AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ಯುವತಿ ಮೇಲೆ KSRP ಪೊಲೀಸ್​ನಿಂದ ಲೈಂಗಿಕ ದೌರ್ಜನ್ಯ

ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯವಾದ ಕೆಎಸ್​ಆರ್​ಪಿ ಪೊಲೀಸ್​ ಬಾಳು ಕೊಡುತ್ತಾನೆಂದು ನಂಬಿ ಯುವತಿ ಹೈದರಾಬಾದ್​ನಿಂದ ಕಲಬುರಗಿಗೆ ಬಂದಿದ್ದಾಳೆ. ಆದರೆ, ಕೆಎಸ್​ಆರ್​ಪಿ ಪೊಲೀಸ್​ ಆಕೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಲಬುರಗಿ: ಯುವತಿ ಮೇಲೆ KSRP ಪೊಲೀಸ್​ನಿಂದ ಲೈಂಗಿಕ ದೌರ್ಜನ್ಯ
ಆರೋಪಿ ಯಲ್ಲಾಲಿಂಗ
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ವಿವೇಕ ಬಿರಾದಾರ|

Updated on: Oct 01, 2024 | 1:01 PM

Share

ಕಲಬುರಗಿ, ಅಕ್ಟೋಬರ್​ 01: ಮದುವೆಯಾಗುವುದಾಗಿ ನಂಬಿಸಿ ಕೆಎಸ್ಆರ್​​ಪಿ ಪೊಲೀಸ್ (KSRP Police) ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಯಲ್ಲಾಲಿಂಗ ಮೇತ್ರಿ ಅತ್ಯಾಚಾರ ಎಸಗಿದ ಕೆಎಸ್ಆರ್​​ಪಿ ಪೊಲೀಸ್ ಸಿಬ್ಬಂದಿ. ಸಂತ್ರಸ್ತೆ ಯಲ್ಲಾಲಿಂಗ ಮೇತ್ರಿ ವಿರುದ್ಧ ಕಲಬುರಗಿ (Kalaburagi) ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್​ಐಆರ್ ದಾಖಲಾಗಿದೆ. ಸಂತ್ರಸ್ತೆ ಹೈದರಾಬಾದ್​ ನಿವಾಸಿಯಾಗಿದ್ದು, ಯುವತಿಗೆ ಆರೋಪಿ ಯಲ್ಲಾಲಿಂಗ ಇನ್​ಸ್ಟಾಗ್ರಾಮ್​ ಮೂಲಕ ಪರಿಚಯವಾಗಿದ್ದಾನೆ.

ಇಬ್ಬರು ಸುಮಾರು ಐದು ತಿಂಗಳು ಇನ್​ಸ್ಟಾಗ್ರಾಮ್​ನಲ್ಲಿ ಮೇಸೆಜ್ ಮಾಡಿದ್ದಾರೆ. ಬಳಿಕ ಮೊಬೈಲ್​ ನಂಬರ್​ ಬದಲಾಯಿಸಿಕೊಂಡಿದ್ದಾರೆ. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಆರೋಪಿ ಯಲ್ಲಾಲಿಂಗ ಸಂತ್ರಸ್ತೆಗೆ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಆರೋಪಿ ಯಲ್ಲಾಲಿಂಗನ ಮಾತನ್ನು ಸಂತ್ರಸ್ತೆ ನಂಬಿದ್ದಾಳೆ.

ಮದುವೆಯಾಗೋಣ ಬಾ ಎಂದು ಆರೋಪಿ ಯಲ್ಲಾಲಿಂಗ ಆಗಸ್ಟ್​ 8 ರಂದು ಸಂತ್ರಸ್ತೆಯನ್ನು ಕಲಬುರಗಿ ಕರೆಸಿಕೊಂಡಿದ್ದಾನೆ. ಆರೋಪಿ ಯಲ್ಲಾಲಿಂಗ ಮಾತು ನಂಬಿ ಸಂತ್ರಸ್ತೆ ಅದೇ ದಿನ ರಾತ್ರಿ ಕಲಬುರಗಿಗೆ ಬಂದಿದ್ದಾಳೆ. ಬಳಿಕ, ಆರೋಪಿ ಯಲ್ಲಾಲಿಂಗ ಆಕೆಯನ್ನು ಬೈಕ್​ನಲ್ಲಿ ಕೂರಿಸಿಕೊಂಡು ಕಲಬುರಗಿ ಬಸ್​ ನಿಲ್ದಾಣ ​ ಎದುರಿನ  ಖಾಸಗಿ ಲಾಡ್ಜ್​ಗೆ ಕರೆದುಕೊಂಡು ಹೋಗಿದ್ದಾನೆ. ರೂಂನಲ್ಲಿ, ಆರೋಪಿ ಯಲ್ಲಾಲಿಂಗ​ ಸಂತ್ರಸ್ತೆಯನ್ನು ಸರಸಕ್ಕೆ ಕರೆದಿದ್ದಾನೆ. ಆಗ ಸಂತ್ರಸ್ತೆ ನಿರಾಕರಿಸಿದ್ದಕ್ಕೆ, ಆಕೆಯ ಮೇಲೆ ಇಡೀ ರಾತ್ರಿ ಅತ್ಯಾಚಾರ ಎಸಗಿದ್ದಾನೆ.

ಮರುದಿನ ಸಂತ್ರಸ್ತೆ ಮದುವೆಯಾಗೋಣ ಎಂದು ಆರೋಪಿ ಯಲ್ಲಾಲಿಂಗಗೆ ಹೇಳಿದ್ದಾಳೆ. ಆಗ, ಆರೋಪಿ ಯಲ್ಲಾಲಿಂಗ “ನನಗೆ ಇವತ್ತು ಹುಮನಾಬಾದದಲ್ಲಿ ಬಂದೋಬಸ್ತ್ ಡ್ಯೂಟಿ ಇದೆ ಇವತ್ತು ಬೇಡ ನಾಳೆ ಮದುವೆಯಾಗೋಣ” ಎಂದು ಹೇಳಿ ಸಂತ್ರಸ್ತೆಯನ್ನು ಲಾಡ್ಜಿನಲ್ಲಿಯೇ ಬಿಟ್ಟು ಹೋಗಿದ್ದಾನೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಮತ್ತೊಂದು ಹನಿಟ್ರ್ಯಾಪ್​ ಪ್ರಕರಣ ಬೆಳಕಿಗೆ: ಉದ್ಯಮಿಗಳೇ ಇವರ ಟಾರ್ಗೆಟ್​

ಸಂತ್ರಸ್ತೆ ಸುಮಾರು ಸಲ ಆರೋಪಿ ಯಲ್ಲಾಲಿಂಗಗೆ ಕರೆ ಮಾಡಿದರೂ, ಕರೆಯನ್ನು ಸ್ವೀಕರಿಸಲಿಲ್ಲ. ಮತ್ತೆ ಹೇಗೋ ಸಂತ್ರಸ್ತೆ ಆರೋಪಿ ಯಲ್ಲಾಲಿಂಗನನ್ನು ಸಂಪರ್ಕ ಮಾಡಿದಾಗ, “ನಿನ್ನ ಮದುವೆ ಆಗಲು ನನ್ನ ಮನೆಯಲ್ಲಿ ಒಪ್ಪಿತ್ತಲ್ಲ. ಹಾಗೂ ನನಗೆ ನೀವು ವರದಕ್ಷಣೆ ಹೆಚ್ಚಿಗೆ ಕೊಟ್ಟರೆ ಮದುವೆ ಮಾಡಿಕೊಳ್ಳುತ್ತೇನೆ” ಎಂದು ಸಂತ್ರಸ್ತೆಗೆ ಹೇಳಿದ್ದಾನೆ.

ಇದರಿಂದ ನೊಂದ ಸಂತ್ರಸ್ತೆ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿ ಯಲ್ಲಾಲಿಂಗ ವಿರುದ್ಧ ಬಿಎನ್​ಎಸ್ ಕಾಯ್ದೆ 64,318(B)351,352 ಅಡಿಯಲ್ಲಿ ಕೇಸ್ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ