AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sri Mandir: ಆನ್​ಲೈನ್​ನಲ್ಲಿ ಪ್ರಸಾದ, ಪೂಜಾ ಸಾಮಗ್ರಿ ವಿತರಿಸುವ AppsForBharatಗೆ ಭರ್ಜರಿ ಫಂಡಿಂಗ್

Sri Mandir App's parent company gets huge funding from Venture Capitals: ಆನ್​ಲೈನ್​ನಲ್ಲಿ ಪ್ರಸಾದ, ಪೂಜಾ ಸಾಮಗ್ರಿ ವಿತರಿಸುವ AppsForBharatಗೆ ಭರ್ಜರಿ ಫಂಡಿಂಗ್ ಸಿಕ್ಕಿದೆ. ಆದರೆ, ಪೂಜೆಗೆ ಬೇಕಾದ ಊದುಬತ್ತಿ ಕರ್ಪೂರದ ಮಾರಾಟ ಮಾಡುವ ಕಂಪನಿ ಎಂದು ಮೂಗು ಮುರಿಯಬೇಡಿ. ಇಲ್ಲಿ ಒಬ್ಬನ ಉದ್ಯಮದ ಬೆಳವಣಿಗೆಯ ಕಥೆ ಕೇಳಿ ನೀವು ಮೂಗಿನ ಮೇಲೆ ಬೆರಳು ಇಡುವುದು ಖಂಡಿತ.

Sri Mandir: ಆನ್​ಲೈನ್​ನಲ್ಲಿ ಪ್ರಸಾದ, ಪೂಜಾ ಸಾಮಗ್ರಿ ವಿತರಿಸುವ AppsForBharatಗೆ ಭರ್ಜರಿ ಫಂಡಿಂಗ್
ಪ್ರಶಾಂತ್ ಸಚನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 03, 2025 | 7:06 PM

Share

ಬೆಂಗಳೂರು, ಜುಲೈ 3: ಆನ್​ಲೈನ್​​ನಲ್ಲಿ ಪೂಜಾ ಸಾಮಗ್ರಿಗಳನ್ನು ಖರೀದಿಸಲು, ನಿರ್ದಿಷ್ಟ ದೇವಸ್ಥಾನಗಳಲ್ಲಿ ವಿವಿಧ ಪೂಜೆಗಳನ್ನು ಬುಕ್ ಮಾಡುವುದು ಇತ್ಯಾದಿ ಕಾರ್ಯಗಳಿಗೆ ಆನ್​ಲೈನ್ ವೇದಿಕೆಯಾಗಿರುವ ಶ್ರೀ ಮಂದಿರ್ ಆ್ಯಪ್ ಬಗ್ಗೆ ನೀವು ಕೇಳಿರಬಹುದು. ಈ ಆ್ಯಪ್ ಅನ್ನು ನಿರ್ಮಿಸಿದ್ದು ಆ್ಯಪ್ಸ್​ಫಾರ್​ಭಾರತ್ (AppsForBharat) ಎನ್ನುವ ಬೆಂಗಳೂರು ಮೂಲದ ಸ್ಟಾರ್ಟಪ್. ಈಗ ಈ ಕಂಪನಿ ತನ್ನ ಬ್ಯುಸಿನೆಸ್ ಹಾಗೂ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸುತ್ತಿದ್ದು ಅದಕ್ಕಾಗಿ ಹೊಸದಾಗಿ ಬಂಡವಾಳ ಪಡೆದಿದೆ.

ಸೀರೀಸ್ ಸಿ ಫಂಡಿಂಗ್ ಸುತ್ತಿನಲ್ಲಿ ಆ್ಯಪ್ಸ್ ಫಾರ್ ಭಾರತ್ ಕಂಪನಿಯು 175 ಕೋಟಿ ರೂ ಫಂಡಿಂಗ್ ಪಡೆದಿದೆ. ಸುಸ್ಕೆನ್ನಾ ಏಷ್ಯಾ ವಿಸಿ (Susquehanna Asia VC) ಎನ್ನುವ ವೆಂಚರ್ ಕ್ಯಾಪಿಟಲ್ ಹಾಗೂ ಇತರ ಕೆಲ ಕಂಪನಿಗಳು ಆ್ಯಪ್ಸ್ ಫಾರ್ ಭಾರತ್​ಗೆ ಬಂಡವಾಳ ನೀಡಿವೆ. ಈ ಹಿಂದಿನ ಫಂಡಿಂಗ್ ರೌಂಡ್​ನಲ್ಲಿ ಬಂಡವಾಳ ಕೊಟ್ಟಿದ್ದ ನಂದನ್ ನಿಲೇಕಣಿ ಅವರ ಫಂಡಮೆಂಟಮ್, ಎಲಿವೇಶನ್ ಕ್ಯಾಪಿಟಲ್ ಮತ್ತು ಪೀಕ್ ಎಕ್ಸ್​​ವಿ ಪಾರ್ಟ್ನರ್ಸ್ ಕಂಪನಿಗಳು ಸೀರೀಸ್ ಸಿ ಫಂಡಿಂಗ್ ರೌಂಡ್​​ನಲ್ಲೂ ಪಾಲ್ಗೊಂಡು ಬಂಡವಾಳ ಕೊಟ್ಟಿವೆ. ಇಲ್ಲಿಯವರೆಗೆ ಈ ಸ್ಟಾರ್ಟಪ್ 53 ಮಿಲಿಯನ್ ಡಾಲರ್​ನಷ್ಟು (452 ಕೋಟಿ ರೂ) ಫಂಡಿಂಗ್ ಪಡೆದಿದೆ.

ಇದನ್ನೂ ಓದಿ: ಹೊಸ ದ್ವೀಪ ಖರೀದಿಸಿ ಟೆಕ್ಕಿಗಳಿಗೆಂದೇ ಹೊಸ ದೇಶ ಕಟ್ಟಲು ಹೊರಟ ಭಾರತೀಯ ಅಮೆರಿಕನ್ ಉದ್ಯಮಿ ಬಾಲಾಜಿ ಶ್ರೀನಿವಾಸನ್

ಪ್ರಶಾಂತ್ ಸಚನ್ ಎನ್ನುವ ಯುವಕ 2020ರಲ್ಲಿ ಸ್ಥಾಪನೆ ಮಾಡಿದ ಆ್ಯಪ್ಸ್ ಫಾರ್ ಭಾರತ್ ಎನ್ನುವ ಈ ಸ್ಟಾರ್ಟಪ್, ತನಗೆ ಸಿಕ್ಕಿರುವ ಈ 175 ಕೋಟಿ ರೂ ಫಂಡಿಂಗ್ ಉಪಯೋಗಿಸಿ 20ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ತನ್ನ ಕಾರ್ಯಚಟುವಟಿಕೆ ವಿಸ್ತರಿಸಲು ಯೋಜಿಸಿದೆ. ಅಯೋಧ್ಯ, ವಾರಾಣಸಿ, ಉಜ್ಜೈನಿ, ಹರಿದ್ವಾರ ಮೊದಲಾದ ದೇವಸ್ಥಾನಗಳಲ್ಲಿ ಪ್ರಸಾದ ಮತ್ತು ಪೂಜಾ ಸಾಮಗ್ರಿಗಳನ್ನು ಪೂರೈಸಲು ಬೇಕಾದ ವ್ಯವಸ್ಥೆಗಳನ್ನು ಮಾಡಲಿದೆ.

ಆ್ಯಪ್ಸ್ ಫಾರ್ ಭಾರತ್ ಕಂಪನಿಯ ಪ್ರಮುಖ ಆ್ಯಪ್ ಎಂದರೆ ಶ್ರೀ ಮಂದಿರ್. ಇದು 4 ಕೋಟಿಗೂ ಅಧಿಕ ಡೌನ್​​ಲೋಡ್ ಕಂಡಿದೆ. ಈ ಆ್ಯಪ್​ ಮೂಲಕ ಭಕ್ತರು ಆನ್​ಲೈನ್ ಪೂಜೆಗಳನ್ನು ಬುಕ್ ಮಾಡಬಹುದು, ಪ್ರಸಾದ ಸ್ವೀಕರಿಸಬಹುದು. ಭಜನೆ, ಕಥೆ, ಮಂತ್ರ, ಇತ್ಯಾದಿ ಕಂಟೆಂಟ್​​ಗಳನ್ನು ಈ ಪ್ಲಾಟ್​​ಫಾರ್ಮ್​​ನಲ್ಲಿ ನೋಡಬಹುದು.

ಇದನ್ನೂ ಓದಿ: ಮೈಕ್ರೋಸಾಫ್ಟ್​ನಿಂದ ಮತ್ತೆ ಲೇ ಆಫ್ ಭೂತ; 9,100 ಉದ್ಯೋಗಿಗಳಿಗೆ ಕೆಲಸ ಹೋಗುವ ಸಾಧ್ಯತೆ

ಕಳೆದ ಒಂದು ವರ್ಷದಲ್ಲಿ 12 ಲಕ್ಷಕ್ಕೂ ಹೆಚ್ಚು ಜನರು ಈ ಆ್ಯಪ್ ಬಳಸಿ 70ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ 52 ಲಕ್ಷ ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದ್ದಾರೆ. 2025ರ ಮಹಾಕುಂಭದಲ್ಲಿ ವೇದಾಶ್ರಮ್ ಟ್ರಸ್ಟ್​​ಗೆ ಶ್ರೀಮಂದಿರ್ ಅಧಿಕೃತ ಡಿಜಿಟಲ್ ಪಾರ್ಟ್ನರ್ ಕೂಡ ಆಗಿತ್ತು. ಅಲ್ಲಿ 3 ಲಕ್ಷಕ್ಕೂ ಅಧಿಕ ಭಕ್ತರಿಗೆ ಆನ್​​ಲೈನ್ ಮತ್ತು ಆಫ್​ಲೈನ್ ಎರಡೂ ಸೇವೆಗಳನ್ನು ನೀಡಿತ್ತು.

ಭಕ್ತರಿಗೆ ದೇವಸ್ಥಾನ ಅನುಭವದ ಡಿಜಿಟಲ್ ಟಚ್ ಕೊಡುವ ಒಂದು ಕಂಪನಿಗೆ ಇಷ್ಟು ಕಾರ್ಪೊರೇಟ್ ಬಂಡವಾಳ ಸಿಗುತ್ತಿರುವುದು ಈ ಕ್ಷೇತ್ರದ ಅಗಾಧತೆಯನ್ನು ತೋರಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ