AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Axis Bank: ನಿಯಮ ಉಲ್ಲಂಘನೆ ಕಾರಣಕ್ಕೆ ಆಕ್ಸಿಸ್​ ಬ್ಯಾಂಕ್​ಗೆ ಸೆಬಿಯಿಂದ 5 ಲಕ್ಷ ರೂಪಾಯಿ ದಂಡ

ಮರ್ಚೆಂಟ್​ ಬ್ಯಾಂಕಿಂಗ್ ನಿಯಮಾವಳಿಯನ್ನು ಉಲ್ಲಂಘನೆ ಮಾಡಿದ ಕಾರಣಕ್ಕೆ ಸೆಬಿಯಿಂದ ಆಕ್ಸಿಸ್​ ಬ್ಯಾಂಕ್​ಗೆ 5 ಲಕ್ಷ ರೂಪಾಯಿ ದಂಡ ಹಾಕಲಾಗಿದೆ.

Axis Bank: ನಿಯಮ ಉಲ್ಲಂಘನೆ ಕಾರಣಕ್ಕೆ ಆಕ್ಸಿಸ್​ ಬ್ಯಾಂಕ್​ಗೆ ಸೆಬಿಯಿಂದ 5 ಲಕ್ಷ ರೂಪಾಯಿ ದಂಡ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Mar 25, 2022 | 7:22 AM

Share

ಮರ್ಚೆಂಟ್ ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸೆಕ್ಯೂರಿಟೀಸ್ ಅಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಮಾರ್ಚ್ 24ರಂದು ಆಕ್ಸಿಸ್ ಬ್ಯಾಂಕ್​ಗೆ 5 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 2016ರ ಆಗಸ್ಟ್​ನಿಂದ 2019ರ ಆಗಸ್ಟ್ ಮಧ್ಯೆ ಆಕ್ಸಿಸ್ ಬ್ಯಾಂಕ್‌ನ ಸಾಲ ಮಾರುಕಟ್ಟೆ ಕಾರ್ಯಾಚರಣೆಗಳ ಪರೀಕ್ಷೆಯನ್ನು ನಡೆಸಿದ್ದು, ಬ್ಯಾಂಕ್​ನಿಂದ 1992ರ ಸೆಬಿ (ಮರ್ಚೆಂಟ್ ಬ್ಯಾಂಕರ್‌ಗಳು) ನಿಯಮಾವಳಿ 27ರ ನಿಬಂಧನೆಗಳನ್ನು ಉಲ್ಲಂಘಿಸುತ್ತಿದೆ ಎಂದು ನಿಯಂತ್ರಕ ಸಂಸ್ಥೆ ಹೇಳಿದೆ. ಮಾರುಕಟ್ಟೆ ನಿಯಂತ್ರಕರು ಮೂರು ವರ್ಷಗಳ ಅವಧಿಯಲ್ಲಿ ಆಕ್ಸಿಸ್ ಬ್ಯಾಂಕ್ 22 ಘಟಕಗಳಿಗೆ ಮರ್ಚೆಂಟ್ ಬ್ಯಾಂಕರ್ ಆಗಿ ಕಾರ್ಯನಿರ್ವಹಿಸುತ್ತಿರುವಾಗ ರೂಢಿಯಂತೆ ಹೂಡಿಕೆಯ ದಿನಾಂಕದಿಂದ ಅದೇ 15 ದಿನಗಳ ಬಗ್ಗೆ ಸೆಬಿಗೆ ತಿಳಿಸದೆ ಒಂಬತ್ತು ಕಂಪೆನಿಗಳ ಸಾಲದ ಪತ್ರಗಳಿಗೆ ಚಂದಾದಾರರಾಗಿದ್ದಾರೆ ಎಂದು ಹೇಳಿದೆ.

ದಿವಾನ್ ಹೌಸಿಂಗ್ ಫೈನಾನ್ಸ್, ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್, ರಿಲಯನ್ಸ್ ಹೋಮ್ ಫೈನಾನ್ಸ್, ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್, ಇಸಿಎಲ್ ಫೈನಾನ್ಸ್, ಎಲ್ ಅಂಡ್ ಟಿ ಫೈನಾನ್ಸ್ ಮತ್ತು ಟಾಟಾ ಕ್ಯಾಪಿಟಲ್ ಫೈನಾನ್ಸ್ ಇವುಗಳು ಎನ್​ಬಿಎಫ್​ಸಿ ಆಗಿದ್ದು, ಆಕ್ಸಿಸ್ ಬ್ಯಾಂಕ್ ಮರ್ಚೆಂಟ್ ಬ್ಯಾಂಕರ್ ಆಗಿ ಕಾರ್ಯ ನಿರ್ವಹಿಸುತ್ತಿರುವಾಗ ಮತ್ತು ಸೆಬಿಗೆ ಪೂರ್ವ ಸೂಚನೆಯಿಲ್ಲದೆ ಸೆಕ್ಯೂರಿಟಿಗಳನ್ನು ಪಡೆದುಕೊಂಡಿದೆ. ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬ್ಯಾಂಕ್​ಗೆ ಏಕೆ ದಂಡ ವಿಧಿಸಬಾರದು ಎಂದು ಸೆಬಿ ಕೇಳಿದಾಗ, ಆಕ್ಸಿಸ್ ಬ್ಯಾಂಕ್ ವರದಿ ಮಾಡುವ ಮಾನದಂಡಗಳನ್ನು ಅನುಸರಿಸಲು ವಿಫಲವಾಗಿದೆ ಎಂದು ಒಪ್ಪಿಕೊಂಡಿದೆ. ಆದರೆ ಇದು ಅಚಾತುರ್ಯದ ಉಲ್ಲಂಘನೆಯಾಗಿದ್ದು, ಇದು ಪೂರ್ವಭಾವಿಯಾಗಿ ಸೆಬಿಗೆ ವರದಿ ಮಾಡಿದೆ. ಅಂತಹ ಉಲ್ಲಂಘನೆಗಳನ್ನು ತಡೆಗಟ್ಟಲು ಶೀಘ್ರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಬ್ಯಾಂಕ್ ಮನವಿ ಮಾಡಿದೆ. “ಈ ವಿಷಯದಲ್ಲಿ ನಾವು ಸಹನೆ ಕೋರುತ್ತೇವೆ ಮತ್ತು ಮೇಲಿನದನ್ನು ವಿವರವಾಗಿ ವಿವರಿಸಲು ವೈಯಕ್ತಿಕ ವಿಚಾರಣೆಗಾಗಿ ವಿನಂತಿಸುತ್ತೇವೆ,” ಎಂದು ಸೆಬಿಗೆ ಬ್ಯಾಂಕ್​ನಿಂದ ಪ್ರತಿಕ್ರಿಯೆ ಬಂದಿದೆ.

ಆಕ್ಸಿಸ್ ಬ್ಯಾಂಕ್ ತನ್ನ ವಾದವನ್ನು ವೈಯಕ್ತಿಕ ವಿಚಾರಣೆಯಲ್ಲಿ ಮಂಡಿಸಲು ಸೆಬಿ ಅವಕಾಶ ಮಾಡಿಕೊಟ್ಟಿತು. ಬ್ಯಾಂಕ್​ ಕೂಡ ತನ್ನ ವಕೀಲರ ಮೂಲಕ ನಿಯಂತ್ರಕರಿಗೆ ತನ್ನ ವಾದವನ್ನು ಮಂಡಿಸಿದೆ. ಆ ನಂತರ, ಆಕ್ಸಿಸ್ ಬ್ಯಾಂಕ್ ನಿಯಂತ್ರಕರಿಗೆ ಅರ್ಜಿ ಸಲ್ಲಿಸುವ ಮೂಲಕ ಪ್ರಕ್ರಿಯೆಗಳನ್ನು ಇತ್ಯರ್ಥಗೊಳಿಸಲು ನಿರ್ಧರಿಸಿದೆ ಎಂದು ಉಲ್ಲೇಖಿಸಿದ್ದಾರೆ. ಆದರೂ ಸೆಬಿಯು ವಿಲೇವಾರಿ ಅರ್ಜಿಯನ್ನು ತಿರಸ್ಕರಿಸಿತು ಮತ್ತು ಪ್ರಕರಣದಲ್ಲಿ ಹೆಚ್ಚಿನ ಸಲ್ಲಿಕೆ ಒದಗಿಸುವಂತೆ ಆಕ್ಸಿಸ್ ಬ್ಯಾಂಕ್ ಅನ್ನು ಕೇಳಿತು. ಆಕ್ಸಿಸ್ ಬ್ಯಾಂಕ್​ನಿಂದ ಸೆಬಿಗೆ ಮತ್ತೊಂದು ಸಲ್ಲಿಕೆಯಲ್ಲಿ, ತಾನು ಮರ್ಚೆಂಟ್ ಬ್ಯಾಂಕಿಂಗ್ ಪ್ರೋಟೋಕಾಲ್ ಅನ್ನು ಉಲ್ಲಂಘಿಸಿದೆ ಎಂದು ಮತ್ತೊಮ್ಮೆ ಒಪ್ಪಿಕೊಂಡಿತ್ತು. ಆದರೆ ಹೇಳಿದ ಒಂಬತ್ತು ಸಮಸ್ಯೆಗಳು ಸಂಪೂರ್ಣ ಮರ್ಚೆಂಟ್ ಬ್ಯಾಂಕಿಂಗ್ ವಹಿವಾಟಿನ ಒಂದು ಸಣ್ಣ ಪ್ರಮಾಣವನ್ನು ಮಾತ್ರ ರೂಪಿಸುತ್ತವೆ ಎಂದು ಹೇಳುವ ಮೂಲಕ ನಿಯಂತ್ರಕರಿಂದ ಸ್ವಲ್ಪ ಸಹಾನುಭೂತಿ ಕೋರಿದೆ. ಬ್ಯಾಂಕ್‌ನ ಮರ್ಚೆಂಟ್ ಬ್ಯಾಂಕಿಂಗ್ ಮತ್ತು ಹೂಡಿಕೆ ಕಾರ್ಯಗಳೆರಡರಲ್ಲೂ ಸಂಬಂಧಿತ ಬ್ಯಾಂಕ್ ಅಧಿಕಾರಿ ವ್ಯವಹರಿಸುವುದರಿಂದ ಉಲ್ಲಂಘನೆ ಸಂಭವಿಸಿರಬೇಕು ಎಂದು ಬ್ಯಾಂಕ್ ಹೇಳಿದೆ.

ಬ್ಯಾಂಕ್​ಗೆ ದಂಡ ವಿಧಿಸುವುದಕ್ಕೆ ಸಾಕಷ್ಟು ಸಾಕ್ಷ್ಯಗಳನ್ನು ಕಂಡುಕೊಂಡಿದೆ ಎಂದು ಸೆಬಿ ತಿಳಿಸಿದ್ದು, ಇನ್ನು 45 ದಿನಗಳಲ್ಲಿ 5 ಲಕ್ಷ ರೂಪಾಯಿ ಪಾವತಿಸುವಂತೆ ಆಕ್ಸಿಸ್​ಬ್ಯಾಂಕ್​ಗೆ ಸೂಚಿಸಲಾಗಿದೆ.

ಇದನ್ನೂ ಓದಿ: Life Insurance Corporation IPO: ಎಲ್​ಐಸಿ ಐಪಿಒಗೆ ಸೆಬಿಯಿಂದ ಅನುಮತಿ

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್