AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Koppala News: ಮದುವೆಯಾದರೂ ಬಿಡದ ಪ್ರೀತಿ; ಅಕ್ರಮ ಸಂಬಂಧ ಬಿಟ್ಟು ಬದುಕದ ಇಬ್ಬರು ಆತ್ಮಹತ್ಯೆ

ಅವರಿಬ್ಬರಿಗೂ ಮದುವೆಯಾಗಿತ್ತು, ಸಾಲದಕ್ಕೆ ಸುಂದರ ಸಂಸಾರದ ಕುರುಹುಗಳಾಗಿ ಮಕ್ಕಳು ಇದ್ರು. ಆದ್ರೆ, ಇದೀಗ ಅನೈತಿಕ ಸಬಂಧಕ್ಕೆ ತಮ್ಮ ಜೀವವನ್ನೆ ಬಲಿಕೊಟ್ಡಿದ್ದಲ್ಲದೇ, ಎರಡೂ ಕುಟುಂವನ್ನು ಅನಾಥ ಮಾಡಿದ್ದಾರೆ. ಅಷ್ಟಕ್ಕೂ ಏನಾಯಿತು ಅಲ್ಲಿ, ಅವರಿಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ಇಲ್ಲಿದೆ ನೋಡಿ.

Koppala News: ಮದುವೆಯಾದರೂ ಬಿಡದ ಪ್ರೀತಿ; ಅಕ್ರಮ ಸಂಬಂಧ ಬಿಟ್ಟು ಬದುಕದ ಇಬ್ಬರು ಆತ್ಮಹತ್ಯೆ
ಆತ್ಮಹತ್ಯೆ ಮಾಡಿಕೊಂಡ ರ್ದುದೈವಿಗಳು
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on: Jun 01, 2023 | 7:40 AM

Share

ಕೊಪ್ಪಳ: ಆಸ್ಪತ್ರೆಯ ಶವಾಗಾರದ ಎದುರು ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ, ಮತ್ತೊಂದೆಡೆ ಗ್ರಾಮದೆಲ್ಲೆಡೆ ತುಂಬಿರೋ ನೀರವ ಮೌನ, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೊಪ್ಪಳ(Koppala)ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ. ಹೌದು ಹೀಗೆ ಹೊಲದಲ್ಲಿ ಶವವಾಗಿ ಬಿದ್ದಿರುವುದು ಇದೆ ಗ್ರಾಮದ ಶಾರವ್ವ ಹಾಗೂ ಫೀರ್​ಸಾಬ್. ಈ ಪೀರ್​ಸಾಭ್ ಹಾಗೂ ಶಾರವ್ವ ಇಬ್ಬರ ಶವಗಳು ನಿನ್ನೆ(ಮೇ.31) ಬೆಳಿಗ್ಗೆ ಗ್ರಾಮದ ಜಮೀನಿನಲ್ಲಿ ವಿಷದ ಬಾಟಲಿಯೊಂದಿಗೆ ಪತ್ತೆಯಾಗಿವೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಇಬ್ಬರು ಮಧ್ಯೆ ಅನೈತಿಕ(Affair)ಸಂಬಂಧ ಇತ್ತಂತೆ. ಇಬ್ಬರ ಅನೈತಿಕ ಸಂಬಂಧ ಇವರ ಮನೆಯಲ್ಲಿ ಗೊತ್ತಾಗಿ ಹಲವು ಬಾರಿ ಗಲಾಟೆಯಾಗಿತ್ತು. ಅಲ್ಲದೆ ಗ್ರಾಮದಲ್ಲಿ ಹಿರಿಯರು ಇಬ್ಬರಿಗೂ ಬುದ್ದಿವಾದ ಕೂಡ ಹೇಳಲಾಗಿತ್ತು, ಇಷ್ಟಾದ್ರು ಅವರು ಮಾತ್ರ ಅವರ ಸಂಬಂಧ ಮುಂದುವರೆಸಿದ್ದರು. ನಿನ್ನೆ(ಮೇ.30) ಸಂಜೆ ಪೀರ್​ಸಾಬ್ ಪತ್ನಿ ತನ್ನ ಗಂಡನ ಜೊತೆಗಿನ ಸಂಬಂಧ ಬಿಡುವಂತೆ ಶಾರವ್ವಳಿಗೆ ಎಚ್ಚರಿಕೆ ನೀಡಿದ್ದಳು. ನಂತರ ಶಾರವ್ವ ಹಾಗೂ ಫೀರ್​ಸಾಬ್ ಮನೆಯಲ್ಲಿ ಗಲಾಟೆ ನಡೆದಿದೆ. ಗಲಾಟೆಯ ನಂತರ ಮನೆಯಿಂದ ಹೊರ ಹೋದ ಇಬ್ಬರು, ಗ್ರಾಮದ ಜಮೀನಿನಲ್ಲಿ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಿಗ್ಗೆ ಗ್ರಾಮಸ್ಥರು ಜಮೀನಿನ ಕಡೆಗೆ ಹೋದಾಗ ವಿಷಯ ಗೊತ್ತಾಗಿದೆ.‌ ಈ ಶಾರವ್ವ ಹಾಗೂ ಫೀರ್​ಸಾಬ್ ಒಂದೆ ಗ್ರಾಮದವರು, ಇಬ್ಬರು ಮದುವೆಯಾಗಿ ಇಬ್ಬರಿಗೂ ಇಬ್ಬರು ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಇಬ್ಬರದ್ದು ಸುಂದರ ಸಂಸಾರ, ಆದ್ರೂ, ಕೂಡ ಇದೆಲ್ಲವನ್ನೂ ಬಿಟ್ಟು ಕೇವಲ ಪರ ಪುರುಷನ ಆಸೆಗೆ ಬಿದ್ದ ಹೆಣ್ಣು, ಹಾಗೂ ಇನ್ನೊಬ್ಬನ ಹೆಂಡತಿಯ ಮೇಲಿನ ಆಸೆಗೆ ಬಿದ್ದ ಫೀರ್​ಸಾಬ್​ ಇಬ್ಬರು ಜೊತೆಯಾಗಿಯೇ ವಿಷ ಕುಡಿದು ಜೀವ ಬಿಟ್ಟಿದ್ದಾರೆ. ಶವಗಳ ಜೊತೆಯಲ್ಲಿ ವಿಷದ ಬಾಟಲ್ ಕೂಡಾ ಪತ್ತೆಯಾಗಿದ್ದು, ಅಕ್ರಮ ಸಂಬಂಧ ಬಿಟ್ಟು ಬದುಕದ ಇಬ್ಬರು ಶವವಾಗಿದ್ದಾರೆ‌. ಸ್ಥಳಕ್ಕೆ ಹನುಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕಲಬುರಗಿ: ರಾತ್ರಿ ಮನೆಯಲ್ಲಿ ಮಲಗಿದ್ದ ಯುವಕ, ಪಕ್ಕದ ಮನೆಯಲ್ಲಿ ಶವವಾಗಿ ಪತ್ತೆ; ಕೊಲೆ ಎಂದು ಆರೋಪಿಸಿದ ತಾಯಿ

ಸಧ್ಯ ಗ್ರಾಮದಲ್ಲಿ ಎಲ್ಲವೂ ಮೌನ ಮನೆ ಮಾಡಿದೆ. ಸ್ವಲ್ಪ ಹೆಚ್ಚು ಕಮ್ಮಿಯಾದ್ರು ಏನಾಗುತ್ತೆ ಎನ್ನೋ ಭಯ. ಯಾಕಂದ್ರೆ ಹಿಂದೂ- ಮುಸ್ಲಿಂ ಸಂಬಂಧ ಎನ್ನೋ ಆತಂಕ ಕಾಡುತ್ತಿದೆ. ಪೊಲೀಸರು ಬಿಗಿ ಭದ್ರತೆಯ ಮಧ್ಯೆ‌ ಸದ್ಯ ಇಬ್ಬರ ಶವಗಳನ್ನ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಶವಗಳ ಹಸ್ತಾಂತರ ಮಾಡಿದ್ದಾರೆ. ಆದ್ರೆ, ಅಕ್ರಮ ಸಂಬಂಧದ ಆಸೆಗೆ ಬಿದ್ದು ಇಬ್ಬರು ಹೆಣವಾಗಿರೋದಂತೂ ದುರಂತವೇ ಸರಿ.

ವರದಿ: ದತ್ತಾತ್ರೇಯ ಪಾಟೀಲ್ ಟಿವಿ9 ಕೊಪ್ಪಳ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Kiran Hanumant Madar
Kiran Hanumant Madar

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.

ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​