AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಸ್ಲಾ ರೋಬೋಟ್ಯಾಕ್ಸಿ ಆರಂಭ; ಭಾರತದಲ್ಲಿ ಡ್ರೈವರ್​​ಲೆಸ್ ಕಾರ್ ಸರ್ವಿಸ್ ಸಾಧ್ಯವಾ? ಸ್ಥಳೀಯ ಸ್ಟಾರ್ಟಪ್​​ಗಳಿಂದಲೂ ನಡೆದಿದೆ ಪ್ರಯತ್ನ

Tesla Robotaxis hit roads in US: ಟೆಸ್ಲಾ ಕಂಪನಿಯ ರೋಬೋಟ್ಯಾಕ್ಸಿ ಎನ್ನುವ ಚಾಲಕರಹಿತ ವಾಹನ ಸೇವೆ ಅಮೆರಿಕದ ಆಸ್ಟಿನ್ ನಗರದಲ್ಲಿ ಮೊದಲಿಟ್ಟಿದೆ. ಡ್ರೈವರ್​​ಲೆಸ್ ಕಾರು ಬಿಡುಗಡೆ ಮಾಡಿರುವ ಗೂಗಲ್-ಊಬರ್ ಮತ್ತು ಅಮೇಜಾನ್ ಸಾಲಿಗೆ ಟೆಸ್ಲಾ ಸೇರ್ಪಡೆಯಾಗಿದೆ. ಭಾರತದಲ್ಲೂ ಕೆಲ ಸ್ಟಾರ್ಟಪ್​​ಗಳು ಆಟೊಮೋಶನ್ ವಾಹನಗಳ ಅಭಿವೃದ್ಧಿಯಲ್ಲಿವೆ. ಮಹೀಂದ್ರ, ಅಶೋಕ್ ಲೇಲ್ಯಾಂಡ್, ಟಾಟಾ ಮೋಟಾರ್ ಮೊದಲಾದ ಕಂಪನಿಗಳು ವಿವಿಧ ಸ್ಟಾರ್ಟಪ್​ಗಳ ಜೊತೆ ಸೇರಿ ಚಾಲಕರಹಿತ ವಾಹನಗಳನ್ನು ತಯಾರಿಸುತ್ತಿವೆ.

ಟೆಸ್ಲಾ ರೋಬೋಟ್ಯಾಕ್ಸಿ ಆರಂಭ; ಭಾರತದಲ್ಲಿ ಡ್ರೈವರ್​​ಲೆಸ್ ಕಾರ್ ಸರ್ವಿಸ್ ಸಾಧ್ಯವಾ? ಸ್ಥಳೀಯ ಸ್ಟಾರ್ಟಪ್​​ಗಳಿಂದಲೂ ನಡೆದಿದೆ ಪ್ರಯತ್ನ
ರೋಬೋಟ್ಯಾಕ್ಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 23, 2025 | 2:11 PM

Share

ನವದೆಹಲಿ, ಜೂನ್ 23: ಇಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿ ಕೊನೆಗೂ ತನ್ನ ಬಹುನಿರೀಕ್ಷಿತ ರೋಬೋಟ್ಯಾಕ್ಸಿ ಸೇವೆಯನ್ನು (Robotaxi service) ಆರಂಭಿಸಿದೆ. ಟೆಸ್ಲಾದ ಮುಖ್ಯ ಕಚೇರಿ ಇರುವ ಆಸ್ಟಿನ್ ನಗರದಲ್ಲಿ ಅದರ ಡ್ರೈವರ್​​ಲೆಸ್ ಕಾರ್​​ಗಳು (driverless vehicles) ಸಂಚರಿಸಲು ಆರಂಭಿಸಿವೆ. ಸೋಷಿಯಲ್ ಮೀಡಿಯಾದಲ್ಲಿ ಕೆಲವರು ರೋಬೋಟ್ಯಾಕ್ಸಿಯಲ್ಲಿ ಪ್ರಯಾಣಿಸಿದ ಫೋಟೋ, ವಿಡಿಯೋ, ಅನುಭವ ಹಂಚಿಕೊಂಡಿದ್ದಾರೆ.

ಇಲಾನ್ ಮಸ್ಕ್ ತಮ್ಮ ಎಕ್ಸ್ ಅಕೌಂಟ್​​ನಿಂದ ರೋಬೋಟ್ಯಾಕ್ಸಿ ಸೇವೆ ಆರಂಭವಾಗಿರುವುದನ್ನು ಪ್ರಕಟಿಸಿದ್ದಾರೆ. ಪ್ರತೀ ಟ್ರಿಪ್​​ಗೆ 4.20 ಡಾಲರ್ (ಸುಮಾರು 360 ರೂ) ದರ ನಿಗದಿ ಮಾಡಿರುವುದನ್ನು ತಿಳಿಸಿದ್ದಾರೆ. ನಿರ್ದಿಷ್ಟ ಜಿಯೋಫೆನ್ಸ್ಡ್ ಪ್ರದೇಶದಲ್ಲಿ ಇದರ ಸಂಚಾರ ಇರಲಿದೆ. ಜಿಯೋಫೆನ್ಸ್ಡ್ ಎಂದರೆ ನಿಗದಿತ ಭೂಭಾಗವಾಗಿರಬಹುದು.

ಗೂಗಲ್-ಊಬರ್, ಅಮೇಜಾನ್​​ನಿಂದಲೂ ಚಾಲ್ತಿಯಲ್ಲಿ ಡ್ರೈವರ್​​ಲೆಸ್ ಕ್ಯಾಬ್ ಪ್ರಯೋಗ

ಗೂಗಲ್ ಮತ್ತು ಊಬರ್ ಸಂಸ್ಥೆಗಳು ಜಂಟಿಯಾಗಿ ವೇಮೋ ಸರ್ವಿಸ್ ಅನ್ನು ಕಳೆದ ವರ್ಷ ಆರಂಭಿಸಿದ್ದವು. ವೇಮೋ ಎನ್ನುವ ಈ ಸರ್ವಿಸ್ ಪರಿಣಾಮಕಾರಿಯಾಗಿದೆಯಾದರೂ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಅಮೆರಿಕದ ಲಾಸ್ ಏಂಜಲಿಸ್, ಆಸ್ಟಿನ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಫೀನಿಕ್ಸ್ ನಗರಗಳಲ್ಲಿ 1,500ಕ್ಕೂ ಅಧಿಕ ಚಾಲಕರಹಿತ ವಾಹನಗಳು ಓಡಾಟ ನಡೆಸುತ್ತಿವೆ.

ಇದನ್ನೂ ಓದಿ: ಪಿಎಂ ಸೋಲಾರ್: ಕಡಿಮೆ ಅಳವಡಿಕೆ ರಾಜ್ಯಗಳಲ್ಲಿ ಕರ್ನಾಟಕ; ಮನೆ ಮೇಲಿನ ಸೌರಯೋಜನೆ ಬಗ್ಗೆ ಮಾಹಿತಿ

ಹಾಗೆಯೆ, ಅಮೇಜನ್ ಕಂಪನಿಯ ಝೂಕ್ಸ್ (Zoox) ಕೂಡ ಇತ್ತೀಚೆಗೆ ಟ್ರಯಲ್ ರನ್ ಆರಂಭಿಸಿದೆ.

ಭಾರತದಲ್ಲೂ ನಡೆಯುತ್ತಿದೆ ವಿವಿಧ ಸ್ಟಾರ್ಟಪ್​​ಗಳಿಂದ ಪ್ರಯತ್ನ…

ಅಮೆರಿಕದಂತಹ ಸ್ಪಷ್ಟ ಹಾಗೂ ಉತ್ತಮ ಇನ್​ಫ್ರಾಸ್ಟ್ರಕ್ಚರ್ ಇರುವ ರಸ್ತೆಗಳಲ್ಲಿ ಡ್ರೈವರ್​ಲೆಸ್ ಕಾರುಗಳು ಕೆಲ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದರೆ, ಭಾರತದಂತಹ ಕ್ಲಿಷ್ಟಕರ ಸೌಕರ್ಯ ವ್ಯವಸ್ಥೆಯಲ್ಲಿ ಅವುಗಳಿಗೆ ಸಾಧ್ಯವಾ ಎನ್ನುವ ಪ್ರಶ್ನೆ ಇದೆ.

ರಸ್ತೆಯಲ್ಲಿ ಸರಿಯಾದ ಚಿಹ್ನೆಗಳಿಲ್ಲದಿರುವುದು, ಲೇನ್ ವರ್ಗೀಕರಣ ಇಲ್ಲದಿರುವುದು ಇತ್ಯಾದಿ ನಾನಾ ಸಮಸ್ಯೆಗಳಿವೆ. ಅವುಗಳ ಮಧ್ಯೆ ಹಲವು ಕಂಪನಿಗಳು ಮತ್ತು ಸ್ಟಾರ್ಟಪ್​​ಗಳು ಡ್ರೈವರ್​ಲೆಸ್ ವಾಹನಗಳ ಪ್ರಯೋಗ ನಡೆಸುತ್ತಿವೆ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ತಂದಿದೆ.

ಇದನ್ನೂ ಓದಿ: Sahkari Taxi: ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’; ಚಾಲಕರಿಗೆ ಡಬಲ್ ಧಮಾಕ; ಆದಾಯದಲ್ಲಿ ಸಿಂಹಪಾಲು ಜೊತೆಗೆ ಷೇರುಪಾಲು

ಬೆಂಗಳೂರಿನ ಮೈನಸ್ ಝೀರೋ ಎನ್ನುವ ಸ್ಟಾರ್ಟಪ್ ಮತ್ತು ಅಶೋಕ್ ಲೇಲ್ಯಾಂಡ್ ಸಂಸ್ಥೆ ಜಂಟಿಯಾಗಿ ಡ್ರೈವರ್​​ಲೆಸ್ ವಾಹನ ಅಭಿವೃದ್ಧಿಪಡಿಸುತ್ತಿವೆ. ಟಾಟಾ ಮೋಟಾರ್ಸ್, ಟೆಕ್ ಮಹೀಂದ್ರ, ಬೆಂಗಳೂರಿನ ಸ್ವಾಯತ್ ರೋಬೋಸ್, ನಯನ್ ಟೆಕ್ನಾಲಜೀಸ್, ರೋಸ್​ಎಐ ಮೊದಲಾದ ಕೆಲವಾರು ಸ್ಟಾರ್ಟಪ್​​ಗಳು ಮತ್ತು ಕಂಪನಿಗಳು ಆಟೊಮೋಟಿವ್ ವಾಹನಗಳ ಅಭಿವೃದ್ಧಿಯಲ್ಲಿ ತೊಡಗಿವೆ. ಸಮುದ್ರದ ಬಂದರು, ಫ್ಯಾಕ್ಟರಿ ಅಂಗಣ ಇತ್ಯಾದಿ ಕಡೆ ಈ ಚಾಲಕರಹಿತ ವಾಹನಗಳನ್ನು ಓಡಿಸಲಾಗುತ್ತಿದೆ. ಬೆಂಗಳೂರಿನಂಥ ಭಾರೀ ಟ್ರಾಫಿಕ್ ಇರುವ ನಗರಗಳಲ್ಲಿ ಇವುಗಳು ಸುಲಭವಾಗಿ ಓಡಾಡುವಂತಾಗಲು ದಶಕವಾದರೂ ಬೇಕಾಗಬಹುದು ಎನ್ನುತ್ತಾರೆ ಪರಿಣಿತರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!