AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBIಯ ಹೊಸ ನಿಶ್ಚಿತ ಠೇವಣಿ ಯೋಜನೆ: ಅಮೃತ್ ವೃಷ್ಟಿ ಪ್ಲಾನ್​ನ ವಿವರ ಮತ್ತು ಬಡ್ಡಿ ದರ

SBI Amrit Vrishti FD plan: SBI ಹೊಸ 444 ದಿನಗಳ ಅವಧಿಯ "ಅಮೃತ್ ವೃಷ್ಟಿ" ಠೇವಣಿ ಯೋಜನೆಯನ್ನು ಆರಂಭಿಸಿದೆ. ಇದು 7.25% (ಸಾಮಾನ್ಯ) ಮತ್ತು 7.75% (ಹಿರಿಯ ನಾಗರಿಕರಿಗೆ) ವಾರ್ಷಿಕ ಬಡ್ಡಿ ದರವನ್ನು ನೀಡುತ್ತದೆ. ಕನಿಷ್ಠ ₹1000 ಹೂಡಿಕೆ ಮಾಡಬಹುದು. ಅವಧಿಗೆ ಮುನ್ನ ಹಣ ಹಿಂಪಡೆದರೆ ಪೆನಾಲ್ಟಿ ಅನ್ವಯಿಸುತ್ತದೆ. ಈ ಯೋಜನೆಯು 2025ರ ಮಾರ್ಚ್ 31ರವರೆಗೆ ಲಭ್ಯವಿದೆ.

SBIಯ ಹೊಸ ನಿಶ್ಚಿತ ಠೇವಣಿ ಯೋಜನೆ: ಅಮೃತ್ ವೃಷ್ಟಿ ಪ್ಲಾನ್​ನ ವಿವರ ಮತ್ತು ಬಡ್ಡಿ ದರ
ಎಸ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 24, 2024 | 4:06 PM

Share

ನವದೆಹಲಿ, ಅಕ್ಟೋಬರ್ 24: ಸ್ಟೇಟ್ ಬ್ಯಾಂಕ್ ಇಂಡಿಯಾ ಇತ್ತೀಚೆಗೆ ಹೊಸ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ವೊಂದನ್ನು ಆರಂಭಿಸಿದೆ. 444 ದಿನಗಳ ಅವಧಿಯ ‘ಅಮೃತ್ ವೃಷ್ಟಿ’ ಠೇವಣಿ ಯೋಜನೆ ಇತ್ತೀಚೆಗೆ ಶುರುವಾಗಿದೆ. ಭಾರತೀಯ ನಾಗರಿಕರು ಮಾತ್ರವಲ್ಲ ಅನಿವಾಸಿ ಭಾರತೀಯರೂ ಕೂಡ ಈ ಪ್ಲಾನ್​ನಲ್ಲಿ ಹೂಡಿಕೆ ಮಾಡಬಹುದು. ಜುಲೈ 15ರಿಂದ ಚಾಲನೆಗೊಂಡಿರುವ ಈ ಠೇವಣಿ ಯೋಜನೆ 2025ರ ಮಾರ್ಚ್ 31ರವರೆಗೂ ಲಭ್ಯ ಇರುತ್ತದೆ.

ಶೇ. 7. 25 ಮತ್ತು ಶೇ. 7.75 ಬಡ್ಡಿ

ಎಸ್​ಬಿಐ ಅಮೃತ್ ವೃಷ್ಟಿ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ನಲ್ಲಿ ಕನಿಷ್ಠ ಹೂಡಿಕೆ 1,000 ರೂ ಇದೆ. ಅದಕ್ಕಿಂತ ಹೆಚ್ಚು ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು.

ಈ ಪ್ಲಾನ್​ನಲ್ಲಿ ವರ್ಷಕ್ಕೆ ಶೇ. 7.25ರ ದರದಲ್ಲಿ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರ ಠೇವಣಿಗಳಿಗೆ ಶೇ. 7.75ರ ವಾರ್ಷಿಕ ದರ ಇದೆ. ಡೆಪಾಸಿಟ್ ಅವಧಿ 444 ದಿನ ಇರುತ್ತದೆ. ಒಂದೂವರೆ ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ ಪ್ಲಾನ್ ಇದು.

ಇದನ್ನೂ ಓದಿ: ರೆಗ್ಯುಲರ್ ಆದಾಯ ಕೊಡುವ ಮ್ಯೂಚುವಲ್ ಫಂಡ್ ಎಸ್​ಡಬ್ಲ್ಯುಪಿ ಹೇಗೆ ಕೆಲಸ ಮಾಡುತ್ತೆ ನೋಡಿ

ಇಲ್ಲಿ ಬಡ್ಡಿ ಆದಾಯಕ್ಕೆ ಟಿಡಿಎಸ್ ಅನ್ವಯ ಆಗುತ್ತದೆ. ಅಂದರೆ, ನಿಮ್ಮ ಒಟ್ಟಾರೆ ವಾರ್ಷಿಕ ಆದಾಯ ಯಾವ ಟ್ಯಾಕ್ಸ್ ಸ್ಲಾಬ್​ನಲ್ಲಿ ಬೀಳುತ್ತದೋ ಆ ತೆರಿಗೆ ದರ ಅನ್ವಯ ಆಗುತ್ತದೆ. ಟಿಡಿಎಸ್ ಕಡಿತ ಬಳಿಕ ಉಳಿದ ಬಡ್ಡಿಹಣ ನಿಮ್ಮ ಖಾತೆಗೆ ಬರುತ್ತದೆ.

ಅವಧಿಗೆ ಮುನ್ನ ಠೇವಣಿ ರದ್ದುಗೊಳಿಸಿದರೆ..?

ಎಸ್​ಬಿಐ ಅಮೃತ್ ವೃಷ್ಟಿ ಠೇವಣಿ ಯೋಜನೆಯಲ್ಲಿ ನೀವು 5 ಲಕ್ಷ ರೂವರೆಗಿನ ಠೇವಣಿ ಇರಿಸಿದ್ದು, 444 ದಿನದೊಳಗೆ ಅದನ್ನು ಹಿಂಪಡೆದರೆ ಶೇ. 0.5ರಷ್ಟು ಪೆನಾಲ್ಟಿ ಕಟ್ಟಬೇಕಾಗುತ್ತದೆ. ಉದಾಹರಣೆಗೆ, 2 ಲಕ್ಷ ರೂ ಡೆಪಾಸಿಟ್ ಇಟ್ಟಿದ್ದು, ಅದನ್ನು ಅವಧಿಗೆ ಮುನ್ನ ಹಿಂಪಡೆದರೆ 1,000 ರೂ ದಂಡ ಕಟ್ಟಬೇಕಾಗುತ್ತದೆ.

ಇನ್ನು, 5 ಲಕ್ಷ ರೂಗಿಂತ ಮೇಲ್ಪಟ್ಟ ಹಾಗೂ 3 ಕೋಟಿ ರೂ ಒಳಗಿನ ಡೆಪಾಸಿಟ್​ಗಳನ್ನು ಅವಧಿಗೆ ಮುನ್ನ ವಿತ್​ಡ್ರಾ ಮಾಡಿದರೆ ಶೇ. 1ರಷ್ಟು ದಂಡ ಕಟ್ಟಬೇಕು.

ಈ ಪೆನಾಲ್ಟಿ ಅಂಶವು ಕೇವಲ ಅಮೃತ್ ವೃಷ್ಟಿ ಪ್ಲಾನ್​ಗೆ ಮಾತ್ರವಲ್ಲ, ಎಸ್​ಬಿಐನ ಎಲ್ಲಾ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳಿಗೂ ಅನ್ವಯ ಆಗುತ್ತದೆ.

ಇದನ್ನೂ ಓದಿ: ಎನ್​ಪಿಎಸ್ ಯೋಜನೆ: ತಿಂಗಳಿಗೆ 21,000 ರೂ ಉಳಿಸಿ, 2 ಲಕ್ಷ ರೂ ಮಾಸಿಕ ಆದಾಯ ಸೃಷ್ಟಿಸಿ

ಎಸ್​ಬಿಐ ಅಮೃತ್ ವೃಷ್ಟಿಯಲ್ಲಿ ಹೂಡಿಕೆ ಮಾಡುವುದು ಹೇಗೆ?

ಎಲ್ಲಾ ಎಫ್​ಡಿಗಳಂತೆ ಅಮೃತ್ ವೃಷ್ಟಿ ಪ್ಲಾನ್ ಅನ್ನು ಆನ್​ಲೈನ್​ನಲ್ಲೇ ಸುಲಭವಾಗಿ ಮಾಡಬಹುದು. ಎಸ್​ಬಿಐನ ಯೋನೋ ಆ್ಯಪ್, ನೆಟ್ ಬ್ಯಾಂಕಿಂಗ್ ಜಾಲತಾಣಕ್ಕೆ ಹೋಗಿ ಲಾಗಿನ್ ಆದರೆ ಅಲ್ಲಿ ನೀವು ಫಿಕ್ಸೆಡ್ ಡೆಪಾಸಿಟ್ ಸೆಕ್ಷನ್​ನಲ್ಲಿ ಅಮೃತ್ ವೃಷ್ಟಿ ಪ್ಲಾನ್ ಆಯ್ಕೆ ಮಾಡಿಕೊಂಡು ಮುಂದುವರಿಯಬಹುದು. ಆನ್​ಲೈನ್​ನಲ್ಲಿ ಬೇಡವೆಂದರೆ, ಎಸ್​ಬಿಐನ ನಿಮ್ಮ ಬ್ರ್ಯಾಂಚ್ ಕಚೇರಿಗೆ ಹೋಗಿ ಅಲ್ಲಿ ಎಫ್​ಡಿ ತೆರೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ