Stock Market: ಭಾರತದಲ್ಲಿ ದಿಢೀರನೆ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವೇನು?

| Updated By: ಸುಷ್ಮಾ ಚಕ್ರೆ

Updated on: Aug 05, 2024 | 7:36 PM

ಭಾರತೀಯ ರೂಪಾಯಿ ಇಂದು (ಸೋಮವಾರ) ದಾಖಲೆಯ ಅತ್ಯಂತ ಕೆಳಮಟ್ಟಕ್ಕೆ ಕುಸಿಯಿತು. ಭಾರತದ ರೂ. ಮೌಲ್ಯ 83.8450ಕ್ಕೆ ಕೊನೆಗೊಂಡಿತು. ಕಳೆದ ಸೆಷನ್‌ನಿಂದ ಇಂದು ಶೇ. 0.1ನಷ್ಟು ಕಡಿಮೆಯಾಗಿದೆ. ಭಾರತದಲ್ಲಿ ಷೇರು ಮಾರುಕಟ್ಟೆ ಇದ್ದಕ್ಕಿದ್ದಂತೆ ಕುಸಿತ ಕಾಣಲು ಕಾರಣವೇನು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Stock Market: ಭಾರತದಲ್ಲಿ ದಿಢೀರನೆ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವೇನು?
ಷೇರು ಮಾರುಕಟ್ಟೆ
Image Credit source: PTI
Follow us on

ಮುಂಬೈ: ಭಾರತದಲ್ಲಿ ಇಂದು ಷೇರು ಮಾರುಕಟ್ಟೆ ಪಾತಾಳಕ್ಕೆ ಕುಸಿದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ 50ಯಲ್ಲಿ ಸರಾಸರಿ ಶೇ. 4ರಷ್ಟು ಕುಸಿತವಾಗಿದೆ. ಈ ವಾರವಿಡೀ ಇದೇ ರೀತಿಯ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಇದರಿಂದಾಗಿ ಇಂದು ಒಂದೇ ದಿನದಲ್ಲಿ ಹೂಡಿಕೆದಾರರು 15 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ. ಇಂದು ಶೇ. 2.7 ನಷ್ಟದೊಂದಿಗೆ ಭಾರತದ ಪ್ರಮುಖ ಸ್ಟಾಕ್ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಕಳೆದ ಎರಡು ತಿಂಗಳಿ ಅವಧಿಯಲ್ಲಿಯೇ ಅತಿದೊಡ್ಡ ಏಕದಿನ ಕುಸಿತವನ್ನು ಕಂಡವು.

ಯಾರಿಗೆ ಲಾಭ?:

ಕೇವಲ ಐದು ಷೇರುಗಳು ಎಂದು ಉತ್ತಮ ಮೌಲ್ಯದಲ್ಲಿವೆ. ಹಿಂದೂಸ್ತಾನ್ ಯೂನಿಲಿವರ್ (ಶೇ. 1.02), ಟಾಟಾ ಕನ್​ಸ್ಯೂಮರ್ (ಶೇ. 0.70), ನೆಸ್ಲೆ (ಶೇ. 0.68), ಬ್ರಿಟಾನಿಯಾ (ಶೇ. 0.51), ಮತ್ತು ಎಚ್‌ಡಿಎಫ್‌ಸಿ ಲೈಫ್ (ಶೇ. 0.21 ಏರಿಕೆ) ನಿಫ್ಟಿ 50 ಸೂಚ್ಯಂಕದಲ್ಲಿ ಇಂದು ಲಾಭ ಗಳಿಸಿವೆ.

ಯಾರಿಗೆ ನಷ್ಟ?:

ಟಾಟಾ ಮೋಟಾರ್ಸ್ (ಶೇ. 7.40 ಕುಸಿತ), ಒಎನ್‌ಜಿಸಿ (ಶೇ. 6.39 ಕುಸಿತ) ಮತ್ತು ಅದಾನಿ ಪೋರ್ಟ್ಸ್ (ಶೇ. 5.92 ಕುಸಿತ) ಷೇರುಗಳು ಸೂಚ್ಯಂಕದಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿವೆ.

ಭಾರತೀಯ ಷೇರು ಮಾರುಕಟ್ಟೆಗೆ ತೀವ್ರವಾದ ಹೊಡೆತವನ್ನು ನೀಡಿದ 5 ಪ್ರಮುಖ ಅಂಶಗಳು ಇಲ್ಲಿವೆ…

ಇದನ್ನೂ ಓದಿ: ಎನ್​ಡಿಎಯಿಂದ ಸುಭದ್ರ ಸರ್ಕಾರದ ಭರವಸೆ; ಹೊಸ ಎತ್ತರಕ್ಕೆ ಏರಿದ ಷೇರು ಮಾರುಕಟ್ಟೆ; ಸೆನ್ಸೆಕ್ಸ್, ನಿಫ್ಟಿ ದಾಖಲೆ

1. ಯುಎಸ್ ರಿಸೆಶನ್ ಭಯ:

ಕಳೆದ ಶುಕ್ರವಾರ ಜುಲೈ ವೇತನದಾರರ ಅಂಕಿಅಂಶಗಳ ನಂತರ ಯುಎಸ್ ನಿರುದ್ಯೋಗ ದರವು ಕಳೆದ ತಿಂಗಳು ಶೇ. 4.1ರಷ್ಟಿದ್ದದ್ದು ಮೂರು ವರ್ಷಗಳ ಗರಿಷ್ಠ ಶೇ. 4.3ಕ್ಕೆ ಜಿಗಿದಿದೆ ಎಂದು ತೋರಿಸಿದ ನಂತರ ಯುಎಸ್​ನಲ್ಲಿ ಆರ್ಥಿಕ ಹಿಂಜರಿತದ ಭಯವು ಜಾಗತಿಕವಾಗಿ ಹೂಡಿಕೆದಾರರಲ್ಲಿ ಭಯ ಸೃಷ್ಟಿಸಿದೆ. ಜುಲೈ ನಿರುದ್ಯೋಗ ದರದಲ್ಲಿ ನಾಲ್ಕನೇ ಸತತ ಮಾಸಿಕ ಹೆಚ್ಚಳವನ್ನು ಕಂಡಿದೆ.

ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಗೋಲ್ಡ್‌ಮನ್ ಸ್ಯಾಚ್ಸ್ ಅರ್ಥಶಾಸ್ತ್ರಜ್ಞರು ಮುಂದಿನ 12 ತಿಂಗಳಲ್ಲಿ ಯುಎಸ್​ನಲ್ಲಿ ಆರ್ಥಿಕ ಹಿಂಜರಿತದ ಸಾಧ್ಯತೆ ಶೇ.15ರಿಂದ 25ರಷ್ಟಾಗಲಿದೆ.

2. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ:

ಮಾಧ್ಯಮ ವರದಿಗಳ ಪ್ರಕಾರ, ಇಸ್ರೇಲ್ ಹಮಾಸ್ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಯನ್ನು ಕೊಂದ ನಂತರ ಸೇಡು ತೀರಿಸಿಕೊಳ್ಳಲು ಇರಾನ್ ಪ್ರತಿಜ್ಞೆ ಮಾಡಿದೆ. ಹೊಸದಾಗಿ ಚುನಾಯಿತರಾದ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಇರಾನ್‌ನಲ್ಲಿದ್ದಾಗ ಹನಿಯೆಹ್ ಅವರನ್ನು ಹತ್ಯೆ ಮಾಡಲಾಗಿತ್ತು. ಇದು ಮತ್ತೊಂದು ಮಹಾಯುದ್ಧದ ಭೀತಿ ಹೆಚ್ಚಿಸಿದೆ. ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ ಯುನೈಟೆಡ್ ಸ್ಟೇಟ್ಸ್ ತನ್ನ ಮಿಲಿಟರಿ ಉಪಸ್ಥಿತಿಯನ್ನು ಈ ಪ್ರದೇಶದಲ್ಲಿ ಬಲಪಡಿಸುತ್ತಿದೆ. ಇದು ಕೂಡ ಷೇರು ಮಾರುಕಟ್ಟೆಯ ಹೂಡಿಕೆದಾರರ ಮೇಲೆ ಪರಿಣಾಮ ಬೀರುತ್ತಿದೆ.

3. ವಿಸ್ತರಿಸಿದ ಮೌಲ್ಯಮಾಪನ:

ಭಾರತೀಯ ಷೇರು ಮಾರುಕಟ್ಟೆಯ ಪ್ರಸ್ತುತ ಮೌಲ್ಯಮಾಪನವು ವಿಸ್ತರಿಸಲ್ಪಟ್ಟಿದೆ ಮತ್ತು ಮಾರುಕಟ್ಟೆಯು ಆರೋಗ್ಯಕರ ತಿದ್ದುಪಡಿಗೆ ಪಕ್ವವಾಗಿದೆ ಎಂದು ತಜ್ಞರು ಹೇಳುತ್ತಾರೆ. ಭಾರತದಲ್ಲಿ ರಕ್ಷಣಾ ಮತ್ತು ರೈಲ್ವೇಗಳಂತಹ ಮಾರುಕಟ್ಟೆಯ ಅಧಿಕ ಮೌಲ್ಯದ ವಿಭಾಗಗಳು ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿದೆ. ಈ ಗೂಳಿ ಓಟದಲ್ಲಿ ಉತ್ತಮವಾಗಿ ಕೆಲಸ ಮಾಡಿದ ಖರೀದಿ-ಆನ್-ಡಿಪ್ಸ್ ತಂತ್ರವು ಈಗ ಬೆದರಿಕೆಯೊಡ್ಡುವ ಸಾಧ್ಯತೆಯಿದೆ.

ಇದನ್ನೂ ಓದಿ: Sensex Today: ಪಾತಾಳಕ್ಕೆ ಕುಸಿದ ಷೇರು ಮಾರುಕಟ್ಟೆ; ಹೂಡಿಕೆದಾರರಿಗೆ ಇಂದು 15 ಲಕ್ಷ ಕೋಟಿ ರೂ. ನಷ್ಟ

4. ಪ್ರಭಾವ ಬೀರದ Q1 ಫಲಿತಾಂಶ:

ಇಂಡಿಯಾ ಇಂಕ್.ನ ಜೂನ್ ತ್ರೈಮಾಸಿಕ (Q1FY25) ಫಲಿತಾಂಶವು ಮಿಶ್ರವಾಗಿದೆ. ಇದು ಮಾರುಕಟ್ಟೆಯ ಭಾವನೆಯನ್ನು ಹುರಿದುಂಬಿಸಲು ವಿಫಲವಾಗಿದೆ. ಪ್ರಸ್ತುತ ಮಾರುಕಟ್ಟೆಯ ಮೌಲ್ಯಮಾಪನವು ಹೆಚ್ಚಿರುವುದರಿಂದ, ಗಳಿಕೆಯು ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಜ್ಞರು ಭಯಪಡುತ್ತಾರೆ.

5. ತಾಂತ್ರಿಕ ಅಂಶ:

ನಿಫ್ಟಿ 50 ಕಳೆದ 20 ದಿನಗಳ ಚಲಿಸುವ ಸರಾಸರಿಗಿಂತ ಕಡಿಮೆಯಾಗಿದೆ. ಇದು ದುರ್ಬಲ ಮಾರುಕಟ್ಟೆಯ ಭಾವನೆಯನ್ನು ಸೂಚಿಸುತ್ತದೆ. ಬಹಳ ಸಮಯದ ನಂತರ ನಿಫ್ಟಿ 20-ದಿನದ SMA (ಸರಳ ಚಲಿಸುವ ಸರಾಸರಿ)ಗಿಂತ ಕಡಿಮೆಯಾಗಿದೆ. ಇದು ಹೆಚ್ಚಾಗಿ ನೆಗೆಟಿವ್ ಬೆಳವಣಿಗೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ