ಎರಡು ಕ್ವಾರ್ಟರ್​ನಲ್ಲಿ ಭಾರತ ಉತ್ತಮ ಬೆಳವಣಿಗೆಯಾಗಿದ್ದು ಅದೃಷ್ಟದಿಂದಷ್ಟೇ: ರಘುರಾಮ್ ರಾಜನ್

Raghuram Rajan on Indian Economy: ಈ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7.6ರಷ್ಟು ಬೆಳವಣಿಗೆ ಕಾಣಲು ಅದೃಷ್ಟ ಕಾರಣ ಎಂದು ರಘುರಾಮ್ ರಾಜನ್ ಹೇಳಿದ್ದಾರೆ. 2022ರ ಡಿಸೆಂಬರ್​ನಲ್ಲಿ ರಾಹುಲ್ ಗಾಂಧಿ ಜೊತೆ ಮಾತನಾಡುತ್ತಾ ರಾಜನ್ ಅವರು ಭಾರತದ ಜಿಡಿಪಿ ಶೇ. 5ರಷ್ಟು ಬೆಳೆದರೆ ಹೆಚ್ಚು ಎಂದಿದ್ದರು. ಪ್ರಬಲ ಜಾಗತಿಕ ಬೆಳವಣಿಗೆ ಆಗಿದ್ದು ಮತ್ತು ಇನ್​ಫ್ರಾಸ್ಟ್ರಕ್ಚರ್ ಮೇಲೆ ಸರ್ಕಾರದ ಬಂಡವಾಳ ವೆಚ್ಚ ಹೆಚ್ಚಾಗಿದ್ದರಿಂದ ಭಾರತಕ್ಕೆ ಅದೃಷ್ಟ ಎಂದಿದ್ದಾರೆ.

ಎರಡು ಕ್ವಾರ್ಟರ್​ನಲ್ಲಿ ಭಾರತ ಉತ್ತಮ ಬೆಳವಣಿಗೆಯಾಗಿದ್ದು ಅದೃಷ್ಟದಿಂದಷ್ಟೇ: ರಘುರಾಮ್ ರಾಜನ್
ರಘುರಾಮ್ ರಾಜನ್
Follow us
|

Updated on: Dec 18, 2023 | 12:20 PM

ನವದೆಹಲಿ, ಡಿಸೆಂಬರ್ 18: ಭಾರತೀಯ ರಿಸರ್ವ್ ಬ್ಯಾಂಕ್​ನ ಮಾಜಿ ಗವರ್ನರ್ ರಘುರಾಮ್ ರಾಜನ್ (Raghuram Rajan) ಹಾಲಿ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಟೀಕೆ ಮುಂದುವರಿಸಿದ್ದಾರೆ. ಈ ಹಣಕಾಸು ವರ್ಷದ ಮೊದಲೆರಡು ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ನಿರೀಕ್ಷೆಮೀರಿ ಶೇ. 7.5ಕ್ಕಿಂತ ಹೆಚ್ಚು ಬೆಳೆದದ್ದು ಅದೃಷ್ಟವಶಾತ್ ಮಾತ್ರ ಎಂದು ರಾಜನ್ ಹೇಳಿದ್ದಾರೆ. ಕುತೂಹಲ ಎಂದರೆ ಒಂದು ವರ್ಷದ ಹಿಂದೆ ರಾಹುಲ್ ಗಾಂಧಿ ಜೊತೆಗಿನ ಅನೌಪಚಾರಿಕ ಮಾತುಕತೆ ವೇಳೆ ರಘುರಾಮ್ ರಾಜನ್ ಅವರು ಎರಡನೇ ಕ್ವಾರ್ಟರ್​ನಲ್ಲಿ ಭಾರತದ ಆರ್ಥಿಕತೆ ಶೇ. 5ರಷ್ಟು ಬೆಳೆದರೆ ಅದು ಅದೃಷ್ಟ ಎಂದು ಅಂದಾಜು ಮಾಡಿದ್ದರು. ಆದರೆ, ಜುಲೈನಿಂದ ಸೆಪ್ಟೆಂಬರ್​ವರೆಗಿನ ಎರಡನೇ ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಶೇ. 7.6ರಷ್ಟು ಬೆಳೆದು ಎಲ್ಲರನ್ನೂ ಬೆರಗಾಗಿಸಿತ್ತು. ಈ ವಿಚಾರವನ್ನು ಇಂಡಿಯಾ ಟುಡೇ ವಾಹಿನಿಯ ಸಂದರ್ಶನವೊಂದರ ವೇಳೆ ಪ್ರಸ್ತಾಪಿಸಿದಾಗ, ಭಾರತದ ಈ ಜಿಡಿಪಿ ಬೆಳವಣಿಗೆ ಶೇ. 7.6ರಷ್ಟು ಬೆಳೆಯಲು ಎರಡು ಅದೃಷ್ಟಗಳನ್ನು ಹೆಸರಿಸಿದ್ದಾರೆ.

ರಾಜನ್ ಪ್ರಕಾರ ಭಾರತಕ್ಕೆ ಸಂದ ಎರಡು ಅದೃಷ್ಟಗಳು ಯಾವುವು?

ಈ ಹಣಕಾಸು ವರ್ಷದಲ್ಲಿ (2023-24ರಲ್ಲಿ) ಭಾರತದ ಜಿಡಿಪಿ ಮೊದಲ ಕ್ವಾರ್ಟರ್​ನಲ್ಲಿ ಶೇ. 7.8, ಎರಡನೇ ಕ್ವಾರ್ಟರ್​ನಲ್ಲಿ ಶೇ. 7.6ರಷ್ಟು ಬೆಳೆದಿತ್ತು. ಸ್ವತಃ ಆರ್​ಬಿಐ ಕೂಡ ಇಷ್ಟು ಬೆಳವಣಿಗೆಯನ್ನು ನಿರೀಕ್ಷೆ ಮಾಡಿರಲಿಲ್ಲ ಎಂಬುದು ನಿಜ. ಕಳೆದ ಡಿಸೆಂಬರ್​ನಲ್ಲಿ ರಾಜನ್ ಮಾಡಿದ್ದ ಅಂದಾಜು ಸಂಪೂರ್ಣ ತಲೆಕೆಳಗಾಗಿದೆ. ಆದರೆ, ತಮ್ಮ ಮಾತನ್ನು ಸಮರ್ಥಿಸಿಕೊಂಡಿರುವ ಮಾಜಿ ಆರ್​ಬಿಐ ಗವರ್ನರ್, ಎರಡು ಅದೃಷ್ಟಗಳನ್ನು ಕಾರಣವಾಗಿ ಉದಾಹರಿಸಿದ್ದಾರೆ.

ಇದನ್ನೂ ಓದಿ: ಚಿದಂಬರಂ, ರಾಜನ್​ರಿಗೆ ಮ್ಯಾನುಫ್ಯಾಕ್ಚರಿಂಗ್ ಪಾಠ ಬೋಧಿಸಿ, ಟ್ರೋಲ್ ಮಾಡಿದ ಸಚಿವ ಎ ವೈಷ್ಣವ್

  1. ಪ್ರಬಲ ಜಾಗತಿಕ ಬೆಳವಣಿಗೆ
  2. ಇನ್​ಫ್ರಾಸ್ಟ್ರಕ್ಚರ್ ಮೇಲೆ ಸರ್ಕಾರದ ಬಂಡವಾಳ ಹೆಚ್ಚಿದ್ದು.

‘ಹಿಂದಿನ ಕ್ವಾರ್ಟರ್​ನಲ್ಲಿ ಅಮೆರಿಕ ಶೇ. 5.2ರಷ್ಟು ಬೆಳೆದಿತ್ತು. ಅಮೆರಿಕ ಶೇ. 2ರಷ್ಟು ಬೆಳವಣಿಗೆ ಸಾಧ್ಯತೆ ಹೊಂದಿತ್ತು. ಆದರೆ, ಈ ಸಾಧ್ಯತೆಗಿಂತ ಶೇ. 2-3ರಷ್ಟು ಹೆಚ್ಚು ಬೆಳೆದಿದೆ. ಅದೇ ಭಾರತವನ್ನು ನೋಡಿದಾಗ ಅದಕ್ಕೆ ಶೇ. 6ರ ಬೆಳವಣಿಗೆಯ ಸಾಮರ್ಥ್ಯ ಇತ್ತು. ಅದು ಶೇ. 7.6ರಷ್ಟು ಬೆಳೆದಿದೆ. ಅಂದರೆ 1.5 ಪ್ರತಿಶತದಷ್ಟು ಬೆಳವಣಿಗೆ ಹೆಚ್ಚಿದೆ,’ ಎಂದು ರಘುರಾಮ್ ರಾಜನ್ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: ಹತ್ತಕ್ಕಿಂತ ಕಡಿಮೆ ಇದ್ದ ಭಾರತೀಯ ಸ್ಪೇಸ್ ಸ್ಟಾರ್ಟಪ್​ಗಳ ಸಂಖ್ಯೆ ನಾಲ್ಕೇ ವರ್ಷದಲ್ಲಿ 1,180ಕ್ಕೆ: ಸಚಿವ ಜಿತೇಂದ್ರ ಸಿಂಗ್

ಗಮನಾರ್ಹವೆಂಬಂತೆ, ರಘುರಾಮ್ ರಾಜನ್ ತಮ್ಮ ಎರಡನೇ ಕಾರಣದಲ್ಲಿ ಸರ್ಕಾರದ ಕ್ರಮವನ್ನು ಮೆಚ್ಚಿಕೊಂಡಿದ್ದಾರೆ. ‘ಇನ್​ಫ್ರಾಸ್ಟ್ರಕ್ಚರ್ ಮೇಲೆ ಸರ್ಕಾರ ಬಂಡವಾಳ ವೆಚ್ಚ ಹೆಚ್ಚು ಮಾಡಿದ್ದು ಸರಿಯಾದ ಕ್ರಮ. ಆರ್ಥಿಕತೆ ಮಂದಗೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಇನ್​ಫ್ರಾಸ್ಟ್ರಕ್ಚರ್ ಮೇಲೆ ನಾವು ಹೂಡಿಕೆ ಮಾಡಿದರೆ ಅದು ಆರ್ಥಿಕತೆಗೆ ಬಲ ಕೊಡುತ್ತದೆ. ಈ ವಿಚಾರದಲ್ಲಿ ಸರ್ಕಾರವನ್ನು ಮೆಚ್ಚಿಕೊಳ್ಳಬೇಕು,’ ಎಂದು ರಘುರಾಮ್ ರಾಜನ್ ಈ ಸಂದರ್ಶನದಲ್ಲಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ