AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಷಾರಾಮಿ ಕಾರಿನಲ್ಲಿ ಡ್ರಗ್ಸ್​ ಮಾರಾಟ; ಬಟ್ಟೆ ವ್ಯಾಪಾರಿ ಪುತ್ರನನ್ನ ಅರೆಸ್ಟ್​ ಮಾಡಿದ ಪೊಲೀಸರು

ಖಾಸಗಿ ಕಂಪನಿಯ ವೆಸ್ಟ್​ಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಜಿಗಣಿ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಲೂಕಿನ ಮಾದ ಪಟ್ಟಣದಲ್ಲಿ ಘಟನೆ ನಡೆದಿದೆ.

ಐಷಾರಾಮಿ ಕಾರಿನಲ್ಲಿ ಡ್ರಗ್ಸ್​ ಮಾರಾಟ; ಬಟ್ಟೆ ವ್ಯಾಪಾರಿ ಪುತ್ರನನ್ನ ಅರೆಸ್ಟ್​ ಮಾಡಿದ ಪೊಲೀಸರು
ಫೈಜಲ್ ಅಹ್ಮದ್​
TV9 Web
| Edited By: |

Updated on: Mar 12, 2022 | 2:01 PM

Share

ಬೆಂಗಳೂರು: ಡ್ರಗ್ (Drugs)  ಕೇಸ್​ನಲ್ಲಿ ಬಟ್ಟೆ ವ್ಯಾಪಾರಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಫಜಲ್ ಬಂಧಿತ ಆರೋಪಿ. ಐಷಾರಾಮಿ ಕಾರ್​ನಲ್ಲಿ ಡ್ರಗ್ ಸಮೇತ ಸಿಕ್ಕಿಬಿದಿದ್ದಾನೆ. ಬಾಪೂಜಿನಗರ ನಿವಾಸಿಯಾಗಿರುವ ಬಂಧಿತನ ತಂದೆ ಬಟ್ಟೆ ವ್ಯಾಪಾರಿಯಾಗಿದ್ದು, ಮಗ ಫೈಜಲ್ ಅಹ್ಮದ್​ನಿಂದ ಡ್ರಗ್ ಮಾರಟ ಆರೋಪ ಮಾಡಲಾಗಿದೆ. ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ್ದು, ಡ್ರಗ್ ಸಮೇತ ಫೈಜಲ್ ಸಿಕ್ಕಿ ಬಿದಿದ್ದಾನೆ. ಕೆಂಗೇರಿಯ ಲಕ್ಷ್ಮಿದೇವಿ‌ ಟೆಂಪಲ್ ಬಳಿ ಫಾರ್ಚುನರ್ ಕಾರಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ 5 ಗ್ರಾಂ ಎಂಡಿಎಂಎ ಟ್ಯಾಬ್ಲೆಟ್​ನಲ್ಲಿ ಮಾರಾಟ ಮಾಡುತ್ತಿದ್ದ. ಡ್ರಗ್ ಪೆಡ್ಲಿಂಗ್​ಗೆ ಅಪ್ಪನ ಫಾರ್ಚುನರ್ ಕಾರಿನಲ್ಲೇ ಮಾರಾಟ ಮಾಡಿದ್ದ. ಖಚಿತ ಮಾಹಿತಿ ಹಿನ್ನಲೆ ದಾಳಿ‌ ನಡೆಸಿ ಮಾದಕ ವಸ್ತು ವಶ ಪಡಿಸಿಕೊಳ್ಳಲಾಗಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ಕಂಪನಿ ವೆಸ್ಟ್​ಗೆ ಹೊತ್ತಿಕೊಂಡ ಬೆಂಕಿ:

ಆನೇಕಲ್: ಖಾಸಗಿ ಕಂಪನಿಯ ವೆಸ್ಟ್​ಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಜಿಗಣಿ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಲೂಕಿನ ಮಾದ ಪಟ್ಟಣದಲ್ಲಿ ಘಟನೆ ನಡೆದಿದೆ. ಕಂಪನಿಯ ಸುತ್ತಮುತ್ತ ದಟ್ಟ ಹೊಗೆ ಆವರಿಸಿದ್ದು, ಜನನಿಬಿಡ ಪ್ರದೇಶದಲ್ಲಿ ಕಂಪನಿಯ ನಿರ್ಲಕ್ಷವಹಿಸಲಾಗಿದೆ. ಸುತ್ತಮುತ್ತ ದಟ್ಟ ಬೆಂಕಿ ಆವರಿಸುತ್ತಿದ್ದು, ಕಂಪನಿಯ ಅಕ್ಕಪಕ್ಕದಲ್ಲಿ ಸಾಕಷ್ಟು ಮನೆಗಳಿವೆ. ಬಿಸಿಲ ಬೇಗೆಗೆ ಬೆಂಕಿಯ ಕೆನ್ನಾಲಿಗೆ ಇನ್ನಷ್ಟು ಹೆಚ್ಚಾಗುತ್ತಿದೆ. ಸ್ಟರ್ಲಿಂಗ್ ಎನ್ವಿರೋವೈಜರ್ಸ್ & ಇಂಕ್ವಿಪ್ಮೆಂಟ್ ಕಾರ್ಖಾನೆ ಇದಾಗಿದ್ದು, ಸಾರ್ವಜನಿಕ ಸ್ಥಳದಲ್ಲೇ ವೇಸ್ಟೇಜ್ ಬಿಸಾಡಲಾಗಿದೆ. ಕಂಪನಿಯಲ್ಲಿ ಸಾಕಷ್ಟು ಜನ ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.

ಈಜುತ್ತಿರುವಾಗ ಮುಳುಗು ವ್ಯಕ್ತಿ ಸಾವು:

ಶಿರಸಿಯ ಮುರೇಗಾರ ಫಾಲ್ಸ್​ನಲ್ಲಿ ಮುಳುಗಿ ವ್ಯಕ್ತಿಯೊರ್ವ ಸಾವನ್ನಪ್ಪಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮುರೆಗಾರ  ಪಾಲ್ಸ್​ನಲ್ಲಿ ಈಜುತ್ತಿರುವಾಗ ಮುಳುಗಿ ಸಾವನ್ನಪ್ಪಿದ್ದಾರೆ. ತುಮಕೂರು ಮೂಲದ ವ್ಯಕ್ತಿ ನವೀನ ಕುಮಾರ್ (೩೫) ಮೃತ ದುರ್ದೈವಿ. ಆರ್​.ಎಸ್​.ಎಸ್​ ಪ್ರಮುಖನಾಗಿ ಗುರುತಿಸಿಕೊಂಡಿದ್ದ ನವೀನ ಕುಮಾರ, ಸುಮಾರು ಐವತ್ತು ಜನರೊಂದಿಗೆ ಪ್ರವಾಸಕ್ಕೆ ಬಂದಿದ್ದ. ತುಮಕೂರು ನಗರದ ಸಂಘದ ಜವಾಬ್ಧಾರಿ ನವೀನ ಕುಮಾರ ವಹಿಸಿಕೊಂಡಿದ್ದ. ಶಿರಸಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ:

ಈವರೆಗೆ ಬಿಜೆಪಿಯನ್ನು ಹಿಂದಿಕ್ಕಲು ಆಗಿಲ್ಲವೆಂಬುದು ವಾಸ್ತವ: ಪಂಚ ರಾಜ್ಯ ಫಲಿತಾಂಶದ ಬಳಿಕ ಮಾಜಿ ಪ್ರಧಾನಿ ದೇವೇಗೌಡ ವ್ಯಾಖ್ಯಾನ

ತಮಗಿಂತ ಎತ್ತರ ಇರುವ ಹೆಂಡ್ತಿ ಜತೆ ಹೈಟ್​ ಮ್ಯಾಚ್​ ಮಾಡಲು ಕಷ್ಟಪಟ್ಟ ಹಿಮೇಶ್​; ಸಿಕ್ಕಾಪಟ್ಟೆ ಟ್ರೋಲ್​

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!