AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಡಿಎಸ್-ಟಿಸಿಎಸ್ ಪಾವತಿದಾರರಿಗೆ ರಿಲೀಫ್; ಡೆಡ್​ಲೈನ್​ನೊಳಗೆ ಈ ಕೆಲಸ ಮಾಡಿದರೆ ರದ್ದಾಗಲಿದೆ ಟ್ಯಾಕ್ಸ್ ನೋಟೀಸ್

Relief on TDS and TCS Collection: ನಿಷ್ಕ್ರಿಯ ಪ್ಯಾನ್ ಕಾರ್ಡ್‌ಗಳಿಂದಾಗಿ ಟಿಡಿಎಸ್/ಟಿಸಿಎಸ್ ಕಡಿತ ಅಥವಾ ಮರುಪಾವತಿಗಾಗಿ ನೋಟಿಸ್‌ಗಳನ್ನು ಪಡೆದ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಪರಿಹಾರ ನೀಡಿದೆ. ನಿಗದಿತ ಸಮಯದ ಮಿತಿಯೊಳಗೆ ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡಿದರೆ, ನೋಟಿಸ್‌ಗಳನ್ನು ರದ್ದುಗೊಳಿಸಲಾಗುತ್ತದೆ. ತೆರಿಗೆದಾರರ ದೂರುಗಳನ್ನು ಪರಿಹರಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಟಿಡಿಎಸ್-ಟಿಸಿಎಸ್ ಪಾವತಿದಾರರಿಗೆ ರಿಲೀಫ್; ಡೆಡ್​ಲೈನ್​ನೊಳಗೆ ಈ ಕೆಲಸ ಮಾಡಿದರೆ ರದ್ದಾಗಲಿದೆ ಟ್ಯಾಕ್ಸ್ ನೋಟೀಸ್
ಆದಾಯ ತೆರಿಗೆ ಇಲಾಖೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 22, 2025 | 11:23 AM

Share

ಟಿಡಿಎಸ್ ಕಡಿತ (Tax Deduction at Source) ಮತ್ತು ಟಿಸಿಎಸ್ ಸಂಗ್ರಹ (Tax Collection at Source) ಕಡಿಮೆಯಾಗಿದ್ದಕ್ಕಾಗಿ ನೋಟಿಸ್ ಪಡೆದ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆ (Income tax) ಪರಿಹಾರ ನೀಡಿದೆ. ಪ್ಯಾನ್-ಆಧಾರ್ ಲಿಂಕ್ ಮಾಡದ ಕಾರಣ ತೆರಿಗೆ ಪಾವತಿದಾರರಿಗೆ ಇಲಾಖೆಯಿಂದ ನೋಟಿಸ್ ಬಂದಿದೆ. ಈ ತೆರಿಗೆ ಪಾವತಿದಾರರು ಆದಾಯ ತೆರಿಗೆ ಇಲಾಖೆ ನೀಡಿದ ಗಡುವಿನೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡಿದರೆ ಅವರ ನೋಟಿಸ್‌ಗಳನ್ನು ರದ್ದುಗೊಳಿಸಲಾಗುತ್ತದೆ.

ಇದಲ್ಲದೆ, ಆಗಸ್ಟ್ 1, 2025 ರ ನಂತರ ಟಿಡಿಎಸ್ ಅಥವಾ ಟಿಸಿಎಸ್ ಪಾವತಿಸುವ ಅಥವಾ ಠೇವಣಿ ಇಡುವವರಿಗೆ ಸಹ ಪರಿಹಾರ ನೀಡಲಾಗಿದೆ. ನಿಷ್ಕ್ರಿಯ ಪ್ಯಾನ್ ಕಾರ್ಡ್ ಕಾರಣ ಅವರಿಗೆ ಈ ನೋಟೀಸ್ ಬಂದಿದೆ. ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ಅನ್ನು ಇನಾಪರೇಟಿವ್ ಎಂದು ವಿಭಾಗಿಸಲಾಗುತ್ತದೆ. ನಿಗದಿತ ಸಮಯದ ಮಿತಿಯೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡಿದರೆ, ಎಲ್ಲಾ ನೋಟೀಸ್​ಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಆದಾಯ ತೆರಿಗೆ ಇಲಾಖೆ ಹೇಳಿದ್ದೇನು?

ಆದಾಯ ತೆರಿಗೆ ಇಲಾಖೆಯು ಜುಲೈ 21, 2025 ರಂದು ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 206AA/206C ಅಡಿಯಲ್ಲಿ ಎರಡು ಷರತ್ತುಗಳನ್ನು ಪೂರೈಸುವ ಡಿಡಕ್ಟರ್ (ಟಿಡಿಎಸ್) ಅಥವಾ ಕಲೆಕ್ಟರ್​ಗೆ (ಟಿಸಿಎಸ್) ನೀಡಲಾದ ನೋಟೀಸ್ ಅನ್ನು ರದ್ದುಗೊಳಿಸಲಾಗುವುದು ಎಂದಿದೆ.

ಇದನ್ನೂ ಓದಿ: ಐಟಿ ರಿಟರ್ನ್ಸ್ ವೇಳೆ ಸುಳ್ಳು ಮಾಹಿತಿ ಕೊಟ್ಟು ತೆರಿಗೆ ವಂಚಿಸುವವರನ್ನು ಜಾಲಾಡುತ್ತಿದೆ ಇನ್ಕಮ್ ಟ್ಯಾಕ್ಸ್ ಇಲಾಖೆ

  1. ಏಪ್ರಿಲ್ 1, 2024 ರಿಂದ ಜುಲೈ 31, 2025 ರವರೆಗೆ ಮೊತ್ತವನ್ನು ಪಾವತಿಸಿದರೆ ಅಥವಾ ಠೇವಣಿ ಇಟ್ಟರೆ ಮತ್ತು ಸೆಪ್ಟೆಂಬರ್ 30, 2025 ರಂದು ಅಥವಾ ಅದಕ್ಕೂ ಮೊದಲು ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದರೆ, ಅವರ ನೋಟಿಸ್ ರದ್ದಾಗುತ್ತದೆ.
  2. ಆಗಸ್ಟ್ 1, 2025 ರಂದು ಅಥವಾ ನಂತರ ಮೊತ್ತವನ್ನು ಪಾವತಿಸಿದರೆ ಅಥವಾ ಠೇವಣಿ ಇಟ್ಟರೆ, ಮತ್ತು ಮೊತ್ತವನ್ನು ಪಾವತಿಸಿದ ಅಥವಾ ಠೇವಣಿ ಇಟ್ಟ ತಿಂಗಳ ಅಂತ್ಯದಿಂದ ಎರಡು ತಿಂಗಳೊಳಗೆ ಆಧಾರ್‌ನೊಂದಿಗೆ ಲಿಂಕ್ ಮಾಡುವ ಮೂಲಕ ಪ್ಯಾನ್ ಅನ್ನು ಸಕ್ರಿಯಗೊಳಿಸಿದರೆ, ಅದಕ್ಕೂ ವಿನಾಯಿತಿ ನೀಡಲಾಗುತ್ತದೆ.
ಟೈಮ್ ಫ್ರೇಮ್ ಡೆಡ್​ಲೈನ್
ಏಪ್ರಿಲ್ 1, 2024 ರಿಂದ ಜುಲೈ 31, 2025 ರವರೆಗೆ ಪಾವತಿಸಿದ ಅಥವಾ ಠೇವಣಿ ಮಾಡಿದ TDS/TCS ಸೆಪ್ಟೆಂಬರ್ 30, 2025 ರಂದು ಅಥವಾ ಅದಕ್ಕೂ ಮೊದಲು ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು.
ಆಗಸ್ಟ್ 1, 2025 ರಂದು ಅಥವಾ ನಂತರ ಪಾವತಿಸಿದ ಅಥವಾ ಠೇವಣಿ ಮಾಡಿದ TDS/TCS ಪ್ಯಾನ್ ಅನ್ನು ಪಾವತಿಸಿದ ಅಥವಾ ಠೇವಣಿ ಮಾಡಿದ ತಿಂಗಳ ಅಂತ್ಯದ ವೇಳೆಗೆ ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆ ಅಥವಾ ಕ್ರೆಡಿಟ್ ಮಾಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.

 ಅದರ ಪರಿಣಾಮ ಏನಾಗುತ್ತದೆ?

ನಿಷ್ಕ್ರಿಯ ಪ್ಯಾನ್ ಪ್ರಕರಣಗಳಲ್ಲಿ ನಿಗದಿತ ದರಕ್ಕಿಂತ ಕಡಿಮೆ ದರದಲ್ಲಿ ಟಿಡಿಎಸ್ ಕಡಿತಗೊಳಿಸಿದ ಅಥವಾ ಟಿಸಿಎಸ್ ಸಂಗ್ರಹಿಸಿದ ತೆರಿಗೆದಾರರು, ಗಡುವು ಮುಗಿಯುವ ಮೊದಲು ಪ್ಯಾನ್ ಕಾರ್ಡ್ ಅನ್ನು ಸಕ್ರಿಯಗೊಳಿಸಿದರೆ, ಟ್ಯಾಕ್ಸ್ ಡಿಮ್ಯಾಂಡ್​ನಿಂದ ಪರಿಹಾರ ಪಡೆಯುತ್ತಾರೆ ಎಂದು ಇಲಾಖೆಯ ಸುತ್ತೋಲೆ ಸ್ಪಷ್ಟವಾಗಿ ಹೇಳುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಐಟಿ ರಿಟರ್ನ್ಸ್ ಸಲ್ಲಿಸುವ ಅವಶ್ಯಕತೆ ಇಲ್ಲದವರು ಯಾರ‍್ಯಾರು? ಇಲ್ಲಿದೆ ಪಟ್ಟಿ

ಪರಿಹಾರ ನೀಡುವುದರ ಹಿಂದಿನ ಕಾರಣವೇನು?

ವಹಿವಾಟಿನ ಸಮಯದಲ್ಲಿ, ಮೊತ್ತವನ್ನು ಸ್ವೀಕರಿಸುವ ಅಥವಾ ಪಾವತಿ ಮಾಡುವ ವ್ಯಕ್ತಿಯ (deductee/collectee) ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿಲ್ಲ ಎಂದು ಅನೇಕ ತೆರಿಗೆ ಪಾವತಿದಾರರಿಂದ ದೂರುಗಳು ಬರುತ್ತಿದ್ದರಿಂದ ಆದಾಯ ತೆರಿಗೆ ಇಲಾಖೆಯು ಈ ಪರಿಹಾರವನ್ನು ನೀಡಿದೆ. ಈ ಕಾರಣದಿಂದಾಗಿ, ಅವರಿಗೆ ಕಡಿಮೆ ಕಡಿತ/ಸಂಗ್ರಹಣೆಯ ನೋಟೀಸ್​ಗಳು ಬರಲು ಪ್ರಾರಂಭಿಸಿದವು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು