AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವರ್ಷ ಭಾರತ, ಪಾಕಿಸ್ತಾನ ಆರ್ಥಿಕ ಬೆಳವಣಿಗೆ ಹೇಗಿರುತ್ತೆ?; ವಿಶ್ವಬ್ಯಾಂಕ್​ನಿಂದ ಹೋಲಿಕೆ

Comparing Economies of India, Pakistan and Other Countries: ದಕ್ಷಿಣ ಏಷ್ಯಾ ದೇಶಗಳ ಆರ್ಥಿಕತೆ ನಿರೀಕ್ಷಿತ ರೀತಿಯಲ್ಲಿ ಬೆಳೆಯುತ್ತಿಲ್ಲ ಎಂದು ವಿಶ್ವಬ್ಯಾಂಕ್​ನ ವರದಿಯೊಂದು ಹೇಳಿದೆ. ಭಾರತವೂ ಒಳಗೊಂಡಂತೆ ಈ ಭಾಗದ ವಿವಿಧ ದೇಶಗಳಲ್ಲಿ ಮಾನವ ಸಂಪನ್ಮೂಲ ಹೆಚ್ಚಿದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳುವಷ್ಟು ಉದ್ಯೋಗಸೃಷ್ಟಿ ಆಗಿಲ್ಲ. ಬೇರೆ ಅಭಿವೃದ್ಧಿಶೀಲ ಪ್ರದೇಶಗಳಿಗೆ ಹೋಲಿಸಿದರೆ ದಕ್ಷಿಣ ಏಷ್ಯಾ ಭಾಗದಲ್ಲಿ ಉದ್ಯೋಗಸೃಷ್ಟಿ ಕಡಿಮೆ ಇದೆ. ಇದರಿಂದ ಆರ್ಥಿಕ ಬೆಳವಣಿಗೆ ಸಾಮರ್ಥ್ಯ ಕುಂಠಿತವಾಗಿದೆ ಎಂಬುದು ವರ್ಲ್ಡ್ ಬ್ಯಾಂಕ್​ನ ಆರ್ಥಿಕ ತಜ್ಞರ ಅಭಿಪ್ರಾಯ.

ಈ ವರ್ಷ ಭಾರತ, ಪಾಕಿಸ್ತಾನ ಆರ್ಥಿಕ ಬೆಳವಣಿಗೆ ಹೇಗಿರುತ್ತೆ?; ವಿಶ್ವಬ್ಯಾಂಕ್​ನಿಂದ ಹೋಲಿಕೆ
ವಿಶ್ವಬ್ಯಾಂಕ್​
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 03, 2024 | 10:30 AM

Share

ವಾಷಿಂಗ್ಟನ್, ಏಪ್ರಿಲ್ 3: ಭಾರತ ಅದ್ವಿತೀಯ ರೀತಿಯಲ್ಲಿ ಆರ್ಥಿಕ ವೃದ್ಧಿ ತೋರುತ್ತಿದ್ದರೂ ವಿಶ್ವಬ್ಯಾಂಕ್ (World Bank) ಬಿಡುಗಡೆ ಮಾಡಿರುವ ವರದಿಯೊಂದರ ಪ್ರಕಾರ ದಕ್ಷಿಣ ಏಷ್ಯಾ ಪ್ರದೇಶದ ಆರ್ಥಿಕತೆ ಸದ್ಯಕ್ಕೆ ತೀರಾ ಆಶಾದಾಯಕವಾಗಿಲ್ಲ. ಈ ಪ್ರದೇಶದ ಆರ್ಥಿಕತೆ ಇನ್ನೂ ಕೂಡ ಕೋವಿಡ್ ಮುಂಚಿನ ಆರ್ಥಿಕ ಮಟ್ಟವನ್ನು (pre-covid growth level) ದಾಟಿಲ್ಲ. ಭಾರತವನ್ನೂ ಒಳಗೊಂಡಂತೆ ಈ ಭಾಗದ ದೇಶಗಳಲ್ಲಿ ಖಾಸಗಿ ಹೂಡಿಕೆಗಳು ಹೆಚ್ಚಾಗಬೇಕು, ಉದ್ಯೋಗಸೃಷ್ಟಿ ಜಾಸ್ತಿಯಾಗಬೇಕು. ಆಗ ಆರ್ಥಿಕ ಅಭಿವೃದ್ಧಿಗೆ ವೇಗ ಸಿಗಬಹುದು ಎಂಬುದು ವಿಶ್ವಬ್ಯಾಂಕ್​ನ ಸಲಹೆ.

ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್, ಭೂತಾನ್ ಮತ್ತು ಅಫ್ಘಾನಿಸ್ತಾನ ದೇಶಗಳು ದಕ್ಷಿಣ ಏಷ್ಯಾ ಪ್ರದೇಶದಲ್ಲಿವೆ. ವಿಶ್ವಬ್ಯಾಂಕ್ ವರದಿಯಲ್ಲಿ ಅಫ್ಗಾನಿಸ್ತಾನದ ಅಂಕಿ ಅಂಶಗಳನ್ನು ಒಳಗೊಳ್ಳಲಾಗಿಲ್ಲ. ಭಾರತದ ಆರ್ಥಿಕತೆ 2023-24ರಲ್ಲಿ ಶೇ. 7.5ರಷ್ಟು ಬೆಳೆದರೆ, 2024-25ರಲ್ಲಿ ಅದರ ಜಿಡಿಪಿ ಬೆಳವಣಿಗೆ ಶೇ. 6.6ಕ್ಕೆ ಸೀಮಿತಗೊಳ್ಳಬಹುದು ಎಂಬುದು ವಿಶ್ವಬ್ಯಾಂಕ್​ನ ಅನಿಸಿಕೆ.

ಇದನ್ನೂ ಓದಿ: ಜಪಾನ್ ದೇಶದ ಕರೆನ್ಸಿ 34 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ; ಭಾರತಕ್ಕೆ ಲಾಭವಾ, ನಷ್ಟವಾ?

ವಿಶ್ವಬ್ಯಾಂಕ್ ಅಂದಾಜು ಪ್ರಕಾರ 2023-24ರಲ್ಲಿ ಜಿಡಿಪಿ ವೃದ್ಧಿ

  • ಭಾರತ: ಶೇ. 7.5
  • ಬಾಂಗ್ಲಾದೇಶ: ಶೇ. 5.6
  • ಪಾಕಿಸ್ತಾನ: ಶೇ. 1.8
  • ಭೂತಾನ್: ಶೇ. 4.9
  • ಮಾಲ್ಡೀವ್ಸ್: ಶೇ. 4.7
  • ಶ್ರೀಲಂಕಾ: ಶೇ. 2.2
  • ನೇಪಾಳ: ಶೇ. 3.3

ವಿಶ್ವಬ್ಯಾಂಕ್ ಅಂದಾಜು ಪ್ರಕಾರ 2024-25ರಲ್ಲಿ ಜಿಡಿಪಿ ವೃದ್ಧಿ

  • ಭಾರತ: ಶೇ. 6.6
  • ಬಾಂಗ್ಲಾದೇಶ: ಶೇ. 5.7
  • ಪಾಕಿಸ್ತಾನ: ಶೇ. 2.3
  • ಭೂತಾನ್: ಶೇ. 5.7
  • ಮಾಲ್ಡೀವ್ಸ್: ಶೇ. 5.2
  • ಶ್ರೀಲಂಕಾ: ಶೇ. 2.5
  • ನೇಪಾಳ: ಶೇ. 4.6

ದಕ್ಷಿಣ ಏಷ್ಯಾ ದೇಶಗಳು ಹಿನ್ನಡೆ ಅನುಭವಿಸುತ್ತಿರುವುದು ಯಾಕೆ?

ದಕ್ಷಿಣ ಏಷ್ಯ ದೇಶಗಳಲ್ಲಿ ಉತ್ತಮ ಆರ್ಥಿಕ ಅಭಿವೃದ್ಧಿ ಸಾಧಿಸುವ ಸಾಮರ್ಥ್ಯ ಹೆಚ್ಚಿದೆ. ಇದಕ್ಕೆ ಕಾರಣ ಜನಸಂಖ್ಯೆ. ಬೇರೆ ಅಭಿವೃದ್ಧಿಶೀಲ ದೇಶಗಳಿಗೆ ಹೋಲಿಸಿದರೆ ಈ ಭಾಗದಲ್ಲಿ ಜನಸಂಖ್ಯೆ ಹೆಚ್ಚು. ಅದರಲ್ಲೂ ಕೆಲಸ ಮಾಡುವ ವಯೋಮಾನದ ಜನರ ಸಂಖ್ಯೆ ಹೆಚ್ಚಿದೆ. ಈ ಮಾನವ ಸಂಪನ್ಮೂಲವನ್ನು ದಕ್ಷಿಣ ಏಷ್ಯಾ ದೇಶಗಳು ಸರಿಯಾಗಿ ಬಳಸುತ್ತಿಲ್ಲ. ಉದ್ಯೋಗಗಳು ಹೆಚ್ಚೆಚ್ಚು ಸೃಷ್ಟಿಯಾಗಬೇಕು ಎಂದು ವಿಶ್ವಬ್ಯಾಂಕ್​ನ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಫೇಸ್​ಬುಕ್, ಇನ್ಸ್​ಟಾದ ನಿಮ್ಮ ಪೋಸ್ಟ್​ಗಳು ವಿದೇಶೀ ಸರ್ವರ್​ಗೆ ಹೋಗಲ್ಲ; ಭಾರತದಲ್ಲೇ ನಿರ್ಮಾಣವಾಗಿದೆ ಡಾಟಾ ಸೆಂಟರ್

ಈ ಪ್ರಕಾರ ದಕ್ಷಿಣ ಎಷ್ಯಾದಲ್ಲಿ ಉದ್ಯೋಗ ಅನುಪಾತ ಶೇ. 59 ಇದ್ದರೆ, ಬೇರೆ ಅಭಿವೃದ್ಧಿಶೀಲ ಪ್ರದೇಶಗಳಲ್ಲಿ ಇದು ಶೇ. 70ರಷ್ಟಿದೆ. ಉದ್ಯೋಗ ಅನುಪಾತ ಇನ್ನಷ್ಟು ಹೆಚ್ಚಿದಲ್ಲಿ ದಕ್ಷಿಣ ಏಷ್ಯಾದ ಒಟ್ಟಾರೆ ಆರ್ಥಿಕ ಕೊಡುಗೆ ಶೇ. 16ಕ್ಕಿಂತಲೂ ಹೆಚ್ಚಾಗುತ್ತದೆ ಎಂದು ವರ್ಲ್ಡ್ ಬ್ಯಾಂಕ್​ನ ಸೌತ್ ಏಷ್ಯಾ ಮುಖ್ಯ ಆರ್ಥಿಕ ತಜ್ಞ ಫ್ರಾಂಜಿಸ್ಕಾ ಆನ್ಸೋರ್ಜ್ ಹೇಳಿದ್ದಾರೆ.

ಆದರೆ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ವಿಶ್ವಬ್ಯಾಂಕ್​ನ ಕಡಿಮೆ ಅಂದಾಜು ಅಚ್ಚರಿ ಮೂಡಿಸುತ್ತದೆ. 2023-24ರಲ್ಲಿ ಭಾರತದ ಜಿಡಿಪಿ ಶೇ. 8ರ ಆಸುಪಾಸಿನಲ್ಲಿ ಬೆಳೆಯಬಹುದು ಎಂದು ಅನೇಕರು ಅಂದಾಜಿಸಿದ್ದಾರೆ. 2024-25ರಲ್ಲೂ ಇದೇ ವೇಗವನ್ನು ಭಾರತ ಕಾಯ್ದುಕೊಳ್ಳುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ