AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ರಾತ್ರಿ ಮನೆಯಲ್ಲಿ ಮಲಗಿದ್ದ ಯುವಕ, ಪಕ್ಕದ ಮನೆಯಲ್ಲಿ ಶವವಾಗಿ ಪತ್ತೆ; ಕೊಲೆ ಎಂದು ಆರೋಪಿಸಿದ ತಾಯಿ

ಆತ ಕ್ರೂಸರ್ ಡ್ರವೈರ್ ಆಗಿದ್ದ. ರಾತ್ರಿ ಊಟ ಮಾಡಿ ಮನೆಯ ಮಹಡಿ ಮೇಲೆ ಮಲಗಿದ್ದ ಆತ, ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ಪಕ್ಕದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಅನೈತಿಕ ಸಂಬಂಧದ ಆರೋಪದ ಮೇಲೆ ತಮ್ಮ ಮಗನನ್ನು ಪಕ್ಕದ ಮನೆಯವರು ಕೊಲೆ ಮಾಡಿದ್ದಾರೆ ಅನ್ನೋ ಆರೋಪವನ್ನು ಹೆತ್ತವರು ಮಾಡುತ್ತಿದ್ದಾರೆ.

ಕಲಬುರಗಿ: ರಾತ್ರಿ ಮನೆಯಲ್ಲಿ ಮಲಗಿದ್ದ ಯುವಕ, ಪಕ್ಕದ ಮನೆಯಲ್ಲಿ ಶವವಾಗಿ ಪತ್ತೆ; ಕೊಲೆ ಎಂದು ಆರೋಪಿಸಿದ ತಾಯಿ
ಮೃತ ಯುವಕ ಶಿವಶರಣಪ್ಪ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Mar 13, 2023 | 2:05 PM

ಕಲಬುರಗಿ: ಹೆತ್ತವರ ಕಣ್ಣೀರು ಮುಗಿಲು ಮುಟ್ಟಿತ್ತು. ಹೆತ್ತವರನ್ನು ಸಂತೈಸಲು ಅನೇಕರು ಪರದಾಡುತ್ತಿದ್ದರು. ಮತ್ತೊಂದೆಡೆ ಸಂಬಂಧಿಕರ ಆಕ್ರಂಧನ ಕೂಡ ಮುಗಿಲು ಮುಟ್ಟಿತ್ತು. ಹೌದು ಮನೆಗೆ ಆಧಾರವಾಗಿದ್ದ ಮಗ ಬಾರದ ಲೋಕಕ್ಕೆ ಹೋಗಿದ್ದ. ಮಗನನ್ನು ಕಳೆದುಕೊಂಡು ಹೆತ್ತವರು ಗೋಳಾಡುತ್ತಿದ್ದರು. ಇಂತಹದೊಂದು ದೃಶ್ಯ ಕಂಡುಬಂದಿದ್ದು ಜಿಲ್ಲೆಯ ಅಫಜಲಪುರ ತಾಲೂಕಿನ ಚಿಂಚೋಳಿ ಗ್ರಾಮದಲ್ಲಿ. ಇಪ್ಪತ್ತೆಂಟು ವರ್ಷದ ಶಿವಶರಣಪ್ಪ ಜಮಾದಾರ್ ಬಾರದ ಲೋಕಕ್ಕೆ ಹೋಗಿದ್ದಾನೆ. ಕ್ರೂಸರ್ ಡ್ರೈವರ್ ಆಗಿದ್ದ ಶಿವಶರಣಪ್ಪ, ಈ ಮೊದಲು ತನ್ನದೇ ಆದ ಕ್ರೂಸರ್ ಹೊಂದಿದ್ದನಂತೆ. ಆದರೆ ಕಳೆದ ಕೆಲ ದಿನಗಳ ಹಿಂದೆ ತನ್ನ ಸ್ವಂತ ವಾಹನವನ್ನು ಮಾರಾಟ ಮಾಡಿದ್ದ. ಅವರಿವರ ಕ್ರೂಸರ್​ನ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನಂತೆ.

ಇನ್ನು ಕಳೆದ ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದ ಶಿವಶರಣಪ್ಪ. ಅಂದಾಜು ರಾತ್ರಿ ಹತ್ತು ಗಂಟೆ ಸಮಯದಲ್ಲಿ ಮನೆಗೆ ಬಂದಿದ್ದ ಇದೇ ಚಿಂಚೋಳಿ ಗ್ರಾಮದ ತುಳಜಪ್ಪ ಮತ್ತು ಸಾಯಿಬಣ್ಣಾ ಅನ್ನೋರು ಆತನನ್ನ ಕರೆದುಕೊಂಡು ಹೋಗಿದ್ದರು. ಶಿವಶರಣಪ್ಪ ಡ್ರೈವರ್ ಆಗಿದ್ದರಿಂದ ಬಾಡಿಗೆಗೆ ಕರೆದುಕೊಂಡು ಹೋಗಿರಬೇಕು ಎಂದು ತಾಯಿ ಸುಮ್ಮನಾಗಿದ್ದಳು. ಆದರೆ ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ಶಿವಶರಣಪ್ಪನ ಮನೆಗೆ ಬಂದಿದ್ದ ಪಕ್ಕದ ಮನೆಯ ನಿವಾಸಿಯಾಗಿದ್ದ ಶ್ರೀಮಂತ ಎನ್ನುವ ವ್ಯಕ್ತಿ ನಿಮ್ಮ ಮಗ ನಮ್ಮ ಮನೆಯಲ್ಲಿ ಕುಡಿದು ಬಂದು ಬಿದ್ದಿದ್ದಾನೆ. ಆತನನ್ನ ಕರೆದುಕೊಂಡು ಹೋಗಿ ಎಂದಿದ್ದಾನೆ.

ಇದನ್ನೂ ಓದಿ:ಮಹಿಳೆ ಮೇಲಿನ ಅತ್ಯಾಚಾರ ಯತ್ನ-ಕೊಲೆ: 15 ವರ್ಷದಿಂದ ಜೈಲು ಹಕ್ಕಿಯಾಗಿದ್ದ ಆರೋಪಿ ಬಿಡುಗಡೆ! ಕಾನೂನು ಕುಣಿಕೆಯಿಂದ ಬಚಾವಾಗಿದ್ದು ಹೇಗೆ?

ಹೀಗಾಗಿ ಶಿವಶರಣಪ್ಪನ ತಾಯಿ ಮಲ್ಲಮ್ಮ ಶಿವಶರಣಪ್ಪ ಬಿದ್ದಿದ್ದ ಮನೆಗೆ ಹೋಗಿದ್ದಳು. ಹೋಗಿ ನೋಡಿದಾಗ ಶಿವಶರಣಪ್ಪ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಹೀಗಾಗಿ ಹೆತ್ತವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಶಿವಶರಣಪ್ಪ ಬದುಕಿಲ್ಲ ಎಂದು ಗೊತ್ತಾಗಿದೆ. ಆದರೆ ತಮ್ಮ ಮಗನದ್ದು ಸಹಜ ಸಾವಲ್ಲ, ಬದಲಾಗಿ ಕೊಲೆ ಎಂದು ಶಿವಶರಣಪ್ಪನ ತಾಯಿ ಆರೋಪಿಸುತ್ತಿದ್ದಾಳೆ. ಹೌದು ಶಿವಶರಣಪ್ಪನನ್ನು ಕರೆದುಕೊಂಡು ಹೋಗಿದ್ದ ತುಳಜಪ್ಪ ಮತ್ತು ಸಾಯಿಬಣ್ಣಾ ಜೊತೆಗೆ ಅವರ ಕುಟುಂಬದವರು ಸೇರಿಕೊಂಡು ಶಿವಶರಣಪ್ಪನನ್ನು ಕೊಲೆ ಮಾಡಿ, ನಂತರ ಅವರೇ ಮನೆಗೆ ಬಂದು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಶಿವಶರಣಪ್ಪನ ಕೊಲೆಗೆ ಅಕ್ರಮ ಸಂಬಂಧ ಆರೋಪವೇ ಕಾರಣವಂತೆ

ಇನ್ನು ಶಿವಶರಣಪ್ಪನ ಕೊಲೆಗೆ ಅಕ್ರಮ ಸಂಬಂಧ ಆರೋಪವೇ ಕಾರಣವಂತೆ. ಹೌದು ತುಳುಜಪ್ಪಾ, ಸಾಯಿಬಣ್ಣನನಿಗೆ, ತಮ್ಮ ಕುಟುಂಬದ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎನ್ನುವ ಅನುಮಾನವಿತ್ತಂತೆ. ತಮ್ಮ ಕುಟುಂಬದ ಮಹಿಳೆಯ ಜೊತೆ ಶಿವಶರಣಪ್ಪ ಪೋನ್​ನಲ್ಲಿ ಮಾತನಾಡುತ್ತಾನೆ. ಅವಳ ಜೊತೆ ಅಕ್ರಮ ಸಂಬಂಧ ಇದೆ ಎನ್ನುವ ಅನುಮಾನವನ್ನು ಕಳೆದ ಕೆಲ ದಿನಗಳಿಂದ ಇಟ್ಟುಕೊಂಡಿದ್ದರಂತೆ. ಇದೇ ಕಾರಣಕ್ಕಾಗಿ ಕಳೆದ ಕೆಲ ದಿನಗಳ ಹಿಂದೆ ಶಿವಶರಣಪ್ಪನನ್ನು ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಆಗ ಕೂಡ ಹೆತ್ತವರು ಹೋಗಿ ಮಗನಿಗೆ ಬುದ್ದಿ ಹೇಳಿದ್ದರಂತೆ. ಆದರೆ ಕಳೆದ ರಾತ್ರಿ ಮತ್ತೆ ದ್ವೇಷ ಇಟ್ಟುಕೊಂಡು ದುಷ್ಕರ್ಮಿಗಳು, ತಮ್ಮದೇ ಮನೆಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:ಸ್ನೇಹ, ಸಲುಗೆಯಿಂದ ಇರಲು ನಿರಾಕರಿಸಿದಕ್ಕೆ ಇಂದಿರಾನಗರದಲ್ಲಿ ಮಹಿಳೆಯನ್ನು ಕೊಲೆ ಮಾಡಿದ ಕ್ಯಾಬ್ ಡ್ರೈವರ್ ಅರೆಸ್ಟ್

ಸದ್ಯ ಶಿವಶರಣಪ್ಪ ಸಾವಿನ ಬಗ್ಗೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆೆ. ಶಿವಶರಣಪ್ಪ ಹೆತ್ತವರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಇದೀಗ ಪೊಲೀಸರು ಮರಣೋತ್ತರ ವರದಿಗಾಗಿ ಕಾಯುತ್ತಿದ್ದು, ಮರಣೋತ್ತರ ವರದಿಯಲ್ಲಿ ಸಹಜ ಸಾವಾ ಅಥವಾ ಕೊಲೆ ಮಾಡಲಾಗಿದೆಯಾ ಎನ್ನುವುದು ಗೊತ್ತಾಗಲಿದ್ದು, ಅದಕ್ಕಾಗಿ ಕಾಯುತ್ತಿದ್ದಾರೆ. ಆದರೆ ಬಾಳಿ ಬದುಕಬೇಕಿದ್ದ ಯುವಕ ಪಕ್ಕದ ಮನೆಯಲ್ಲಿ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.

ವರದಿ: ಸಂಜಯ್ ಟಿವಿ9 ಕಲಬುರಗಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:02 pm, Mon, 13 March 23

Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ