AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಮದುವೆ ಮನೆಯಲ್ಲಿ ರಕ್ತದೋಕುಳಿ; ರಾಡ್​ನಿಂದ ‌ಹೊಡೆದು ಯುವಕನ ಭೀಕರ ಕೊಲೆ‌

ಆ ಊರಲ್ಲಿ ನಿನ್ನೆ ಮದುವೆ ಸಂಭ್ರಮ ಮನೆ ಮಾಡಿತ್ತು. ಆದರೆ, ಅದೇ ಮದುವೆ ಮನೆ ಇಳಿ ಸಂಜೆಯಾಗುವಷ್ಟರಲ್ಲಿ ರಣಾಂಗಣವಾಗಿತ್ತು. ಹಳೆ ದ್ವೇಷ, ಬೈಕ್ ಅಪಘಾತದ ಸಣ್ಣ ಜಗಳದಲ್ಲಿ ವಿಕೋಪಕ್ಕೆ ತಿರುಗಿತ್ತು. ಇದರಲ್ಲಿ ಮದುವೆ ಮನೆಯ ಒಬ್ಬ ಯುವಕನ ಕೊಲೆ‌ ಮಾಡಿದ್ದಾರೆ. ಮದುವೆ ಅರಿಷಿಣದ ಬದಲು ರಕ್ತ ಹರಿಸಿದ್ದಾರೆ‌.

ಬಾಗಲಕೋಟೆ: ಮದುವೆ ಮನೆಯಲ್ಲಿ ರಕ್ತದೋಕುಳಿ; ರಾಡ್​ನಿಂದ ‌ಹೊಡೆದು ಯುವಕನ ಭೀಕರ ಕೊಲೆ‌
ಮೃತ ಯುವಕ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on:Feb 27, 2024 | 4:15 PM

Share

ಬಾಗಲಕೋಟೆ, ಫೆ.27: ಜಿಲ್ಲೆಯ ಬೀಳಗಿ(Bilgi) ತಾಲ್ಲೂಕಿನ ಹೆಗ್ಗೂರು ಗ್ರಾಮದಲ್ಲಿ ನಿನ್ನೆ(ಫೆ.26) ರಾತ್ರಿ ಸಿದ್ದು ಇಂಡಿ ಎಂಬ 21 ವರ್ಷದ ಯುವಕನನ್ನು ಮಾರಕಾಸ್ತ್ರಗಳಿಂದ ಮುಖ ಹಾಗೂ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ. ಘಟನೆಯಲ್ಲಿ ಮಂಜು ಖೈರವಾಡಗಿ ಎಂಬಾತನಿಗೂ ಗಂಭೀರ ಗಾಯವಾಗಿದ್ದುಮ, ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇವಲ ಬೈಕ್ ಟಚ್ ಆಯಿತು ಎಂಬ ನೆಪದಲ್ಲಿ ಜೊತೆಗೆ ಹಳೆ ರಾಜಕೀಯ ದ್ವೇಷ ಉಕ್ಕಿ ಅದೇ ಊರಿನವರೇ ಆದ ಸಾಗರ ಕಿರಸ್ಯಾಳ, ಯಮನಪ್ಪ ಕಿರಸ್ಯಾಳ, ಶಾಂತಪ್ಪ, ಶಿವಾನಂದ, ಪರಶು ಸೇರಿದಂತೆ ಇತರರು ಸೇರಿ ಮಾರಾಮಾರಿ ನಡೆಸಿ ಕೊಲೆಗೈದಿದ್ದಾರೆ. ಈಗ ಮಗನನ್ನು ಕಳೆದುಕೊಂಡ ತಾಯಿ ಒಂದೇ ಸಮನೆ ಗೋಳಾಡುತ್ತಿದ್ದಾಳೆ.

ಮದುವೆ ಮನೆಯ ಮುಂದೆಯೇ ಭೀಕರ ಕೊಲೆ

ಹೆಗ್ಗೂರು ಗ್ರಾಮದ‌ ಮದುವೆ ಮನೆ ಮುಂದೆ ಇಂತಹ ಭೀಕರ ಕೊಲೆ ನಡೆದಿದೆ. ಕೊಲೆ‌ ಮಾಡಿದವರು ಮದುವೆ ಮನೆಯವರೇ ಎಂಬುದು ವಿಪರ್ಯಾಸ. ನಿನ್ನೆ ಗ್ರಾಮದಲ್ಲಿ ಯಮನಪ್ಪ ಕಿರಸ್ಯಾಳ ಮದುವೆಯಿತ್ತು. ಅದೇ ಮುಹೂರ್ತದಲ್ಲಿ ಗಿರಿಸಾಗರ ಗ್ರಾಮದಲ್ಲಿ ಸಿದ್ದು ಇಂಡಿ ಅವರ ಆಪ್ತರ ಮದುವೆ ಕೂಡ ಇತ್ತು. ಹೀಗಾಗಿ ಆತ ಗಿರಿಸಾಗರಕ್ಕೆ ಮದುವೆಗೆ ಹೋಗಿ ವಾಪಸ್ ಬರುತ್ತಿದ್ದ. ಈ ವೇಳೆ ಮದುವೆ ಮನೆಯವರಲ್ಲಿ ಒಬ್ಬನಾದ ಪರಶು ಹಾಗೂ ಸಿದ್ದು ಬೈಕ್ ಅಪಘಾತವಾಗಿವೆ‌. ಇದರಿಂದ ಸ್ಥಳದಲ್ಲಿ ಸ್ವಲ್ಪ‌ ಜಗಳವಾಗಿದೆ. ಆಗ ಸ್ಥಳದಲ್ಲಿ ಇದ್ದವರು ಜಗಳ ಬಿಡಿಸಿ ಕಳಿಸಿದ್ದಾರೆ. ನಂತರ ಸಿದ್ದು ಮನೆ ಕಡೆ ಬಂದಿದ್ದಾನೆ, ನಂತರ ರಾತ್ರಿ 8.30 ರ ವೇಳೆಗೆ ಸಿದ್ದು ತಮ್ಮ, ಮನೆಗೆ ಹೋಗಲು ಸಾಗರ ಮನೆ ಮುಂದೆಯೇ ಹೋಗಬೇಕು. ಈ ವೇಳೆ ಸಿದ್ದು ಹಾಗೂ ಚಿಕ್ಕಪ್ಪನ ಮಗ ಮಂಜು ಮೇಲೆ‌‌ ಮನಬಂದಂತೆ ಹಲ್ಲೆ ಮಾಡಿ ಕೊಲೆ‌ ಮಾಡಿದ್ದಾರೆ. ಮದುವೆ ಸಂಭ್ರಮದಲ್ಲಿ ಇದ್ದವರೇ ಅರಿಷಿಣದ ಬದಲು ರಕ್ತದೋಕುಳಿಯಾಡಿದ್ದಾರೆ.

ಇದನ್ನೂ ಓದಿ:ಕಲಬುರಗಿ: ಸಾಲ ಕೊಟ್ಟ ಹಣ ವಾಪಸ್ ಕೇಳಿದಕ್ಕೆ ಸ್ನೇಹಿತನ ಕೊಲೆ; ಮೂವರ ಬಂಧನ

ಈ ಬಗ್ಗೆ ಬೀಳಗಿ ಪೊಲೀಸ್ ಠಾಣೆಯಲ್ಲಿ 25 ಜನರ ವಿರುದ್ಧ ಎಫ್​ಐಆರ್ ಆಗಿದೆ. ಬೀಳಗಿ ಪೊಲೀಸರು ಕ್ರೈಮ್ ಅಫ್ ಸೀನ್ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಪ್ರಮುಖ ಆರೋಪಿಗಳಾದ ಸಾಗರ, ಶಿವಾನಂದ, ಯಮನಪ್ಪ, ಶಾಂತಪ್ಪ, ಪರಶು ಸೇರಿದಂತೆ ಪ್ರಮುಖ ಐವರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಯಾವುದೇ ಗಲಾಟೆ ಆಗಬಾರದು ಎಂದು ಪೊಲೀಸ್ ಭದ್ರತೆ ಕಲ್ಪಿಸಿದ್ದು, ತನಿಖೆ ಮುಂದುವರೆದಿದೆ. ಒಟ್ಟಿನಲ್ಲಿ ಹಳೆ ದ್ವೇಷ, ಬೈಕ್ ಅಪಘಾತದ‌ ಮೂಲಕ ಉಕ್ಕಿ ಹರಿದಿದ್ದು, ಓರ್ವನ ಬಲಿ ಪಡೆದಿದೆ. ಇನ್ನೊಬ್ಬನ ಸ್ಥಿತಿ‌ ಗಂಭೀರವಾಗಿದ್ದು, ಮೃತನ ಕುಟುಂಬಸ್ಥರು ಕಣ್ಣೀರಲ್ಲಿ‌ಕೈ ತೊಳೆಯುತ್ತಿದ್ದರೆ, ಮದುವೆ ಮನೆಯಲ್ಲಿ ಸಂಭ್ರಮದ ಬದಲು ಸ್ಮಶಾನ ಮೌನ ಆವರಿಸಿದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:12 pm, Tue, 27 February 24

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ