಸಾಮಾನ್ಯ) ಮತ್ತು 7.75% (ಹಿರಿಯ ನಾಗರಿಕರಿಗೆ) ವಾರ್ಷಿಕ ಬಡ್ಡಿ ದರವನ್ನು ನೀಡುತ್ತದೆ. ಕನಿಷ್ಠ ₹1000 ಹೂಡಿಕೆ ಮಾಡಬಹುದು. ಅವಧಿಗೆ ಮುನ್ನ ಹಣ ಹಿಂಪಡೆದರೆ ಪೆನಾಲ್ಟಿ ಅನ್ವಯಿಸುತ್ತದೆ. ಈ ಯೋಜನೆಯು 2025ರ ಮಾರ್ಚ್ 31ರವರೆಗೆ ಲಭ್ಯವಿದೆ.

SBIಯ ಹೊಸ ನಿಶ್ಚಿತ ಠೇವಣಿ ಯೋಜನೆ: ಅಮೃತ್ ವೃಷ್ಟಿ ಪ್ಲಾನ್​ನ ವಿವರ ಮತ್ತು ಬಡ್ಡಿ ದರ
ಎಸ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 24, 2024 | 4:06 PM

ನವದೆಹಲಿ, ಅಕ್ಟೋಬರ್ 24: ಸ್ಟೇಟ್ ಬ್ಯಾಂಕ್ ಇಂಡಿಯಾ ಇತ್ತೀಚೆಗೆ ಹೊಸ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ವೊಂದನ್ನು ಆರಂಭಿಸಿದೆ. 444 ದಿನಗಳ ಅವಧಿಯ ‘ಅಮೃತ್ ವೃಷ್ಟಿ’ ಠೇವಣಿ ಯೋಜನೆ ಇತ್ತೀಚೆಗೆ ಶುರುವಾಗಿದೆ. ಭಾರತೀಯ ನಾಗರಿಕರು ಮಾತ್ರವಲ್ಲ ಅನಿವಾಸಿ ಭಾರತೀಯರೂ ಕೂಡ ಈ ಪ್ಲಾನ್​ನಲ್ಲಿ ಹೂಡಿಕೆ ಮಾಡಬಹುದು. ಜುಲೈ 15ರಿಂದ ಚಾಲನೆಗೊಂಡಿರುವ ಈ ಠೇವಣಿ ಯೋಜನೆ 2025ರ ಮಾರ್ಚ್ 31ರವರೆಗೂ ಲಭ್ಯ ಇರುತ್ತದೆ.

ಶೇ. 7. 25 ಮತ್ತು ಶೇ. 7.75 ಬಡ್ಡಿ

ಎಸ್​ಬಿಐ ಅಮೃತ್ ವೃಷ್ಟಿ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ನಲ್ಲಿ ಕನಿಷ್ಠ ಹೂಡಿಕೆ 1,000 ರೂ ಇದೆ. ಅದಕ್ಕಿಂತ ಹೆಚ್ಚು ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು.

ಈ ಪ್ಲಾನ್​ನಲ್ಲಿ ವರ್ಷಕ್ಕೆ ಶೇ. 7.25ರ ದರದಲ್ಲಿ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರ ಠೇವಣಿಗಳಿಗೆ ಶೇ. 7.75ರ ವಾರ್ಷಿಕ ದರ ಇದೆ. ಡೆಪಾಸಿಟ್ ಅವಧಿ 444 ದಿನ ಇರುತ್ತದೆ. ಒಂದೂವರೆ ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ ಪ್ಲಾನ್ ಇದು.

ಇದನ್ನೂ ಓದಿ: ರೆಗ್ಯುಲರ್ ಆದಾಯ ಕೊಡುವ ಮ್ಯೂಚುವಲ್ ಫಂಡ್ ಎಸ್​ಡಬ್ಲ್ಯುಪಿ ಹೇಗೆ ಕೆಲಸ ಮಾಡುತ್ತೆ ನೋಡಿ

ಇಲ್ಲಿ ಬಡ್ಡಿ ಆದಾಯಕ್ಕೆ ಟಿಡಿಎಸ್ ಅನ್ವಯ ಆಗುತ್ತದೆ. ಅಂದರೆ, ನಿಮ್ಮ ಒಟ್ಟಾರೆ ವಾರ್ಷಿಕ ಆದಾಯ ಯಾವ ಟ್ಯಾಕ್ಸ್ ಸ್ಲಾಬ್​ನಲ್ಲಿ ಬೀಳುತ್ತದೋ ಆ ತೆರಿಗೆ ದರ ಅನ್ವಯ ಆಗುತ್ತದೆ. ಟಿಡಿಎಸ್ ಕಡಿತ ಬಳಿಕ ಉಳಿದ ಬಡ್ಡಿಹಣ ನಿಮ್ಮ ಖಾತೆಗೆ ಬರುತ್ತದೆ.

ಅವಧಿಗೆ ಮುನ್ನ ಠೇವಣಿ ರದ್ದುಗೊಳಿಸಿದರೆ..?

ಎಸ್​ಬಿಐ ಅಮೃತ್ ವೃಷ್ಟಿ ಠೇವಣಿ ಯೋಜನೆಯಲ್ಲಿ ನೀವು 5 ಲಕ್ಷ ರೂವರೆಗಿನ ಠೇವಣಿ ಇರಿಸಿದ್ದು, 444 ದಿನದೊಳಗೆ ಅದನ್ನು ಹಿಂಪಡೆದರೆ ಶೇ. 0.5ರಷ್ಟು ಪೆನಾಲ್ಟಿ ಕಟ್ಟಬೇಕಾಗುತ್ತದೆ. ಉದಾಹರಣೆಗೆ, 2 ಲಕ್ಷ ರೂ ಡೆಪಾಸಿಟ್ ಇಟ್ಟಿದ್ದು, ಅದನ್ನು ಅವಧಿಗೆ ಮುನ್ನ ಹಿಂಪಡೆದರೆ 1,000 ರೂ ದಂಡ ಕಟ್ಟಬೇಕಾಗುತ್ತದೆ.

ಇನ್ನು, 5 ಲಕ್ಷ ರೂಗಿಂತ ಮೇಲ್ಪಟ್ಟ ಹಾಗೂ 3 ಕೋಟಿ ರೂ ಒಳಗಿನ ಡೆಪಾಸಿಟ್​ಗಳನ್ನು ಅವಧಿಗೆ ಮುನ್ನ ವಿತ್​ಡ್ರಾ ಮಾಡಿದರೆ ಶೇ. 1ರಷ್ಟು ದಂಡ ಕಟ್ಟಬೇಕು.

ಈ ಪೆನಾಲ್ಟಿ ಅಂಶವು ಕೇವಲ ಅಮೃತ್ ವೃಷ್ಟಿ ಪ್ಲಾನ್​ಗೆ ಮಾತ್ರವಲ್ಲ, ಎಸ್​ಬಿಐನ ಎಲ್ಲಾ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳಿಗೂ ಅನ್ವಯ ಆಗುತ್ತದೆ.

ಇದನ್ನೂ ಓದಿ: ಎನ್​ಪಿಎಸ್ ಯೋಜನೆ: ತಿಂಗಳಿಗೆ 21,000 ರೂ ಉಳಿಸಿ, 2 ಲಕ್ಷ ರೂ ಮಾಸಿಕ ಆದಾಯ ಸೃಷ್ಟಿಸಿ

ಎಸ್​ಬಿಐ ಅಮೃತ್ ವೃಷ್ಟಿಯಲ್ಲಿ ಹೂಡಿಕೆ ಮಾಡುವುದು ಹೇಗೆ?

ಎಲ್ಲಾ ಎಫ್​ಡಿಗಳಂತೆ ಅಮೃತ್ ವೃಷ್ಟಿ ಪ್ಲಾನ್ ಅನ್ನು ಆನ್​ಲೈನ್​ನಲ್ಲೇ ಸುಲಭವಾಗಿ ಮಾಡಬಹುದು. ಎಸ್​ಬಿಐನ ಯೋನೋ ಆ್ಯಪ್, ನೆಟ್ ಬ್ಯಾಂಕಿಂಗ್ ಜಾಲತಾಣಕ್ಕೆ ಹೋಗಿ ಲಾಗಿನ್ ಆದರೆ ಅಲ್ಲಿ ನೀವು ಫಿಕ್ಸೆಡ್ ಡೆಪಾಸಿಟ್ ಸೆಕ್ಷನ್​ನಲ್ಲಿ ಅಮೃತ್ ವೃಷ್ಟಿ ಪ್ಲಾನ್ ಆಯ್ಕೆ ಮಾಡಿಕೊಂಡು ಮುಂದುವರಿಯಬಹುದು. ಆನ್​ಲೈನ್​ನಲ್ಲಿ ಬೇಡವೆಂದರೆ, ಎಸ್​ಬಿಐನ ನಿಮ್ಮ ಬ್ರ್ಯಾಂಚ್ ಕಚೇರಿಗೆ ಹೋಗಿ ಅಲ್ಲಿ ಎಫ್​ಡಿ ತೆರೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ