AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikkaballapur News: ಅಕ್ರಮ ಸಂಬಂಧ ಆರೋಪ; ಮಚ್ಚಿನಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ

ಅವರಿಬ್ಬರದ್ದು ಒಂದೇ ಊರು, ಒಂದೇ ಕೇರಿ, ಇಬ್ಬರದು ಬೇರೆ ಬೇರೆ ಜಾತಿಯಾಗಿದ್ದರೂ ಪರಸ್ಪರ ಪ್ರೀತಿಸಿ ಊರಿಗೆ ಸೆಡ್ಡುಹೊಡೆದು ಮದುವೆಯಾಗಿದ್ದರು. ಆದರೆ, ಅನುಮಾನಂ ಪೆದ್ದರೋಗಂ ಎನ್ನುವ ಹಾಗೆ ಪತ್ನಿಯ ಶೀಲದ ಬಗ್ಗೆ ಅನುಮಾನವ್ಯಕ್ತಪಡಿಸಿದ ಆಕೆಯ ಗಂಡ ವಿನಾಕಾರಣ ಗಲಾಟೆ ಕಾದು ಬೆಳ್ಳಂಬೆಳಿಗ್ಗೆ ಮಚ್ಚಿನಿಂದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

Chikkaballapur News: ಅಕ್ರಮ ಸಂಬಂಧ ಆರೋಪ; ಮಚ್ಚಿನಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ
ಚಿಕ್ಕಬಳ್ಳಾಪುರ
ಕಿರಣ್ ಹನುಮಂತ್​ ಮಾದಾರ್
|

Updated on: May 31, 2023 | 6:52 AM

Share

ಚಿಕ್ಕಬಳ್ಳಾಪುರ: ರಕ್ತದ ಮಡಿಲಿನಲ್ಲಿ ಮಲಗಿರುವ ತಾಯಿ. ತಾಯಿಯ ಶವ ನೋಡಿ ಗೋಗೊರೆಯುತ್ತಿರುವ 14 ವರ್ಷದ ಮಗಳು. ಇಂತಹ ಹೃದಯವಿದ್ರಾಯಕ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ(Chikkaballapur)ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೊಂಡ್ಲಿಗಾನಹಳ್ಳಿ ಗ್ರಾಮದಲ್ಲಿ. ಹೌದು ಗ್ರಾಮದ ಸುರೇಶ್ ಹಾಗೂ ವಿನೋದ ಇಬ್ಬರು 15 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ, ಮನೆಯವರ ವಿರೋಧದ ನಡುವೆ ಅಂತರ್ಜಾತಿ ಮದುವೆ ಮಾಡಿಕೊಂಡಿದ್ದರು. ಆದರೆ ನಿನ್ನೆ(ಮೇ.30) ಬೆಳಿಗ್ಗೆ ಸೂರ್ಯ ಹುಟ್ಟುವುದಕ್ಕೂ ಮುನ್ನ, ಪ್ರೀತಿಸಿ ಕೈ ಹಿಡಿದ ಪತ್ನಿಯನ್ನ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ.

ಪತ್ನಿಗೆ ಅಕ್ರಮ ಸಂಬಂಧವಿದೆಯೆಂದು ಆಗಾಗ ಗಲಾಟೆ

ಪ್ರೀತಿಸಿ ಕೈಹಿಡಿದ ಜೋಡಿ ಸ್ವಗ್ರಾಮದಲ್ಲೇ ವಾಸವಿದ್ದರು. ಇಬ್ಬರ ಮುದ್ದಿನ ಸಂಸಾರಕ್ಕೆ 14 ವರ್ಷದ ಮಗಳಿದ್ದಾಳೆ. ಆದರೆ ಇತ್ತೀಚಿಗೆ ಸುರೇಶ ಮಧ್ಯವಸ್ಯನಿಯಾಗಿದ್ದು, ಪತ್ನಿಗೆ ಅಕ್ರಮ ಸಂಬಂಧವಿದೆಯೆಂದು ಆರೋಪ ಮಾಡಿ ಆಗಾಗ್ಗೆ ಗಲಾಟೆ ಮಾಡುತ್ತಿದ್ದ. ಗ್ರಾಮಸ್ಥರು ಹಾಗೂ ಬಂಧು-ಬಳಗ ನ್ಯಾಯ, ಪಂಚಾಯ್ತಿ ಮಾಡಿದರೂ ತಿದ್ದಿಕೊಳ್ಳದೇ ಪತ್ನಿಯನ್ನು ಕೊಲ್ಲುವ ಮೂಡಿನಲ್ಲೇ ಇದ್ದ. ನಿನ್ನೆ ಬೆಳಿಗ್ಗೆ ಪತ್ನಿ ಎದ್ದೇಳುವುದಕ್ಕೂ ಮುನ್ನವೇ ಜಗಳ ಕಾದು ಮಚ್ಚಿನಿಂದ ಹೊಡೆದು ಕೊಂದಿದ್ದಾನೆ.

ಇದನ್ನೂ ಓದಿ:Kalaburagi News: ಹಾಡಹಗಲೇ ಬಸ್​ ಚಾಲಕನ ಹತ್ಯೆ; ಇಬ್ಬರು ಆರೋಪಿಗಳು ಅರೆಸ್ಟ್​, ಕೊಲೆಗೆ ಕಾರಣ ಕೇಳಿ ದಂಗಾದ ಪೋಲಿಸರು​

ಇನ್ನು ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಸುರೇಶ ಎಸ್ಕೇಪ್ ಆಗಲು ಯತ್ನಿಸಿದ್ದ. ಅಷ್ಟೊತ್ತಿಗೆ ಮೃತಳ ಸಹೋದರ ಶಾಂತಕುಮಾರ್ ಹಾಗೂ ಸ್ಥಳೀಯರು ಆಗಮಿಸಿ ಬಟ್ಲಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ