ಬೆಂಗಳೂರು: ರಾತ್ರಿ ಇಬ್ಬರು ರೌಡಿಶೀಟರ್​ಗಳು ಒಟ್ಟಿಗೆ ಕುಳಿತು ಪಾರ್ಟಿ, ಬಳಿಕ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಇತ್ತೀಚೆಗೆ ರೌಡಿಶೀಟರ್​ಗಳ ಹತ್ಯೆ ಹೆಚ್ಚಾಗಿದೆ. ಕಳೆದ ತಿಂಗಳಿನಿಂದ 3 ರಿಂದ 4 ರೌಡಿಶೀಟರ್​ಗಳು ಹತ್ಯೆಯಾಗಿದ್ದಾರೆ. ಅದರಂತೆ ಇದೀಗ ಕೆ.ಪಿ ಅಗ್ರಹಾರದ ರೌಡಿ ಶೀಟರ್ ಸಾಗರ್ ಎಂಬಾತನನ್ನ ವಿಜಯನಗರ ಠಾಣೆಯ ರೌಡಿಶೀಟರ್ ನವೀನ್ ಅಲಿಯಾಸ್ ಕೆ ಎನ್ನುವವನು ಕೊಲೆ ಮಾಡಿರುವ ಘಟನೆ ಮಹದೇಶ್ವರ ದೇವಾಲಯದ ಬಳಿ ನಡೆದಿದೆ.

ಬೆಂಗಳೂರು: ರಾತ್ರಿ ಇಬ್ಬರು ರೌಡಿಶೀಟರ್​ಗಳು ಒಟ್ಟಿಗೆ ಕುಳಿತು ಪಾರ್ಟಿ, ಬಳಿಕ ನಡೆದ ಜಗಳ ಕೊಲೆಯಲ್ಲಿ ಅಂತ್ಯ
ಮೃತ ರೌಡಿಶೀಟರ್​ ಸಾಗರ್​
Follow us
|

Updated on: May 23, 2023 | 9:25 AM

ಬೆಂಗಳೂರು: ಇತ್ತೀಚೆಗೆ ರೌಡಿಶೀಟರ್(Rowdy Sheeter)​ಗಳ ಹತ್ಯೆ ಹೆಚ್ಚಾಗಿದೆ. ಕಳೆದ ತಿಂಗಳಿನಿಂದ 3 ರಿಂದ 4 ರೌಡಿಶೀಟರ್​ಗಳು ಹತ್ಯೆಯಾಗಿದ್ದಾರೆ. ಅದರಂತೆ ಇದೀಗ ಕೆ.ಪಿ ಅಗ್ರಹಾರದ ರೌಡಿ ಶೀಟರ್ ಸಾಗರ್ ಎಂಬಾತನನ್ನ ವಿಜಯನಗರ ಠಾಣೆಯ ರೌಡಿಶೀಟರ್ ನವೀನ್ ಅಲಿಯಾಸ್ ಕೆ ಎನ್ನುವವನು ಕೊಲೆ ಮಾಡಿರುವ ಘಟನೆ ಮಹದೇಶ್ವರ ದೇವಾಲಯದ ಬಳಿ ನಡೆದಿದೆ. ರಾತ್ರಿ ಒಟ್ಟಿಗೆ ಕುಳಿತು ಪಾರ್ಟಿ ಮಾಡಿದ್ದ ಸಾಗರ್​ ಹಾಗೂ ನವೀನ್. ಬಳಿಕ ಮಾತಿಗೆ ಮಾತು ಬೆಳೆದು ಸಾಗರ್, ನವೀನ್ ನಡುವೆ ಜಗಳ ಶುರುವಾಗಿದೆ. ಈ ವೇಳೆ ಲಾಂಗ್​​ನಿಂದ ಹಲ್ಲೆ ಮಾಡಿದ್ದ ನವೀನ್ ಸಾಗರ್​ನನ್ನ​ ಕೊಲೆಗೈದಿದ್ದಾನೆ. ಈ ಕುರಿತು ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರೌಡಿಶೀಟರ್ ನವೀನ್​​​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಶೂ ಲೇಸ್​ನಿಂದ ನೇಣು ಬಿಗಿದುಕೊಂಡು ರೌಡಿ ಶೀಟರ್ ಸಾವು

ಬೆಂಗಳೂರು: ಜೈಲಿನ ಶೌಚಾಲಯದಲ್ಲಿ ಶೂ ಲೇಸ್​ನಿಂದ ನೇಣು ಬಿಗಿದುಕೊಂಡು ರೌಡಿ ಶೀಟರ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಸುನೀಲ್ ಮೃತ ರೌಡಿ ಶೀಟರ್. ಇತನ ಸಾವು ಇದೀಗ ಹಲವಾರು ಮೂಡಿಸಿದೆ. ಹೌದು ಶೂ ಲೇಸ್​ನಿಂದ ನೇಣು ಬಿಗಿದುಕೊಂಡು ಸಾವನಪ್ಪಿದ ರೀತಿಯಲ್ಲಿ ಆತನ ಶವ ಪತ್ತೆಯಾಗಿದೆ. ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದ ಆತ. ಇನ್ನು ಹತ್ತು ದಿನಗಳಲ್ಲಿ ಅಂದರೆ ಜೂನ್​.2 ಕ್ಕೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಆಗಬೇಕಿದ್ದ. ಇನ್ನು ಈ ರೌಡಿಶೀಟರ್​ ಸುನೀಲ್​ ‘ಕಗ್ಗಲಿಪುರದಲ್ಲಿ ವಿನೋದ್ ಎಂಬಾತನನ್ನ ಕೊಲೆ ಮಾಡಿ ಜೈಲು ಸೇರಿದ್ದ.

ಇದನ್ನೂ ಓದಿ:ಹುಣಸೂರು ಡಬಲ್ ಮರ್ಡರ್ ಕೇಸ್: ಜೈಲಿಂದ ಆರೋಪ ಮುಕ್ತನಾಗಿ ಹೊರಬಂದ ರೌಡಿಶೀಟರ್​ ಚಂದು ಭೀಕರ ಹತ್ಯೆ, ಹಂತಕರು ಯಾರು?

ಕೆಲ ದಿನಗಳ ಹಿಂದೆ ನನ್ನನ್ನ ಕೊಲೆ ಮಾಡಲು ಸ್ಕೆಚ್; ಬಾತ್ರೂಮ್​ನಲ್ಲಿ ನನ್ನ ಶವ ಸೀಗಬಹುದು ಹೇಳಿದ್ದ ಸುನೀಲ್​ ಹೌದು ಕೊಲೆ ಮಾಡಿ ಜೈಲು ಸೇರಿದ್ದ ಸುನೀಲ್​ ‘ಕೆಲ ದಿನಗಳ ಹಿಂದೆ ತನ್ನನ್ನು ಕೊಲೆ ಮಾಡಲು ಸ್ಕೆಚ್ ಹಾಕಲಾಗಿದೆ ಅಥವಾ ಬಾತ್ರೂಮ್​ನಲ್ಲಿ ನಾನೇ ನೇಣುಹಾಕಿಕೊಂಡ ರೀತಿ ನಿಮಗೆ ಸಿಗಬಹುದು ಎಂದು ಸಹ ಹೆಳಿಕೊಂಡಿದ್ದ. ಈ ಹಿಂದೆ ಕೊಲೆಯಾಗಿದ್ದ ವಿನೋದ್ ಮಾಜಿ ಕಾರ್ಪೊರೇಟರ್ ಓರ್ವರ ಅಣ್ಣನ ಮಗನಾಗಿದ್ದ. ಇವೆಲ್ಲವನ್ನೂ ನೋಡುತ್ತಿದ್ದರೆ. ರೌಡಿಶೀಟರ್​ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇನ್ನು ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ಶುರು ಮಾಡಿದ್ದಾರೆ. ಆ ಬಳಿಕವೇ ಸಾವಿಗೆ ನಿಜವಾದ ಕಾರಣ ತಿಳಿದು ಬರಬೇಕಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ