AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೋನಾ ಹೆಸರಲ್ಲಿ 13 ಕೋಟಿ ರೂ. ವಂಚಿಸಿ ಜೈಲು ಪಾಲಾದ ಭಾರತೀಯ ಟೆಕ್ಕಿ..!

ಮುಕುಂದ್ ಮೋಹನ್ ಮಹೆಂಜೊ ಕಂಪೆನಿಯನ್ನು ಮೇ 2020 ರಲ್ಲಿ ಖರೀದಿಸಿರುವುದು ದೃಢಪಟ್ಟಿತ್ತು. ಈ ಕಂಪನಿಯನ್ನು ಖರೀದಿಸಿದ ಸಮಯದಲ್ಲಿ ಯಾವುದೇ ಉದ್ಯೋಗಿಗಳನ್ನು ಹೊಂದಿರಲಿಲ್ಲ.

ಕೊರೋನಾ ಹೆಸರಲ್ಲಿ 13 ಕೋಟಿ ರೂ. ವಂಚಿಸಿ ಜೈಲು ಪಾಲಾದ ಭಾರತೀಯ ಟೆಕ್ಕಿ..!
Mukund mohan
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 25, 2021 | 4:42 PM

ಅಮೆರಿಕದ (America) ಫೆಡರಲ್ ಕೋವಿಡ್ -19 (Covid-19) ವಿಪತ್ತು ಪರಿಹಾರ ಸಾಲ ವಂಚನೆ ಪ್ರಕರಣದಲ್ಲಿ 48 ವರ್ಷದ ಭಾರತೀಯ ಮೂಲದ ಟೆಕ್ ಎಕ್ಸಿಕ್ಯೂಟಿವ್‌ ಮುಕುಂದ್ ಮೋಹನ್ (Mukund Mohan) ಜೈಲು ಪಾಲಾಗಿದ್ದಾರೆ. ಅಮೆರಿಕದ ಕೊರೋನಾ ಪರಿಹಾರ ನಿಧಿಗೆ ನಕಲಿ ದಾಖಲೆಯನ್ನು ನೀಡಿ ಮುಕಂದ್ ಸುಮಾರು 1.8 ಮಿಲಿಯನ್ ಯುಎಸ್​ಡಿ ಡಾಲರ್ ಪಡೆದಿದ್ದರು. ಅಂದರೆ ಭಾರತೀಯ ಮೌಲ್ಯ ಸುಮಾರು 13 ಕೋಟಿ ರೂಪಾಯಿ. ಈ ನಕಲಿ ದಾಖಲೆಗಳ ಅಸಲಿಯತ್ತು ಬಯಲಾಗುತ್ತಿದ್ದಂತೆ ಮುಕುಂದ್ ಅವರನ್ನು ಬಂಧಿಸಲಾಗಿತ್ತು. ಇದೀಗ ಅವರ ವಿಚಾರಣೆ ಮುಗಿದಿದ್ದು, ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ವಾಷಿಂಗ್ಟನ್ ರಾಜ್ಯದ ಕ್ಲೈಡ್ ಹಿಲ್ ನಿವಾಸಿಯಾಗಿರುವ ಮುಕುಂದ್ ಮೋಹನ್ ಅವರು ಮಾರ್ಚ್ 15 ರಂದು ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಯುಎಸ್ ನ್ಯಾಯ ಇಲಾಖೆ ಹೇಳಿದೆ. ಇದಕ್ಕೂ ಮುನ್ನ ಮೈಕ್ರೋಸಾಫ್ಟ್ ಮತ್ತು ಅಮೆಜಾನ್ ನಲ್ಲಿ ಮುಕುಂದ್ ಮೋಹನ್ ಕೆಲಸ ಮಾಡಿದ್ದರು. ಈ ವೇಳೆ ಕೂಡ ನಕಲಿ ಉದ್ಯೋಗ ದಾಖಲೆಗಳನ್ನು ಸೃಷ್ಟಿಸಿ ಅಮೆರಿಕ ಸರ್ಕಾರದಿಂದ ಸಾಲಗಳನ್ನು ಪಡೆದಿದ್ದರು.

ಮಹೆಂಜೊ ಇಂಕ್ ಹೆಸರಿನಲ್ಲಿ ಕಂಪೆನಿಯನ್ನು ರಿಜಿಸ್ಟರ್ ಮಾಡಿದ್ದ ಮುಕುಂದ್ ಮೋಹನ್, ತನ್ನ ಕಂಪೆನಿಯಲ್ಲಿ ಹತ್ತಾರು ಉದ್ಯೋಗಿಗಳಿದ್ದಾರೆ. ಕಂಪೆನಿಯು ನೌಕರರ ವೇತನ ಮತ್ತು ವೇತನದಾರರ ತೆರಿಗೆಗಳನ್ನು ಲಕ್ಷಾಂತರ ಡಾಲರ್‌ಗಳಲ್ಲಿ ಪಾವತಿಸಿದೆ ಎಂದು ತಿಳಿಸಿತ್ತು. ಈ ಕಂಪೆನಿಯು 2019 ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಕೊರೋನಾ ಕಾರಣದಿಂದ ನಷ್ಟದಲ್ಲಿದೆ. ಹೀಗಾಗಿ ಪರಿಹಾರವಾಗಿ ನಕಲಿ ದಾಖಲೆಯನ್ನು ಸಲ್ಲಿಸಿ ಭಾರೀ ಮೊತ್ತವನ್ನು ಪಡೆದಿತ್ತು.

ಆದರೆ ತನಿಖೆ ವೇಳೆ ಮುಕುಂದ್ ಮೋಹನ್ ಮಹೆಂಜೊ ಕಂಪೆನಿಯನ್ನು ಮೇ 2020 ರಲ್ಲಿ ಖರೀದಿಸಿರುವುದು ದೃಢಪಟ್ಟಿತ್ತು. ಈ ಕಂಪನಿಯನ್ನು ಖರೀದಿಸಿದ ಸಮಯದಲ್ಲಿ ಯಾವುದೇ ಉದ್ಯೋಗಿಗಳನ್ನು ಹೊಂದಿರಲಿಲ್ಲ. ಹಾಗೆಯೇ ಯಾವುದೇ ವ್ಯವಹಾರ ಚಟುವಟಿಕೆಯನ್ನು ಹೊಂದಿರಲಿಲ್ಲ ಎಂಬುದು ತಿಳಿದು ಬಂದಿದೆ.

ಇದೀಗ ಮುಕುಂದ್ ಮೋಹನ್ ನಕಲಿ ದಾಖಲೆಯನ್ನು ಸಲ್ಲಿಸಿ ಪರಿಹಾರ ಸಾಲ ಪಡೆದಿರುವುದಾಗಿ ಒಪ್ಪಿಕೊಂಡಿದ್ದು, ಹೀಗಾಗಿ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲದೆ 1,00,000 USD ಮತ್ತು 1,786,357 USD ದಂಡವನ್ನು ಪಾವತಿಸಲು ಕೋರ್ಟ್​ ಆದೇಶಿಸಿದೆ.

ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಹಾಕಬೇಕಿಲ್ಲ, ಚಾರ್ಜ್​ ಕೂಡ ಮಾಡಬೇಕಿಲ್ಲ: ಇದು ಮಾರುತಿ ಸುಜುಕಿ ಹೊಸ ಕಾರು

ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!

ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!

(Indian-Origin Tech Executive Gets 2 Years Jail For Covid Loan Fraud in America)

ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ