AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಂಡರ ಅಟ್ಟಹಾಸ: ಸೀದಾ ಜೇಬಿಗೆ ಕೈಹಾಕಿ ದರೋಡೆ! ಜನರಿದ್ರೂ ಡೋಂಟ್​ ಕೇರ್​, ಎಲ್ಲಿ?

ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ. ಈ ಮಧ್ಯೆ ಸಿಲಿಕಾನ್ ಸಿಟಿಯ ಕೆಲವು ಪೊಲೀಸರಿಗೂ ಸೋಂಕು ತಗಲುತ್ತಿದ್ದು ನಗರದ ಹಲವು ಠಾಣೆಗಳು ಸಹ ಸೀಲ್​ಡೌನ್​ ಆಗುತ್ತಿವೆ. ಹಾಗಾಗಿ ನಮ್ಮ ಖಾಕಿ ಪಡೆ ಈ ಮಹಾಮಾರಿಯಿಂದ ಕೊಂಚ ನಲುಗಿ ಹೋಗಿದ್ದಾರೆ. ಇದರಿಂದ ನಗರದ ಪುಂಡರು ಮತ್ತು ಕಳ್ಳಕಾಕರಿಗೆ ಎಂದಿಲ್ಲದ ಧೈರ್ಯ ಬಂದಂತಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ಕೆಲವು ದಿನಗಳಿಂದ ಹೆಣ್ಣೂರು ಹಾಗೂ ಹೆಬ್ಬಾಳದ ಸುತ್ತಮುತ್ತಲಿನ ಏರಿಯಾಗಳಲ್ಲಿ ಪುಂಡರ ಗ್ಯಾಂಗ್​ ಒಂದು ಜನರನ್ನು ಬೆದರಿಸಿ ಹಣ ಕಿತ್ತುಕೊಳ್ಳೋಕೆ […]

ಪುಂಡರ ಅಟ್ಟಹಾಸ: ಸೀದಾ ಜೇಬಿಗೆ ಕೈಹಾಕಿ ದರೋಡೆ! ಜನರಿದ್ರೂ ಡೋಂಟ್​ ಕೇರ್​, ಎಲ್ಲಿ?
KUSHAL V
| Edited By: ಸಾಧು ಶ್ರೀನಾಥ್​|

Updated on: Jun 22, 2020 | 5:12 PM

Share

ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ. ಈ ಮಧ್ಯೆ ಸಿಲಿಕಾನ್ ಸಿಟಿಯ ಕೆಲವು ಪೊಲೀಸರಿಗೂ ಸೋಂಕು ತಗಲುತ್ತಿದ್ದು ನಗರದ ಹಲವು ಠಾಣೆಗಳು ಸಹ ಸೀಲ್​ಡೌನ್​ ಆಗುತ್ತಿವೆ. ಹಾಗಾಗಿ ನಮ್ಮ ಖಾಕಿ ಪಡೆ ಈ ಮಹಾಮಾರಿಯಿಂದ ಕೊಂಚ ನಲುಗಿ ಹೋಗಿದ್ದಾರೆ.

ಇದರಿಂದ ನಗರದ ಪುಂಡರು ಮತ್ತು ಕಳ್ಳಕಾಕರಿಗೆ ಎಂದಿಲ್ಲದ ಧೈರ್ಯ ಬಂದಂತಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ಕೆಲವು ದಿನಗಳಿಂದ ಹೆಣ್ಣೂರು ಹಾಗೂ ಹೆಬ್ಬಾಳದ ಸುತ್ತಮುತ್ತಲಿನ ಏರಿಯಾಗಳಲ್ಲಿ ಪುಂಡರ ಗ್ಯಾಂಗ್​ ಒಂದು ಜನರನ್ನು ಬೆದರಿಸಿ ಹಣ ಕಿತ್ತುಕೊಳ್ಳೋಕೆ ಶುರುಮಾಡಿದ್ದಾರೆ.

ಸೀದಾ ಜೇಬಿಗೆ ಕೈಹಾಕಿ ದರೋಡೆ..! ಕೊರೊನಾ ಮಹಾಮಾರಿಗೆ ನಲುಗಿ ಜನರನ್ನೇ ಮುಟ್ಟಲು ಬೆಂಗಳೂರಿಗರು ಹಿಂದೆಮುಂದೆ ಯೋಚಿಸುತ್ತಿರುವ ಈ ಸಂದರ್ಭದಲ್ಲಿ ಸೀದಾ ಜೇಬಿಗೇ ಕೈಹಾಕಿ ಹಣ ದೋಚುತ್ತಿದ್ದಾರಂತೆ. ಹಣ ತಗೊಳ್ಳಲು ಬಿಟ್ರೆ ಬಚಾವ್​. ಇಲ್ಲಾಂದ್ರೆ ಚಾಕು, ಮಚ್ಚು ತೋರಿಸಿ ಕಿತ್ತುಕೊಳ್ತಾರೆ. ಜಾಸ್ತಿ ಮಾತಾಡ್ರೆ ಎರಡೇಟು ಕೂಡ ಬೀಳುತ್ತೆ.

ಅಂದ ಹಾಗೆ ಇವರೇನು ದೊಡ್ಡ ಪಂಟರ್​ಗಳಲ್ಲ. ಸಣ್ಣ ವಯಸ್ಸಿನ ಹುಡುಗರು. ಸ್ಕೂಟರ್​, ಬೈಕ್​ಗಳ ಮೇಲೆ ಗುಂಪುಗುಂಪಾಗಿ ಪೆಟ್ಟಿ, ಸಿಗರೇಟ್​ ಅಂಗಡಿಗಳ ಬಳಿ ಅಡ್ಡಾಡೋ ಈ ಗ್ಯಾಂಗ್​ ಎಲ್ಲಿ ಟಾರ್ಗೆಟ್​ ಕಂಡರೇ ಅಲ್ಲೇ ಸ್ಕೆಚ್​. ಸುತ್ತಲೂ ಜನರಿದ್ರೂ ಡೋಂಟ್​ ಕೇರ್​. ಬರೀ ಗ್ರಾಹಕರಲ್ಲದೆ ಅಂಗಡಿ ಮಾಲೀಕರನ್ನು ದೋಚುತ್ತಿದ್ದಾರೆ.

ಈ ಏರಿಯಾಗಳಲ್ಲಿ ಕಳೆದ ಕೆಲವು ದಿನಗಳಿಂದ ಇಂಥ ಹತ್ತಕ್ಕು ಹೆಚ್ಚು ಪ್ರಕರಣಗಳು ವರದಿಯಾಗಿದೆ. ಇನ್ನಾದರೂ ಪೊಲೀಸರು ಈ ಪುಂಡರ ಗ್ಯಾಂಗ್​ನ ಹೆಡೆಮುರಿ ಕಟ್ಟಬೇಕು ಎಂಬುದು ಸ್ಥಳೀಯರ ಮನವಿ.

Follow Us
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್