Madhya Pradesh: ಖರ್ಚಿಗೆ ಹಣ ಕೊಡಲಿಲ್ಲವೆಂದು ತಂದೆಯನ್ನೇ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ ಮಗ

ಖರ್ಚಿಗೆ ಹಣಕೊಡಲಿಲ್ಲವೆಂದು ಮಗನೊಬ್ಬ ತಂದೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Madhya Pradesh: ಖರ್ಚಿಗೆ ಹಣ ಕೊಡಲಿಲ್ಲವೆಂದು ತಂದೆಯನ್ನೇ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ ಮಗ
ಸಾವು
Follow us
|

Updated on:Jun 20, 2023 | 12:38 PM

ಖರ್ಚಿಗೆ ಹಣಕೊಡಲಿಲ್ಲವೆಂದು ಮಗನೊಬ್ಬ ತಂದೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ತಂದೆಯ ಬಳಿ ಖರ್ಚಿಗೆ 2 ಸಾವಿರ ರೂ ಕೇಳಿದ್ದಾನೆ, ಆದರೆ ತಂದೆ ತನ್ನ ಬಳಿ ಅಷ್ಟು ಹಣವಿಲ್ಲ ಎಂದಿದ್ದಾರೆ. ಬಾಬು ಚೌಧರಿ(50)ಕೊಲೆಯಾದ ವ್ಯಕ್ತಿ, ದೇಪಾಲ್​ಪುರ ಪ್ರದೇಶದಲ್ಲಿ ಜೂನ್ 15ರಂದು ಹತ್ಯೆಯಾಗಿದ್ದಾರೆ ಎಂದು ಎಸ್​ಪಿ ಹಿತಿಕಾ ವಸಲ್ ತಿಳಿಸಿದ್ದಾರೆ.

ಆ ಪ್ರದೇಶದಲ್ಲಿ ಪತ್ತೆಯಾದ ಸಾಕ್ಷ್ಯಗಳನ್ನು ಪರಿಗಣಿಸಿ, ವ್ಯಕ್ತಿಯ ಮಗ ಸೋಹನ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಓದಿ: Davangere: ಕಾಣೆಯಾಗಿದ್ದ ಮಹಿಳೆಯ ಕೊಲೆ ಪ್ರಕರಣಕ್ಕೆ ಹೊಸ ತಿರುವು; ಹತ್ಯೆ ಮಾಡಿ ಸುಟ್ಟು ಹಾಕಿದ್ದ ಆರೋಪಿಯನ್ನ ಬಂಧಿಸಿದ ಪೊಲಿಸರು

ಸೋಹನ್​ ಮಾದಕ ವ್ಯಸನಿಯಾಗಿದ್ದ , ಜಮೀನಿನಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದ, ಜೂನ್ 15 ರಂದು ತಂದೆಯ ಬಳಿ 2 ಸಾವಿರ ರೂ ಕೇಳಿದ್ದ, ತಂದೆ ನಿರಾಕರಿಸಿದ್ದರು.

ಕೋಪದಲ್ಲಿ ಅಲ್ಲೇ ಇದ್ದ ಕಲ್ಲಿನಿಂದ ತಂದೆಯನ್ನು ಜಜ್ಜಿ ಹತ್ಯೆ ಮಾಡಿದ್ದಾನೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:38 pm, Tue, 20 June 23