AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಂಡರ ಅಟ್ಟಹಾಸ: ಸೀದಾ ಜೇಬಿಗೆ ಕೈಹಾಕಿ ದರೋಡೆ! ಜನರಿದ್ರೂ ಡೋಂಟ್​ ಕೇರ್​, ಎಲ್ಲಿ?

ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ. ಈ ಮಧ್ಯೆ ಸಿಲಿಕಾನ್ ಸಿಟಿಯ ಕೆಲವು ಪೊಲೀಸರಿಗೂ ಸೋಂಕು ತಗಲುತ್ತಿದ್ದು ನಗರದ ಹಲವು ಠಾಣೆಗಳು ಸಹ ಸೀಲ್​ಡೌನ್​ ಆಗುತ್ತಿವೆ. ಹಾಗಾಗಿ ನಮ್ಮ ಖಾಕಿ ಪಡೆ ಈ ಮಹಾಮಾರಿಯಿಂದ ಕೊಂಚ ನಲುಗಿ ಹೋಗಿದ್ದಾರೆ. ಇದರಿಂದ ನಗರದ ಪುಂಡರು ಮತ್ತು ಕಳ್ಳಕಾಕರಿಗೆ ಎಂದಿಲ್ಲದ ಧೈರ್ಯ ಬಂದಂತಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ಕೆಲವು ದಿನಗಳಿಂದ ಹೆಣ್ಣೂರು ಹಾಗೂ ಹೆಬ್ಬಾಳದ ಸುತ್ತಮುತ್ತಲಿನ ಏರಿಯಾಗಳಲ್ಲಿ ಪುಂಡರ ಗ್ಯಾಂಗ್​ ಒಂದು ಜನರನ್ನು ಬೆದರಿಸಿ ಹಣ ಕಿತ್ತುಕೊಳ್ಳೋಕೆ […]

ಪುಂಡರ ಅಟ್ಟಹಾಸ: ಸೀದಾ ಜೇಬಿಗೆ ಕೈಹಾಕಿ ದರೋಡೆ! ಜನರಿದ್ರೂ ಡೋಂಟ್​ ಕೇರ್​, ಎಲ್ಲಿ?
KUSHAL V
| Edited By: |

Updated on: Jun 22, 2020 | 5:12 PM

Share

ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ. ಈ ಮಧ್ಯೆ ಸಿಲಿಕಾನ್ ಸಿಟಿಯ ಕೆಲವು ಪೊಲೀಸರಿಗೂ ಸೋಂಕು ತಗಲುತ್ತಿದ್ದು ನಗರದ ಹಲವು ಠಾಣೆಗಳು ಸಹ ಸೀಲ್​ಡೌನ್​ ಆಗುತ್ತಿವೆ. ಹಾಗಾಗಿ ನಮ್ಮ ಖಾಕಿ ಪಡೆ ಈ ಮಹಾಮಾರಿಯಿಂದ ಕೊಂಚ ನಲುಗಿ ಹೋಗಿದ್ದಾರೆ.

ಇದರಿಂದ ನಗರದ ಪುಂಡರು ಮತ್ತು ಕಳ್ಳಕಾಕರಿಗೆ ಎಂದಿಲ್ಲದ ಧೈರ್ಯ ಬಂದಂತಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ಕೆಲವು ದಿನಗಳಿಂದ ಹೆಣ್ಣೂರು ಹಾಗೂ ಹೆಬ್ಬಾಳದ ಸುತ್ತಮುತ್ತಲಿನ ಏರಿಯಾಗಳಲ್ಲಿ ಪುಂಡರ ಗ್ಯಾಂಗ್​ ಒಂದು ಜನರನ್ನು ಬೆದರಿಸಿ ಹಣ ಕಿತ್ತುಕೊಳ್ಳೋಕೆ ಶುರುಮಾಡಿದ್ದಾರೆ.

ಸೀದಾ ಜೇಬಿಗೆ ಕೈಹಾಕಿ ದರೋಡೆ..! ಕೊರೊನಾ ಮಹಾಮಾರಿಗೆ ನಲುಗಿ ಜನರನ್ನೇ ಮುಟ್ಟಲು ಬೆಂಗಳೂರಿಗರು ಹಿಂದೆಮುಂದೆ ಯೋಚಿಸುತ್ತಿರುವ ಈ ಸಂದರ್ಭದಲ್ಲಿ ಸೀದಾ ಜೇಬಿಗೇ ಕೈಹಾಕಿ ಹಣ ದೋಚುತ್ತಿದ್ದಾರಂತೆ. ಹಣ ತಗೊಳ್ಳಲು ಬಿಟ್ರೆ ಬಚಾವ್​. ಇಲ್ಲಾಂದ್ರೆ ಚಾಕು, ಮಚ್ಚು ತೋರಿಸಿ ಕಿತ್ತುಕೊಳ್ತಾರೆ. ಜಾಸ್ತಿ ಮಾತಾಡ್ರೆ ಎರಡೇಟು ಕೂಡ ಬೀಳುತ್ತೆ.

ಅಂದ ಹಾಗೆ ಇವರೇನು ದೊಡ್ಡ ಪಂಟರ್​ಗಳಲ್ಲ. ಸಣ್ಣ ವಯಸ್ಸಿನ ಹುಡುಗರು. ಸ್ಕೂಟರ್​, ಬೈಕ್​ಗಳ ಮೇಲೆ ಗುಂಪುಗುಂಪಾಗಿ ಪೆಟ್ಟಿ, ಸಿಗರೇಟ್​ ಅಂಗಡಿಗಳ ಬಳಿ ಅಡ್ಡಾಡೋ ಈ ಗ್ಯಾಂಗ್​ ಎಲ್ಲಿ ಟಾರ್ಗೆಟ್​ ಕಂಡರೇ ಅಲ್ಲೇ ಸ್ಕೆಚ್​. ಸುತ್ತಲೂ ಜನರಿದ್ರೂ ಡೋಂಟ್​ ಕೇರ್​. ಬರೀ ಗ್ರಾಹಕರಲ್ಲದೆ ಅಂಗಡಿ ಮಾಲೀಕರನ್ನು ದೋಚುತ್ತಿದ್ದಾರೆ.

ಈ ಏರಿಯಾಗಳಲ್ಲಿ ಕಳೆದ ಕೆಲವು ದಿನಗಳಿಂದ ಇಂಥ ಹತ್ತಕ್ಕು ಹೆಚ್ಚು ಪ್ರಕರಣಗಳು ವರದಿಯಾಗಿದೆ. ಇನ್ನಾದರೂ ಪೊಲೀಸರು ಈ ಪುಂಡರ ಗ್ಯಾಂಗ್​ನ ಹೆಡೆಮುರಿ ಕಟ್ಟಬೇಕು ಎಂಬುದು ಸ್ಥಳೀಯರ ಮನವಿ.

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?