AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

YouTube: ಯೂಟ್ಯೂಬ್​ನಿಂದ ಹಣ ಮಾಡಬೇಕೆನ್ನುವವರಿಗೆ ಖುಷಿ ಸುದ್ದಿ; 500 ಸಬ್​ಸ್ಕ್ರೈಬರ್ಸ್ ಇದ್ದರೆ ಸಾಕಂತೆ… ಬದಲಾಗಿದೆ 3 ಮಾನದಂಡಗಳು

Youtube Partner Programme Eligibility Requirements: ಖುಷಿ ಸುದ್ದಿ ಎಂದರೆ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್​ಗೆ ಬೇಕಾದ ಅರ್ಹತಾ ಮಾನದಂಡಗಳನ್ನು ಸಡಿಲಿಸಲಾಗುತ್ತಿದೆ. ಇದೇನಾದರೂ ಜಾರಿಯಾದರೆ ಯೂಟ್ಯೂಬ್​ನಲ್ಲಿ ಹಣ ಮಾಡುವ ಕಾಯಕ ಶುರು ಮಾಡಬಯಸುವವರಿಗೆ ಈ ಕೆಲಸ ಹೆಚ್ಚು ಸುಲಭವಾಗಲಿದೆ.

YouTube: ಯೂಟ್ಯೂಬ್​ನಿಂದ ಹಣ ಮಾಡಬೇಕೆನ್ನುವವರಿಗೆ ಖುಷಿ ಸುದ್ದಿ; 500 ಸಬ್​ಸ್ಕ್ರೈಬರ್ಸ್ ಇದ್ದರೆ ಸಾಕಂತೆ... ಬದಲಾಗಿದೆ 3 ಮಾನದಂಡಗಳು
ಯೂಟ್ಯೂಬ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 15, 2023 | 2:52 PM

Share

ವಿಶ್ವದ ಅತಿದೊಡ್ಡ ವಿಡಿಯೋ ಪ್ಲಾಟ್​ಫಾರ್ಮ್ ಎನಿಸಿದ ಯೂಟ್ಯೂಬ್​ನಲ್ಲಿ (Youtube) ಬಹಳ ಜನರು ವಿಡಿಯೋಗಳನ್ನು ಹಾಕುತ್ತಾ ಬಹಳಷ್ಟು ಹಣ ಮಾಡುವುದನ್ನು ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ. ಬಹಳಷ್ಟು ಜನರು ಕೆಲಸ ಬಿಟ್ಟು ಪೂರ್ಣಾವಧಿ ಯೂಟ್ಯೂಬ್ ವಿಡಿಯೋ ಮಾಡಿಕೊಂಡೇ ಜೀವನ ನಡೆಸುತ್ತಿದ್ದಾರೆ. ಹಲವು ಮಾಧ್ಯಮಗಳಿಗಂತೂ ಯೂಟ್ಯೂಬ್ ಅತಿದೊಡ್ಡ ಆದಾಯಮೂಲವಾಗಿದೆ. ಆದರೆ, ಯೂಟ್ಯೂಬ್​ನಿಂದ ಹಣ ಮಾಡಬೇಕಾದರೆ ಯೂಟ್ಯೂಬ್ ಪಾರ್ಟ್ನರ್ (Youtube Partner Programme) ಅರ್ಹತೆ ಪಡೆಯಬೇಕು. ಖುಷಿ ಸುದ್ದಿ ಎಂದರೆ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್​ಗೆ ಬೇಕಾದ ಅರ್ಹತಾ ಮಾನದಂಡಗಳನ್ನು (Eligibility Requirements) ಸಡಿಲಿಸಲಾಗುತ್ತಿದೆ. ಇದೇನಾದರೂ ಜಾರಿಯಾದರೆ ಯೂಟ್ಯೂಬ್​ನಲ್ಲಿ ಹಣ ಮಾಡುವ ಕಾಯಕ ಶುರು ಮಾಡಬಯಸುವವರಿಗೆ ಈ ಕೆಲಸ ಹೆಚ್ಚು ಸುಲಭವಾಗಲಿದೆ.

500 ಸಬ್​ಸ್ಕ್ರೈಬರ್ಸ್ ಸಾಕು ಸಂಪಾದನೆ ಶುರು ಮಾಡಲು

ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್ ಹೊಂದಬೇಕಾದರೆ ಕೆಲವೊಂದಿಷ್ಟು ಮಾನದಂಡಗಳಿವೆ. ಅದರಲ್ಲಿ 1000 ಸಬ್​ಸ್ಕ್ರೈಬರ್ಸ್ ಹೊಂದಿರಬೇಕು; ಒಟ್ಟು ವಿಡಿಯೋಗಳು 4,000 ಗಂಟೆಗಳ ವೀಕ್ಷಣೆ ಪಡೆದಿರಬೇಕು; ಯೂಟ್ಯೂಬ್ ಶಾರ್ಟ್ಸ್ ವಿಡಿಯೋಗಳು 1 ಕೋಟಿ ವೀಕ್ಷಣೆ ಹೊಂದಿರಬೇಕು ಎಂಬಿತ್ಯಾದಿ ಷರತ್ತುಗಳಿವೆ.

ಈಗ ಇದರಲ್ಲಿ ಮೂರು ಮಾನದಂಡಗಳನ್ನು ಸಡಿಲಿಸಲಾಗಿದೆ. ಒಂದು ಸಾವಿರ ಬದಲಿಗೆ 500 ಸಬ್​ಸ್ಕ್ರೈಬರ್ಸ್ ಹೊಂದಿದ್ದರೆ ಸಾಕು; 4,000 ಗಂಟೆಗಳ ವೀಕ್ಷಣೆ ಬದಲು 3,000 ಗಂಟೆಗಳ ವೀಕ್ಷಣೆ ಇದ್ದರೆ ಸಾಕು. ಹಾಗೆಯೇ, ಶಾರ್ಟ್ಸ್ ವಿಡಿಯೋಗಳ ವೀಕ್ಷಣೆ 1 ಕೋಟಿ ಬದಲು 30 ಲಕ್ಷ ಇದ್ದರೆ ಸಾಕು ಎಂದು ಗೂಗಲ್ ಮಾಲೀಕತ್ವದ ಯೂಟ್ಯೂಬ್ ಸಂಸ್ಥೆ ಮಾಹಿತಿ ನೀಡಿದೆ. ಆದರೆ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್​ಗೆ ಅರ್ಹರಾಗಲು ಬೇಕಾದ ಬೇರೆಲ್ಲಾ ಮಾನದಂಡಗಳು ಹಾಗೇ ಮುಂದುವರಿಯಲಿವೆ.

ಇದನ್ನೂ ಓದಿEPF: ಇಪಿಎಫ್ ಖಾತೆಗಳನ್ನು ವಿಲೀನಗೊಳಿಸದಿದ್ದರೆ ಏನಾಗುತ್ತದೆ? ಮರ್ಜ್ ಮಾಡುವ ಪ್ರಕ್ರಿಯೆ ಹೇಗೆ? ವಿವರ ತಿಳಿದಿರಿ

ಸದ್ಯ ಈ ಹೊಸ ಮಾರ್ಪಾಡು ಅಮೆರಿಕ, ಬ್ರಿಟನ್, ಕೆನಡಾ, ತೈವಾನ್ ಮತ್ತು ಸೌತ್ ಕೊರಿಯಾದಲ್ಲಿ ಮೊದಲು ಅಳವಡಿಕೆ ಆಗಲಿದೆ. ಆ ಬಳಿಕ ಬೇರೆ ಕಡೆ ಜಾರಿಯಾಗಬಹುದು. ಭಾರತೀಯ ಯೂಟ್ಯೂಬ್ ಆಸಕ್ತರು ಈ ಅವಕಾಶಕ್ಕಾಗಿ ಇನ್ನಷ್ಟು ದಿನ ಕಾಯಬೇಕಾಗಬಹುದು.

ನೀವು ಒಮ್ಮೆ ಯೂಟ್ಯೂಬ್ ಚಾನಲ್ ಆರಂಭಿಸಿ, ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್​ಗೆ ಅಪ್ಲೈ ಮಾಡಿದ್ದರಾಯ್ತು. ಯೂಟ್ಯೂಬ್ ನಿಗದಿಪಡಿಸಿರುವ ಮಾನದಂಡಗಳನ್ನು ನೀವು ತಲುಪಿದ ಬಳಿಕ ತಾನಾಗೇ ವರಮಾನ ಬರತೊಡಗುತ್ತದೆ. ಅಂದರೆ ಮಾನಿಟೈಸೇಶನ್ ಆಗತೊಡಗುತ್ತದೆ. ನಿಮ್ಮ ವಿಡಿಯೋಗಳಿಗೆ ಬರುವ ಜಾಹೀರಾತುಗಳಿಂದ ಗೂಗಲ್​ಗೆ ಆದಾಯ ಬರುತ್ತದೆ. ನೀವು ಯೂಟ್ಯೂಬ್ ಪಾರ್ಟ್ನರ್ ಆಗಿದ್ದರೆ ಆ ಆದಾಯವನ್ನು ಯೂಟ್ಯೂಬ್ ನಿಮ್ಮೊಂದಿಗೆ ಹಂಚಿಕೊಳ್ಳುತ್ತದೆ.

ಇದನ್ನೂ ಓದಿBSE Record: ಭಾರತದ ಒಟ್ಟು ಷೇರುಸಂಪತ್ತು 292 ಲಕ್ಷ ಕೋಟಿ ರೂಗೆ ಏರಿಕೆ; ಇದು ಹೊಸ ದಾಖಲೆ

ಪೇಯ್ಡ್ ಚ್ಯಾಟ್, ಟಿಪ್ಪಿಂಗ್, ಶಾಪಿಂಗ್ ಫೀಚರ್, ಚಾನಲ್ ಮೆಂಬರ್​ಶಿಪ್ ಇತ್ಯಾದಿ ಹೊಸ ರೀತಿಯ ಆದಾಯಮಾರ್ಗಗಳನ್ನು ಯೂಟ್ಯೂಬ್ ವಿಡಿಯೋ ಕ್ರಿಯೇಟರುಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಹಾಗೆಯೇ, ಈಗ ಯೂಟ್ಯೂಬ್ ವಿಡಿಯೋಗಳಿಗೆ ಮ್ಯೂಸಿಕ್ ಬಳಸಲು ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಯಾವುದೇ ಕಾಪಿರೈಟ್ ಇಲ್ಲದ, ಫ್ರೀ ಆಗಿ ಹಂಚಿಕೆಯಾಗುವ ಮ್ಯೂಸಿಕ್ ಸಂಗ್ರಹವನ್ನು ಯೂಟ್ಯೂಬ್ ಇಟ್ಟಿದೆ. ಇದರಲ್ಲಿ ಯಾರು ಬೇಕಾದರೂ ತಮ್ಮ ಯೂಟ್ಯೂಬ್ ವಿಡಿಯೋಗಳಿಗೆ ಬಳಸಬಹುದು. ಇಂತಹ ಮ್ಯೂಸಿಕ್ ಸಂಗ್ರಹವನ್ನು ಯೂಟ್ಯೂಬ್ ನಿರಂತವಾಗಿ ಹೆಚ್ಚಿಸುತ್ತಲೇ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್