AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ತಂಗಿಯಿಂದ ರಾಖಿ ಕಟ್ಟಿಸಿಕೊಂಡ ದಿನವೇ ಹೆಣವಾದ ಅಣ್ಣ!

ಪಂಜಾಬ್‌ನಲ್ಲಿ ಡ್ರಗ್ಸ್ ಸೇವನೆಯಿಂದ ಯುವಕರ ಸಾವು ಇನ್ನೂ ನಿಂತಿಲ್ಲ. ಅಮೃತಸರದ ಅಟ್ಟಾರಿ ಗಡಿ ಪ್ರದೇಶದ ಚಿದ್ದನ್ ಗ್ರಾಮದಲ್ಲಿ ರಕ್ಷಾಬಂಧನದ ದಿನದಂದು ಮಾದಕ ವ್ಯಸನಿಯೊಬ್ಬ ಮೃತಪಟ್ಟಿದ್ದಾನೆ.

Crime News: ತಂಗಿಯಿಂದ ರಾಖಿ ಕಟ್ಟಿಸಿಕೊಂಡ ದಿನವೇ ಹೆಣವಾದ ಅಣ್ಣ!
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: Sep 01, 2023 | 5:09 PM

Share

ಅಮೃತಸರ: ಪಂಜಾಬ್​ನ ಅಮೃತಸರದ (Amritsar) ಗಡಿ ಪ್ರದೇಶವಾದ ಅಟ್ಟಾರಿಯ ಚಿದ್ದನ್ ಗ್ರಾಮದಲ್ಲಿ ರಕ್ಷಾ ಬಂಧನದ (Raksha bandhan) ದಿನದಂದು ಮಾದಕ ವ್ಯಸನಿಯೊಬ್ಬ ಡ್ರಗ್ಸ್​ನಿಂದ ಸಾವನ್ನಪ್ಪಿದ್ದಾನೆ. ಗುರುವಾರ ಇಡೀ ಭಾರತ ರಾಖಿ ಹಬ್ಬವನ್ನು ಆಚರಿಸುತ್ತಿದ್ದರೆ ಚಿದ್ದನ್ ಗ್ರಾಮದಲ್ಲಿ ತಂಗಿಯಿಂದ ರಾಖಿ ಕಟ್ಟಿಸಿಕೊಂಡ ಅಣ್ಣ ಡ್ರಗ್ಸ್​ ಇಂಜೆಕ್ಷನ್ ಚುಚ್ಚಿಕೊಂಡು ಸಾವನ್ನಪ್ಪಿದ್ದಾನೆ. ನವದೀಪ್ ಕೌರ್ ಎಂಬ ಯುವತಿಯ ಅಣ್ಣ ದಿಲ್ ಎಂಬಾತ ಡ್ರಗ್ಸ್​ಗೆ ಬಲಿಯಾಗಿ ಮೃತಪಟ್ಟ ಯುವಕ.

ಪಂಜಾಬ್‌ನಲ್ಲಿ ಡ್ರಗ್ಸ್ ಸೇವನೆಯಿಂದ ಯುವಕರ ಸಾವು ಇನ್ನೂ ನಿಂತಿಲ್ಲ. ಅಮೃತಸರದ ಅಟ್ಟಾರಿ ಗಡಿ ಪ್ರದೇಶದ ಚಿದ್ದನ್ ಗ್ರಾಮದಲ್ಲಿ ರಾಖಿ ದಿನದಂದು ಮಾದಕ ವ್ಯಸನಿಯೊಬ್ಬ ಮೃತಪಟ್ಟಿದ್ದಾನೆ. ಆತ ತನ್ನ ಕುಟುಂಬದಲ್ಲಿ ಒಬ್ಬನೇ ಮಗನಾಗಿದ್ದು, ಆತನ ಸಾವಿನಿಂದ ಕುಟುಂಬ ಕಂಗಾಲಾಗಿದೆ. ಆ ಗ್ರಾಮದಲ್ಲಿ ಮನೆ ಮನೆಯಲ್ಲೂ ಡ್ರಗ್ಸ್​ ಮಾರಾಟವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ಪೈಲಟ್ ಸಹೋದರನಿಗೆ ಸಾವಿರಾರು ಅಡಿ ಎತ್ತರದಲ್ಲಿ ವಿಮಾನ ಹಾರಾಡುತ್ತಿರುವಾಗಲೇ ರಾಖಿ ಕಟ್ಟಿದ ಸಹೋದರಿ

ಗುರುವಾರ ಇಡೀ ಭಾರತ ರಾಖಿ ಹಬ್ಬವನ್ನು ಆಚರಿಸುತ್ತಿದೆ. ಆದರೆ ರಾಖಿ ಹಬ್ಬದಂದು ನನ್ನ ಅಣ್ಣ ನನ್ನಿಂದ ದೂರವಾಗಿದ್ದಾನೆ ಎಂದು ಮೃತನ ಸಹೋದರಿ ನವದೀಪ್ ಕೌರ್ ಬೇಸರ ಹೊರಹಾಕಿದ್ದಾರೆ. ರಕ್ಷಾಬಂಧನದ ದಿನ ಬೆಳಗ್ಗೆ ನಾನು ಅಣ್ಣನ ಕೈಗೆ ರಾಖಿ ಕಟ್ಟಿದ್ದೆ. ಅದಾದ ನಂತರ ಆತ ತನ್ನ ಸ್ನೇಹಿತರನ್ನು ಭೇಟಿಯಾಗಲು ಹೊರಟಿದ್ದ ಎಂದು ಆಕೆ ಹೇಳಿದ್ದಾರೆ.

ಮಧ್ಯಾಹ್ನದ ನಂತರ ಮನೆಗೆ ಬಂದ ಆತ ಎಲ್ಲಿಂದಲೋ ಡ್ರಗ್ಸ್ ಪ್ಯಾಕೆಟ್ ತಂದು ಸೀದಾ ಬಾತ್ ರೂಮಿಗೆ ಹೋದ. ಅಲ್ಲಿ ಇಂಜೆಕ್ಷನ್ ಮೂಲಕ ಡ್ರಗ್ಸ್​ ಚುಚ್ಚಿಕೊಂಡು ಆತ ಸಾವನ್ನಪ್ಪಿದ್ದಾನೆ. ಬಹಳ ಹೊತ್ತಾದರೂ ಬಾತ್ ರೂಂ ಬಾಗಿಲು ತೆರೆಯದೇ ಇದ್ದಾಗ ಆತನ ತಂದೆ ಬಾಗಿಲು ಒಡೆದರು. ಆ ದಿಲ್‌ನ ಹೆಣವಾಗಿ ಬಿದ್ದಿದ್ದ. ಅವನ ತೋಳಿಗೆ ಡ್ರಗ್ ಇಂಜೆಕ್ಷನ್ ಚುಚ್ಚಿಕೊಂಡಿತ್ತು ಎಂದು ಆಕೆ ಹೇಳಿದ್ದಾರೆ.

ಅಪರಾಧಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್