AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐದು ದಶಕಗಳ ಹಿಂದೆ ಅಮೆರಿಕದಲ್ಲಿ16-ವರ್ಷದ ಯುವತಿಯನ್ನು ವಾಮಾಚಾರದ ಭಾಗವಾಗಿ ನರಬಲಿ ನೀಡಲಾಗಿತ್ತೆ?

ಡಿಪಾಲ್ಮಳ ದೇಹ ಸಿಕ್ಕ ದಿನಗಳಲ್ಲೇ ಸ್ಪ್ರಿಂಗ್ ಫೀಲ್ಡ್ ಪ್ರದೇಶದಲ್ಲಿ ಪ್ರವಾಹ ಬಂದಿದ್ದರಿಂದ ಸಾಕ್ಷ್ಯಗಳು ನಾಶವಾಗಿದ್ದವು. ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಡಿಪಾಲ್ಮಳ ದೇಹ ಕೊಳೆತಿದ್ದರಿಂದ ಪೊಲೀಸರಿಗೆ ಸಾವಿನ ಕಾರಣ ಪತ್ತೆ ಮಾಡುವುದು ಕಷ್ಟವಾಯಿತು.

ಐದು ದಶಕಗಳ ಹಿಂದೆ ಅಮೆರಿಕದಲ್ಲಿ16-ವರ್ಷದ ಯುವತಿಯನ್ನು ವಾಮಾಚಾರದ ಭಾಗವಾಗಿ ನರಬಲಿ ನೀಡಲಾಗಿತ್ತೆ?
ಜಾನೆಟ್ ಡಿಪಾಲ್ಮ
TV9 Web
| Edited By: |

Updated on: Nov 13, 2022 | 8:05 AM

Share

ಭೂತ-ಪ್ರೇತ, ಭಾನಮತಿ, ಮಾಟ-ಮಂತ್ರ, ಬಲಿಕೊಡುವ ಪದ್ಧತಿ, ಮೂಢನಂಬಿಕೆಗಳು (superstitions) ಕೇವಲ ನಮ್ಮ ದೇಶದಲ್ಲಿ ಮಾತ್ರ ಅಲ್ಲ ಬೇರೆ ದೇಶಗಳಲ್ಲೂ ವ್ಯಾಪಕವಾಗಿವೆ ಮಾರಾಯ್ರೇ. ಎಲ್ಲಾ ಆಯಾಮಗಳಲ್ಲೂ ಇತರ ದೇಶಗಳಿಗಿಂತ ತಾನು ಮುಂದೆ ಎಂದು ಹೇಳಿಕೊಳ್ಳುವ ಅಮೆರಿಕಾದಲ್ಲೂ ಇವೆಲ್ಲ ನಡೆಯುತ್ತವೆ. ಅಲ್ಲಿನ ಮ್ಯಾಸಾಚ್ಯೂಸೆಟ್ಸ್ (Massachusetts), ಒರೆಗಾನ್ ರಾಜಧಾನಿ ಸಲಮ್ ನಲ್ಲಿ (salem) ಮಾಟ-ಮಂತ್ರ, ಬಲಿಕೊಡೋದು ಮೊದಲಾದವೆಲ್ಲ ಜಾಸ್ತಿ. ಆದರೆ ನಾವಿಲ್ಲಿ ಹೇಳುತ್ತಿರುವ ಕತೆ ಆ ಭಾಗದ್ದಲ್ಲ, ಬದಲಿಗೆ ನ್ಯೂ ಜರ್ಸಿಯ ಸ್ಪ್ರಿಂಗ್ ಫೀಲ್ಡ್ ನಲ್ಲಿ ನಡೆದಿದ್ದು.

ಅದು ಡಿಪಾಲ್ಮಳ ದೇಹ!

1972 ರಲ್ಲಿ ಅದೊಂದು ದಿನ ನಾಯಿಯೊಂದು ಕೊಳೆತು ನಾರುತ್ತಿದ್ದ ಮಾನವ ಮುಂಗೈಯನ್ನು ಬಾಯಲ್ಲಿ ಕಚ್ಚಿಕೊಂಡು ಸ್ಪ್ರಿಂಗ್ ಫೀಲ್ಡ್ ನ ಬೀದಿಗಳಲ್ಲಿ ಓಡಾಡುತ್ತಾ ತನ್ನ ಮಾಲೀಕನ ಮನೆಗೆ ವಾಪಸ್ಸಾಗಿತ್ತು. ಪೊಲೀಸರು ನಾಯಿ ಓಡಾಡಿರಬಹುದಾದ ಜಾಡನ್ನು ಹುಡುಕುತ್ತಾ ಹೋದಾಗ ಅವರು ತಲುಪಿದ್ದು ದೊಡ್ಡ ಬಂಡೆಯೊಂದರ ಮೇಲ್ಭಾಗವನ್ನು. 6-ವಾರಗಳಿಂದ ನಾಪತ್ತೆಯಾಗಿದ್ದ 16-ವರ್ಷ-ವಯಸ್ಸಿನ ಜಾನೆಟ್ ಡಿಪಾಲ್ಮ ಹೆಸರಿನ ಯುವತಿಯ ದೇಹ ಅಲ್ಲಿ ಪತ್ತೆಯಾಯಿತು.

ದೇಹ ಪತ್ತೆಯಾದ ಸಂಗತಿ ಹಬ್ಬುತ್ತಿದ್ದಂತೆಯೇ ಅವಳ ಸಾವಿನ ಬಗ್ಗೆ ನೂರಾರು ಕತೆಗಳು ಹುಟ್ಟಿಕೊಂಡು ಹರಿದಾಡಲಾರಂಭಿಸಿದವು. ಅವಳ ದೇಹ ಬಂಡೆಯ ಮೇಲಿದ್ದ ಕಂಬವೊಂದರ ಮೇಲೆ ನೇತು ಹಾಕಲಾಗಿತ್ತು ಅಂತ ಕೆಲವರು ಹೇಳಿದರು. ಅವಳ ದೇಹದ ಮೇಲೆ ವಾಮಾಚಾರ ನಡೆದ ಗುರುತುಗಳಿದ್ದವು.

ಡಿಪಾಲ್ಮಳ ನರಬಲಿ? 

ಸ್ಪ್ರಿಂಗ್ ಫೀಲ್ಡ್ ನ ಹಲವಾರು ನಿವಾಸಿಗಳ ಹಾಗೆ ಪೊಲೀಸರು ಕೂಡ ಡಿಪಾಲ್ಮಳನ್ನು ನರಬಲಿಯಾಗಿ ಅರ್ಪಿಸಲಾಗಿದೆ ಅಂತ ಹರಿದಾಡುತ್ತಿದ್ದ ಸುದ್ದಿಯನ್ನು ನಂಬಿದರು. ಅಮೆರಿಕದಲ್ಲಿ ವಾಮಾಚಾರ, ಭಾನಾಮತಿ ನಡೆಸುವವರನ್ನು ಮತ್ತು ಮಾಂತ್ರಿಕರೆಂದು ಹೇಳಿಕೊಳ್ಳುವವರನ್ನು ಸೆಟಾನಿಸ್ಟ್ ಗಳೆಂದು ಕರೆಯುತ್ತಾರೆ.

ಡಿಪಾಲ್ಮಳ ದೇಹ ಸಿಕ್ಕ ದಿನಗಳಲ್ಲೇ ಸ್ಪ್ರಿಂಗ್ ಫೀಲ್ಡ್ ಪ್ರದೇಶದಲ್ಲಿ ಪ್ರವಾಹ ಬಂದಿದ್ದರಿಂದ ಸಾಕ್ಷ್ಯಗಳು ನಾಶವಾಗಿದ್ದವು. ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಡಿಪಾಲ್ಮಳ ದೇಹ ಕೊಳೆತಿದ್ದರಿಂದ ಪೊಲೀಸರಿಗೆ ಸಾವಿನ ಕಾರಣ ಪತ್ತೆ ಮಾಡುವುದು ಕಷ್ಟವಾಯಿತು.

ನಿರಾಶ್ರಿತನ ಮೇಲೆ ಸಂಶಯ!

ಸ್ಪ್ರಿಂಗ್ ಫೀಲ್ಡ್ ನ ಏರಿಯಾವೊಂದರಲ್ಲಿ ನಿರಾಶ್ರಿತನಾಗಿ ಒಬ್ಬಂಟಿ ಬದುಕು ನಡೆಸುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರಿಗೆ ಪ್ರಬಲ ಶಂಕಿತನಾಗಿ ಕಂಡ. ಆದರೆ ಅವನ ವಿರುದ್ಧ ಯಾವುದೇ ಪುರಾವೆ ಸಿಗಲಿಲ್ಲ.

ಮಾಟಮಂತ್ರದ ವಿಷಯಕ್ಕೆ ಬಂದರೆ, ಡಿಪಾಲ್ಮ ಆ ಸಂಗತಿಗಳನ್ನು ದ್ವೇಷಿಸುತ್ತಿದ್ದಳು ಮತ್ತು ಸೈತಾನ-ಆರಾಧಕರನ್ನು ದೇವರೆಡೆ ತಿರುಗಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಳು. ವಾಮಾಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ದೇವರನ್ನು ನಂಬುವಂತೆ ಜನರಿಗೆ ಬೋಧಿಸುತ್ತಿದ್ದ ಧಾರ್ಮಿಕ ಸಂಸ್ಥೆಯೊಂದರ ಸದಸ್ಯೆಯಾಗಿದ್ದಳು.

ಸತ್ಯ ಹೊರಬೀಳಲಿಲ್ಲ!

ಸಂಸ್ಥೆಯನ್ನು ನಡೆಸುತ್ತಿದ್ದ ಪ್ರೀಚರೊಬ್ಬರ ಪ್ರಕಾರ ಸೈತಾನ ಆರಾಧಕರು ಡಿಪಾಲ್ಮಳನ್ನು ನರಬಲಿಯಾಗಿ ಅರ್ಪಿಸಿದ್ದರು. ನರಬಲಿಯ ಭಾಗವಾಗಿಯೇ ಅವಳ ಹತ್ಯೆಯಾಯಿತೆ? ಅಥವಾ ನಿಜವಾದ ಹಂತಕನ್ನು ಉಳಿಸಲು ನರಬಲಿಯ ಕತೆ ಹರಿಬಿಡಲಾಯಿತೇ?

ಸತ್ಯ ಹೊರಬೀಳಲೇ ಇಲ್ಲ!

ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ