AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Venkataraman Anantha Nageswaran: ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್ ಬಗ್ಗೆ ಒಂದಿಷ್ಟು ಮಾಹಿತಿ

ಭಾರತದ ಹೊಸ ಮುಖ್ಯ ಆರ್ಥಿಕ ಸಲಹೆಗಾರರಾದ ವೆಂಕಟರಾಮನ್ ಅನಂತ ನಾಗೇಶ್ವರನ್ ಬಗ್ಗೆ ಸಂಕ್ಷಿಪ್ತ ವಿವರ ಈ ಲೇಖನದಲ್ಲಿ ಇದೆ. ಅವರ ಜವಾಬ್ದಾರಿ, ನಿರ್ವಹಿಸಿದ ಹುದ್ದೆ ಮತ್ತಿತರ ಮಾಹಿತಿ ಇಲ್ಲಿದೆ.

Venkataraman Anantha Nageswaran: ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್ ಬಗ್ಗೆ ಒಂದಿಷ್ಟು ಮಾಹಿತಿ
ವೆಂಕಟೇಶ್ವರನ್ ಅನಂತ ನಾಗೇಶ್ವರನ್ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on: Jan 31, 2022 | 6:38 PM

Share

ವೆಂಕಟರಾಮನ್ ಅನಂತ ನಾಗೇಶ್ವರನ್ (Venkataraman Anantha Nageswaran) ಆರ್ಥಿಕ ಪಂಡಿತರು, ಕ್ರೆಡಿಟ್ ಸುಸೆ ಗ್ರೂಪ್ ಎಜಿ ಮತ್ತು ಜೂಲಿಯಸ್ ಬೇರ್ ಗ್ರೂಪ್​ನಲ್ಲಿ ಅಧಿಕಾರಿ ಆಗಿದ್ದವರು, ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಹಣಕಾಸು ಸಚಿವರಿಂದ ನೇಮಕಗೊಂಡಿದ್ದಾರೆ. ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ನಿರ್ವಹಿಸಿದ್ದ ಜವಾಬ್ದಾರಿಯನ್ನು ಈಗ ಅನಂತ ನಾಗೇಶ್ವರನ್ ಹೊತ್ತಿದ್ದಾರೆ. ಕೃಷ್ಭಮೂರ್ತಿ ಸುಬ್ರಮಣಿಯನ್ ಮೂರು ವರ್ಷಗಳ ಕಾಲ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. ಹೂಡಿಕೆಗಳನ್ನು ಉತ್ತೇಜಿಸುವ ಮತ್ತು ಬಜೆಟ್ ಕೊರತೆಯನ್ನು ಮುಚ್ಚಿಹಾಕುವ ಜೊತೆಗೆ ಬಲವಾದ ಬೆಳವಣಿಗೆಯನ್ನು ಸಾಧಿಸಲು ಕಾರ್ಯತಂತ್ರವನ್ನು ರೂಪಿಸಲು ಹೊಸ ಮುಖ್ಯ ಆರ್ಥಿಕ ಸಲಹೆಗಾರರಿಗೆ ಕೇಳಲಾಗುವುದು. ಸರ್ಕಾರಕ್ಕೆ ಮುಖ್ಯ ಆರ್ಥಿಕ ಸಲಹೆಗಾರರ ಕೆಲಸ ಏನೆಂದರೆ, ಬಜೆಟ್​ಗೆ ಪೂರ್ವವಾಗಿ ಸಂಸತ್​ನಲ್ಲಿ ಮಂಡಿಸುವ ಆರ್ಥಿಕತೆಯ ವಾರ್ಷಿಕ ವರದಿಯಾದ ಆರ್ಥಿಕ ಸಮೀಕ್ಷೆಯ (Economic Survey) ಪ್ರಮುಖವಾದ ಲೇಖಕರಾಗಿ, ಗಂಭೀರವಾದ ನೀತಿ ನಿರೂಪಣೆ ವಿಚಾರದಲ್ಲಿ ಹಣಕಾಸು ಸಚಿವರಿಗೆ ಸಲಹೆ ನೀಡುತ್ತಾರೆ.

1994ನೇ ಇಸವಿಯಿಂದ 2011ರ ಮಧ್ಯೆ ಸ್ವಿಟ್ಜರ್ಲೆಂಡ್ ಮತ್ತು ಸಿಂಗಾಪೂರ್​ನಲ್ಲಿ ಕಿರುಆರ್ಥಿಕತೆ ಮತ್ತು ಬಂಡವಾಳ ಮಾರುಕಟ್ಟೆ ಸಂಶೋಧನೆಯ ಹಲವು ಖಾಸಗಿ ವೆಲ್ತ್​ ಮ್ಯಾನೇಜ್​ಮೆಂಟ್​ ಕಂಪೆನಿಗಳಲ್ಲಿ ನಾಗೇಶ್ವರನ್ ಅವರು ನಾಯಕತ್ವದ ಹಲವು ಪಾತ್ರಗಳನ್ನು ನಿರ್ವಹಿಸಿದ್ದರು. 2018ರ ಅಕ್ಟೋಬರ್​ನಿಂದ 2019ರ ಡಿಸೆಂಬರ್​ರ ತನಕ ಐಎಫ್​ಎಂಆರ್​ ಗ್ರಾಜುಯೇಟ್ ಸ್ಕೂಲ್ ಆಫ್ ಬಿಜಿನೆಸ್ (Krea ವಿಶ್ವವಿದ್ಯಾನಿಲಯ)ನಲ್ಲಿ ಡೀನ್ ಆಗಿದ್ದರು.

ಸಾರ್ವಜನಿಕ ನೀತಿ ಸಂಶೋಧನೆ ಸ್ವತಂತ್ರ ಸಂಸ್ಥೆಯಾದ ತಕ್ಷಣಶಿಲಾ ಸಂಸ್ಥೆಯ ಸ್ಥಾಪನೆಗೆ 2001ರಲ್ಲಿ ನೆರವು ನೀಡಿದ್ದರು ನಾಗೇಶ್ವರನ್. ಆವಿಷ್ಕಾರ್ ಗ್ರೂಪ್​ ಮೊದಲ ಇಂಪ್ಯಾಕ್ಟ್​ ಮ್ಯಾನೇಜ್​ಮೆಂಟ್​ ಫಂಡ್​ ಸ್ಥಾಪನೆಗೆ ಕೂಡ ಸಹಾಯ ಮಾಡಿದ್ದರು. 2019ರ ಅಕ್ಟೋಬರ್​ನಲ್ಲಿ ಭಾರತದ ಪ್ರಧಾಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯಲ್ಲಿ ಅರೆಕಾಲಿಕ ಸದಸ್ಯರಾಗಿ ಎರಡು ವರ್ಷಗಳ ಅವಧಿಗೆ ನೇಮಕ ಆಗಿದ್ದರು.

ಇದನ್ನೂ ಓದಿ: Budget 2022: ಬಜೆಟ್​ಗೆ ಪೂರ್ವವಾಗಿ ಜ. 31ಕ್ಕೆ ಸಂಸತ್​ನಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ; ಏನಿದು ಆರ್ಥಿಕ ಸಮೀಕ್ಷೆ?

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ