AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಡಮಾನ್​ನಲ್ಲಿ ಜಾಲಿಯಾಗಿ ಬೈಕ್ ರೈಡ್ ಮಾಡ್ತಿದ್ದ ಅಮೃತಾ-ಶ್ರೀಧರ್ ಬೆಂಗಳೂರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು ಹೇಗೆ?

ಬೆಂಗಳೂರು: ತನ್ನ ಸುಖಕ್ಕಾಗಿ ತಾಯಿಯನ್ನ ಕೊಂದು ಪ್ರಿಯತಮನ ಜೊತೆ ಜಾಲಿ ಮೂಡ್​ನಲ್ಲಿದ್ದ ಕೊಲೆಗಾರ್ತಿ ಮತ್ತು ಪ್ರಿಯತಮ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಅಂಡಮಾನ್​ನಲ್ಲಿ ಸುತ್ತಾಡ್ತಿದ್ದ ಈ ಹಂತಕ ಜೋಡಿ ಬೆಂಗಳೂರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದೇ ಒಂದು ರೋಚಕ ಕಹಾನಿ. ಅಂಡಮಾನ್ ಮತ್ತು ನಿಕೊಬಾರ್ ದ್ವೀಪದ ಪ್ರಖ್ಯಾತ ಕಾಲಾಪಾನಿ ಜೈಲ್ ಬಳಿ ಎಂಜಾಯ್ ಮಾಡ್ತಿದ್ದ ಹಂತಕರು ಸದ್ಯ ಅಂದರ್ ಆಗಿದ್ದಾರೆ. ಆದರೆ ಹತ್ತೆ ತಾಯಿಯನ್ನ ಕೊಂದು ಸ್ವಲ್ಪವೂ ಪಶ್ಚಾತ್ತಾಪವಿಲ್ಲದೆ, ನೋವಿಲ್ಲದೆ ಅಮೃತಾ ಪ್ರಿಯಕರನ ಜೊತೆ ಸುತ್ತಾಡ್ತಿದ್ದಾಳೆ. ಫೆಬ್ರವರಿ 2 ರಂದು […]

ಅಂಡಮಾನ್​ನಲ್ಲಿ ಜಾಲಿಯಾಗಿ ಬೈಕ್ ರೈಡ್ ಮಾಡ್ತಿದ್ದ ಅಮೃತಾ-ಶ್ರೀಧರ್ ಬೆಂಗಳೂರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು ಹೇಗೆ?
ಸಾಧು ಶ್ರೀನಾಥ್​
|

Updated on: Feb 05, 2020 | 2:51 PM

Share

ಬೆಂಗಳೂರು: ತನ್ನ ಸುಖಕ್ಕಾಗಿ ತಾಯಿಯನ್ನ ಕೊಂದು ಪ್ರಿಯತಮನ ಜೊತೆ ಜಾಲಿ ಮೂಡ್​ನಲ್ಲಿದ್ದ ಕೊಲೆಗಾರ್ತಿ ಮತ್ತು ಪ್ರಿಯತಮ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಅಂಡಮಾನ್​ನಲ್ಲಿ ಸುತ್ತಾಡ್ತಿದ್ದ ಈ ಹಂತಕ ಜೋಡಿ ಬೆಂಗಳೂರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದೇ ಒಂದು ರೋಚಕ ಕಹಾನಿ.

ಅಂಡಮಾನ್ ಮತ್ತು ನಿಕೊಬಾರ್ ದ್ವೀಪದ ಪ್ರಖ್ಯಾತ ಕಾಲಾಪಾನಿ ಜೈಲ್ ಬಳಿ ಎಂಜಾಯ್ ಮಾಡ್ತಿದ್ದ ಹಂತಕರು ಸದ್ಯ ಅಂದರ್ ಆಗಿದ್ದಾರೆ. ಆದರೆ ಹತ್ತೆ ತಾಯಿಯನ್ನ ಕೊಂದು ಸ್ವಲ್ಪವೂ ಪಶ್ಚಾತ್ತಾಪವಿಲ್ಲದೆ, ನೋವಿಲ್ಲದೆ ಅಮೃತಾ ಪ್ರಿಯಕರನ ಜೊತೆ ಸುತ್ತಾಡ್ತಿದ್ದಾಳೆ. ಫೆಬ್ರವರಿ 2 ರಂದು ತಾಯಿಯ ಕೊಲೆ ಮಾಡಿದ್ದ ಅಮೃತಾ ಈ ಹಿಂದೆಯೇ ಪಕ್ಕಾ ಪ್ರೀಪ್ಲಾನ್ ಮಾಡಿದ್ದು, ಹತ್ಯೆ ಮಾಡಲು ಬ್ಲೂಪ್ರಿಂಟ್ ಹಾಕಿಕೊಂಡಿರುವ ಸುಳಿವು ಸಿಕ್ಕಿದೆ.

ತನಿಖೆ ವೇಳೆ ಜನವರಿ 15ರಂದೇ ಫ್ಲೈಟ್ ಟಿಕೆಟ್ ಬುಕ್ ಆಗಿರುವುದು ಕನ್ಫರ್ಮ್ ಆಗಿದೆ. ಅಷ್ಟೇ ಅಲ್ಲ ಕೊಲೆಯಾಗಿದ್ದು ಬೆಳಗಿನ ಜಾವ 4 ಗಂಟೆಯ ಸುಮಾರಿಗೆ. ಫ್ಲೈಟ್ ಹತ್ತಿದ್ದು ಬೆಳಿಗ್ಗೆ 6ಕ್ಕೆ. ಅಂದ್ರೆ 15 ದಿನಗಳ ಹಿಂದೆಯೇ ಈ ಕಿರಾತಕಿ ಮಗಳು ಸ್ಕೆಚ್ ಹಾಕಿದ್ದು, ಇದು ಪ್ರಿಪ್ಲಾನ್ಡ್ ಮರ್ಡರ್ ಅನ್ನೋದು ಪಕ್ಕಾ ಆಗಿತ್ತು.

ದಾರಿ ತಪ್ಪಿಸ್ತಾ ಆ ಒಂದು ಸುಳಿವು: ಅಮೃತಾ ತನ್ನ ಮೊಬೈಲ್​ ಫೋನ್​ನಲ್ಲಿ ಆಪ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಈ ಮಾಹಿತಿಯ ಬೆನ್ನುಹತ್ತಿದ ಪೊಲೀಸರು ಜೆಸ್ಟ್ ಮಿಸ್​ಆಗಿ ಆರೋಪಿಯನ್ನ ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಘಟನೆ ದಿನವೇ ಸಿಕ್ಕಿಬೀಳಬೇಕಿದ್ದ ಹಂತಕರನ್ನು ಅಚಾನಕ್ಕಾಗಿ ಮತ್ತೊಂದು ಸುಳಿವು ದಾರಿತಪ್ಪಿಸಿದೆ.

ಆ ದಿನ ಅಮೃತಾ ಮತ್ತು ಶ್ರೀಧರ್ ಫ್ಲೈಟ್ ನಲ್ಲಿ ಎಸ್ಕೇಪ್ ಆಗಿದ್ದಾರೆ. ಆ ಬೆನ್ನಲ್ಲೇ ಬೆಂಗಳೂರಿನಿಂದ ಫ್ಲೈಟ್​ಗಳ ಮೂಲಕ ಬೇರೆ ಕಡೆ ಹೋಗಿದ್ದ ಪ್ರಯಾಣಿಕರ ಮಾಹಿತಿಯನ್ನ ಸಂಗ್ರಹ ಮಾಡಲಾಗಿದೆ.

ಆಗ ಅದೇ ದಿನ ಅಮೃತಾ ಚಂದ್ರಶೇಖರ್ ಹಾಗೂ ಶ್ರೀಧರ್ ಅನ್ನೋ ಮತ್ತೊಂದು ಜೋಡಿ ಮುಂಬೈಗೆ ಹೋಗಿತ್ತು. ಆಗ ಪೊಲೀಸರು ಅವರೇ ಪ್ರಕರಣದ ಹಂತಕರು ಎಂದು ಭಾವಿಸಿ ಮುಂಬೈ ಮೇಲೆ ಕಣ್ಣಿಟ್ಟ ಕಾರಣ ಆರೋಪಿಗಳು ಜಸ್ಟ್ ಮಿಸ್ ಆಗಿದ್ದರು. ಆ ಗ್ಯಾಪ್​ನಲ್ಲಿ ಆರೋಪಿ ಅಮೃತಾ ಮತ್ತು ಶ್ರೀಧರ್ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಕ್ಕೆ ಎಂಟ್ರಿ ಕೊಟ್ಟು ಜಾಲಿಯಾಗಿ ಎಂಜಾಯ್ ಮಾಡಿದ್ದಾರೆ.

ಕೊನೆಗೆ ಮುಂಬೈನಲ್ಲಿರುವ ಜೋಡಿ ಆರೋಪಿಗಳಲ್ಲ ಅನ್ನೊದು‌ ಖಚಿತವಾಗ್ತಿದ್ದಂತೆ ಅಂಡಮಾನ್ ಮತ್ತು ನಿಕೋಬಾರ್ ಮೇಲೆ ಪೊಲೀಸರ ಕಣ್ಣು ಬಿದ್ದಿದೆ. ಫೋನ್ ನಂಬರ್ ಸೇರಿ ಇತರೇ ಟೆಕ್ನಿಕಲ್ ಡಿಟೇಲ್ಸ್ ಸುಳಿವಿನ ಮೆರೆಗೆ ಅಂಡಮಾನ್ ಮತ್ತು ನಿಕೋಬಾರ್ ಗೆ ಹೋಗಿದ್ದ ಕೆ.ಆರ್.ಪುರಂ ಪೊಲೀಸರು, ಅಲ್ಲಿನ ಪ್ರಖ್ಯಾತ ಕಾಲಾಪಾನಿ ಜೈಲು ಬಳಿ ಜಾಲಿ ಮೂಡ್ ನಲ್ಲಿ ಬೈಕ್ ನಲ್ಲಿ ಎಂಜಾಯ್ ಮಾಡುತ್ತಿದ್ದ ಅಮೃತಾ ಮತ್ತು ಶ್ರೀಧರ್​ನನ್ನ ಬಂಧಿಸಿದ್ದಾರೆ.

ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ