ಪತ್ನಿಯ ಕೊಲೆ ಮಾಡಿ, ಶವವನ್ನು ಕಾರಿನಲ್ಲಿಟ್ಟು ಓಡಿ ಹೋಗಲು ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ

ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದು, ಶವವನ್ನು ಕಾರಿನಲ್ಲಿಟ್ಟು ಪರಾರಿಯಾಗಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 21 ವರ್ಷದ ಗೌತಮ್ ಎಂಬ ವ್ಯಕ್ತಿ ತನ್ನ ಪತ್ನಿಯನ್ನು ಕೊಂದು ಕಾರಿನಲ್ಲಿ ಮಲಗಿಸಿ ಓಡಿಹೋಗಲು ಯತ್ನಿಸುತ್ತಿದ್ದ ಅದೇ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ.

ಪತ್ನಿಯ ಕೊಲೆ ಮಾಡಿ, ಶವವನ್ನು ಕಾರಿನಲ್ಲಿಟ್ಟು ಓಡಿ ಹೋಗಲು ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ
ಕ್ರೈಂ
Image Credit source: Getty Images

Updated on: Sep 02, 2024 | 2:28 PM

ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದು, ಶವವನ್ನು ಕಾರಿನಲ್ಲಿಟ್ಟು ಪರಾರಿಯಾಗಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 21 ವರ್ಷದ ಗೌತಮ್ ಎಂಬ ವ್ಯಕ್ತಿ ತನ್ನ ಪತ್ನಿಯನ್ನು ಕೊಂದು ಕಾರಿನಲ್ಲಿ ಮಲಗಿಸಿ ಓಡಿಹೋಗಲು ಯತ್ನಿಸುತ್ತಿದ್ದ ಅದೇ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ.

ಖಯಾಲಾ ಪೊಲೀಸ್ ಠಾಣೆಯಲ್ಲಿ ನಿಯೋಜಿತವಾದ ಹೆಡ್ ಕಾನ್‌ಸ್ಟೆಬಲ್ ಅಜಯ್ ಅವರು ಮಧ್ಯರಾತ್ರಿ 1.20 ಕ್ಕೆ ಅನುಮಾನಾಸ್ಪದವಾಗಿ ಶರ್ಟ್ ಇಲ್ಲದೆ ತಿರುಗಾಡುತ್ತಿದ್ದ ಗೌತಮ್‌ನನ್ನು ಬಂಧಿಸಿದಾಗ ವಿಷಯ ಬಯಲಿಗೆ ಬಂದಿದೆ.

ವಿಚಾರಣೆಗೊಳಪಡಿಸಿದಾಗ ಗೌತಮ್ ತನ್ನ 20 ವರ್ಷದ ಪತ್ನಿ ಮಾನ್ಯಾಳನ್ನು ಕೊಂದು ಕಾರಿನಲ್ಲಿ ಶವವನ್ನು ಇಟ್ಟಿರುವುದಾಗಿ ಹೇಳಿದ್ದಾರೆ. ಹೆಚ್ಚಿನ ವಿಚಾರಣೆ ಮತ್ತು ಪರಿಶೀಲನೆಯಲ್ಲಿ, ರಘುಬೀರ್ ನಗರದ ನಿವಾಸಿ ಗೌತಮ್ ಅವರು ತಮ್ಮ ಕುಟುಂಬದ ಒಪ್ಪಿಗೆಯಿಲ್ಲದೆ ಮಾರ್ಚ್‌ನಲ್ಲಿ ಮಾನ್ಯ ಅವರನ್ನು ಮದುವೆಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ದೆಹಲಿಯಲ್ಲಿ ಬ್ಯಾಗ್​ನಲ್ಲಿ 6 ದಿನದ ಹೆಣ್ಣು ಮಗುವಿನ ಶವ ಪತ್ತೆ; ಹೆತ್ತವಳೇ ಹಂತಕಿ

ಮದುವೆಯ ನಂತರವೂ ಅವರು ತಮ್ಮ ಕುಟುಂಬಗಳೊಂದಿಗೆ ಮಾತ್ರ ವಾಸಿಸುತ್ತಿದ್ದರು ಮತ್ತು ಆಗಾಗ ಭೇಟಿಯಾಗುತ್ತಿದ್ದರು ಎಂದು ಅಧಿಕಾರಿ ಹೇಳಿದರು. ಭಾನುವಾರ ರಾತ್ರಿ ಗೌತಮ್ ರಾಜೌರಿ ಗಾರ್ಡನ್ ಪ್ರದೇಶದ ತಿತಾರ್‌ಪುರದಲ್ಲಿ ಯಾವುದೋ ಕಾರಿನಲ್ಲಿ ಮಾನ್ಯನನ್ನು ಭೇಟಿಯಾಗಲು ಬಂದಿದ್ದ.

ನಾವು ಒಟ್ಟಿಗೆ ಬದುಕಬೇಕು ಎಂದು ಮಾನ್ಯ ಒತ್ತಾಯ ಮಾಡಿದ್ದಳು, ಅವರಿಬ್ಬರ ನಡುವೆ ಕಾರಿನಲ್ಲೇ ವಾಗ್ವಾದ ನಡೆದಿತ್ತು. ಗೌತಮ್ ಮಾನ್ಯ ಮೇಲೆ ಹಲ್ಲೆ ನಡೆಸಿದ್ದಾರೆ.ಕೂಡಲೇ ಮೃತಪಟ್ಟಿದ್ದಾರೆ, ಶಿವಾಜಿ ಕಾಲೇಜಿನ ಬಳಿ ಕಾರನ್ನು ನಿಲ್ಲಿಸಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಹೆಡ್ ಕಾನ್​ಸ್ಟೆಬಲ್​ ಅಜಯ್ ಬಂಧಿಸಿದ್ದಾರೆ.

ರಜೌರಿ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಹೇಳಿದಂತೆ ಸತ್ಯಾಸತ್ಯತೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us