AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FIFA World Cup: ತಮಿಳುನಾಡಿನ ನಾಮಕ್ಕಲ್​ನಿಂದ ಕತಾರ್​ಗೆ ಮೊಟ್ಟೆ ರಫ್ತಿನಲ್ಲಿ ಮೂರು ಪಟ್ಟು ಹೆಚ್ಚಳ

ಪ್ರತಿ ತಿಂಗಳು 10 ಕಂಟೇನರ್​ ಮೊಟ್ಟೆಗಳನ್ನು ಕತಾರ್​ಗೆ ಕಳುಹಿಸಿಕೊಡಲಾಗುತ್ತಿತ್ತು. ಈಗ 30 ಕಂಟೇನರ್​ಗಳಲ್ಲಿ ಮೊಟ್ಟೆ ಕಳುಹಿಸಿಕೊಡಲಾಗುತ್ತಿದೆ ಎಂದು ನಾಮಕ್ಕಲ್ ಮೊಟ್ಟೆ ರಫ್ತುದಾರರ ಮತ್ತು ಫಾರ್ಮ್ ಮಾಲೀಕರ ವ್ಯಾಪಾರಿ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ವಿ. ಸೆಂಥಿಲ್ ತಿಳಿಸಿದ್ದಾರೆ.

FIFA World Cup: ತಮಿಳುನಾಡಿನ ನಾಮಕ್ಕಲ್​ನಿಂದ ಕತಾರ್​ಗೆ ಮೊಟ್ಟೆ ರಫ್ತಿನಲ್ಲಿ ಮೂರು ಪಟ್ಟು ಹೆಚ್ಚಳ
ನಾಮಕ್ಕಲ್​ನ ಕುಕ್ಕುಟೋದ್ಯಮ ಘಟಕದ ಚಿತ್ರ
Follow us
TV9 Web
| Updated By: Ganapathi Sharma

Updated on: Nov 22, 2022 | 3:37 PM

ನಾಮಕ್ಕಲ್: ಫಿಫಾ ವಿಶ್ವಕಪ್ (FIFA World Cup) ಆಯೋಜಿಸಿರುವ ಕತಾರ್​ಗೆ ತಮಿಳುನಾಡಿನ (Tamil Nadu) ನಾಮಕ್ಕಲ್​ನಿಂದ (Namakkal) ಮಾಡಲಾಗುತ್ತಿರುವ ಮೊಟ್ಟೆ ರಫ್ತಿನಲ್ಲಿ (Egg exporters) ಮೂರು ಪಟ್ಟು ಹೆಚ್ಚಳವಾಗಿದೆ. ಇದು ನಾಮಕ್ಕಲ್ ಜಿಲ್ಲೆಯ ಕುಕ್ಕುಟೋದ್ಯಮಿಗಳ ಸಂತಸಕ್ಕೆ ಕಾರಣವಾಗಿದೆ. ನಾಮಕ್ಕಲ್​ನಿಂದ ಮೊಟ್ಟೆ ರಫ್ತಾಗುತ್ತಿರುವ ದೇಶಗಳ ಪೈಕಿ ಕತಾರ್ ಪ್ರಮುಖವಾದದ್ದು. ಫುಟ್​ಬಾಲ್ ವಿಶ್ವಕಪ್ ಕಾರಣ ಮೊಟ್ಟೆಯ ಬೇಡಿಕೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಪ್ರತಿ ತಿಂಗಳು 50 ಲಕ್ಷದಷ್ಟು ಮೊಟ್ಟೆಗಳು ಕತಾರ್​ಗೆ ರಫ್ತಾಗುತ್ತಿದ್ದವು. ಈ ಸಂಖ್ಯೆ ಈಗ 1.50 ಕೋಟಿ ತಲುಪಿದೆ ಎಂದು ನಾಮಕ್ಕಲ್ ಮೊಟ್ಟೆ ರಫ್ತುದಾರರ ಮತ್ತು ಫಾರ್ಮ್ ಮಾಲೀಕರ ವ್ಯಾಪಾರಿ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ವಿ. ಸೆಂಥಿಲ್ ತಿಳಿಸಿದ್ದಾರೆ.

‘ಪ್ರತಿ ತಿಂಗಳು 10 ಕಂಟೇನರ್​ ಮೊಟ್ಟೆಗಳನ್ನು ಕತಾರ್​ಗೆ ಕಳುಹಿಸಿಕೊಡಲಾಗುತ್ತಿತ್ತು. ಈಗ 30 ಕಂಟೇನರ್​ಗಳಲ್ಲಿ ಮೊಟ್ಟೆ ಕಳುಹಿಸಿಕೊಡಲಾಗುತ್ತಿದೆ. ಕತಾರ್​ಗೆ ಕಳುಹಿಸುವ ಪ್ರತಿ ಮೊಟ್ಟೆಗೆ 7 ರೂ. ದರ ನಿಗದಿಪಡಿಸಿದ್ದೇವೆ. ಮೊಟ್ಟೆಯ ಉತ್ಪಾದನಾ ವೆಚ್ಚ 5 ರೂ. ಆಗುತ್ತದೆ. ಕತಾರ್​ಗೆ ಕಳುಹಿಸಿಕೊಡಲು ಪ್ರತಿ ಮೊಟ್ಟೆಗೆ 2 ರೂ.ನಂತೆ ವೆಚ್ಚವಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಪ್ರತಿ ದಿನ 5 – 6 ಕೋಟಿ ಮೊಟ್ಟೆ ಉತ್ಪಾದನೆ

ಇದನ್ನೂ ಓದಿ
Image
ಯುಪಿಐ ಮೂಲಕ ಎಟಿಎಂನಿಂದ ಹಣ ವಿತ್​ಡ್ರಾ ಮಾಡುವುದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ
Image
ಇ-ಕಾಮರ್ಸ್ ವೆಬ್​​ಸೈಟ್​ಗಳಲ್ಲಿ ನಕಲಿ ರಿವ್ಯೂಗೆ ಬೀಳಲಿದೆ ಕಡಿವಾಣ; ಶೀಘ್ರದಲ್ಲೇ ಬರಲಿದೆ ನಿಯಮ
Image
It Jobs; ಐಟಿ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿದ್ದೀರಾ? ಶೀಘ್ರದಲ್ಲೇ ನಿಮಗಿದೆ ಸಿಹಿ ಸುದ್ದಿ
Image
ಡಿಜಿಟಲ್ ಪಾವತಿಗೆ ಶುಲ್ಕ: ರಿಸರ್ವ್ ಬ್ಯಾಂಕ್ ಜೊತೆಗೆ ಮಾತುಕತೆ ಆರಂಭಿಸಿದ ಪೇಮೆಂಟ್ಸ್ ಕಾರ್ಪೊರೇಷನ್

ನಾಮಕ್ಕಲ್​ನಲ್ಲಿ ಸುಮಾರು 1,100 ಪೌಲ್ಟ್ರಿ ಫಾರ್ಮ್​ಗಳಿದ್ದು ಪ್ರತಿ ದಿನ 5ರಿಂದ 6 ಕೋಟಿ ಮೊಟ್ಟೆ ಉತ್ಪಾದಿಸಲಾಗುತ್ತದೆ. ಇಲ್ಲಿ ತಯಾರಾದ ಮೊಟ್ಟೆಗಳನ್ನು ದೇಶದ ಕೆಲವೇ ಕಡೆಗಳಿಗೆ ಕಳುಹಿಸಿಕೊಡಲಾಗುತ್ತದೆ. ಆದರೆ ಸೌದಿ ಅರೇಬಿಯಾ, ಕತಾರ್, ಇರಾನ್, ಇರಾಕ್, ಒಮಾನ್, ಬಹ್ರೈನ್ ಹಾಗೂ ಮಾಲ್ಡೀವ್ಸ್​ಗಳಿಗೆ ರಫ್ತಾಗುತ್ತದೆ. ಈ ದೇಶಗಳಿಗೆ ಪ್ರತಿ ತಿಂಗಳು 2 ಕೋಟಿ ಮೊಟ್ಟೆ ರಫ್ತಾಗುತ್ತದೆ ಎಂದು ನಾಮಕ್ಕಲ್​​ನ ರಫ್ತುದಾರರು ಹೇಳಿದ್ದಾರೆ.

ರಷ್ಯಾ – ಉಕ್ರೇನ್ ಯುದ್ಧವೂ ಕಾರಣ

ಕತಾರ್ ಸೇರಿದಂತೆ ಇತರ ದೇಶಗಳು ಭಾರತದಿಂದ ಹೆಚ್ಚು ಮೊಟ್ಟೆ ಖರೀದಿಸಲು ಉಕ್ರೇನ್-ರಷ್ಯಾ ನಡುವಣ ಯುದ್ಧ ಕೂಡ ಪ್ರಮುಖ ಕಾರಣ. ಯುದ್ಧದ ನಂತರ ಪೌಲ್ಟ್ರಿ ಆಹಾರ ಮತ್ತು ಕಚ್ಚಾ ವಸ್ತುಗಳ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಾಯಿತು. ಈ ಕಾರಣದಿಂದ ಅತಿ ಹೆಚ್ಚು ಮೊಟ್ಟೆ ಉತ್ಪಾದಿಸುವ ದೇಶವಾದ ಟರ್ಕಿ ದರ ಹೆಚ್ಚಳ ಮಾಡಿತು. 360 ಮೊಟ್ಟೆಗಳುಳ್ಳ ಒಂದು ಬಾಕ್ಸ್​ಗೆ ಟರ್ಕಿಯಲ್ಲಿ ಸಾಮಾನ್ಯವಾಗಿ 18ರಿಂದ 20 ಡಾಲರ್ ಇರುತ್ತಿತ್ತು. ಆದರೆ, ಕಳೆದ ತಿಂಗಳು ಇದನ್ನು 36 ಡಾಲರ್​ಗೆ ಹೆಚ್ಚಿಸಲಾಗಿತ್ತು. ಟರ್ಕಿಯ ಮೊಟ್ಟೆ ದರಕ್ಕೆ ಹೋಲಿಸಿದರೆ ನಾಮಕ್ಕಲ್ ಮೊಟ್ಟೆಯ ದರ ಕಡಿಮೆ ಇದೆ. ಹೀಗಾಗಿ ಯುಎಇ, ಕತಾರ್ ಹಾಗೂ ಒಮಾನ್​ನಂಥ ದೇಶಗಳು ನಮ್ಮಿಂದ ಹೆಚ್ಚು ಮೊಟ್ಟೆ ಖರೀದಿಗೆ ಮುಂದಾಗಿವೆ ಎಂದು ‘ಟಿವಿ 9 ನೆಟ್​ವರ್ಕ್​’ನ ಅಂಗಸಂಸ್ಥೆ ‘ನ್ಯೂಸ್ 9’ಗೆ ನಾಮಕ್ಕಲ್​ನ ರಫ್ತು ಉದ್ಯಮಿ ಎನ್. ಧರ್ಮಲಿಂಗಂ ತಿಳಿಸಿದ್ದಾರೆ.

ಈ ಮಧ್ಯೆ, ಹಕ್ಕಿ ಜ್ವರ ಮುಕ್ತ ಮೊಟ್ಟೆ ಉತ್ಪಾದನಾ ವಲಯ ಎಂಬ ಟ್ಯಾಗ್​ ಅನ್ನು ನಾಮಕ್ಕಲ್​ಗೆ ನೀಡಬೇಕು ಎಂದು ರಫ್ತುದಾರರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದರಿಂದ ರಫ್ತು ಹೆಚ್ಚಳಕ್ಕೆ ಇನ್ನಷ್ಟು ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ
ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಬೆಂಗಳೂರಿಗೆ ಬೇಕು ಎಲೆಕ್ಟ್ರಿಕ್ ಬಸ್​ಗಳು
ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಬೆಂಗಳೂರಿಗೆ ಬೇಕು ಎಲೆಕ್ಟ್ರಿಕ್ ಬಸ್​ಗಳು
ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ