AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುರಪುರ ದೇವಿಕೇರಾ ಜಾತ್ರೆಯಲ್ಲಿ ಅನಿಷ್ಟ ಪದ್ಧತಿ; ದೇವರಿಗೆ ಬಲಿ ಕೊಟ್ಟ ಕೋಣದ ಮಾಂಸ ತಿನ್ನದಿದ್ದರೆ ದಲಿತರಿಗೆ ಗ್ರಾಮದಿಂದ ಬಹಿಷ್ಕಾರ!

ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿದೆ. ದೇವರಿಗೆ ಬಲಿ ಕೊಟ್ಟ ಕೋಣದ ಮಾಂಸ ತಿನ್ನದಿದ್ದರೆ ಗ್ರಾಮದಿಂದಲೇ ದಲಿತರನ್ನು ಬಹಿಷ್ಕಾರ ಮಾಡಲಾಗುತ್ತದೆಯಂತೆ. ಇಂತಹ ಒಂದು ಅನಿಷ್ಟ ಪದ್ಧತಿಯನ್ನು ಸುರಪುರ ತಾಲೂಕಿನ ದೇವಿಕೇರಾ ಜಾತ್ರೆಯಲ್ಲಿ ಅನುಸರಿಸಲಾಗುತ್ತಿದೆ. ಈ ಜಾತ್ರೆಯಲ್ಲಿ ಹತ್ತಾರು ಕೋಣಗಳನ್ನು ದೇವರಿಗೆ ಬಲಿ‌ ಕೊಟ್ಟು ಮಾಂಸವನ್ನು ದಲಿತರು ತಿನ್ನಬೇಕು ಎಂಬ ಅನಿಷ್ಟ ನಿಯಮವನ್ನು ಹೇರಲಾಗಿದೆ.

ಸುರಪುರ ದೇವಿಕೇರಾ ಜಾತ್ರೆಯಲ್ಲಿ ಅನಿಷ್ಟ ಪದ್ಧತಿ; ದೇವರಿಗೆ ಬಲಿ ಕೊಟ್ಟ ಕೋಣದ ಮಾಂಸ ತಿನ್ನದಿದ್ದರೆ ದಲಿತರಿಗೆ ಗ್ರಾಮದಿಂದ ಬಹಿಷ್ಕಾರ!
ಸುರಪುರ ದೇವಿಕೇರಾ ಜಾತ್ರೆಯಲ್ಲಿ ಹೇರಲಾಗುತ್ತಿರುವ ಅನಿಷ್ಟ ಪದ್ಧತಿ ವಿರುದ್ಧ ಯಾದಗಿರಿ ಜಿಲ್ಲಾಧಿಕಾರಿ, ಎಸ್​ಪಿಗೆ ದೂರು ನೀಡಿದ ದಲಿತ ಸಮುದಾಯ
ಅಮೀನ್​ ಸಾಬ್​
| Edited By: |

Updated on:Dec 18, 2023 | 2:04 PM

Share

ಯಾದಗಿರಿ, ಡಿ.16: ಜಿಲ್ಲೆಯಲ್ಲಿ (Yadgir) ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿದೆ. ದೇವರಿಗೆ ಬಲಿ ಕೊಟ್ಟ ಕೋಣದ ಮಾಂಸ ತಿನ್ನದಿದ್ದರೆ ಗ್ರಾಮದಿಂದಲೇ ದಲಿತರನ್ನು ಬಹಿಷ್ಕಾರ ಮಾಡಲಾಗುತ್ತದೆ. ಇಂತಹ ಒಂದು ಅನಿಷ್ಟ ಪದ್ಧತಿಯನ್ನು ಸುರಪುರ ತಾಲೂಕಿನ ದೇವಿಕೇರಾ ಜಾತ್ರೆಯಲ್ಲಿ (Surapura Devikera fair) ಅನುಸರಿಸಲಾಗುತ್ತಿದೆ. ಈ ಜಾತ್ರೆಯಲ್ಲಿ ಹತ್ತಾರು ಕೋಣಗಳನ್ನು ದೇವರಿಗೆ ಬಲಿ‌ ಕೊಟ್ಟು ಮಾಂಸವನ್ನು ದಲಿತರು ತಿನ್ನಬೇಕು ಎಂಬ ಅನಿಷ್ಟ ನಿಯಮವನ್ನು ಹೇರಲಾಗಿದೆ.

ದೇವಿಕೇರಾ ಗ್ರಾಮದಲ್ಲಿ ಡಿ.18 ರಿಂದ ಎರಡು ದಿನ ದ್ಯಾಮವ್ವ, ಮರೆಮ್ಮ, ಪಾಲ್ಕಮ್ಮ ಗ್ರಾಮದೇವತೆಗಳ ಜಾತ್ರೆ ನಡೆಯಲಿದೆ. ಈ ಜಾತ್ರೆಯಲ್ಲಿ ಹತ್ತಾರು ಕೋಣಗಳನ್ನು ದೇವರಿಗೆ ಬಲಿ‌ ಕೊಡುವ ಅನಿಷ್ಟ ಪದ್ಧತಿ ಇದೆ. ಬಲಿ ಕೊಟ್ಟ ಕೋಣದ ಮಾಂಸವನ್ನು ದಲಿತರು ತಿನ್ನಬೇಕು. ಇಲ್ಲದಿದ್ದರೆ ಗ್ರಾಮದೊಳಗೆ ಪ್ರವೇಶವಿಲ್ಲ ಎಂದು ದಲಿತ ಸಮುದಾಯ ಆರೋಪ ಮಾಡಿದೆ.

ಇದನ್ನೂ ಓದಿ: ಸಾಮಾಜಿಕ ಬಹಿಷ್ಕಾರ; ಮನನೊಂದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಈ ಬಗ್ಗೆ ರಾಜ್ಯ ದಲಿತ ಸಂಘರ್ಷ ಸಮಿತಿಯ (ಕ್ರಾಂತಿಕಾರಿ ಬಣ) ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಅವರು ಜಿಲ್ಲಾಧಿಕಾರಿ, ಎಸ್​ಪಿ​​ಗೆ ದೂರು ನೀಡಿದ್ದಾರೆ‌‌‌. ದೇವಿಕೇರಾ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿಪರೀತ ಕೋಣ ಬಲಿ ನಡೆಯುತ್ತವೆ‌. ಜೊತೆಗೆ ಸುರಪುರ, ಹುಣಸಗಿ ತಾಲೂಕಿನಲ್ಲಿ ಡಿಸೆಂಬರ್​ನಿಂದ ಫೆಬ್ರವರಿ ವರೆಗೆ ಹೆಚ್ಚು ಜಾತ್ರೆಗಳು ನಡೆಯುತ್ತವೆ. ಈ ಜಾತ್ರೆಗಳಲ್ಲಿ ದೇವರ ಹೆಸರಿನಲ್ಲಿ ನೂರಾರು ಪ್ರಾಣಿಗಳನ್ನು ಬಲಿ ಕೊಡಲಾಗುತ್ತಿದೆ. ಈ ತರಹದ ಮೂಢನಂಬಿಕೆ ಹೆಚ್ಚಾಗುತ್ತಿದೆ. ಇದನ್ನು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ತಡೆಯಬೇಕೆಂದು ದೂರು ನೀಡಲಾಗಿದೆ.

ಪ್ರಾಣಿ ಬಲಿ ಹೆಸರಲ್ಲಿ ಚಂದಾ ವಸೂಲಿ

ದೇವರ ಹೆಸರಲ್ಲಿ ಪ್ರಾಣಿ ಬಲಿ ಬಗ್ಗೆ ಡಂಗೂರು ಸಾರಲಾಗುತ್ತಿದೆ. ದೇವಿಕೇರಾ ಗ್ರಾಮದಲ್ಲಿ ದೇವರ ಹೆಸರಿನಲ್ಲಿ ಪ್ರಾಣಿ ಬಲಿಗಾಗಿ ಪ್ರತಿ ಮನೆಯಿಂದ ಚಂದಾ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಚಂದಾ ಎತ್ತುವ ಬಗ್ಗೆ ಗೌಪ್ಯವಾಗಿರಬೇಕೆಂದು ಜನರಿಗೆ ಎಚ್ಚರಿಕೆ ನೀಡಲಾಗಿದೆ. ಒಂದು ವಾರದ ಹಿಂದೆ ದೇವಿಕೇರಾ ಗ್ರಾಮದಲ್ಲಿ ಡಂಗೂರು ಸಾರಿಸಲಾಗಿದೆ ಎಂದು ಕೋಣದ ಮಾಂಸ ತಿನ್ನಲು ಆಕ್ಷೇಪಿಸಿದ ಕೆಲ ವ್ಯಕ್ತಿಗಳು ಇದರ ಬಗ್ಗೆ ತಿಳಿಸಿದ್ದಾರೆ.

ಕೋಣದ ರೀತಿ ವ್ಯಕ್ತಿಯ ಬಲಿ!

ಅನಿಷ್ಟ ಪದ್ಧತಿ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ, ದೇವಿಕೇರಾ ಗ್ರಾಮದಲ್ಲಿ ದೇವರ ಜಾತ್ರೆ ವೇಳೆ ಕೋಣ ಹಾಗೂ ಕುರಿಗಳ ಬಲಿ ಕೊಡಲಾಗುತ್ತದೆ. ಜಾತ್ರೆ ವೇಳೆ ಕೋಣ ಬಲಿ ಕೊಡುವ ವೇಳೆ ವ್ಯಕ್ತಿಯೊಬ್ಬನ ಕೊಲೆ ಮಾಡಲಾಗುತ್ತದೆ ಎಂದು ಜೀವ ಬೇದರಿಕೆ ಹಾಕಲಾಗಿದೆ. ಕೋಣ ರೀತಿ ಕಡಿಯಲಾಗುತ್ತದೆಂದು ಜೀವಬೇದರಿಕೆ ಹಾಕಿದ್ದಾರೆ. ದೇವಿಕೇರಾ ಗ್ರಾಮದಲ್ಲಿ ಕೋಣ ಹಾಗೂ ಕುರಿಗಳ ಬಲಿ ತಡೆಯಬೇಕು. ಜಾತ್ರೆ ವೇಳೆ ರಾಜಕೀಯ ದ್ವೇಷ ಹಾಗೂ ಹಳೆ ದ್ವೇಷದಿಂದ ಕೊಲೆ ನಡೆಯುವ ಸಂಭವ ಇರುತ್ತದೆ. ಜಾತ್ರೆ ವೇಳೆ ಪ್ರಾಣಿ ಬಲಿ ಕೊಡುವುದು ತಡೆಯಬೇಕೆಂದು ಒತ್ತಾಯಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:01 am, Sat, 16 December 23

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ