Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿಯನ್ನು ಕೊಂದು ಮೃತದೇಹವನ್ನ ತುಂಡು-ತುಂಡು ಮಾಡಿ ಮನೆಯಲ್ಲಿ ಹೂತಿಟ್ಟಿದ್ದ ಪತ್ನಿಯ ರಹಸ್ಯ ಬಯಲು

ಕುಡುಕ ಗಂಡನನ್ನ ತಾನೇ ಕೊಂದು ಮೃತದೇಹವನ್ನ ತುಂಡು ತುಂಡಾಗಿ ಕತ್ತರಿಸಿ ಮನೆಯ ಹಿಂಬಾಗ ಗುಂಡಿ ತೆಗೆದು ಹೂತಿದ್ದ ಪಾತಕಿ ಪತ್ನಿಯ ಸ್ಫೋಟಕ ರಹಸ್ಯ ಬಯಲಾಗಿದೆ.

ಪತಿಯನ್ನು ಕೊಂದು ಮೃತದೇಹವನ್ನ ತುಂಡು-ತುಂಡು ಮಾಡಿ ಮನೆಯಲ್ಲಿ ಹೂತಿಟ್ಟಿದ್ದ ಪತ್ನಿಯ ರಹಸ್ಯ ಬಯಲು
Wife Murdered Husband
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 20, 2022 | 11:12 PM

ಹಾಸನ: ಗಂಡ ಮೃತಪಟ್ಟಾಗ ಮಾನವೀಯತೆ ಮರೆತು ಮೃತದೇಹವನ್ನ ತುಂಡು ತುಂಡಾಗಿ ಕತ್ತರಿಸಿದ್ದಾಳೆ. ಬಳಿಕ ಗುಂಡಿ ತೆಗೆದು ಮನೆಯಿಂದ ಹೂತಿದ್ದಾಳೆ. ಈ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಖಿನ ನೇರಲಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಪೊಲೀಸ್ ತನಿಖೆ ವೇಳೆ ಮಹಿಳೆ ಬಾಯ್ಬಿಟ್ಟಿದ್ದಾಳೆ.

ಪತ್ನಿಯೇ ಪತಿಯನ್ನ ಬರ್ಬರವಾಗಿ ಕೊಂದಿದ್ದಾಳೆ. ಅಲ್ಲದೇ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬಿಡಿ-ಬಿಡಿಯಾಗಿ ಮಾಡಿ ಮನೆಯ ಹಿಂದೆ ಗುಂಡಿಯನ್ನೊಂದನ್ನ ತೆಗೆದು ಹೂತಿದ್ದಾಳೆ. ನಂತರ ಏನು ಗೊತ್ತಿಲ್ಲದಂತೆ ನಾಟಕ ಮಾಡುತ್ತ ತನ್ನಪಾಡಿಗೆ ತಾನಿದ್ದ ಪತ್ನಿಯನ್ನ ಪೊಲೀಸರು ವಿಚಾರಣೆಗೊಳಪಡಿಸಿದಾಗ ಹತ್ಯೆ ರಹಸ್ಯ ಬಯಲಾಗಿದೆ.

ಗ್ರಾಮದ ಕೃಷ್ಣೇಗೌಡ ಲೀಲಾವತಿ 25 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರೆ. ಮಗ ಬೆಂಗಳೂರಿನಲ್ಲಿ ಚಾಲಕನಾಗಿದ್ದಾನೆ. ಮನೆಯಲ್ಲಿ ಇಬ್ಬರೇ ಇರ್ತಿದ್ದ ಈ ದಂಪತಿ ನಿತ್ಯ ಜಗಳಮಾಡಿಕೊಳ್ತಿದ್ದರಂತೆ, ಕೃಷ್ಣೆಗೌಡ ಮೊದಲಿನಿಂದಲೂ ಕುಡಿದು ಬಂದು ಗಲಾಟೆ ಮಾಡುವುದು. ಪತ್ನಿಯನ್ನ ಹಿಡಿದು ಹಲ್ಲೆ ಮಾಡುತ್ತಿದ್ದ. ಇದ್ರಿಂದ ರೋಸಿ ಹೋಗಿದ್ದ ಲೀಲಾವತಿ ಕೂಡ ಹಲವು ಬಾರಿ ತವರು ಮನೆಯವರಿಗೆ ಹೇಳಿದ್ದಳು. ಬಳಿಕ ಇಬ್ಬರ ಮಧ್ಯೆ ರಾಜಿ ಪಂಚಾಯಿತಿ ಮಾಡಿದ್ದರು.

ಆದ್ರೆ, ತನ್ನ ನಡವಳಿಕೆಯಲ್ಲಿ ಕೃಷ್ಣೆಗೌಡ ಮಾತ್ರ ಬದಲಾವಣೆ ಕೊಂಡಿರಲಿಲ್ಲ, ಅಕ್ಟೋಬರ್ 17ರ ಸೋಮವಾರ ಕೂಡ ರಾತ್ರಿ ಕೃಷ್ಣೆಗೌಡ ಕುಡಿದು ಬಂದು ಗಲಾಟೆ ಮಾಡಿದ್ದಾನೆ. ಈ ವೇಳೆ ತನ್ನ ಮೇಲೆ ಹಲ್ಲೆ ಮಾಡಲು ಬಂದ ಪತಿಗೆ ಲೀಲಾವತಿ ಹೊಡೆದಿದ್ದಾಳೆ. ಏಟು ಬೀಳುತ್ತಿದ್ದಂತೆಯೇ ಕೃಷ್ಣೆಗೌಡ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಗಂಡ ಮೃತಪಟ್ಟ ಬಳಿಕ ವಿಚಾರವನ್ನೇ ಮುಚ್ಚಿ ಹಾಕಬೇಕು ಎನ್ನೋ ಉದ್ದೇಶದಿಂದ ಮೃತದೇಹದ ಕೈ ಕಾಲುಗಳನ್ನು ಕಡಿದ ಈ ಕಿರಾತಕ ಪತ್ನಿ, ಮೃತ ದೇಹವನ್ನು ಮನೆಯ ಹಿಂಬಾಗ ಗುಂಡಿ ತೆಗೆದು ಹೂತಿದ್ದಾಳೆ. ಮರು ದಿನ ಏನೂ ಆಗೇ ಇಲ್ಲಾ ಎನ್ನೋ ರೀತಿಯಲ್ಲಿ ಸುಮ್ಮನಿದ್ದಾಳೆ. ಆದ್ರೆ ಊರ ಜನರು ರಾತ್ರಿ ಮನೆಯಲ್ಲಿ ಜಗಳ ಮಾಡ್ತಿದ್ದ ಕೃಷ್ಣೇಗೌಡ ಮರುದಿನ ಕಾಣ್ತಿಲ್ಲವಲ್ಲ, ಎರಡು ದಿನವಾದ್ರು ಎಲ್ಲಿ ಹೋದ ಎಂದು ಅವರ ಸಹೋದರ ಹಾಗೂ ಸಂಬಂಧಿಕರ ಬಳಿ ವಿಚಾರಿಸಿದ್ದಾರೆ.

ಮೃತನ ಸಹೋದರ ಸ್ವಾಮಿಗೌಡ ಅರಕಲಗೂಡು ಪೊಲೀಸರಿಗೆ ನೀಡಿದ ದೂರಿನ ಮೇಲೆ ಲೀಲಾವತಿಯನ್ನ ಕರೆತಂದು ವಿಚಾರ ಮಾಡಿದಾಗ ನಡೆದಿರೋ ಹತ್ಯೆ ಪ್ರಕರಣ ಬಯಲಾಗಿದೆ. ಪೊಲೀಸರು ಲೀಲಾವತಿಯನ್ನ ಕರೆತಂದು ವಿಚಾರಣೆ ಮಾಡಿದಾಗ ನಡೆದಿರೋ ಹತ್ಯೆ ಬೆಳಕಿಗೆ ಬಂದಿದೆ. ಕೂಡಲೇ ಆಕೆಯನ್ನ ವಶಕ್ಕೆ ಪಡೆದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಈ ನಡುವೆ ಮನೆಗೆ ಮತ್ಯಾರೋ ಒಬ್ಬ ಬಂದು ಹೋಗ್ತಿದ್ದ ಎನ್ನೋ ವಿಚಾರದಲ್ಲಿ ಗಂಡ ಹೆಂಡರ ನಡುವೆ ನಡೆಯುತ್ತಿದ್ದ ಕಲಹ ಇದೀಗ ಒಂದು ಕೊಲೆಯಲ್ಲಿ ಅಂತ್ಯವಾಗಿದೆ, ತಾಯಿ ಮಾಡಿರೋ ಕೃತ್ಯದಿಂದ ಕಂಗಾಲಾಗಿರೋ ಮಕ್ಕಳು ಕಣ್ಣೀರಿಡುತ್ತಿದ್ದಾರೆ. ನಾವೆಲ್ಲಾ ನಮ್ಮಪಾಡಿಗೆ ಬದುಕು ಕಟ್ಟಿಕೊಂಡಿರುವಾಗ ಮನೆಯಲ್ಲಿದ್ದ ಅಪ್ಪ ಅಪ್ಪ ಹೀಗೆಲ್ಲಾ ಅನಾಹುತ ಮಾಡಿಕೊಂಡಿದ್ದಾರೆ ಎಂದು ರೋದಿಸುತ್ತಿದ್ದಾರೆ.

Published On - 11:10 pm, Thu, 20 October 22

ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ
ಕೆಸರಿನಲ್ಲಿ ಹೂತ ಕಾರು, ಟಿಟಿ: ಜಮ್ಮು ಕಾಶ್ಮೀರ ಮೇಘಸ್ಫೋಟದ ಪರಿಣಾಮ ನೋಡಿ
ಕೆಸರಿನಲ್ಲಿ ಹೂತ ಕಾರು, ಟಿಟಿ: ಜಮ್ಮು ಕಾಶ್ಮೀರ ಮೇಘಸ್ಫೋಟದ ಪರಿಣಾಮ ನೋಡಿ
ನಿನ್ನ ಕೋಚ್ ಕೂಡ ಗೊತ್ತು ಕಣೋ... ಎಲ್ಲೆ ಮೀರಿದ ಕಿರಿಕ್ ಕೊಹ್ಲಿ
ನಿನ್ನ ಕೋಚ್ ಕೂಡ ಗೊತ್ತು ಕಣೋ... ಎಲ್ಲೆ ಮೀರಿದ ಕಿರಿಕ್ ಕೊಹ್ಲಿ
VIDEO: RCB ಅಭಿಮಾನಿಗಳ ಗಮನಕ್ಕೆ: ನೀವು ಸುಳ್ಳಿಗೆ ಮರುಳಾಗಿದ್ದೀರಿ
VIDEO: RCB ಅಭಿಮಾನಿಗಳ ಗಮನಕ್ಕೆ: ನೀವು ಸುಳ್ಳಿಗೆ ಮರುಳಾಗಿದ್ದೀರಿ