AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

50 ಕೋಟಿ ರೂ.ಸಾಲ ಕೊಡಿಸುವುದಾಗಿ ಮಹಿಳೆಗೆ ಕೋಟಾ ನೋಟು ಕೊಟ್ಟ ಮಹಮ್ಮದ್

ಹುಬ್ಬಳ್ಳಿಯಲ್ಲಿ ಓರ್ವ ವ್ಯಕ್ತಿ ಮಹಿಳೆಗೆ ₹60 ಲಕ್ಷಗಳನ್ನು ಪಡೆದು ನಕಲಿ ನೋಟುಗಳನ್ನು ನೀಡಿ ವಂಚಿಸಿದ್ದಾನೆ. ಮೈಸೂರು ಮೂಲದ ಮಹಮ್ಮದ್ ಆಸೀಪ್ ಎಂಬ ಆರೋಪಿಯು ಪುಣೆಯ ಮಹಿಳೆಗೆ ₹50 ಕೋಟಿ ಸಾಲ ಒದಗಿಸುವುದಾಗಿ ನಂಬಿಸಿ ಹಣ ಪಡೆದಿದ್ದಾನೆ. ನಂತರ, ನಕಲಿ ನೋಟುಗಳನ್ನು ನೀಡಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣವು ವಿದ್ಯಾನಗರ ಠಾಣೆಯಲ್ಲಿ ದಾಖಲಾಗಿದೆ.

50 ಕೋಟಿ ರೂ.ಸಾಲ ಕೊಡಿಸುವುದಾಗಿ ಮಹಿಳೆಗೆ ಕೋಟಾ ನೋಟು ಕೊಟ್ಟ ಮಹಮ್ಮದ್
ನಕಲಿ ನೋಟು, ಆರೋಪಿ ಮಹಮ್ಮದ್​
ಸಂಜಯ್ಯಾ ಚಿಕ್ಕಮಠ
| Updated By: ವಿವೇಕ ಬಿರಾದಾರ|

Updated on: Jun 11, 2025 | 10:42 PM

Share

ಹುಬ್ಬಳ್ಳಿ, ಜೂನ್​ 11: ವಂಚಕನೋರ್ವ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯಿಂದ 60 ಲಕ್ಷ ರೂ. ಪಡೆದು ಕೋಟಾ ನೋಟು (Fake Note) ನೀಡಿ ವಂಚಿಸಿದ್ದ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ. ಮೈಸೂರು ಮೂಲದ ಆರೋಪಿ ಮಹಮ್ಮದ್ ಆಸೀಪ್ ವಂಚಕ. ಆರೋಪಿ ಮಹಮ್ಮದ್​ ಆಸೀಪ್​ ಪುಣೆ ಮೂಲದ ಮಹಿಳೆಗೆ ಕಟ್ಟಡ ಕೆಲಸಕ್ಕಾಗಿ ಕಡಿಮೆ ಬಡ್ಡಿದರಲ್ಲಿ ಐವತ್ತು ಕೋಟಿ ರೂಪಾಯಿ ಹಣ ಸಾಲ ಕೊಡಿಸುವುದಾಗಿ ಹೇಳಿದ್ದಾನೆ. ಪ್ರೊಸೆಸಿಂಗ್ ಶುಲ್ಕ ಅಂತ ಮಹಿಳೆಯಿಂದ 60 ಲಕ್ಷ ರೂ. ಹಣ ಪಡೆದಿದ್ದಾನೆ. ನಂತರ, ಮೊದಲ ಕಂತಿನ ರೂಪದಲ್ಲಿ ಮಹಿಳೆಗೆ 1.87 ಕೋಟಿ ರೂ. ನೀಡಿದ್ದಾನೆ. ಹಣ ಸಿಕ್ಕ ಖುಷಿಯಲ್ಲಿದ್ದ ಮಹಿಳೆ ಬ್ಯಾಗ್ ತೆರೆದು ನೋಡಿದಾಗ, ನಕಲಿ ನೋಟುಗಳು ಕಂಡಿದ್ದು, ಆಘಾತಕ್ಕೆ ಒಳಗಾಗಿದ್ದಾರೆ.

ಮಹಮ್ಮದ್ ಆಸೀಪ್, ಸುಧೀರ್ ಮೆಹ್ತಾ ಅಂತ ಎಲ್ಲರಿಗೂ ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದನು. ಒಂದು ವರ್ಷದ ಹಿಂದೆ ಮೈಸೂರಿಗೆ ಬಂದಿದ್ದ ಪುಣಾ ಮೂಲದ ಓರ್ವ ಮಹಿಳೆಗೆ ಆರೋಪಿ ಮಹಮ್ಮದ್ ಆಸೀಪ್​ ಪರಿಚಯವಾಗಿದ್ದನು. ಆಗ ಮಹಿಳೆಗೆ, ಮಹಮ್ಮದ್​ ಆಸೀಪ್​ ತಾನು ಅನೇಕ ಉದ್ಯಮಿಗಳಿಗೆ ಸಾಲ ಕೊಡಿಸುತ್ತೇನೆ, ತನಗೆ ದೊಡ್ಡ ದೊಡ್ಡ ಪೈನಾನ್ಸ್​ರಗಳು ಪರಿಚಯವಿದ್ದಾರೆ ಅಂತ ಹೇಳಿದ್ದನು. ಈತನ ಮಾತನ್ನು ನಂಬಿದ್ದ ಮಹಿಳೆ, ನನ್ನ ಮಗಳು ಮುಂಬೈನಲ್ಲಿ ಕಟ್ಟಡದ ಕಾಮಗಾರಿ ಆರಂಭಿಸುವವಳಿದ್ದಾಳೆ, ಅದಕ್ಕಾಗಿ ಐವತ್ತು ಕೋಟಿ ರೂಪಾಯಿ ಸಾಲ ಬೇಕು ಎಂದು ಹೇಳಿದ್ದರಂತೆ.

ಆಗ, ಮಹಮ್ಮದ್ ಆಸೀಪ್ ಸಾಲ ಕೊಡಿಸುವುದಾಗಿ ಹೇಳಿದ್ದನಂತೆ. ಐವತ್ತು ಕೋಟಿ ರೂಪಾಯಿಗೆ ಪ್ರೊಸೆಸಿಂಗ್ ಚಾರ್ಜ್ ಅಂತ 60 ಲಕ್ಷ ರೂಪಾಯಿ ನೀಡಬೇಕು ಅಂತ ಹೇಳಿದ್ದನಂತೆ. ಈತನ ಮಾತನ್ನು ನಂಬಿದ್ದ ಮಹಿಳೆ, ಕೆಲ ದಿನಗಳ ಹಿಂದೆ ಮಹಮ್ಮದ್ ಆಸೀಪ್​ಗೆ 60 ಲಕ್ಷ ಹಣ ನೀಡಿದ್ದರಂತೆ. ಸಾಲದ ಮೊದಲ ಕಂತಿನ ಭಾಗವಾಗಿ, ನಿಮಗೆ 2ಕೋಟಿ ಹಣ ನೀಡುತ್ತೇನೆ, ಹುಬ್ಬಳ್ಳಿಗೆ ಬನ್ನಿ ಅಂತ ಮಹಮ್ಮದ್ ಆಸೀಪ್ ಕರೆದಿದ್ದನಂತೆ. ಈತನ ಮಾತು ನಂಬಿದ್ದ ಮಹಿಳೆ, ತನ್ನ ಜೊತೆ ಕೆಲ ಪರಿಚಿತರನ್ನು ಕರೆದುಕೊಂಡು ಜೂನ್ 5 ರಂದು ಹುಬ್ಬಳ್ಳಿಗೆ ಬಂದಿದ್ದರಂತೆ.

ಇದನ್ನೂ ಓದಿ
Image
ಜಗಳ ಬಿಡಿಸಲು ಹೋದ ತಾಯಿ ದುರಂತ ಸಾವು, ಜನ್ಮ ಕೊಟ್ಟವಳಿಗೆ ಇರಿದು ಕೊಂದ ಮಗ
Image
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
Image
ಒಬ್ಬ ವ್ಯಕ್ತಿ ಹೆಸರಲ್ಲಿ ಐದಾರು ಸಿಮ್: ಪಾಕ್ ಪರ ಕೃತ್ಯಕ್ಕೆ ಬಳಸಿರುವ ಶಂಕೆ
Image
ಹುಬ್ಬಳ್ಳಿ​: ನುಡಿದಂತೆ ನಡೆಯದ ಸರ್ಕಾರ, ಕುಟುಂಬಕ್ಕೆ ಬಾರದ ಪರಿಹಾರ

ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಹೋಟೆಲ್​ವೊಂದರ ಮುಂದೆ ಎರಡು ಸೂಟ್ ಕೇಸ್​ನಲ್ಲಿ ಹಣ ತುಂಬಿ ಮಹಮ್ಮದ್ ಆಸೀಪ್ ಮಹಿಳೆಗೆ ನೀಡಿದ್ದನಂತೆ. ಸದ್ಯ ನಿಮಗೆ 1 ಕೋಟಿ 87 ಲಕ್ಷದ 45 ಸಾವಿರ ಹಣ ನೀಡಿದ್ದೇನೆ. ಉಳಿದ 48 ಕೋಟಿಯನ್ನು ಮತ್ತೆ ಕೊಡಿಸುತ್ತೇನೆ ಅಂತ ಹೇಳಿದ್ದನಂತೆ. ಹಣ ಸಿಕ್ಕ ಖುಷಿಯಲ್ಲಿದ್ದ ಮಹಿಳೆ, ಸೂಟ್​ಕೇಸ್​ನಲ್ಲಿದ್ದ ಹಣ ಪರಿಶೀಲಿಸದೆ ಅದನ್ನು ತಾವು ಉಳಿದುಕೊಂಡಿದ್ದ ಹೋಟೆಲ್​ಗೆ ತಗೆದುಕೊಂಡು ಹೋಗಿದ್ದರು. ನಂತರ ಆ ಹಣವನ್ನು ಹೇಗೆ ಮುಂಬೈಗೆ ತಗೆದುಕೊಂಡು ಹೋಗುವುದು ಅಂತ ಯೋಚನೆ ಮಾಡಿ, ಹಣದ ಬ್ಯಾಗ್ ತಗೆದು ನೋಡಿದಾಗ ಮಹಮ್ಮದ್ ಆಸೀಪ್ ನೀಡಿರುವುದು ಅಸಲಿ ನೋಟ್ ಅಲ್ಲ, ನಕಲಿ ನೋಟು ಎಂದು ಗೊತ್ತಾಗಿದೆ.

ಮಹಮ್ಮದ್ ಆಸೀಪ್, ಮಹಿಳೆಗೆ ನೀಡಿದ್ದ 1.87 ಕೋಟಿ ಹಣದಲ್ಲಿ, ಐದು ಸಾವಿರ ರೂ. ನೋಟುಗಳು ಮಾತ್ರ ಅಸಲಿಯಾಗಿದ್ದವು. ಮಹಮ್ಮದ್​ ಆಸೀಪ್​ ಹಣದ ಬಂಡಲ್ ಮೇಲೆ ಮಾತ್ರ 500 ಬೆಲೆಯ ಒಂದೊಂದು ಅಸಲಿ ನೋಟು ಇಟ್ಟಿದ್ದನು. ಉಳಿದ ಎಲ್ಲ ನೋಟುಗಳನ್ನು ಕೋಟಾ ನೋಟು ಇಟ್ಟಿದ್ದನು.

ಕೋಟಾ ನೋಟು ನೋಡಿ ಶಾಕ್ ಆಗಿದ್ದ ಮಹಿಳೆ, ಹುಬ್ಬಳ್ಳಿ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು, ಆರೋಪಿ ಪತ್ತೆಗೆ ಮುಂದಾದರು. ಖಚಿತ ಮಾಹಿತಿ ಮೇರೆಗೆ ಮುರ್ಡೇಶ್ವರದಲ್ಲಿ ಆರೋಪಿಯನ್ನು ಪತ್ತೆ ಮಾಡಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ನಾಯಿ ಕೊಡೆಗಳಂತೆ ಹುಟ್ಟುತ್ತಿರುವ ಪಿಜಿಗಳಿಗೆ ಜಿಲ್ಲಾಡಳಿತ ಲಗಾಮು: ಮಾಲೀಕರಿಗೆ ಢವಢವ

ಮಂಗಳವಾರ ಆರೋಪಿಯನ್ನು ಬಂಧಿಸಿದ ಪೊಲೀಸರು, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಇನ್ನು ಮಹಮ್ಮದ್ ಆಸೀಪ್, ಬೆಂಗಳೂರಿನಲ್ಲೂ ಕೂಡ ಕೋಟಾ ನೋಟ್ ಪ್ರಕರಣದಲ್ಲಿ ಆರೋಪಿಯಾಗಿದ್ದನಂತೆ. ತಾನೊಬ್ಬ ವಿಐಪಿ ಅಂತ ಹೇಳಿಕೊಂಡು ಅಡ್ಡಾಡುತ್ತಿದ್ದ ಮಹಮ್ಮದ್ ಆಸೀಪ್, ಅನೇಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ಅವರಿಗೆ ಸಾಲ ಕೊಡಿಸುವುದಾಗಿ ಹೇಳಿ ಲಕ್ಷ ಲಕ್ಷ ಹಣ ಪಡೆದು, ಕೋಟಾ ನೋಟು ನೀಡಿ ಯಾಮಾರಿಸುವುದು ಈತನ ಕಾಯಕವಾಗಿತ್ತು. ನಕಲಿ ನೋಟುಗಳನ್ನು ತಮಿಳುನಾಡಿನಲ್ಲಿ ಪ್ರಿಂಟ್ ಹಾಕಿಸಿಕೊಂಡು ಬಂದಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಮಹಮ್ಮದ್ ಆಸೀಪ್ ಜೈಲು ಪಾಲಾಗಿದ್ದಾನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ