AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವಾಳಿ ಎದ್ದ ಗೋಫಸ್ಟ್ ಏರ್ಲೈನ್ ಸಂಸ್ಥೆಯ ಖರೀದಿಗೆ ಮುಂದಾದ ಸ್ಪೈಸ್ ಜೆಟ್; ಸ್ಕೈ ಒನ್, ಸಾಫ್ರಿಕ್​ನಿಂದಲೂ ಆಸಕ್ತಿ

Spice Jet to buy Go First: ಮೇ ತಿಂಗಳಿಂದ ವೈಮಾನಿಕ ಸೇವೆ ನಿಲ್ಲಿಸಿರುವ ಗೋ ಫಸ್ಟ್ ಏರ್ಲೈನ್ಸ್ ಸಂಸ್ಥೆಯನ್ನು ಖರೀದಿಸಲು ಸ್ಪೈಸ್ ಜೆಟ್ ಆಸಕ್ತಿ ತೋರಿದೆ. ಎಂಜಿನ್ ಸಮಸ್ಯೆಯಿಂದಾಗಿ ವಿಮಾನಗಳು ಸರಿಯಾಗಿ ಸಂಚರಿಸದ ಪರಿಣಾಮ ತೀವ್ರ ನಷ್ಟಗೊಂಡು ಬ್ಯಾಂಕ್ರಪ್ಸಿ ತಡೆಗೆ ಗೋಫಸ್ಟ್ ಅರ್ಜಿ ಸಲ್ಲಿಸಿತ್ತು. ಇದೀಗ ಸ್ಪೈಸ್ ಜೆಟ್ ಮಾತ್ರವಲ್ಲದೆ, ಶಾರ್ಜಾ ಮೂಲದ ಸ್ಕೈ ನ್ ಮತ್ತು ಆಫ್ರಿಕಾದ ಸಾಫ್ರಿಕ್ ಇನ್ವೆಸ್ಟ್​ಮೆಂಟ್ಸ್ ಸಂಸ್ಥೆಗಳೂ ಗೋಫಸ್ಟ್ ಪಡೆಯಲು ಆಸಕ್ತಿ ಸಲ್ಲಿಸಿವೆ.

ದಿವಾಳಿ ಎದ್ದ ಗೋಫಸ್ಟ್ ಏರ್ಲೈನ್ ಸಂಸ್ಥೆಯ ಖರೀದಿಗೆ ಮುಂದಾದ ಸ್ಪೈಸ್ ಜೆಟ್; ಸ್ಕೈ ಒನ್, ಸಾಫ್ರಿಕ್​ನಿಂದಲೂ ಆಸಕ್ತಿ
ಗೋ ಫಸ್ಟ್ ಏರ್ಲೈನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 19, 2023 | 2:23 PM

Share

ನವದೆಹಲಿ, ಡಿಸೆಂಬರ್ 19: ದಿವಾಳಿ ಎದ್ದಿರುವ ಗೋ ಫಸ್ಟ್ ಏರ್ಲೈನ್ ಸಂಸ್ಥೆಯನ್ನು ಖರೀದಿಸಲು ಸ್ಪೈಸ್ ಜೆಟ್ ಸಂಸ್ಥೆ ಆಸಕ್ತಿ ತೋರಿಸಿದೆ. ಫಂಡಿಂಗ್ ಕೊರತೆ ಎದುರಿಸುತ್ತಿರುವ ಸ್ಪೈಸ್ ಜೆಟ್​ನ (cash-strapped Spice Jet) ಈ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಷೇರು ವಿನಿಮಯ ಕೇಂದ್ರಗಳಿಗೆ (filing in exchanges) ಸಲ್ಲಿಸಿದ ಫೈಲಿಂಗ್​ನಲ್ಲಿ ಸ್ಪೈಸ್​ಜೆಟ್ ತನ್ನ ಪ್ರತಿಸ್ಪರ್ಧಿ ಸಂಸ್ಥೆಯ ಖರೀದಿಗೆ ಮುಂದಾಗಿರುವ ವಿಚಾರ ತಿಳಿಸಿದೆ.

‘ಗೋ ಫಸ್ಟ್ ಸಂಸ್ಥೆಯ ರೆಸಲ್ಯೂಶನ್ ಪ್ರೊಫೆನಲ್ (Resolution Professional) ಅವರಲ್ಲಿ ಆಸಕ್ತಿ ಸಲ್ಲಿಸಿದ್ದೇವೆ. ಖರೀದಿ ಆಫರ್ ಅನ್ನು ಸಲ್ಲಿಸಲು ಸಿದ್ಧ ಇದ್ದೇವೆ. ಗೋ ಫಸ್ಟ್ ಮತ್ತು ಸ್ಪೈಸ್​ಜೆಟ್​ನ ಸಂಭಾವ್ಯ ಸಂಯೋಜನೆಯಲ್ಲಿ ಒಂದು ಬಲಿಷ್ಠ ಮತ್ತು ಸಮರ್ಪಕ ಏರ್ಲೈನ್ ಅನ್ನು ಸೃಷ್ಟಿಸುವ ಉದ್ದೇಶ ಹೊಂದಿದ್ದೇವೆ,’ ಎಂದು ತನ್ನ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ಸ್ಪೈಸ್ ಜೆಟ್ ತಿಳಿಸಿದೆ.

ಇದನ್ನೂ ಓದಿ: Indian Economy: ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಕೊಡುಗೆ ಶೇ. 16ಕ್ಕಿಂತಲೂ ಹೆಚ್ಚಿರಲಿದೆ: ಐಎಂಎಫ್ ಅನಿಸಿಕೆ

ಇನ್ನು, ಗೋ ಫಸ್ಟ್ ಏರ್ಲೈನ್ ಸಂಸ್ಥೆಯನ್ನು ಕೊಳ್ಳಲು ಜಿಂದಾಲ್ ಪವರ್ ಈ ಹಿಂದೆ ಪ್ರಯತ್ನಿಸಿತ್ತು. ಆದರೆ, ಒಪ್ಪಂದ ಸಾಕಾರಗೊಳ್ಳಲಿಲ್ಲ. ಯುಎಇಯ ಶಾರ್ಜಾ ಮೂಲಕ ಸ್ಕೈ ಒನ್, ಆಫ್ರಿಕಾದ ಸಾಫ್ರಿಕ್ ಇನ್ವೆಸ್ಟ್​ಮೆಂಟ್ಸ್ ಸಂಸ್ಥೆಗಳೂ ಕೂಡ ಗೋ ಫಸ್ಟ್ ಖರೀದಿಗೆ ಆಸಕ್ತಿ ತೋರಿವೆ.

ವಾಡಿಯಾ ಗ್ರೂಪ್​ಗೆ ಸೇರಿದ ಗೋ ಫಸ್ಟ್ ಏರ್ಲೈನ್ ಸಂಸ್ಥೆ ಮೇ ತಿಂಗಳಿಂದಲೂ ಬಂದ್ ಆಗಿದೆ. ಅದರ 54 ಏರ್​ಬಸ್ ಎಸ್​ಇ ಎ320 ನಿಯೋ ವಿಮಾನಗಳು ಸಂಚಾರ ನಿಲ್ಲಿಸಿವೆ. ಪ್ರಾಟ್ ಅಂಡ್ ವಿಟ್ನೀ ಎಂಜಿನ್ ಸಮಸ್ಯೆಯಿಂದ ವಿಮಾನ ನಿಲ್ಲಿಸಬೇಕಿದೆ. ಇದರಿಂದ ದಿವಾಳಿ ಸ್ಥಿತಿ ತಲುಪಿದ್ದೇವೆ ಎಂಬುದು ಗೋಫಸ್ಟ್ ಸಂಸ್ಥೆಯ ಆರೋಪ. ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಎಂಜಿನ್ ತಯಾರಕ ಸಂಸ್ಥೆಯೊಂದಿಗಿನ ವ್ಯಾಜ್ಯದಲ್ಲಿ ಗೋಫಸ್ಟ್ ಸಂಸ್ಥೆ ಪರವಾಗಿ ತೀರ್ಪು ಬಂದಿರುವುದು ಹೌದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!