AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾಜೆಕ್ಟ್ ಕುಶ; ಭಾರತದ ಸ್ವಂತ ಡಿಫೆನ್ಸ್ ಸಿಸ್ಟಂ; ಅಮರಿಕದ ಥಾಡ್ ಅನ್ನೂ ಮೀರಿಸುತ್ತೆ ಇದು

India's indigenous alternative to Russia's S-400 system: ವಿಶ್ವದ ಬಲಿಷ್ಠ ಡಿಫೆನ್ಸ್ ಸಿಸ್ಟಂ ಎನಿಸಬಲ್ಲ, ಮತ್ತು ರಷ್ಯಾದ ಎಸ್-400 ಸಿಸ್ಟಂಗೆ ಪರ್ಯಾಯವೆನಿಸಬಹುದಾದ ಪ್​ರಾಜೆಕ್ಟ್ ಕುಶ ಸಿದ್ಧವಾಗುತ್ತಿದೆ. ಡಿಆರ್​​ಡಿಒ ಜೊತೆ ಈ ಪ್ರಾಜೆಕ್ಟ್​​ಗೆ ಬೆಂಗಳೂರಿನ ಬಿಇಎಲ್ ಡೆವಲಪ್ಮೆಂಟ್ ಪಾರ್ಟ್ನರ್ ಆಗಿದೆ. 40,000 ಕೋಟಿ ರೂ ಯೋಜನೆಯ ಆರ್ಡರ್ ಪಡೆಯುವ ನಿರೀಕ್ಷೆಯಲ್ಲಿ ಬಿಇಎಲ್ ಇದೆ.

ಪ್ರಾಜೆಕ್ಟ್ ಕುಶ; ಭಾರತದ ಸ್ವಂತ ಡಿಫೆನ್ಸ್ ಸಿಸ್ಟಂ; ಅಮರಿಕದ ಥಾಡ್ ಅನ್ನೂ ಮೀರಿಸುತ್ತೆ ಇದು
ಪ್ರಾಜೆಕ್ಟ್ ಕುಶ (pic credit: OvertDefense.com)
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 22, 2025 | 4:57 PM

Share

ಬೆಂಗಳೂರು, ಮೇ 22: ಆಪರೇಷನ್ ಸಿಂದೂರದ ಬಳಿಕ ಭಾರತದ ಮಿಲಿಟರಿ ಸಾಮರ್ಥ್ಯ ಜಗತ್ತಿನ ಹಲವರ ಗಮನ ಸೆಳೆದಿದೆ. ಡಿಫೆನ್ಸ್ ಕ್ಷೇತ್ರದಲ್ಲಿ ಭಾರತದ ಒಂದೊಂದು ಹೆಜ್ಜೆಯನ್ನೂ ಗಮನದಿಂದ ನೋಡಲಾಗುತ್ತಿದೆ. ಈ ಮಧ್ಯೆ ಭಾರತ ಹಿಂದೆಂದಿಗಿಂತ ವೇಗವಾಗಿ ಡಿಫೆನ್ಸ್ ಪ್ರಾಜೆಕ್ಟ್​​ಗಳನ್ನು ನಡೆಸಲು ಮುಂದಾಗಿದೆ. ಪ್ರಾಜೆಕ್ಟ್ ಕುಶವನ್ನು (Project Kusha) ಬೇಗನೇ ಕಾರ್ಯಗತಗೊಳಿಸುವ ಸಾಧ್ಯತೆ ಇದೆ. ಆಪರೇಷನ್ ಸಿಂದೂರದಲ್ಲಿ (Operation Sindoor) ಭಾರತದ ವಾಯು ರಕ್ಷಣೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ರಷ್ಯಾ ನಿರ್ಮಿತ ಎಸ್-400 ಡಿಫೆನ್ಸ್ ಸಿಸ್ಟಂಗೆ ಪರ್ಯಾಯವಾಗಿ ತಯಾರಾಗುತ್ತಿರುವುದೇ ಪ್ರಾಜೆಕ್ಟ್ ಕುಶ. ಡಿಆರ್​​ಡಿಒ ಈ ಪ್ರಾಜೆಕ್ಟ್ ಕುಶದ ಮೂಲ ನಿರ್ಮಾತೃ. ಬಿಇಎಲ್ ಕೂಡ ಈ ಪ್ರಾಜೆಕ್ಟ್​​​ನಲ್ಲಿ ಡಿಆರ್​​ಡಿಒ ಜೊತೆ ಇದೆ. ಈ ಯೋಜನೆಯಲ್ಲಿ ಡಿಆರ್​ಡಿಒಗೆ ಬಿಇಎಲ್ ಡೆವಲಪ್ಮೆಂಟ್ ಪಾರ್ಟ್ನರ್ ಆಗಿದೆ. ಪ್ರಾಜೆಕ್ಟ್ ಕುಶ ಸಂಬಂಧ ಬಿಇಎಲ್ 40,000 ಕೋಟಿ ರೂ ಆರ್ಡರ್​​ನ ನಿರೀಕ್ಷೆಯಲ್ಲಿದೆ.

ಏನಿದು ಪ್ರಾಜೆಕ್ಟ್ ಕುಶ?

ಕುಶ ಎನ್ನುವುದು ರಾಮಾಯಣದಲ್ಲಿ ಬರುವ ರಾಮನ ಇಬ್ಬರು ಮಕ್ಕಳಲ್ಲಿ ಒಬ್ಬನ ಹೆಸರು. ಯುದ್ಧದಲ್ಲಿ, ಬಿಲ್ವಿದ್ಯೆಯಲ್ಲಿ ಸ್ವಂತ ಅಪ್ಪನನ್ನೇ ಸೋಲಿಸಿದ ಕುಶ. ಭಾರತದ ಬಲಿಷ್ಠ ಏರ್ ಡಿಫೆನ್ಸ್ ಸಿಸ್ಟಂಗೆ ಈ ಹೆಸರು ಇಡಲಾಗಿದೆ.

ರಷ್ಯಾದ ಎಸ್-400 ಏರ್ ಡಿಫೆನ್ಸ್​​ಗೆ ಪರ್ಯಾಯವಾಗಿ ಪ್ರಾಜೆಕ್ಟ್ ಕುಶ ರೂಪಿಸಲಾಗುತ್ತಿದೆ. ಎಸ್-400 ಸಿಸ್ಟಂ ದೂರ ಶ್ರೇಣಿಯ ಗುರಿ ಮೇಲೆ ಆಕ್ರಮಣ ಮಾಡಬಲ್ಲುದು. 400 ಕಿಮೀವರೆಗಿನ ಶ್ರೇಣಿ ಇರುತ್ತದೆ. ನಾಲ್ಕು ರೀತಿಯ ಕ್ಷಿಪಣಿಗಳು ಈ ಸಿಸ್ಟಂನಲ್ಲಿ ಇರುತ್ತವೆ.

ಇದನ್ನೂ ಓದಿ
Image
ಪಾಕ್ ಯುದ್ಧಕ್ಕೂ ಜಗ್ಗಲ್ಲ, ಟ್ರಂಪ್ ಟ್ಯಾರಿಫ್​​ಗೂ ಬಗ್ಗಲ್ಲ ಭಾರತ
Image
ಫೈಟರ್ ಜೆಟ್ ತಯಾರಿಕೆಯಲ್ಲೂ ಪಳಗುತ್ತಿರುವ ಭಾರತ
Image
ಪಾಕ್​ಗೆ ಬೆಂಬಲವಾಗಿ ನಿಂತ ಚೀನಾ ಕಳ್ಳಾಟ ಬಟಾಬಯಲು, ಇಲ್ಲಿವೆ 10 ಸಾಕ್ಷ್ಯಗಳು
Image
ಪಾಕ್​ನ ಬಲಿಷ್ಠ ಡಿಫೆನ್ಸ್ ಸಿಸ್ಟಂನ ಭಾರತ ದಿಕ್ಕುತಪ್ಪಿಸಿದ್ಹೇಗೆ? ಇಲ್ಲಿದೆ

ಇದನ್ನೂ ಓದಿ: ಟ್ರಂಪ್ ಟ್ಯಾರಿಫ್​​ಗೂ ಬಗ್ಗಲ್ಲ, ಪಾಕ್ ಯುದ್ಧಕ್ಕೂ ಜಗ್ಗಲ್ಲ ಭಾರತದ ಆರ್ಥಿಕತೆ: ಮೂಡೀಸ್ ಹೊಗಳಲು ಏನು ಕಾರಣ?

ಕುಶ ಸಿಸ್ಟಂ ಕೂಡ 350 ಕಿಮೀ ದೂರದ ರೇಂಜ್​​ನಲ್ಲಿ ಇರುತ್ತದೆ. ಇದರಲ್ಲಿ ಮೂರು ರೀತಿ ಕ್ಷಿಪಣಿಗಳನ್ನು ಒಳಗೊಂಡಿರಲಾಗುತ್ತದೆ. ಈ ಮೂರು ಕೂಡ 150 ಕಿಮೀ, 250 ಕಿಮೀ ಮತ್ತು 350 ಕಿಮೀ ಶ್ರೇಣಿಯ ಸಾಮರ್ಥ್ಯದವಾಗಿರುತ್ತವೆ.

2022ರಲ್ಲೇ ಪ್ರಾಜೆಕ್ಟ್ ಕುಶಗೆ ಅನುಮೋದನೆ…

ಕೇಂದ್ರ ಸರ್ಕಾರವು 2022ರಲ್ಲೇ ಪ್ರಾಜೆಕ್ಟ್ ಕುಶಾಗೆ ಅನುಮೋದನೆ ನೀಡಿದೆ. ಒಟ್ಟು 8 ಸ್ಕ್ವಾಡ್ರಾನ್​​ಗಳಿಗೆ ಕುಶ ಸಿಸ್ಟಂ ಅಳವಡಿಸಲು ನಿರ್ಧರಿಸಲಾಗಿದೆ. ಡಿಆರ್​​ಡಿಒದಿಂದ ಪ್ರೋಟೋಟೈಪ್ ಸಿದ್ಧವಾಗುತ್ತಿದೆ. ರಾಡಾರ್, ಇಂಟರ್​​ಸೆಪ್ಟರ್ ಹಾಗು ಇನ್ನೂ ಹಲವು ಸಬ್​​ಸಿಸ್ಟಂಗಳನ್ನು ಅದರ ವಿವಿಧ ಲ್ಯಾಬ್​​ಗಳಲ್ಲಿ ತಯಾರಿಸಲಾಗುತ್ತಿದೆ. ಬಿಇಎಲ್ ಕೂಡ ಈ ಯೋಜನೆಯಲ್ಲಿ ತೊಡಗಿಸಿಕೊಂಡಿದೆ. ಈಗ ಸಿಸ್ಟಂ ಇಂಟಿಗ್ರೇಶನ್ ಕೆಲಸ ಆಗಬೇಕಿದೆ. ಆ ಜವಾಬ್ದಾರಿ ಬಿಇಎಲ್​​ಗೆ ಸಿಗುತ್ತದೆ.

ಮುಂದಿನ ಒಂದು ಅಥವಾ ಒಂದೂವರೆ ವರ್ಷದೊಳಗೆ ಕುಶ ಸಿಸ್ಟಂನ ಪ್ರೋಟೋಟೈಪ್ ಸಿದ್ಧವಾಗಲಿದೆ. ಅದಾದ ಬಳಿಕ ಕಠಿಣತಮ ಪರೀಕ್ಷೆಗಳು ನಡೆಯಲಿವೆ. ಅದು ಯಶಸ್ವಿಯಾದ ಬಳಿಕ ಅವುಗಳನ್ನು ದೊಡ್ಡ ಸಂಖ್ಯೆಯಲ್ಲಿ ತಯಾರಿಸಲಾಗುತ್ತದೆ. 2028ರೊಳಗೆ ಇವೆಲ್ಲವೂ ಮುಗಿಯುವ ನಿರೀಕ್ಷೆ ಇದೆ.

ಇದನ್ನು ಓದಿ: ಆಪರೇಷನ್ ಸಿಂದೂರದ ಬಳಿಕ ಭಾರತದ ಡಿಫೆನ್ಸ್ ಶಕ್ತಿ ಮೇಲೆ ಜಗತ್ತಿನ ಕಣ್ಣು; ಯುದ್ಧವಿಮಾನ ತಯಾರಿಕೆಯಲ್ಲೂ ಪಳಗುತ್ತಿದೆ ಭಾರತ

ರಷ್ಯಾದ ಎಸ್-400 ಖರೀದಿ ಯಾಕಿಲ್ಲ…?

ರಷ್ಯಾದ ಎಸ್-400 ಟ್ರಯಂಫ್ ಸಿಸ್ಟಂಗಳ ಐದು ಸ್ಕ್ವಾಡ್ರಾನ್​​​ಗಳಿಗೆ ಭಾರತ ಆರ್ಡರ್ ಕೊಟ್ಟಿತ್ತು. ಈ ಪೈಕಿ ಮೂರು ಸ್ಕ್ವಾಡ್ರಾನ್​​​ಗಳನ್ನು ರಷ್ಯಾ ಸರಬರಾಜು ಮಾಡಿದೆ. ಆದರೆ, 2021ರಲ್ಲಿ ಉಕ್ರೇನ್ ಮೇಲೆ ರಷ್ಯಾ ಯುದ್ಧಕ್ಕೆ ಹೋದ್ದರಿಂದ ಉಳಿದ ಎರಡು ಸ್ಕ್ವಾಡ್ರನ್​​ಗಳನ್ನು ನೀಡುವುದು ವಿಳಂಬವಾಗಿದೆ. ನಮ್ಮ ರಕ್ಷಣೆಗೆ ಇನ್ನೊಂದು ದೇಶವನ್ನು ನೆಚ್ಚಿಕೊಳ್ಳುವ ಬದಲು ಸ್ವಂತವಾಗಿ ಡಿಫೆನ್ಸ್ ಸಿಸ್ಟಂ ಅಭಿವೃದ್ಧಿಪಡಿಸಬೇಕೆಂಬ ಆಲೋಚನೆಯಲ್ಲಿ ಪ್ರಾಜೆಕ್ಟ್ ಕುಶಗೆ ಸರ್ಕಾರ 2022ರಲ್ಲಿ ಅನುಮೋದನೆ ಕೊಟ್ಟಿತು.

ಭಾರತದ ರಕ್ಷಣಾ ಕೋಟೆಯಲ್ಲಿ ಮೂರು ಪದರಗಳು…

ಭಾರತದ ಏರ್ ಡಿಫೆನ್ಸ್ ಸಿಸ್ಟಂ ಸದ್ಯ ಮೂರು ಪದರಗಳನ್ನು ಒಳಗೊಂಡಿದೆ. ಕಿರುಶ್ರೇಣಿ, ಮಧ್ಯಮ ಶ್ರೇಣಿ ಮತ್ತು ದೂರ ಶ್ರೇಣಿ ಸಿಸ್ಟಂಗಳಿವೆ. ಆಕಾಶ್, ಎಂಆರ್​​ಎಸ್​​ಎಂ ಮತ್ತು ಎಸ್-400 ಸಿಸ್ಟಂಗಳು ಪ್ರತ್ಯೇಕವಾಗಿ ಈ ಮೂರು ಶ್ರೇಣಿಗಳ ಜವಾಬ್ದಾರಿ ನಿಭಾಯಿಸುತ್ತವೆ. ಈಗ ಕುಶ ಸಿದ್ಧವಾದರೆ ಅದು ದೂರ ಶ್ರೇಣಿಯ ಗುರಿಗಳಿಗೆ ಮುಡಿಪಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ
ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ