ಒಂದೇ ದಿನ ಅತಿಹೆಚ್ಚು ಷೇರು ವಹಿವಾಟು; ಭಾರತದ ಎನ್​ಎಸ್​ಇ ಹೊಸ ವಿಶ್ವದಾಖಲೆ

National Stock Exchange world record in transactions: ಭಾರತದ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಜೂನ್ 5ರಂದು ಭರ್ಜರಿ ಷೇರು ವಹಿವಾಟು ನಡೆದಿದೆ. ಒಂದೇ ದಿನದಲ್ಲಿ ಬರೋಬ್ಬರಿ 1,971 ಕೋಟಿ ಆರ್ಡರ್​​ಗಳು ಬುಕ್ ಆಗಿವೆ. ಈ ಪೈಕಿ 28.55 ಕೋಟಿ ಟ್ರೇಡ್​ಗಳಾಗಿವೆ ಎಂದು ಎನ್​ಎಸ್​ಇ ಸಿಇಒ ಆಶೀಶ್ ಚೌಹಾಣ್ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದು ವಿಶ್ವದಾಖಲೆ ಎಂದೂ ಅವರು ತಿಳಿಸಿದ್ದಾರೆ. ಜೂನ್ 4ರಂದು ಗಣನೀಯ ಪ್ರಮಾಣದಲ್ಲಿ ನಷ್ಟ ಮಾಡಿಕೊಂಡಿದ್ದ ಹೂಡಿಕೆದಾರರಿಗೆ ಜೂನ್ 5ರಂದು ಒಂದಷ್ಟು ಸಮಾಧಾನ ಸಿಕ್ಕಿದೆ.

ಒಂದೇ ದಿನ ಅತಿಹೆಚ್ಚು ಷೇರು ವಹಿವಾಟು; ಭಾರತದ ಎನ್​ಎಸ್​ಇ ಹೊಸ ವಿಶ್ವದಾಖಲೆ
ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್
Follow us
|

Updated on: Jun 05, 2024 | 5:22 PM

ನವದೆಹಲಿ, ಜೂನ್ 5: ಭಾರತದ ಷೇರು ಮಾರುಕಟ್ಟೆ (stock market) ಕಳೆದ ಕೆಲ ದಿನಗಳಿಂದ ಭರ್ಜರಿ ವಹಿವಾಟು ಕಾಣುತ್ತಿದೆ. ನಿನ್ನೆ ಲೋಕಸಭಾ ಚುನಾವಣೆಯ ಫಲಿತಾಂಶ (Lok Sabha elections 2024) ಪ್ರಕಟವಾದ ದಿನದಂದು ಸಾಕಷ್ಟು ಜನರು ಷೇರುಗಳನ್ನು ಆಫ್​ಲೋಡ್ ಮಾಡಿ ಹೋಗಿದ್ದರು. ಇವತ್ತು ಬೇರೆ ಬೇರೆ ವಲಯದ ಷೇರುಗಳಿಗೆ ಹೂಡಿಕೆ ಹರಿದುಬರುತ್ತಿದೆ. ಇಂದು ಬುಧವಾರ ಭಾರೀ ಸಂಖ್ಯೆಯಲ್ಲಿ ಷೇರು ವಹಿವಾಟು ನಡೆದಿರುವುದು ತಿಳಿದುಬಂದಿದೆ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ (NSE) ಹೊಸ ವಿಶ್ವದಾಖಲೆಯೇ ಆಗಿದೆ ಎಂದು ಎನ್​ಎಸ್​ಇ ಸಿಇಒ ಹೇಳಿದ್ದಾರೆ. ಜೂನ್ 5, ಬುಧವಾರದಂದು ಮಾರುಕಟ್ಟೆ ಅವಧಿಯಲ್ಲಿ 28.55 ಕೋಟಿ ಟ್ರಾನ್ಸಾಕ್ಷನ್​ಗಳಾಗಿವೆ ಎಂದು ಸಿಇಒ ಆಶೀಶ್ ಚೌಹಾಣ್ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

‘ಜೂನ್ 5ರಂದು ಬೆಳಗ್ಗೆ 9:15ರಿಂದ 3:30ರವರೆಗೆ ಆರು ಗಂಟೆ 15 ನಿಮಿಷ ಕಾಲದಲ್ಲಿ ಎನ್​ಎಸ್​ಇ ವಿಶ್ವದಾಖಲೆಯ ಸಂಖ್ಯೆಯಲ್ಲಿ ವಹಿವಾಟುಗಳನ್ನು ನಿರ್ವಹಿಸಿದೆ. ಒಂದು ದಿನದಲ್ಲಿ 1,971 ಕೋಟಿ ಆರ್ಡರ್​ಗಳು, ಮತ್ತು 28.55 ಕೋಟಿ ಟ್ರೇಡ್​ಗಳನ್ನು ನಿರ್ವಹಣೆ ಮಾಡಲಾಗಿದೆ,’ ಎಂದು ಎನ್​ಎಸ್​ಇ ಸಿಇಒ ತಿಳಿಸಿದ್ದಾರೆ.

ಇದನ್ನೂ ಓದಿ: ಐಪಿಒದಲ್ಲಿ ಷೇರು ಖರೀದಿಸಿ ಲಿಸ್ಟಿಂಗ್​ನಲ್ಲಿ ಮಾರಿದಾಗ ಎಷ್ಟು ತೆರಿಗೆ ಕಟ್ಟಬೇಕು?

ಆರ್ಡರ್​ಗೂ ಟ್ರೇಡ್​ಗೂ ಏನು ವ್ಯತ್ಯಾಸ?

ಇಲ್ಲಿ ಆರ್ಡರ್ ಬುಕ್ ಮಾಡುವುದು ಎಂದರೆ ಷೇರು ಮಾರುವವರು ನಿರ್ದಿಷ್ಟ ಷೇರುಗಳನ್ನು ಮಾರಾಟಕ್ಕಿಡುತ್ತಾರೆ. ಇದು ಆರ್ಡರ್ ಸಲ್ಲಿಕೆ ಮಾಡಿದಂತೆ. ಈ ಷೇರುಗಳನ್ನು ಯಾರಾದರೂ ಖರೀದಿಸಿದರೆ ಆಗ ಅದು ಟ್ರೇಡ್ ಆದಂತೆ. ಅಲ್ಲಿಗೆ ಒಂದು ವಹಿವಾಟು ಮುಗಿದಂತೆ. ಈ ರೀತಿ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಇಂದು ಜೂನ್ 5ರಂದು ಬರೋಬ್ಬರಿ 28.55 ಕೋಟಿಯಷ್ಟು ವಹಿವಾಟುಗಳಾಗಿರುವುದು ಆಶೀಶ್ ಅವರ ಎಕ್ಸ್ ಪೋಸ್ಟ್​ನಿಂದ ತಿಳಿದು ಬರುತ್ತದೆ. ಆದರೆ, ಈ 28 ಕೋಟಿ ವಹಿವಾಟಿನಲ್ಲಿ ಎಷ್ಟು ಮೊತ್ತದ ಹಣದ ವಿನಿಮಯ ಆಯಿತು ಎಂಬ ಮಾಹಿತಿ ಗೊತ್ತಾಗಿಲ್ಲ.

ಆದರೆ, ನಿನ್ನೆ ಜೂನ್ 4ರಂದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ 30 ಲಕ್ಷ ಕೋಟಿ ರೂಗೂ ಹೆಚ್ಚು ಹಣ ನಷ್ಟವಾಗಿತ್ತು. ಇವತ್ತು ಸುಮಾರು 10-15 ಲಕ್ಷ ಕೋಟಿ ರೂನಷ್ಟು ಲಾಭ ಮಾಡಿಕೊಂಡಿದ್ದಾರೆ ಹೂಡಿಕೆದಾರರು.

ಇದನ್ನೂ ಓದಿ: ಚಂದ್ರಬಾಬು ನಾಯ್ಡು ಈ ಹೇಳಿಕೆ ಕೊಟ್ಟ ಬಳಿಕ ಷೇರು ಮಾರುಕಟ್ಟೆ ಮತ್ತೆ ಹಸಿರು ಬಣ್ಣಕ್ಕೆ

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಎರಡರಲ್ಲೂ ಹೇರಳವಾಗಿ ವಹಿವಾಟುಗಳಾಗುತ್ತಿವೆ. ನಿನ್ನೆಯಿಂದ ಸಾರ್ವಜನಿಕ ವಲಯದ ಉದ್ದಿಮೆಗಳ ಷೇರುಗಳನ್ನು ಸಿಕ್ಕಂತೆ ಮಾರಲಾಗುತ್ತಿದೆ. ಇವತ್ತೂ ಕೂಡ ಪಿಎಸ್​ಯು ಸ್ಟಾಕ್​ಗಳಿಗೆ ದಯನೀಯ ಸ್ಥಿತಿ ಮುಂದುವರಿದಿತ್ತು. ಆದರೆ, ಎಫ್​ಎಂಸಿಜಿ ಮತ್ತು ವಾಹನ ಸಂಸ್ಥೆಗಳ ಷೇರುಗಳತ್ತ ಹೂಡಿಕೆದಾರರ ಹಣ ಹರಿದುಹೋಗುತ್ತಿರುವುದು ಗಮನಾರ್ಹ ಎನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ