Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹಿ ಹಾಕೋದಿರಲಿ, ನಿರ್ದೇಶಕ ಆಗಿರೋದೇ ಗೊತ್ತಿಲ್ಲ ಈ ಅಮಾಯಕ ಅಟೆಂಡರ್​​ಗೆ; ಹೀಗೊಂದು ಗೋಲ್ಮಾಲ್ ಘಟನೆ

Story of Taslim Arif Khan: ರೋಚಕ ಸಿನಿಮಾ ಸ್ಟೋರಿ ನಿಜ ಜೀವನದಲ್ಲೂ ನಡೆದಿದೆ. ಪೀವೊನ್ ಆಗಿ ಕೆಲಸಕ್ಕೆ ಸೇರಿದ ವ್ಯಕ್ತಿಯನ್ನು ಆತನಿಗೆ ಗೊತ್ತಿಲ್ಲದೇ ಕಂಪನಿ ನಿರ್ದೇಶಕರನ್ನಾಗಿ ಹೆಸರಿಸಿ, ಸಹಿ ದುರುಪಯೋಗಿಸಿಕೊಂಡ ಘಟನೆ ನಡೆದಿದೆ. ಹೂಡಿಕೆದಾರರಿಂದ ಅಕ್ರಮವಾಗಿ ಹಣ ಸಂಗ್ರಹಿಸಲಾಗಿತ್ತು. ಆ ಅಟೆಂಡರ್ ಹೇಗೆ ಈ ಜಾಲದಿಂದ ಬಚಾವಾದರು ನೋಡಿ...

ಸಹಿ ಹಾಕೋದಿರಲಿ, ನಿರ್ದೇಶಕ ಆಗಿರೋದೇ ಗೊತ್ತಿಲ್ಲ ಈ ಅಮಾಯಕ ಅಟೆಂಡರ್​​ಗೆ; ಹೀಗೊಂದು ಗೋಲ್ಮಾಲ್ ಘಟನೆ
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 11, 2025 | 6:39 PM

ನವದೆಹಲಿ, ಏಪ್ರಿಲ್ 11: ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಆತನಿಗೆ ಗೊತ್ತಿಲ್ಲದಂತೆ ಕಂಪನಿಯ ನಿರ್ದೇಶಕರನ್ನಾಗಿ ಮಾಡಿ, ಅವರ ಹಸ್ತಾಕ್ಷರವನ್ನೂ ಫೋರ್ಜರಿ ಮಾಡಿ, ಅದನ್ನು ಫಂಡಿಂಗ್ ಪಡೆಯಲು ಉಪಯೋಗಿಸಿದ ಕಥೆ ಇದು. ನೀವು ಕೆಲ ಸಿನಿಮಾಗಳಲ್ಲಿ ಈ ರೀತಿಯ ರೋಚಕ ಬ್ಯುಸಿನೆಸ್ ಸ್ಟೋರಿಗಳನ್ನು (Thrilling stories) ನೋಡಿರಬಹುದು. ಈಗ ನಿಜ ಜೀವನದಲ್ಲೂ ನಡೆದಿದೆ. ಈ ರೀತಿ ಗೊತ್ತಿಲ್ಲದೇ ಕಂಪನಿಯ ನಿರ್ದೇಶಕರಾಗಿ ಮಾಡದ ತಪ್ಪಿಗೆ ದೂರು ಕೇಳುವ ಪರಿಸ್ಥಿತಿ ಬಂದ ವ್ಯಕ್ತಿಯ ಹೆಸರು ಪಶ್ಚಿಮ ಬಂಗಾಳದ ತಸ್ಲಿಮ್ ಅರಿಫ್ ಖಾನ್.

ಗ್ರೀನ್​ಬ್ಯಾಂಗ್ ಆಗ್ರೋ ಲಿಮಿಟೆಡ್ ಸಂಸ್ಥೆಯಲ್ಲಿ ತಸ್ಲಿಮ್ ಅರಿಫ್ ಖಾನ್ ಆಫೀಸ್ ಅಟೆಂಡರ್ ಆಗಿ ಕೆಲಸಕ್ಕೆ ಸೇರಿದ್ದರು. ಅದೂ ದಿನಗೂಲಿ ನೌಕರನಾಗಿ. ಅಲ್ಲಿ ಕೆಲಸ ಮಾಡಿದ್ದೂ ಕೂಡ ಅಲ್ಪ ಅವಧಿ ಮಾತ್ರವೇ. ಇವರು ಕೆಲಸಕ್ಕೆ ಸೇರಿದ ಬಳಿಕ ಅವರಿಗೆ ಗೊತ್ತಿಲ್ಲದೆ ಅವರ ಹೆಸರನ್ನು ಕಂಪನಿಯ ನಿರ್ದೇಶಕ ಸ್ಥಾನಕ್ಕೆ ಸೇರಿಸಲಾಯಿತು. ಇವರ ಹಸ್ತಾಕ್ಷರವನ್ನು ಬಳಸಿ ಡಿಜಿಟಲ್ ಸಿಗ್ನೇಚರ್ ಮಾಡಲಾಯಿತು. ಈ ಸಹಿಯನ್ನು ಬಳಸಿ 2011ರಿಂದ 2014ರವರೆಗೆ ಮೂರು ಹಣಕಾಸು ವರ್ಷದಲ್ಲಿ ನಾನ್ ಕನ್ವರ್ಟಬಲ್ ಡಿಬಂಚರ್​​ಗಳ (ಎನ್​​ಸಿಡಿ) ಮೂಲಕ ಹೂಡಿಕೆದಾರರಿಂದ ಹಣ ಪಡೆಯಲಾಗಿತ್ತು.

ಇದನ್ನೂ ಓದಿ: 1 ಪರ್ಸೆಂಟ್ ತಂತ್ರ: ಇದು ಹಣಕಾಸು ಭದ್ರತೆಗೆ ನಿತಿನ್ ಕಾಮತ್ ಸೂತ್ರ

ಇದನ್ನೂ ಓದಿ
Image
ಹಣಕಾಸು ಭದ್ರತೆಗೆ 1% ತಂತ್ರ: ನಿತಿನ್ ಕಾಮತ್
Image
ಮಕ್ಕಳಿಗೆ ಆಸ್ತಿ ಕೊಡದ ಬಿಲ್ ಗೇಟ್ಸ್
Image
10 ಕೋಟಿ ರೂ. ಮೌಲ್ಯದ ತಿಮಿಂಗಲ ವಾಂತಿ ಸಾಗಿಸುತ್ತಿದ್ದವರ ಬಂಧನ
Image
ಲಕ್ಕಿ ಭಾಸ್ಕರ್ ಆಗಲು ಹೋದ ಬ್ಯಾಂಕ್​ ಮ್ಯಾನೇಜರ್​ನ ಅನ್​ ಲಕ್ಕಿ ಕಥೆ!

ಇದ್ಯಾವುದು ಕೂಡ ತಸ್ಲಿಮ್​​ಗೆ ಗೊತ್ತೇ ಇರಲಿಲ್ಲ. ಇದು ಆಗುವಾಗ ಅವರು ಕಂಪನಿಯ ಕೆಲಸದಲ್ಲೂ ಇರಲಿಲ್ಲ. ತಸ್ಲಿಮ್​ರೂ ಸೇರಿ ವಿವಿಧ ಕಂಪನಿ ನಿರ್ದೇಶಕರ ಸಹಿ ಬಳಸಿ ಎನ್​​ಸಿಡಿಗಳನ್ನು ವಿತರಿಸಿ, ಹೂಡಿಕೆದಾರರಿಂದ ಲಕ್ಷಾಂತರ ಹಣ ಪಡೆಯಲಾಗಿತ್ತು.

ಸೆಬಿಗೆ ಸಿಕ್ಕಿಬಿದ್ದ ಗೋಲ್ಮಾಲ್

ಎನ್​​ಸಿಡಿಗಳನ್ನು 200ಕ್ಕೂ ಹೆಚ್ಚು ಮಂದಿಗೆ ವಿತರಿಸಿದ್ದರೆ, ಆಗ ಅದು ಪಬ್ಲಿಕ್ ಆಫರ್ ಪರಿಧಿಗೆ ಬರುತ್ತದೆ. ಷೇರು ವಿನಿಮಯ ಕೇಂದ್ರಗಳಲ್ಲಿ ಲಿಸ್ಟಿಂಗ್ ಮಾಡಲು ಅನುಮತಿ ಪಡೆಯುವುದು ಸೇರಿದಂತೆ ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಗ್ರೀನ್​ಬ್ಯಾಂಕ್ ಆಗ್ರೋ ಲಿ ಸಂಸ್ಥೆ ಇಂಥ ಯಾವ ನಿಯಮವನ್ನೂ ಅನುಸರಿಸದೇ ಇದ್ದದ್ದು ಸೆಬಿ ಗಮನಕ್ಕೆ ಬರುತ್ತದೆ.

ತನಿಖೆ ನಡೆಸುವ ಸೆಬಿ 2018ರಲ್ಲಿ ಗ್ರೀನ್​​ಬ್ಯಾಂಗ್ ಆಗ್ರೋ ಸಂಸ್ಥೆಗೆ ಹೂಡಿಕೆದಾರರ ಹಣ ಮರಳಿಸುವಂತೆ ಆದೇಶಿಸುತ್ತದೆ. ಸಂಸ್ಥೆಯ ನಿರ್ದೇಶಕರು ಮತ್ತು ಮಾಲೀಕರಿಗೆ ನೋಟೀಸ್ ಹೋಗುತ್ತದೆ. ಹೂಡಿಕೆದಾರರಿಗೆ 36.97 ಲಕ್ಷ ರೂ ಮರಳಿಸಬೇಕೆಂದು ಆದೇಶಿಸಿರಲಾಗುತ್ತದೆ.

ಇದನ್ನೂ ಓದಿ: ಮಕ್ಕಳಿಗೆ ನೂರಕ್ಕೆ ಒಂದು ರುಪಾಯಿಯೂ ಕೊಡದ ಬಿಲ್ ಗೇಟ್ಸ್; ಮಕ್ಕಳು ಏನಂತಾರೆ ನೋಡಿ…

ಕಂಪನಿಯ 13 ನಿರ್ದೇಶಕರ ಸಾಲಿನಲ್ಲಿ ತಸ್ಲಿಮ್ ಆರಿಫ್ ಖಾನ್ ಹೆಸರೂ ಇತ್ತು. ಅಸಲು ಹಣದ ಜೊತೆಗೆ ವರ್ಷಕ್ಕೆ ಶೇ. 15ರ ವಾರ್ಷಿಕ ಬಡ್ಡಿಯನ್ನೂ ಸೇರಿಸಿ ಕೊಡಬೇಕೆಂಬುದು ಸೆಬಿ ಆದೇಶ.

ಪಶ್ಚಿಮ ಬಂಗಾಳದ ತಸ್ಲಿಮ್ ಖಾನ್ ದೀರ್ಘ ಕಾಲ ಕಾನೂನು ಹೋರಾಟದ ಬಳಿಕ ತಾನು ಅಮಾಯಕ ಎಂಬುದನ್ನು ಕೋರ್ಟ್​​ನಲ್ಲಿ ಪ್ರೂವ್ ಮಾಡಿ ಬಚಾವಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ