Bengaluru: ಬೆಂಗಳೂರು ಟು ಅಗಾರ್ತಲ; ಆಗಸ್ಟ್ 1ರಿಂದ ವಿಸ್ತಾರ ಏರ್​ಲೈನ್ಸ್ ವಿಮಾನ ಸೇವೆ

Vistara Airlines Flight Agartala to Bengaluru: ತ್ರಿಪುರಾ ರಾಜ್ಯದ ರಾಜಧಾನಿ ಅಗಾರ್ತಲದಿಂದ ಬೆಂಗಳೂರಿಗೆ ಒಂದು ವಿಮಾನ ಹಾರಾಟ ನಡೆಸಲು ವಿಸ್ತಾರ ಏರ್​ಲೈನ್ ನಿರ್ಧರಿಸಿದೆ. ಆಗಸ್ಟ್ 1ರಿಂದ ಇದರ ಸೇವೆ ಇರಲಿದೆ.

Bengaluru: ಬೆಂಗಳೂರು ಟು ಅಗಾರ್ತಲ; ಆಗಸ್ಟ್ 1ರಿಂದ ವಿಸ್ತಾರ ಏರ್​ಲೈನ್ಸ್ ವಿಮಾನ ಸೇವೆ
ವಿಸ್ತಾರಾ ಏರ್​ಲೈನ್ಸ್ ವಿಮಾನ
Follow us
|

Updated on: May 31, 2023 | 1:23 PM

ಬೆಂಗಳೂರು: ತ್ರಿಪುರಾ ರಾಜ್ಯದ ರಾಜಧಾನಿ ಅಗಾರ್ತಲದಿಂದ ಬೆಂಗಳೂರಿಗೆ ಒಂದು ವಿಮಾನ ಹಾರಾಟ ನಡೆಸಲು ವಿಸ್ತಾರ ಏರ್​ಲೈನ್ (Vistara Airlines) ನಿರ್ಧರಿಸಿದೆ. ಆಗಸ್ಟ್ 1ರಿಂದ ಇದರ ಸೇವೆ ಇರಲಿದೆ. ಇದರೊಂದಿಗೆ ಅಗಾರ್ತಲ ಮತ್ತು ಬೆಂಗಳೂರು ಮಾರ್ಗದಲ್ಲಿ ಒಟ್ಟು 4 ವಿಮಾನಗಳ ಹಾರಾಟ ನಡೆಯಲಿದೆ. ಇಂಡಿಗೋ ಏರ್​ಲೈನ್ಸ್ ಮತ್ತು ಆಕಾಸ ಏರ್​ಲೈನ್ಸ್ ಸಂಸ್ಥೆಗಳು 3 ವಿಮಾನಗಳನ್ನು ಈ ಮಾರ್ಗದಲ್ಲಿ ಚಲಾಯಿಸುತ್ತಿವೆ. ಇಂಡಿಗೋ ಮತ್ತು ಆಕಾಸದ ಸಾಲಿಗೆ ವಿಸ್ತಾರ ಸೇರಿಕೊಂಡಿದೆ. ಯಾವ್ಯಾವ ದಿನಗಳಂದು ವಿಸ್ತಾರ ವಿಮಾನವು ಬೆಂಗಳೂರು ಮತ್ತು ಅಗಾರ್ತಲ ಮಧ್ಯೆ ಸಂಚರಿಸಲಿದೆ ಎಂಬ ಮಾಹಿತಿ ಇನ್ನಷ್ಟೇ ಬರಬೇಕಿದೆ.

‘ಆಗಸ್ಟ್ 1ರಿಂದ ಅಗಾರ್ತಲ ಮತ್ತು ಬೆಂಗಳೂರು ಮಾರ್ಗದಲ್ಲಿ ಒಂದು ಫ್ಲೈಟ್ ಬಿಡಲು ವಿಸ್ತಾರ ಯೋಜಿಸಿದೆ. ಬೆಂಗಳೂರಿನಿಂದ ವಿಮಾನ ಹೊರಟು ನೇರವಾಗಿ ಅಗಾರ್ತಲಗೆ ಬಂದಿಳಿಯಲಿದೆ. ಇಲ್ಲಿಂದ ವಾಪಸ್ ಹೋಗುವಾಗ ಅಸ್ಸಾಂನ ಗುವಾಹತಿ ಮೂಲಕ ಬೆಂಗಳೂರು ತಲುಪಲಿದೆ. ಇದರಿಂದ ಬಹಳ ಮಂದಿಗೆ ಅನುಕೂಲವಾಗಲಿದೆ,’ ಎಂದು ತ್ರಿಪುರಾದ ಮಹಾರಾಜ ಬೀರ್ ಬಿಕ್ರಮ್ ವಿಮಾನ ನಿಲ್ದಾಣ (ಎಂಬಿಬಿ ಏರ್​ಪೋರ್ಟ್) ನಿರ್ದೇಶಕ ಕೆ.ಸಿ. ಮೀನಾ ಹೇಳಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿNew Rules In June 2023: ಇ-ವಾಹನ ಬೆಲೆ ಹೆಚ್ಚಳ; ಎಲ್​ಪಿಜಿ ಬೆಲೆ ಇಳಿಕೆಯಾಗುತ್ತಾ? ಜೂನ್ 1ರಿಂದ ಏನೇನು ಹಣಕಾಸು ಬದಲಾವಣೆ? ಇಲ್ಲಿದೆ ಡೀಟೇಲ್ಸ್

ಬೆಂಗಳೂರಿನಲ್ಲಿ ಈಶಾನ್ಯ ಭಾರತದ ರಾಜ್ಯಗಳಿಂದ ಬಂದವರು ಬಹಳ ಮಂದಿ ನೆಲಸಿದ್ದಾರೆ. ಅಸ್ಸಾಂ, ಮೇಘಾಲಯ, ತ್ರಿಪುರಾ, ಮಣಿಪುರ ಮತ್ತು ಸಿಕ್ಕಿಂ ರಾಜ್ಯಗಳ ಬಹಳಷ್ಟು ಜನರು ಬೆಂಗಳೂರಿನಲ್ಲಿದ್ದಾರೆ. ಹೀಗಾಗಿ, ಬೆಂಗಳೂರು ಮತ್ತು ಅಗಾರ್ತಲ ಮಾರ್ಗದಲ್ಲಿ ವಿಮಾನಗಳಿಗೆ ಬಹಳ ಬೇಡಿಕೆ ಇದೆ. ತ್ರಿಪುರಾ ಸಿಎಂ ಮಾಣಿಕ್ ಸಾಹ ಅವರು ಈ ಮಾರ್ಗದಲ್ಲಿ ಇನ್ನಷ್ಟು ವಿಮಾನ ಹಾರಾಟ ಆರಂಭಿಸುವಂತೆ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಈ ಹಿಂದೆ ಒತ್ತಾಯಿಸಿದ್ದರು.

ಸದ್ಯ, ತ್ರಿಪುರಾದ ಎಂಬಿಬಿ ಏರ್​ಪೋರ್ಟ್​ನಲ್ಲಿ 4 ಏರ್​ಲೈನ್ಸ್​ಗೆ ಸೇರಿದ 34-36 ವಿಮಾನಗಳು ದಿನವೂ ಹಾರಾಡುತ್ತವೆ. ದಿನಕ್ಕೆ 4,500 ಪ್ರಯಾಣಿಕರು ಓಡಾಡುತ್ತಾರೆ.

ಇದನ್ನೂ ಓದಿNevin Shetty: ಅಮೆರಿಕದಲ್ಲಿ ನವೀನ್ ಶೆಟ್ಟಿ ಕರ್ಮಕಾಂಡ; ಕಂಪನಿಯ 290 ಕೋಟಿ ರೂ ಕದ್ದು ಎಲ್ಲಾ ಕಳೆದುಕೊಂಡ ಮಾಜಿ ಸಿಎಫ್​ಒ

ಬೆಂಗಳೂರಿನಿಂದ ಈಶಾನ್ಯ ಭಾರತದ ಎಲ್ಲಾ ರಾಜ್ಯಗಳ ರಾಜಧಾನಿ ನಗರಿಗಳಿಗೂ ವಿಮಾನ ಹಾರಾಟ ಇದೆ. ಗುವಾಹಟಿಗೆ ಹೆಚ್ಚು ಫ್ಲೈಟ್​ಗಳಿವೆ. ಬೆಂಗಳೂರಿನಿಂದ ಅಗಾರ್ತಲಗೆ ಹೋಗುವ ವಿಮಾನಗಳ ದರ 7,500 ರೂನಿಂದ 10,000 ರೂವರೆಗೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಜಾಬ್‌ನಲ್ಲಿ ಪೆಟ್ರೋಲ್ ಪಂಪ್‌ಗೆ ಗ್ರೆನೇಡ್ ಎಸೆದು ಬೆದರಿಕೆ
ಪಂಜಾಬ್‌ನಲ್ಲಿ ಪೆಟ್ರೋಲ್ ಪಂಪ್‌ಗೆ ಗ್ರೆನೇಡ್ ಎಸೆದು ಬೆದರಿಕೆ
ಪೆಟ್ರೋಲ್​ ಬಂಕ್​ನಲ್ಲಿ ಪ್ರೇಯಸಿಯನ್ನು ನೆಲಕ್ಕೆ ಕೆಡವಿ ಹೊಡೆದ ವ್ಯಕ್ತಿ
ಪೆಟ್ರೋಲ್​ ಬಂಕ್​ನಲ್ಲಿ ಪ್ರೇಯಸಿಯನ್ನು ನೆಲಕ್ಕೆ ಕೆಡವಿ ಹೊಡೆದ ವ್ಯಕ್ತಿ
ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ಬಿಗ್ ಬಾಸ್ ಮನೆಯಲ್ಲಿ ಧನರಾಜ್​ಗೆ ಹಾಡಿನ ಮೂಲಕ ಬುದ್ಧಿ ಹೇಳಿದ ಹನುಮಂತ
ಬಿಗ್ ಬಾಸ್ ಮನೆಯಲ್ಲಿ ಧನರಾಜ್​ಗೆ ಹಾಡಿನ ಮೂಲಕ ಬುದ್ಧಿ ಹೇಳಿದ ಹನುಮಂತ
ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ