AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಂಡರ ಅಟ್ಟಹಾಸ: ಸೀದಾ ಜೇಬಿಗೆ ಕೈಹಾಕಿ ದರೋಡೆ! ಜನರಿದ್ರೂ ಡೋಂಟ್​ ಕೇರ್​, ಎಲ್ಲಿ?

ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ. ಈ ಮಧ್ಯೆ ಸಿಲಿಕಾನ್ ಸಿಟಿಯ ಕೆಲವು ಪೊಲೀಸರಿಗೂ ಸೋಂಕು ತಗಲುತ್ತಿದ್ದು ನಗರದ ಹಲವು ಠಾಣೆಗಳು ಸಹ ಸೀಲ್​ಡೌನ್​ ಆಗುತ್ತಿವೆ. ಹಾಗಾಗಿ ನಮ್ಮ ಖಾಕಿ ಪಡೆ ಈ ಮಹಾಮಾರಿಯಿಂದ ಕೊಂಚ ನಲುಗಿ ಹೋಗಿದ್ದಾರೆ. ಇದರಿಂದ ನಗರದ ಪುಂಡರು ಮತ್ತು ಕಳ್ಳಕಾಕರಿಗೆ ಎಂದಿಲ್ಲದ ಧೈರ್ಯ ಬಂದಂತಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ಕೆಲವು ದಿನಗಳಿಂದ ಹೆಣ್ಣೂರು ಹಾಗೂ ಹೆಬ್ಬಾಳದ ಸುತ್ತಮುತ್ತಲಿನ ಏರಿಯಾಗಳಲ್ಲಿ ಪುಂಡರ ಗ್ಯಾಂಗ್​ ಒಂದು ಜನರನ್ನು ಬೆದರಿಸಿ ಹಣ ಕಿತ್ತುಕೊಳ್ಳೋಕೆ […]

ಪುಂಡರ ಅಟ್ಟಹಾಸ: ಸೀದಾ ಜೇಬಿಗೆ ಕೈಹಾಕಿ ದರೋಡೆ! ಜನರಿದ್ರೂ ಡೋಂಟ್​ ಕೇರ್​, ಎಲ್ಲಿ?
KUSHAL V
| Edited By: |

Updated on: Jun 22, 2020 | 5:12 PM

Share

ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ. ಈ ಮಧ್ಯೆ ಸಿಲಿಕಾನ್ ಸಿಟಿಯ ಕೆಲವು ಪೊಲೀಸರಿಗೂ ಸೋಂಕು ತಗಲುತ್ತಿದ್ದು ನಗರದ ಹಲವು ಠಾಣೆಗಳು ಸಹ ಸೀಲ್​ಡೌನ್​ ಆಗುತ್ತಿವೆ. ಹಾಗಾಗಿ ನಮ್ಮ ಖಾಕಿ ಪಡೆ ಈ ಮಹಾಮಾರಿಯಿಂದ ಕೊಂಚ ನಲುಗಿ ಹೋಗಿದ್ದಾರೆ.

ಇದರಿಂದ ನಗರದ ಪುಂಡರು ಮತ್ತು ಕಳ್ಳಕಾಕರಿಗೆ ಎಂದಿಲ್ಲದ ಧೈರ್ಯ ಬಂದಂತಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ಕೆಲವು ದಿನಗಳಿಂದ ಹೆಣ್ಣೂರು ಹಾಗೂ ಹೆಬ್ಬಾಳದ ಸುತ್ತಮುತ್ತಲಿನ ಏರಿಯಾಗಳಲ್ಲಿ ಪುಂಡರ ಗ್ಯಾಂಗ್​ ಒಂದು ಜನರನ್ನು ಬೆದರಿಸಿ ಹಣ ಕಿತ್ತುಕೊಳ್ಳೋಕೆ ಶುರುಮಾಡಿದ್ದಾರೆ.

ಸೀದಾ ಜೇಬಿಗೆ ಕೈಹಾಕಿ ದರೋಡೆ..! ಕೊರೊನಾ ಮಹಾಮಾರಿಗೆ ನಲುಗಿ ಜನರನ್ನೇ ಮುಟ್ಟಲು ಬೆಂಗಳೂರಿಗರು ಹಿಂದೆಮುಂದೆ ಯೋಚಿಸುತ್ತಿರುವ ಈ ಸಂದರ್ಭದಲ್ಲಿ ಸೀದಾ ಜೇಬಿಗೇ ಕೈಹಾಕಿ ಹಣ ದೋಚುತ್ತಿದ್ದಾರಂತೆ. ಹಣ ತಗೊಳ್ಳಲು ಬಿಟ್ರೆ ಬಚಾವ್​. ಇಲ್ಲಾಂದ್ರೆ ಚಾಕು, ಮಚ್ಚು ತೋರಿಸಿ ಕಿತ್ತುಕೊಳ್ತಾರೆ. ಜಾಸ್ತಿ ಮಾತಾಡ್ರೆ ಎರಡೇಟು ಕೂಡ ಬೀಳುತ್ತೆ.

ಅಂದ ಹಾಗೆ ಇವರೇನು ದೊಡ್ಡ ಪಂಟರ್​ಗಳಲ್ಲ. ಸಣ್ಣ ವಯಸ್ಸಿನ ಹುಡುಗರು. ಸ್ಕೂಟರ್​, ಬೈಕ್​ಗಳ ಮೇಲೆ ಗುಂಪುಗುಂಪಾಗಿ ಪೆಟ್ಟಿ, ಸಿಗರೇಟ್​ ಅಂಗಡಿಗಳ ಬಳಿ ಅಡ್ಡಾಡೋ ಈ ಗ್ಯಾಂಗ್​ ಎಲ್ಲಿ ಟಾರ್ಗೆಟ್​ ಕಂಡರೇ ಅಲ್ಲೇ ಸ್ಕೆಚ್​. ಸುತ್ತಲೂ ಜನರಿದ್ರೂ ಡೋಂಟ್​ ಕೇರ್​. ಬರೀ ಗ್ರಾಹಕರಲ್ಲದೆ ಅಂಗಡಿ ಮಾಲೀಕರನ್ನು ದೋಚುತ್ತಿದ್ದಾರೆ.

ಈ ಏರಿಯಾಗಳಲ್ಲಿ ಕಳೆದ ಕೆಲವು ದಿನಗಳಿಂದ ಇಂಥ ಹತ್ತಕ್ಕು ಹೆಚ್ಚು ಪ್ರಕರಣಗಳು ವರದಿಯಾಗಿದೆ. ಇನ್ನಾದರೂ ಪೊಲೀಸರು ಈ ಪುಂಡರ ಗ್ಯಾಂಗ್​ನ ಹೆಡೆಮುರಿ ಕಟ್ಟಬೇಕು ಎಂಬುದು ಸ್ಥಳೀಯರ ಮನವಿ.

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!