Sign In

By signing in or creating an account, you agree with Associated Broadcasting Company's Terms & Conditions and Privacy Policy.

Nithin Kamath: 1 ಪರ್ಸೆಂಟ್ ತಂತ್ರ: ಇದು ಹಣಕಾಸು ಭದ್ರತೆಗೆ ನಿತಿನ್ ಕಾಮತ್ ಸೂತ್ರ

Nithin Kamath's 1% rule to get richer: ಸಂಬಳದಲ್ಲಿ ಜೀವನ ಮಾಡುವವರು ಆಸೆ ತೀರಲ್ಲ, ಖರ್ಚು ನಿಲ್ಲಲ್ಲ. ಶ್ರೀಮಂತರಾಗುವ ಕನಸು ನೆರವೇರಲ್ಲ. ಆದರೆ, ನಿತಿನ್ ಕಾಮತ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್​​​ನಲ್ಲಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ಧಾರೆ. ಅದರಲ್ಲಿ ಒನ್ ಪರ್ಸೆಂಟ್ ಸೂತ್ರದ ಮೂಲಕ ದೀರ್ಘಾವಧಿಯಲ್ಲಿ ಸಂಪತ್ತು ಹೇಗೆ ಸೃಷ್ಟಿಸಬಹುದು ಎಂದು ತಿಳಿಸಲಾಗಿದೆ.

Nithin Kamath: 1 ಪರ್ಸೆಂಟ್ ತಂತ್ರ: ಇದು ಹಣಕಾಸು ಭದ್ರತೆಗೆ ನಿತಿನ್ ಕಾಮತ್ ಸೂತ್ರ
ಪ್ರತೀಕ್ ಸಿಂಗ್ ವಿಡಿಯೋದ ಒಂದು ಸ್ಕ್ರೀನ್ ಶಾಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 11, 2025 | 5:06 PM

ಬಹಳಷ್ಟು ದೊಡ್ಡ ದೊಡ್ಡ ಶ್ರೀಮಂತರನ್ನು ನೋಡಿ, ತಾವೂ ಆ ರೀತಿ ಆಗುವುದು ಹೇಗೆಂಬುದು ಮಧ್ಯಮ ವರ್ಗದವರ ಆಲೋಚನೆ. ಆದರೆ, ಆ ಶ್ರೀಮಂತರ ಶ್ರೀಮಂತಿಕೆಗೆ ಏನು ಕಾರಣ ಇದೆಯೋ ಆಳಕ್ಕೆ ಹೋದರೆ ಮಾತ್ರ ತಿಳಿಯುವುದು. ಅದೇನೇ ಇರಲಿ, ಸೀಮಿತ ಆದಾಯ ಹೊಂದಿರುವ ಸಂಬಳದಾರರು ದಿಢೀರ್ ಶ್ರೀಮಂತರಾಗಲು ಯಾವುದೇ ಶಾರ್ಟ್ ಕಟ್ಸ್ ಇಲ್ಲ. ಸಂಬಳವೇ ಜೀವನ, ಸಂಬಳವೇ ಎಲ್ಲಾ ಎನ್ನುವ ಈ ವರ್ಗದವರು ಹಣ ಉಳಿಸುವುದಿರಲಿ, ಸಾಲದ ಶೂಲಕ್ಕೆ ಸಿಕ್ಕು ವಿಲವಿಲ ಒದ್ದಾಡುವುದನ್ನು ಕಾಣುತ್ತೇವೆ. ಈ ಮಧ್ಯೆ ಝೀರೋಧ ಸಹ-ಸಂಸ್ಥಾಪಕ ನಿತಿನ್ ಕಾಮತ್ (Nithin Kamath) ಅವರು ತಮ್ಮ ಎಕ್ಸ್​​ನಲ್ಲಿ ಇಂಟರೆಸ್ಟಿಂಗ್ ಪೋಸ್ಟ್ ಹಂಚಿಕೊಂಡಿದ್ದಾರೆ. ಶ್ರೀಮಂತರಾಗಲು ಒನ್ ಪರ್ಸೆಂಟ್ ರೂಲ್ (1% rule) ಬಗ್ಗೆ ಮಾತನಾಡಿದ್ದಾರೆ. ಇನ್ನೂ ಕೆಲ ಉಪಯುಕ್ತ ಸಲಹೆ ನೀಡಿದ್ದಾರೆ.

‘ಶ್ರೀಮಂತರನ್ನಾಗಿಸುವಂತೆ ಯಾವುದಾದರೂ ಸ್ಟಾಕ್ ಟಿಪ್ ನೀಡಿ ಎನ್ನುವ ಮನವಿ ಹೆಚ್ಚಾಗಿ ನನಗೆ ಬರುತ್ತದೆ. ದುರದೃಷ್ಟ ಎಂದರೆ, ಶ್ರೀಮಂತರಾಗಲು ಯಾವುದೇ ಶಾರ್ಟ್​ಕಟ್ಸ್ ಇರೋದಿಲ್ಲ. ಸಂಯಮ ಮತ್ತು ಒಳ್ಳೆಯ ಅಭ್ಯಾಸಗಳಿಂದ ಮಾತ್ರ ಅದು ಸಾಧ್ಯ’ ಎಂದು ನಿತಿನ್ ಕಾಮತ್ ಹೇಳಿದ್ದಾರೆ.

ಇದನ್ನೂ ಓದಿ
Image
ಮಕ್ಕಳಿಗೆ ಆಸ್ತಿ ಕೊಡದ ಬಿಲ್ ಗೇಟ್ಸ್
Image
ಭಾರತೀಯರು ತಂತ್ರಜ್ಞಾನ ಕೀಳರಿಮೆ ಬಿಡಬೇಕು: ವಾಧವಾ
Image
ಭಾರತದಲ್ಲಿ ಮೊಬೈಲ್, ಟಿವಿ ಬೆಲೆ ಕಡಿಮೆಯಾಗುತ್ತಾ?
Image
ಭಾರತದ ಇಂಡಿಗೋ, ವಿಶ್ವದ ಅತಿಹೆಚ್ಚು ಮೌಲ್ಯದ ಏರ್​​ಲೈನ್ಸ್

‘ನಿಮಗೆ ಅಗತ್ಯ ಇಲ್ಲದಿರುವ ವಸ್ತುಗಳನ್ನು ಖರೀದಿಸುವ, ಅಥವಾ ಸಾಲ ಮಾಡಿ ಅದನ್ನು ಪಡೆಯುವ ಅಭ್ಯಾಸ ಬಿಟ್ಟುಬಿಡಿ’ ಎಂದು ಹೇಳಿರುವ ನಿತಿನ್ ಕಾಮತ್, ಹೆಲ್ತ್ ಇನ್ಷೂರೆನ್ಸ್ ಹೊಂದಿಲ್ಲದಿರುವುದೂ ಕೂಡ ಮತ್ತೊಂದು ಕೆಟ್ಟ ಅಭ್ಯಾಸ ಎಂದಿದ್ದಾರೆ.

ಇದನ್ನೂ ಓದಿ: Post Office FD plan: ಈ ಪೋಸ್ಟ್ ಆಫೀಸ್ ಠೇವಣಿ ಪ್ಲಾನ್ ಸಖತ್ ಆದಾಯ ಸೃಷ್ಟಿಸುವ ಮಾರ್ಗ

ನಿತಿನ್ ಕಾಮತ್ ತಮ್ಮ ಪೋಸ್ಟ್​​ನಲ್ಲಿ ಲರ್ನ್​ ಆ್ಯಪ್​​ನ ಸಿಇಒ ಪ್ರತೀಕ್ ಸಿಂಗ್ ಅವರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರತೀಕ್ ಸಿಂಗ್ ಅವರು ದೀರ್ಘಾವಧಿ ಸಂಪತ್ತು ಸೃಷ್ಟಿಗೆ 1% ತಂತ್ರವನ್ನು ತಿಳಿಸಿದ್ದಾರೆ.

ಏನಿದು 1% ತಂತ್ರ?

ಜನರು ತಾವು ಖರ್ಚು ಮಾಡುವ ಒಂದೊಂದು ಪೈಸೆಯ ಲೆಕ್ಕವನ್ನೂ ಬರೆದಿಡಬೇಕು. ಒಂದು ತಿಂಗಳಲ್ಲಿ ಎಷ್ಟು ವೆಚ್ಚ ಆಗುತ್ತದೆ, ಹೇಗೆ ಆಗುತ್ತದೆ ಎಂಬುದನ್ನು ಮೊದಲು ಕಂಡುಕೊಳ್ಳಬೇಕು. ಅದರಲ್ಲಿ ಯಾವುದು ಅನಗತ್ಯ ವೆಚ್ಚ ಅನಿಸುತ್ತದೋ ಅದನ್ನು ಬಿಡಲು ಯತ್ನಿಸಬೇಕು. ಮಾಸಿಕ ವೆಚ್ಚದಲ್ಲಿ ಶೇ. 1ರಷ್ಟನ್ನಾದರೂ ಉಳಿಸಬೇಕು ಎಂದು ಪ್ರತೀಕ್ ಸಿಂಗ್ ಆ ವಿಡಿಯೋದಲ್ಲಿ ಹೇಳಿದ್ದಾರೆ.

‘…ಉಳಿಸಿದ ಈ ಒಂದು ಪ್ರತಿಶತ ಹಣವನ್ನು ಶೇ. 10-12ರಷ್ಟು ಸಿಎಜಿಆರ್​​ನಲ್ಲಿ ಬೆಳೆಯುವ ಫಂಡ್​​ಗೆ ಹೂಡಿಕೆ ಮಾಡಬೇಕು. ಈ ಒಂದು ಸಣ್ಣ ಹೆಜ್ಜೆಯು ನಿಮಗೆ ದೀರ್ಘಾವಧಿಯಲ್ಲಿ ಉತ್ತಮ ಅಭ್ಯಾಸವಾಗುತ್ತದೆ’ ಎಂದಿದ್ದಾರೆ ಲರ್ನ್​​ಆ್ಯಪ್ ಸಂಸ್ಥಾಪಕರು.

ಇದನ್ನೂ ಓದಿ: ಮಾರುಕಟ್ಟೆ ಅಸ್ಥಿರತೆ ತಾತ್ಕಾಲಿಕ, ಮುಂದುವರಿಸಿ ನಿಮ್ಮ ಎಸ್​ಐಪಿ ಕಾಯಕ: ತಜ್ಞರ ಅನಿಸಿಕೆ

ಎಮರ್ಜೆನ್ಸಿ ಫಂಡ್ ಮುಖ್ಯ

ಜನರು ಹೂಡಿಕೆಗೆ ಇಳಿಯುವ ಮುನ್ನ ಎಮರ್ಜೆನ್ಸಿ ಫಂಡ್ ಕಟ್ಟುವುದು ಬಳ ಮುಖ್ಯ. ನಿಮ್ಮ ಮಾಸಿಕ ವೆಚ್ಚದ ಕನಿಷ್ಠ ಆರು ತಿಂಗಳಷ್ಟಾದರೂ ಹಣವನ್ನು ಸುಲಭ ಲಭ್ಯ ಸಾಧನಗಳಲ್ಲಿ ಇಡಬೇಕು. ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಬೇಕು. ಆ ಬಳಿಕ ಉಳಿಯುವ ಹಣವನ್ನು ಹೂಡಿಕೆಗೆ ಉಪಯೋಗಿಸಬೇಕು ಎನ್ನುವುದು ಪ್ರತೀಕ್ ಸಿಂಗ್ ಅವರ ಸಲಹೆ.

ಪ್ರತೀಕ್ ಅವರ ಈ ವಿಡಿಯೋವನ್ನು ಝೀರೋಧ ಸಿಇಒ ನಿತಿನ್ ಕಾಮತ್ ತಮ್ಮ ಎಕ್ಸ್ ಪೋಸ್ಡ್​​​ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:59 pm, Fri, 11 April 25

ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ