AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಟ್ರೋ ರವಿ ಲೀಲೆಗಳು ಬಗೆದಷ್ಟು ಬೆಚ್ಚಿ ಬೀಳಿಸುವ ಕಥೆ: ಸ್ಯಾಂಟ್ರೋ ‘ಸರ್ವೀಸ್​’ ಜಾಲದಲ್ಲಿ ನಟಿ, ಮಾಡೆಲ್​ಗಳು..!

ಸ್ಯಾಂಟ್ರೋ ರವಿ ಪತ್ನಿ ದೂರು ಕೊಟ್ಟಿದ್ದೇ ತಡ, ಬಯಲಾದ ಅವನ ಮತಿಗೇಡಿ ಕೆಲಸ ಒಂದೆರಡಲ್ಲ. ಪೊಲೀಸ್ ತನಿಖಾ ಮೂಲಗಳಿಂದ ಒಂದಷ್ಟು ಸತ್ಯಗಳು ರಿವೀಲ್​ ಆಗುತ್ತಿದ್ದರೆ, ಮತ್ತೊಂದು ಕಡೆ ಸ್ಯಾಂಟ್ರೋ ರವಿಗೆ ಮನೆ ಕೊಟ್ಟ ಮಾಲೀಕ ದೊಡ್ಡ ದೊಡ್ಡ ಬಾಂಬ್​ಗಳನ್ನೇ ಸಿಡಿಸಿದ್ದಾರೆ.

ಸ್ಯಾಂಟ್ರೋ ರವಿ ಲೀಲೆಗಳು ಬಗೆದಷ್ಟು ಬೆಚ್ಚಿ ಬೀಳಿಸುವ ಕಥೆ: ಸ್ಯಾಂಟ್ರೋ ‘ಸರ್ವೀಸ್​’ ಜಾಲದಲ್ಲಿ ನಟಿ, ಮಾಡೆಲ್​ಗಳು..!
ಸ್ಯಾಂಟ್ರೋ ‘ಸರ್ವೀಸ್​’ ಜಾಲದಲ್ಲಿ ನಟಿ, ಮಾಡೆಲ್​ಗಳು
TV9 Web
| Edited By: |

Updated on: Jan 11, 2023 | 11:29 PM

Share

ಬೆಂಗಳೂರು: ಸ್ಯಾಂಟ್ರೋ ರವಿಯ (Santro Ravi) ಲೀಲೆಗಳು ಬಗೆದಷ್ಟು ಬೆಚ್ಚಿ ಬೀಳಿಸುವ ಕಥೆ. ಕೆದಕಿದಷ್ಟು ಕರ್ಮಕಾಂಡ. ತನಿಖೆಗಿಳಿದಷ್ಟು ಕರಾಳ ಮುಖವಾಡ. ಸ್ಯಾಂಟ್ರೋ ಸರ್ವಿಸ್ ಹಿಂದಿದೆ ಮಹಾ ಸೀಕ್ರೆಟ್ ಅಡ್ಡ​. ಕುಮಾರಕೃಪಾದ ಬಳಿ ಧೀರನಂತೆ ಓಡಾಡ್ತೀನಿ ಅಂದವನ ದಗ್ಬಾಲಜಿತನ ಒಂದೊಂದಾಗಿ ಹೊರ ಬೀಳ್ತಿದ್ದು ಎಲ್ಲರಿಗೂ ಅಚ್ಚರಿ ಮೂಡಿಸುವಂತಿದೆ. ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡವನ ಕಥೆಯೇ ರಣ ರೋಚಕವಾಗಿದೆ.

ಇದನ್ನೂ ಓದಿ: ಕೊಡಗಿನ ಹುಡುಗಿ.. ವಿಜಯಲಕ್ಷ್ಮೀ.. ಚಿನ್ನು.. ಬಂಗಾರ: ಬಗೆದಷ್ಟು ಬಯಲಾಗುತ್ತಿವೆ ಸ್ಯಾಂಟ್ರೋ ರವಿಯ ಲೀಲೆಗಳು

ಬಾಂಬ್ ಸಿಡಿಸಿದ ಅಪಾರ್ಟ್​ಮೆಂಟ್ ಮಾಲೀಕ

ಸ್ಯಾಂಟ್ರೋ ರವಿ ಪತ್ನಿ ದೂರು ಕೊಟ್ಟಿದ್ದೇ ತಡ, ಬಯಲಾದ ಅವನ ಮತಿಗೇಡಿ ಕೆಲಸ ಒಂದೆರಡಲ್ಲ. ಪೊಲೀಸ್ ತನಿಖಾ ಮೂಲಗಳಿಂದ ಒಂದಷ್ಟು ಸತ್ಯಗಳು ರಿವೀಲ್​ ಆಗುತ್ತಿದ್ದರೆ, ಮತ್ತೊಂದು ಕಡೆ ಸ್ಯಾಂಟ್ರೋ ರವಿಗೆ ಮನೆ ಕೊಟ್ಟ ಮಾಲೀಕ ದೊಡ್ಡ ದೊಡ್ಡ ಬಾಂಬ್​ಗಳನ್ನೇ ಸಿಡಿಸಿದ್ದಾರೆ. ಸ್ಯಾಂಟ್ರೋ ರವಿ ಅಪಾರ್ಟ್​ಮೆಂಟ್​ನಲ್ಲಿ ಬಾಡಿಗೆ ಇದ್ದಾಗ ಮನೆಗೆ ನಟಿಯರು, ಮಾಡೆಲ್, ಸರ್ಕಾರಿ ಅಧಿಕಾರಿಗಳು ಬರುತ್ತಿದ್ದ ಎಂದು ಆರೋಪ ಮಾಡಿದ್ದಾರೆ.

ಆರ್​.ಆರ್​ ನಗರ ಕೇಸ್.. ಬಯಲಾಯ್ತು ಸ್ಯಾಂಟ್ರೋ ಸೀಕ್ರೆಟ್

ಆರ್​.ಆರ್​ ನಗರ ಪೊಲೀಸರ ಎದುರೇ ಸ್ಯಾಂಟ್ರೋ ರವಿ ತಾವು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನಂತೆ.. ಸರಿ ಸುಮಾರು 3-4 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಸೇವೆ ಮಾಡಿದ್ದಾಗಿ ಪುಂಗಿದ್ದಾನಂತೆ. ಹೀಗಾಗಿ ರವಿ ಏನೆಲ್ಲಾ ಹೇಳಿದ್ದಾನೋ ಅದೆಲ್ಲವನ್ನೂ ಪೊಲೀಸರು ಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಿದ್ದಾರೆ. ಇದು ಒಂದು ಕಡೆ ಇರಲಿ, ಇದೇ ರವಿ ವಿರುದ್ಧ ಆರ್​.ಆರ್​ ನಗರ ನಿವಾಸಿ ಜಗದೀಶ್​ ಎಂಬಾತ 2022ರಲ್ಲಿ ದೂರು ನೀಡಿದ್ದು, ದೂರಿನ ಅಂಶಗಳು ದಂಗು ಬಡಿಸುವಂತಿವೆ.

ಇದನ್ನೂ ಓದಿ: ಯುವತಿಯರ ವಯಸ್ಸು.. ಚೆಂದಕ್ಕೆ ತಕ್ಕಂತೆ ಕೋಡ್​ ವರ್ಡ್: ಗರ್ಲ್ಸ್ ಸಪ್ಲೈಗೆ ಇಟ್ಟಿದ್ದ ‘ಕಾರ್’ ಕೋಡ್‌ವರ್ಡ್​ಗಳು ಹೀಗಿವೆ

ಗಣ್ಯ ವ್ಯಕ್ತಿಗಳಿಗೆ ಹುಡುಗಿಯರನ್ನ ಸಪ್ಲೈ ಮಾಡುವ ಕೆಲಸ

2000ರಿಂದ 2005ರವರೆಗೆ ಮಂಡ್ಯ, ಮೈಸೂರಿನಲ್ಲಿ ವೃತ್ತಿ ಆರಂಭಿಸಿದ್ದ ಸ್ಯಾಂಟ್ರೋ ರವಿ, ಗಣ್ಯ ವ್ಯಕ್ತಿಗಳಿಗೆ ಹುಡುಗಿಯರನ್ನ ಸಪ್ಲೈ ಮಾಡುವ ಕೆಲಸ ಮಾಡುತ್ತಿದ್ದ.. ಅನೈತಿಕ ಚಟುವಟಿಕೆಗಳಿಂದ ಮುಖಂಡರ ಗೌರವಕ್ಕೆ ಧಕ್ಕೆ ತಂದಿದ್ದಲ್ಲದೇ, ಅಕ್ರಮ ದಂಧೆಗಳಿಂದ ಕೋಟ್ಯಂತರ ರೂ. ಆಸ್ತಿ ಮಾಡಿದ್ದಾನೆ ಎಂದು ರವಿ ವಿರುದ್ಧ ಜಗದೀಶ್​ ದೂರಿದ್ದಾರೆ. ಇಷ್ಟೇ ಅಲ್ಲ ತನ್ನ ಪತ್ನಿ ವಕೀಲೆ ಎಂದು ಹೇಳಿಕಂಡು ಹಲವರಿಗೆ ವಂಚಿಸಿದ್ದಾನೆ. ಶೋಕಿಗಾಗಿ ಮೂರ್ನಾಲ್ಕು ಕಾರುಗಳನ್ನ ಇಟ್ಟುಕೊಂಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.

ಸ್ಯಾಂಟ್ರೋ ರವಿ ವರ್ಗಾವಣೆ ಲಿಸ್ಟ್

ಐನಾತಿ ರವಿಯ ಕಥೆಗಳು ಇಷ್ಟಕ್ಕೆ ನಿಂತಿಲ್ಲ ಬದಲಾಗಿ, ಪೊಲೀಸರ ವರ್ಗಾವಣೆಯಲ್ಲಿ ಭಾಗಿಯಾಗಿರೋದಕ್ಕೆ ಸಾಕ್ಷ್ಯಗಳು ಸಿಕ್ಕಿವೆಯಂತೆ. ಇದಕ್ಕೆ ಪುಷ್ಠಿ ನೀಡುವಂತೆ ಒಂದು ಕಡೆ ಆಡಿಯೋಗಳು ವೈರಲ್​ ಆಗಿದ್ರೆ, R.R. ನಗರ ಕೇಸ್​​ನಲ್ಲಿ ಖುದ್ದು ರವಿಯೇ ಈ ಬಗ್ಗೆ ಬಾಯ್ಬಿಟ್ಟಿದ್ದಾನಂತೆ.

ಇದನ್ನೂ ಓದಿ: Santro Ravi: ಸ್ಯಾಂಟ್ರೋ ರವಿಗೆ ಆ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಮಂಡ್ಯ ಡಿವೈಎಸ್‌ಪಿ ಪುತ್ರನ ಸಂಪೂರ್ಣ ಜಾತಕ

ಸ್ಯಾಂಟ್ರೋ ರವಿ ವರ್ಗಾವಣೆ ಮಾಡಿಸಿದವರ ಲಿಸ್ಟ್​ನಲ್ಲಿ ಇನ್ಸ್​ಪೆಕ್ಟರ್ ಜಿ.ಕೆ. ಸುಬ್ರಹ್ಮಣ್ಯ ಇದ್ದಾರಂತೆ. ಕರ್ನಾಟಕ ರಾಜ್ಯ ಗುಪ್ತವಾರ್ತೆಯಲ್ಲಿ ಕೆಲಸ ಮಾಡ್ತಿದ್ದ ಇವರನ್ನ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿಸಿದ್ದನಂತೆ.ಇಷ್ಟೇ ಅಲ್ಲ, ಮಂಡ್ಯದ ಹಲಗೂರು ಪೊಲೀಸ್​ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಸಬ್​ಇನ್ಸ್​​ಪೆಕ್ಟರ್​​ ರವಿಕುಮಾರ್​ರನ್ನ ಮಂಡ್ಯದ ಮಳವಳ್ಳಿ ಠಾಣೆಗೆ ಇದೇ ಸ್ಯಾಂಟ್ರೋ ರವಿ ವರ್ಗಾವಣೆ ಮಾಡಿಸಿದ್ದ ಎನ್ನುವ ಬಗ್ಗೆ ಮಾಹಿತಿ ಇದೆ.

ರವಿಗೆ ಎನ್​ಕೌಂಟರ್​ ಭಯ

ಸ್ಯಾಂಟ್ರೋ ರವಿ ನಾಪತ್ತೆಯಾಗಿ ಇಂದಿಗೆ 9 ದಿನಗಳೇ ಕಳೆದಿವೆ. ಆದ್ರೂ ಕೂಡ ರವಿ ಎಲ್ಲಿದ್ದಾನೆ ಎನ್ನುವುದು ಪೊಲೀಸ್​​ನವರಿಗೆ ಗೊತ್ತಾಗಿಲ್ಲ.. ಈ ನಡುವೆ ಸ್ಯಾಂಟ್ರೋ ರವಿ ಅನಾರೋಗ್ಯ ಕಾಡುತ್ತಿದೆ, ಮತ್ತೊಂದು ಕಡೆ ಮೈಸೂರಿಗೆ ಅಲೋಕ್​ ಕುಮಾರ್​ ಹೋಗಿ ಬಂದಾಗಿನಿಂದ ರವಿಗೆ ಎನ್​ಕೌಂಟರ್​ ಭಯ ಕಾಡುತ್ತಿದೆಯಂತೆ. ಹೀಗಾಗಿ ನ್ಯಾಯಾಲಯದ ಮೂಲಕ ಸ್ಯಾಂಟ್ರೋ ರವಿ ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಸ್ಯಾಂಟ್ರೋ ರವಿ ಸೀಕ್ರೆಟ್​ಗಳೇ ದೊಡ್ಡವರಿಗೆ ಶಾಕ್​ ಕೊಡುವಂತಿವೆ.. ಪೊಲೀಸರಂತೂ ಸ್ಯಾಂಟ್ರೋವನ್ನ ಏನಾದ್ರೂ ಮಾಡಿ ಪಂಕ್ಚರ್​ ಮಾಡಲೇಬೇಕು ಎಂದು ತಂಡ ಕಟ್ಟಿಕೊಂಡು ಮೂಲೆ ಮೂಲೆಯಲ್ಲೂ ಜಾಲಾಡುತ್ತಿದ್ದಾರೆ.

ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ